ಭಾರತ ಹಾಕಿ ವಿಶ್ವಕಪ್ ಗೆದ್ದು ಇಂದಿಗೆ 50 ವರ್ಷ. ತಂಡದಲ್ಲಿದ್ದರು ಕೊಡಗಿನ ಇಬ್ಬರು ಸಿಡಲಮರಿಗಳು :  ಚೆಪ್ಪುಡಿರ ಕಾರ್ಯಪ್ಪ

ಇಂದಿಗೆ 50 ವರ್ಷಗಳ ಹಿಂದೆ, ಅಂದರೆ 14/03 1975 ರಲ್ಲಿ ಭಾರತದ ಹಾಕಿ ತಂಡವು ವಿಶ್ವಕಪ್ ಗೆದ್ದುಕೊಂಡಿತ್ತು. ಪಾಕಿಸ್ತಾನದ ವಿರುದ್ಧ 2-1 ಗೋಲುಗಳಿಂದ ಮಲೇಷ್ಯಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ವಿಜಯ ಪತಾಕೆ ಹಾರಿಸಿತ್ತು. ಪಂದ್ಯದ ಮೊದಲ ಗೋಲನ್ನು ಪಾಕಿಸ್ತಾನದ ಸೈಯದ್ ಅವರು ಹೊಡೆಯುತ್ತಾರೆ, ಅದನ್ನು ಭಾರತದ ಸುರ್ಜಿತ್ ಸಿಂಗ್ ಅವರು ಸಮ ಮಾಡುತ್ತಾರೆ. ನಂತರ ಅಶೋಕ್ ಕುಮಾರ್ ಅವರು ಹೊಡೆದ ಗೋಲಿನಿಂದ ಭಾರತ ತಂಡ ಹಾಕಿ ವಿಶ್ವ ವಿಜೇತವಾಗುತ್ತದೆ. 1973ರಲ್ಲೇ ವಿಶ್ವ ಕಪ್‌ ಗೆಲ್ಲಬೇಕಿದ್ದ ಭಾರತ 1975ರಲ್ಲಿ […]

Continue Reading

ಕಟ್ಟೆಮಾಡ್‌ ಮಾದೇವ ದೇವಾಲಯ ಬಳಿ ನಿಷೇದಾಜ್ಞೆ ಮುಂದುವರೆಸಿ ಉಪ ವಿಭಾಗಾಧಿಕಾರಿ ಆದೇಶ

ಮಡಿಕೇರಿ, ಮಾ.14: ಕಟ್ಟೆಮಾಡ್‌ ಬಳಿಯ ಪುರಾತನ ಮಾದೇವರ ದೇವಾಲಯದ ವಾರ್ಷಿಕೋತ್ಸವದಂದು ಕೊಡವ ಕುಪ್ಯಚಾಲೆಗೆ ಕೆಲವರು ಮಾಡಿದ ಅವಮಾನದ ಕಾರಣಕ್ಕೆ ಉಂಟಾದ ವಿವಾದದ ಹಿನ್ನೆಲೆ, ದೇವಾಲಯ ಆವರಣದಿಂದ 200 ಮೀ. ವ್ಯಾಪ್ತಿಯಲ್ಲಿ ನಿಷೆದಾಜ್ಞೆಯನ್ನು, ದಿನಾಂಕ 11-04-2025ರ ವರೆಗೆ ಮುಂದುವರೆಸಿ ಜಿಲ್ಲಾ ಉಪ ವಿಭಾಗಾಧಿಕಾರಿ ಮತ್ತು ಉಪಾಗೀಯ ದಂಡಾಧಿಕಾರಿಗಳು, ಮಡಿಕೇರಿ ಉಪ ವಿಭಾಗ ಅವರು, ಮಾನ್ಯ ಕೊಡಗು ಜಿಲ್ಲಾ ಪೋಲೀಸ್‌ ಅದೀಕ್ಷಕರ ಕೋರಿಕೆಯಂತೆ ಆದೇಶಿಸಿದ್ದಾರೆ. ಡಿಸೆಂಬರ್‌ 25- 2024ರಿಂದ ಈ ದೇವಾಲಯವು ರಾಷ್ಟ್ರಮಟ್ಟದ ವಿವಾಧಿತ ಕೇಂದ್ರವಾಗಿದ್ದು, ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿಯೂ […]

