ಮುದ್ದಂಡ ಕಪ್ ಕಿರೀಟಕ್ಕಾಗಿ  ಮಂಡೇಪಂಡ ಮತ್ತು ಚೇಂದಂಡ ಒಕ್ಕಗಳ ಕಾಳಗ…

ಮಡಿಕೇರಿ ಏ.26 : ಹದಿನಾಲ್ಕರ ಹರೆಯದ ಪೋರ, ಗೋಲ್ ಕೀಪರ್ ಮಂಡೇಪಂಡ ದ್ಯಾನ್ ಬೆಳ್ಯಪ್ಪ ಅವರ ಅತ್ಯಮೋಘ ಆಟದ ಪ್ರದರ್ಶನದಿಂದ ಮಂಡೇಪಂಡ ಕೊಡವ ಕೌಟುಂಬಿಕ ಮುದ್ದಂಡ ಕಪ್ ಹಾಕಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದು, ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಪ್ರಶಸ್ತಿಗಾಗಿ 3 ಬಾರಿಯ ಛಾಂಪಿಯನ್ ಬಲಿಷ್ಠ ಚೇಂದಂಡ ತಂಡವನ್ನು ಎದುರಿಸಲಿದೆ.      ‘ಶೂಟೌಟ್’ನಲ್ಲಿ  ಎದುರಾಳಿ, ಮೂರು ಬಾರಿಯ ಕೌಟುಂಬಿಕ ಹಾಕಿ ಪಂದ್ಯಾವಳಿ ಛಾಂಪಿಯನ್ ನೆಲ್ಲಮಕ್ಕಡ ತಂಡದ ಎರಡು ಗೋಲಿನ ಅವಕಾಶಗಳನ್ನು ಗೋಲಿ ಮಂಡೇಪಂಡ ಡ್ಯಾನ್ ಬೆಳ್ಯಪ್ಪ ವಿಫಲಗೊಳಿಸುತ್ತಿರುವಂತೆಯೇ […]

Continue Reading

ಮುದ್ದಂಡ ಕಪ್‌ ಮಹಿಳಾಹಾಕಿ, ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕಂಬೀರಂಡ ಒಕ್ಕ…

ಮಡಿಕೇರಿ ಏ.26 : ಕೊಡವ ಒಕ್ಕಡೊಕ್ಕಡ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಇದೇ ಪ್ರಥಮ ಬಾರಿಗೆ ಮುದ್ದಂಡ ಕಪ್ ಹಾಕಿ ನಮ್ಮೆಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ಹಾಕಿ ಪಂದ್ಯಾವಳಿಯ ಫೈನಲ್ಸ್‌ನಲ್ಲಿ ಕಂಬೀರಂಡ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.     ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ನಡೆದ ರೋಚಕ ಅಂತಿಮ ಪಂದ್ಯಾವಳಿಯಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಎರಡು ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-1 […]

Continue Reading

ನೆಲಜಿ ಇಗ್ಗುತ್ತಪ್ಪ ದೇವಸ್ಥಾನದ ಭಕ್ತ ಸಮಾರಾಧನಾ ಉತ್ಸವ…

ನಾಪೋಕ್ಲು, ಏ.26: ಕೊಡಗು ಜಿಲ್ಲೆಯ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನಾ ಉತ್ಸವ ಮತ್ತು ನೂತನವಾಗಿ ನಿರ್ಮಾಣಗೊಂಡ ಪೌಳಿಯ ಉದ್ಘಾಟನಾ ಕಾರ್ಯಕ್ರಮವು ಮೇ, 01 ರಂದು ನಡೆಯಲಿದೆ. ಉತ್ಸವದ ಅಂಗವಾಗಿ ತುಲಾಭಾರ ಸೇವೆ ವಿವಿಧ ಪೂಜಾ ಕಾರ್ಯ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮೇ 1 ರಂದು ಗುರುವಾರ ಬೆಳಗ್ಗೆ 6 ಗಂಟೆಗೆ ಅಭಿಷೇಕ, ಬೆಳಗ್ಗೆ 6.30 ರಿಂದ 7.30 ಗಂಟೆಗೆ ಗಣಪತಿಹೋಮ, 8.30 ರಿಂದ 11 ಗಂಟೆಗೆ ರುದ್ರಮಹಾಯಾಗ, 9.30 ರಿಂದ 10.30 ಗಂಟೆಗೆ […]

