ಸೋಮವಾರಪೇಟೆ,ಜ.08: (ತೇಲಪಂಡ ಕವನ್ ಕಾರ್ಯಪ್ಪ) ಭಾರತೀಯ ಬೌದ್ಧ ಮಹಾಸಭಾ ಕೊಡಗು ಜಿಲ್ಲಾ ಶಾಖೆಯ ವತಿಯಿಂದ ಪಟ್ಟಣದ ಪತ್ರಿಕಾಭವನದಲ್ಲಿ ಬೌದ್ಧ ಧ್ವಜಾ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಗೊದ್ದು ಸೋಮಶೇಖರ್ ಮಾತನಾಡಿ, ಭಗವಾನ್ ಬುದ್ಧರ ವಿಚಾರಗಳು ಇಂದು ಜಗತ್ತಿನಾದ್ಯಂತ ವ್ಯಾಪಕವಾಗಿ ಬೆಳೆಯುತ್ತಿದೆ. ಇದಕ್ಕೆ ಕಾರಣ ಬೌದ್ಧ ಧರ್ಮದಲ್ಲಿರುವ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳ ವಿಚಾರಗಳೇ ಕಾರಣ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಎಚ್.ಆರ್.ಶಿವಪ್ಪ ಅವರು ಮಾತನಾಡಿ, ಬುದ್ಧರ ವಿಚಾರಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಮಹಾಸಭಾದ ಜಿಲ್ಲಾ ಖಚಾಂಚಿ ಜಯಪ್ಪ ಹಾನಗಲ್, ತಾಲ್ಲೂಕು ಅಧ್ಯಕ್ಷ ಎಸ್.ಆರ್.ವಸಂತ್, ಪದಾಧಿಕಾರಿಗಳಾದ ಎಚ್.ಈ.ಸಣ್ಣಪ್ಪ, ಎಚ್.ಡಿ.ಗಣೇಶ್, ಎಚ್.ಟಿ.ಗಣೇಶ್, ಇ.ಎನ್.ನರಸಯ್ಯ ಇದ್ದರು.