Continue Reading

ಬಪ್ಪ ನಾರಾಚೆ ಅಮ್ಮತ್ತಿ ಕೊಡವ ಸಮಾಜ ಪೊಮ್ಮಕ್ಕಡ ನಾಳ್‌

ಪಾಲಿಬೆಟ್ಟ,ಮಾ.14:  ಉಲಗ ಪೊಮ್ಮಕ್ಕಡ  ನಾಳ್‌ರ ಮಾರೀಪತ್‌, ಕೊಡವ ಸಮಾಜ, ಅಮ್ಮತ್ತಿರ ಪೊಮ್ಮಕ್ಕಡ ಕೂಟತಿಂಜ ತರಾವರಿ ಆಯಿಮೆ ಕೊಯಿಮೆ, ಪೈಪೋಟಿ  ನಾಳಂಕೆ 16-03-2025ನೇ ನಾರಾಚೆ ನಡ್ಪದುಂಡ್‌. ಅಂದ್‌ ಪೊಲಾಕ 10:00 ಗಂಟೆಲಿಂಜ 4:00 ಗಂಟೆಕೆತ್ತನೆ, ಕೋಟತ ಕೊರವುಕಾರಿ ಚೆಂಬಾಂಡ ರೇಷ್ಠ ಭೀಮಯ್ಯ ಅಯಿಂಗಡ ಮುಂದಾಳ್‌ತನತ್ ನಡ್ಪ ಈ ಆಯಿಮೆಲ್, ಖನಪಟ್ಟ ಬೆಂದುವಳಾಯಿತ್‌, ಅಂತರ್‌ರಾಷ್ಟ್ರೀಯ ಕಳಿಕಾರ್ತಿ ಬೇರೆರ ಪೂನಂ ಬೋಜಣ್ಣ, ಪಿಂಞ ಜಮ್ಮಡ ಪ್ರೀತ್ ಅಪ್ಪಯ್ಯ  BA, LLB, MA in Library & Information Science & LLB […]

Continue Reading

ಬಾಳೋ ಪಾಟ್‌ ದುಡಿ ಕೊಟ್ಟ್‌ಕೂ ಕೋಲಾಟ್‌  ಆಡೋಲು

ವಿರಾಜಪೇಟೆ, ಮಾ.13:    ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಅಮ್ಮತ್ತಿಲ್‌ ನಡ್ತುವ ಕೊಡವ ಬಲ್ಯ ನಮ್ಮೆರ‌, ಕೋಲಾಟ್‌ ಪೈಪೋಟಿಲ್‌ ವಾಲಗ ಅಲ್ಲತೆ, ದುಡಿಕೊಟ್ಟ್‌ ಪಾಟ್‌ಕೂ ಆಡೋಲೂಂದ್‌ ಅಕಾಡೆಮಿ ಕೊರವುಕಾರ ಅಜ್ಜಿನಿಕಂಡ ಮಹೇಶ್‌ ನಾಚಯ್ಯ ಎಣ್ಣಿತ್.‌ ಈ ಬಲ್ಯ ನಮ್ಮೆಲ್‌ ಅಕಾಡೆಮಿ ತರಾವರಿ ಪೈಪೋಟಿ ಬೆಚ್ಚಿತ್‌, ಇದಂಗೊತ್ತ ನೇಮ ನಿರ್ಕ್‌ನೂ ಮಾಡಿತ್.‌ ಆಚೇಂಗಿ ಆಮಕ್ಕಡ ಕೋಲಾಟ್‌ ಪೈಪೋಟಿನ ಬರೀ ವಾಲಗತಾಟ್‌ಕ್‌ ಮಾತ್ರ ಆಡೋಂಡೂಂದ್‌ ನಿರ್ಕ್‌ ಮಾಡಿತಿಂಜತ್.‌   ಕೊಡವುರ ಸುಮಾರ್‌ ಊರ್‌ ನಾಡ್‌ಲ್‌ ಕೋಲಾಟಕ್‌, ಮೇದಪರೆ ಇಲ್ಲೇಂಗಿ ವಾಲಗತ್‌ನ […]