Continue Reading

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ  ಅರ್ಜಿ ಆಹ್ವಾನ…

   ಮಡಿಕೇರಿ ಏ.25:- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ) ವತಿಯಿಂದ 2025-26 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಜನಾಂಗದವರಿಗೆ ಅರಿವು ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.       ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ವಿಧ್ಯಾಭ್ಯಾಸ ಯೋಜನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ/ಸಿಇಟಿ/ನೀಟ್ ಮುಖಾಂತರ) ಎಂಬಿಬಿಎಸ್, ಬಿಡಿಎಸ್, ಬಿಇ/ಬಿಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಬಿ ಆಯುಷ್, ಫಾರ್ಮಸಿ, ಕೃಷಿ ವಿಜ್ಞಾನ […]

Continue Reading

ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ  ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ ಆಯ್ಕೆ…

 ಮಡಿಕೇರಿ ಏ.26:  ಕೊಡಗು ಕಾಫಿ ಬೆಳೆ ಗಾರರ ಸಹಕಾರರ ಸಂಘದ ಚುನಾವಣೆ  ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದು ಮುಂದಿನ ಸಾಲಿಗೆ  ನೂತನ  ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ ಮತ್ತು ಉಪಾಧ್ಯಕ್ಷ ರಾಗಿ ಸುರೇಶ್ ಮಾಯಮುಡಿ ಆಯ್ಕೆಯಾದರು.    ಈ ಸಂದರ್ಭದಲ್ಲಿ ಕೊಡಗು ಕಾಫಿ ಬೆಳೆ ಗಾರರ ಸಹಕಾರರ ಸಂಘದ  ನಿರ್ದೇಶಕರು, ಮತ್ತು ಬಿಜೆಪಿ ಪ್ರಮುಖರು ಹಾಜರಿದ್ದರು.

Continue Reading

ಕೊಡಗು ದಂತ ವೈದ್ಯಕೀಯ ಕಾಲೇಜಿನಲ್ಲಿ ಪಹಲ್ಗಾಮ್’ನಲ್ಲಿ ಉಗ್ರವಾದಿಗಳ ಅಟ್ಟಹಾಸಕ್ಕೆ ಬಲಿಯಾದ ದೇಶದ ನಾಗರಿಕರಿಗೆ ಸಂತಾಪ…

     ವಿರಾಜಪೇಟೆ,ಏ.26: ಇದೇ ದಿನಾಂಕ 22 ರಂದು ಕಾಶ್ಮೀರದ ಪಹಲ್ಗಾಮ್’ನಲ್ಲಿ ಉಗ್ರವಾದಿಗಳ ಅಟ್ಟಹಾಸಕ್ಕೆ ಬಲಿಯಾದ ದೇಶದ 26 ಪ್ರವಾಸಿಗರಿಗೆ ಕೊಡಗು ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಉಪಾದ್ಯಾಯರು ಹಾಗೂ ಸಿಬ್ಬಂದಿಗಳು ಇಂದು (26/04/2025) ಮೇಣದ ಬತ್ತಿ ಉರಿಸಿ ಸಂತಾಪ ಸೂಚಿಸಿದರು.      ಕಾಲೇಜಿನ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿಸಂಸ್ಥೆಯ ಡೀನ್ ಡಾ. ಸುನೀಲ್ ಮುದ್ದಯ್ಯ ಅವರು ಮಾತನಾಡಿ ಉಗ್ರವಾದದಿಂದ ನಮ್ಮ ದೇಶದ 26 ನಾಗರಿಕರು ಪ್ರಾಣ ತ್ಯಜಿಸಿದ್ದಾರೆ. ಇದು ನಿಜಕ್ಕೂ ದುಃಖಕರ ಸಂಗತಿ,  ಉಗ್ರವಾದವನ್ನು ಮೆಟ್ಟಿ ನಿಲ್ಲುವ […]