Continue Reading

ಕೊಡಗಿನ ಹಾಕಿ, ವೀಕ್ಷಕ ವಿವರಣೆಯ ಜೋಡ್‌ ಕೊಂಬುಗಳು ಜೊತೆಗಿದ್ದರೇ ಖಳೇ…

ಎರಡು ದಶಕಗಳಿಂದ ಕೊಡವ ಕೌಟುಂಬಿಕ ಹಾಕಿ ಹಬ್ಬ ಹಾಗೂ ಇತರ ಪಂದ್ಯಾವಳಿಗಳಲ್ಲಿ ವೀಕ್ಷಕ ವಿವರಣೆಯನ್ನು ಮಾಡುತ್ತಾ, ತಮ್ಮ ಕಂಚಿನ ಕಂಟಗಳಿಂದ ಹಾಕಿ ಪ್ರೇಮಿಗಳನ್ನು ರಂಜಿಸುತ್ತಾ, ಆಟಗಾರರನ್ನು, ಆಯೋಜಕರನ್ನು ಹುರಿ ದುಂಬಿಸುವ ಚೆಪ್ಪುಡೀರ ಕಾರ್ಯಪ್ಪ ಹಾಗೂ ಮಾಳೇಟಿರ ಶ್ರೀನಿವಾಸ್  ಅವರುಗಳ ಧ್ವನಿಯನ್ನು ಹಾಕಿ ಮೈದಾನದಲ್ಲಿ ಕೇಳದವರೇ ವಿರಳ. ಇಬ್ಬರು ಹಾಕಿಯ ಗೋಲ್ ಕೀಪರ್ ಗಳು ಹಾಗೂ ನೆಚ್ಚಿನ ಸ್ನೇಹಿತರಾದ ಇವರಿಬ್ಬರೂ,  ಕೊಡಗಿನ ಹೆಸರಾಂತ ವೀಕ್ಷಕ ವಿವರಣೆಗಾರರಾದ, ಕೋದಂಡ ಗಣಪತಿ ಹಾಗು ದ್ವಿಭಾಷಾ ಪರಿಣಿತ ಮನೆಯಪಂಡ ಹರೀಶ್ ನಾಚಪ್ಪ ಅವರ […]

Continue Reading

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಮಡಿಕೇರಿ ಮಾ.12:- 2024-25ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ವಿದ್ಯಾರ್ಥಿ ವೇತನ, ಶುಲ್ಕವಿನಾಯಿತಿ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಮಾರ್ಚ್, 31 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವರು ತಿಳಿಸಿದ್ದಾರೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿಳಾಸ: https://ssp.postmatric.karnataka.gov.in/ ಕಾರ್ಯಕ್ರಮಗಳ ವಿವರ, ಸೌಲಭ್ಯ […]

Continue Reading

ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಡಿಕೇರಿ ಮಾ.12:- 2025-26ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾವತಿಯಿಂದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ರಾಜ್ಯ ಪಠ್ಯಕ್ರಮ) ಮತ್ತು ಡಾ|| ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳ 6 ನೇ ತರಗತಿಗೆ ಉಚಿತ (ಸಿಬಿಎಸ್‍ಇ) (ಆಂಗ್ಲ ಮಾಧ್ಯಮ) ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತರ ಸಮುದಾಯದ ಸಿಖ್, ಬೌದ್ಧ , ಜೈನ್, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಪಾರ್ಸಿ ಶೇ.75% ಪರಿಶಿಷ್ಟ ಜಾತಿ, ಪರಿಶಿಷ್ಠ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಶೇ.25 ಸೀಟುಗಳು ಲಭ್ಯವಿರುತ್ತದೆ. ಉಚಿತ ಶಿಕ್ಷಣ […]