Continue Reading

ಮುದ್ದಂಡ ಹಾಕಿ, ಸೆಮಿಫೈನಲ್‌ನತ್ತ  ಬಲಿಷ್ಠ 4 ತಂಡಗಳು…

ಮಡಿಕೇರಿ ಏ.25 :  ಆರಂಭದಿಂದಲೇ ಕುತೂಹಲ ಮೂಡಿಸಿದ ಮುದ್ದಂಡ ಕಪ್ ಹಾಕಿ ಉತ್ಸವ ಅಂತಿಮ ಘಟ್ಟವನ್ನು ಪ್ರವೇಶಿಸಿದೆ. ಇಂದಿನ ರೋಚಕ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ನೆಲ್ಲಮಕ್ಕಡ, ಮಂಡೇಪಂಡ, ಚೇಂದಂಡ ಮತ್ತು ಕುಪ್ಪಂಡ ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ. ತೀವ್ರ ಪೈಪೋಟಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡ 3-1 ಗೋಲುಗಳ ಅಂತರದಿಂದ ಬಲಿಷ್ಠ ಕೂತಂಡ ತಂಡದ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೇರಿತು. ನೆಲ್ಲಮಕ್ಕಡ ತಂಡದ ವೀಕ್ಷಿತ್ ಸೋಮಯ್ಯ ಒಂದು ಗೋಲು ಗಳಿಸಿದರೆ, […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ನಾಡ್‌ಲ್ ನಾಳ್ -22  ಕೈಂಜ ವಾರತಿಂಜ… ಚಿಮ್ಮ ಇಕ್ಕ ಕೊಡಿಲ್ ರೋಡ್‌ಕ್ ಪತ್ತುವಕ್ ಪೊರ್‌ಟದ್ ನೋಟಿತ್ ಪಟ್ಟೆದಾರ ಕೀರಿಕ್‌ಣ್ಣಂಡ ಕೆಮಿಲ್ ಅಂಜಿ ನಿಮಿಷ ಎಂತಾನೆಲ್ಲೋ ಪಚ್ಚ್‌ಚಿ. “ಆಚಯ್ಯಾ… ಆಚಯ್ಯಾ”ಂದೆಣ್ಣಿಯಂಡ್ ಮಂಡೆ ಆಟಿಯಂಡಿಂಜ ಕೀರಿಕ್‌ಣ್ಣ, ವಾಸು, ಅರುಣನ ಕೂಟಿಯಂಡ್ ಓಡಿ ಪೋಚಿ. ಚಿಮ್ಮ ಅಲ್ಲಿಂಜ ಪೋನ ಪಿಂಞ ಪಟ್ಟೆದಾರ ತಾಂಡ ದುಷ್ಟ ಗ್ಯಾಂಗ್‌ರ ಕೂಡೆ ಮಿಂಞಕ್ ಮಾಡಂಡಿಯೆ ತಯಾರಿಕ್ ಮನೆರತ್ತಟಿ ನಡ್‌ಂದತ್. ವಾಚಿಲ್ ಗಂಟೆ ನೋಟ್‌ನ ಚಿಮ್ಮ ಇಕ್ಕಾಚೇಂಗಿ ಕೀರಿಕ್‌ಣ್ಣ ಬಂದಿತಿಕ್ಕೂಂದ್ ಮುರ್ಕ್‌ ಮರತ್‌ರ ಅಡಿಕ್ ನಡ್ಂದತ್. ಅಲ್ಲಿ […]