Continue Reading

ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ…

ಮಡಿಕೇರಿ, ಮಾ.12:- ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಸರ್ಕಾರದ ಮಹತ್ತರ ಖಾತರಿ ಯೋಜನೆಯಾದ ‘ಯುವನಿಧಿ’ ಯೋಜನೆಯನ್ನು 2023 ರ ಡಿಸೆಂಬರ್, 26 ರಂದು ಚಾಲನೆ ನೀಡಲಾಗಿದೆ.2023-24 ರಲ್ಲಿ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಉತ್ತೀರ್ಣರಾಗಿ 6 ತಿಂಗಳಾದರೂ ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ http://sevasindhugs.karnataka.gov.in ಪೋರ್ಟಲ್ ಮೂಲಕ ಉಚಿತವಾಗಿ […]

Continue Reading

ಸಕಲೇಶಪುರದ ಆನೆ ನೊಖ್ಯ ಗ್ರಾಮದಲ್ಲಿ ಹೇಗೇ…?!!! : ಗ್ರಾಮಸ್ಥರ ಕಳವಳ

ತಿತಿಮತಿ, ಮಾ.12: ಎರಡು ವರ್ಷಗಳ ಹಿಂದೆ ಸಕಲೇಶಪುರದಲ್ಲಿ ಸೆರೆಹಿಡಿದ ಪುಂಡಾನೆಯನ್ನು ನೊಖ್ಯ ಗ್ರಾಮದಲ್ಲಿ ಬಿಡಲಾಯಿತು ಎಂಬ ಸಂಶಯ ಹಾಗೂ ಸತ್ಯವನ್ನು ಅರಣ್ಯ ಇಲಾಖೆಯು ಮುಚ್ಚಿಹಾಕಿದಂತಿದೆ ಎಂದು ನೋಕ್ಯ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಳವಳ ವ್ಯಕ್ತಪಡಿಸಿರುವ ಗ್ರಾಮದ ಬೆಳೆಗಾರರಾದ ಚೆಪ್ಪುಡಿರ ಕಾರ್ಯಪ್ಪ ಅವರು, ಪೊನ್ನಂಪೇಟೆಯ ಪಟ್ಟಣದ ಮಧ್ಯ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ ಆನೆ ಹಾಗೂ ನೊಖ್ಯ ಗ್ರಾಮದಲ್ಲಿ ಪ್ರತಿನಿತ್ಯ ತೋಟಕ್ಕೆ ಲಗ್ಗೆ ಇಡುತ್ತಿರುವ ಆನೆ ಒಂದೇ ಎಂಬುದು ಗ್ರಾಮಸ್ಥರ ವಾದ ಎಂದಿರುವ ಅವರು, ಈ ಕುಳ್ಳ ಆನೆಯನ್ನು […]

Continue Reading

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕುರಿತು ಕಾರ್ಯಗಾರ

ಮಡಿಕೇರಿ ಮಾ.11:-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಯೋಗದೊಂದಿಗೆ 2024-25ನೇ ಸಾಲಿನ “ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಹಾಗೂ ನಿಯಮ-2006ರ ಅನುಷ್ಟಾನದಲ್ಲಿ ಬಾಗಿದಾರ ಇಲಾಖೆಗಳ ಪಾತ್ರ ಕುರಿತು ಎರಡು ದಿನಗಳ ಓರಿಯಂಟೇಷನ್ ತರಬೇತಿ ಕಾರ್ಯಗಾರ”ವನ್ನು ಮಡಿಕೇರಿ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು […]

Continue Reading