Continue Reading

ಮೇ1 ರಂದು ಮೂರ್ನಾಡಿನಲ್ಲಿ ಕೊಡಗು ಹೆಗ್ಗಡೆ ಸಮಾಜ ಕ್ರೀಡೋತ್ಸವಕ್ಕೆ ಚಾಲನೆ…

ಬುಟ್ಟಂಗಾಲ, ಏ.25: ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವವು ಮೇ 1ರಿಂದ 3 ರವರಗೆ  ಜೂನಿಯರ್ ಕಾಲೇಜ್ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ  ನಡೆಯಲಿದ್ದು ಮೂರು ದಿನ ನಡೆಯುವ  ಈ ಕ್ರೀಡಾಕೂಟದಲ್ಲಿ ಕ್ರಿಕೆಟ್, ಪುರಷರು ಮತ್ತು ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಹಗ್ಗ ಜಗ್ಗಾಟ,ಮಹಿಳೆಯರಿಗೆ ಥ್ರೋಬಾಲ್ ಪಂದ್ಯಗಳು ನಡೆಯಲಿದೆ.      ಮೇ 1 ರಂದು ಪೂರ್ವಾಹ್ನ 10.30ಗಂಟೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರಾದ ಅಜ್ಜಿಕುಟ್ಟೀರ ಪೂನ್ನಣನವರು ಚಾಲನೆ ನೀಡಲಿದ್ದು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ವಿಶ್ರಾಂತ ಕುಲಪತಿಗಳಾದ […]

Continue Reading

ಮುದ್ದಂಡ ಕಪ್ ಹಾಕಿ ನಮ್ಮೆಯಲ್ಲಿ 1975 ವಿಶ್ವಕಪ್ ವಿಜೇತ ಬಿ.ಪಿ.ಗೋವಿಂದ ಅವರಿಗೆ ಗೌರವ …

  ✍–ಚೆಪ್ಪುಡೀರ ಕಾರ್ಯಪ್ಪ           ಬಿಳಿಮಗ್ಗರ ಪುಟ್ಟಸ್ವಾಮಿ ಹಾಗೂ ಲಕ್ಷ್ಮಮ್ಮ ದಂಪತಿಗಳ  ಪುತ್ರನಾಗಿ ಸೋಮವಾರಪೇಟೆಯಲ್ಲಿ 4-3-1951ರಂದು ಗೋವಿಂದ ಜನಿಸುತ್ತಾರೆ.ಇವರು ಒಬ್ಬ ಅಣ್ಣ ಮೂರು ತಮ್ಮಂದಿರೊಂದಿಗೆ ಬಾಲ್ಯದಿಂದಲೂ ಹಾಕಿ ಆಡುತ್ತಿದ್ದರು. ಸೋಮವಾರಪೇಟೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದರು.ಇವರಿಗೆ ಬಾಲ್ಯದಿಂದಲೂ ಹಾಕಿಯತ್ತ ಒಲವು ಇತ್ತು. ವಿರಾಜಪೇಟೆಯ ಕಡಂಗ ಮರೂರು ಯೂತ್ ಕ್ಲಬ್ ನಲ್ಲಿ ಪ್ರಥಮವಾಗಿ ಹಾಕಿ ಆಡಿದರು. ಆಮ್ಮಂಡ ವಾಸು, ಮನೆಯಪಂಡ ಬೋಪಣ್ಣ ಮುಂತಾದವರ ಜೊತೆ ಇವರು ಆಟವಾಡುತ್ತಿದ್ದರು. ನಂತರ ಮಡಿಕೇರಿಯ ವಾಂಡರ್ಸ್ ಕ್ಲಬ್ ನಲ್ಲಿ, ಶಂಕರ್ ಸ್ವಾಮಿಯ […]

Continue Reading