ಮುದ್ದಂಡ ಹಾಕಿ ನಮ್ಮೆ, ರಸ್ತೆ ಸುರಕ್ಷತಾ ಜಾಗೃತಿ ಓಟ…

     ಮಡಿಕೇರಿ ಏ.24 :   ರಸ್ತೆ ಅಪಘಾತ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಜನರಿಗೆ ರಸ್ತೆ ಸುರಕ್ಷತಾ ನಿಯಮ ಪಾಲಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ಮಡಿಕೇರಿಯಲ್ಲಿ ರಸ್ತೆ ಸುರಕ್ಷತಾ ಓಟ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೈಂಡ್ ಎಂಡ್ ಮ್ಯಾಟರ್ ಹಾಗೂ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಮುದ್ದಂಡ ಹಾಕಿ ಉತ್ಸವ ಮೈದಾನದವರೆಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಫಲಕಗಳನ್ನು ಹಿಡಿದು ಓಡುವ ಮೂಲಕ […]

Continue Reading

ಮುದ್ದಂಡ ಕಪ್ ಹಾಕಿ ನಮ್ಮೆ, ಕಂಬಿರಂಡ ಕೇಚೆಟ್ಟಿರ  ಆಖೀರಿ ಪೈಪೋಟಿಕ್

ಮಡಿಕೇರಿ, ಏ.24: ಮುದ್ದಂಡ ಕಪ್‌ ಹಾಕಿ ನಮ್ಮೆರ ಪೊಮ್ಮಕ್ಕಡ ಕಳಿಲ್‌  ಕಂಬಿರಂಡ ಪಿಂಞ ಕೇಚೆಟ್ಟಿರ ಒಕ್ಕಕಾರ ಆಖೀರಿ ಮೊಟ್ಟ್‌ಕ್‌ ಎತ್ತಿತ್.‌           ಇಂದ್‌ ನಡ್ಂದ ಸೆಮಿ ಪೈನಲ್‌ ಪೈಪೋಟಿಲ್‌,  ಕಂಬೀರಂಡ ಒಕ್ಕತ ಪೊಮ್ಮಕ್ಕ ಕಲಿಯಂಡ ಒಕ್ಕತ್‌ನ ಚೋಪುಚಿಟ್ಟಕ, ಕೇಚೆಟ್ಟಿರವು ಕುಪ್ಪಂಡ ಒಕ್ಕಕಾರಳ ಚೋಪುಚಿಟ್ಟಿತ್‌ ಆಖೀರಿ ಮೊಟ್ಟ್‌ ಪತ್ತಿತ್.‌            ಈ ದಂಡೂ ಒಕ್ಕತ್‌ರ ಪೊಮ್ಮಕ್ಕ 26ನೇ ಚೆನಿಯಾಚೆ ನಡ್ಪ ಆಕೀರಿ ಪೈಪೋಟಿಲ್‌ ಇನಾಂಕಾಯಿತ್‌ ಪಡೆ ಪೊಪ್ಪದುಂಡ್.‌            ಈ ಕುರಿ ಅಂಜಾಳ್‌ ಓರ್‌ ಬರಿರ ಪೊಮ್ಮಕ್ಕಡ  ಹಾಕಿ […]

Continue Reading

ಕಾರ್ಮಿಕನ ಬಲಿ ಪಡೆದ  ಕಾಡಾನೆ  ಕಾರ್ಯಾಚರಣೆಗೆ ಸಂಕೇತ್ ಪೂವಯ್ಯ ನೇತೃತ್ವ…

ಸಿದ್ದಾಪುರ, ಏ.24:  ಸಿದ್ದಾಪುರ ಸಮೀಪ ಟಾಟಾ ಸಂಸ್ಥೆಯ ಎಮ್ಮೆಗುಂಡಿ ಎಸ್ಟೇಟಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಚಿನ್ನ ಮೇಸ್ತ್ರಿ (65 )ಇಂದು ಮುಂಜಾನೆ  ಕಾಡನೆ ದಾಳಿಗೆ ಬಲಿಯಾಗಿದ್ದಾರೆ. ಮುಂಜಾನೆ ವಾಕಿಂಗ್ ತೆರಳಿದ್ದ ಸಂದರ್ಭ ಈ ದಾಳಿ ನಡೆದಿದೆ.  ಘಟನಾ ಸ್ಥಳಕ್ಕೆ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಧಾವಿಸಿದ್ದು ಮೃತಪಟ್ಟ ಕಾರ್ಮಿಕನಿಗೆ ಸರ್ಕಾರದಿಂದ ನೀಡಬೇಕಾದ ಎಲ್ಲಾ ಪರಿಹಾರವನ್ನು ಆದಷ್ಟು ಶೀಘ್ರದಲ್ಲಿ ನೀಡಲು ಹಾಗೂ ಕಾಡಾನೆಯನ್ನು ಸೆರೆಹಿಡಿಯಲು ಕಾರ್ಯಚರಣೆ ಕೈಗೊಳ್ಳುವಂತೆ ವಿರಾಜಪೇಟೆ ಕ್ಷೇತ್ರ ಶಾಸಕ […]

Continue Reading

ಮುದ್ದಂಡ ಕಪ್ ಹಾಕಿ ಸೆಮಿಸ್‌ಗಾಗಿ ನಾಳೆ ಬಲಿಷ್ಟ ಒಕ್ಕಗಳ ಕಾಳಗ

ಮಡಿಕೇರಿ, ಏ.24:  ರೋಚಕ ಘಟ್ಟ ತಲುಪಿರುವಕೊಡವ ಒಕ್ಕಡ ಹಾಕಿ ನಮ್ಮೆಯ  ಕ್ವಾಕರ್‌ ಫೈನಲ್‌ನಲ್ಲಿ ನಾಳೆ ಬಲಿಷ್ಟ ತಂಡಗಳು ನಿರ್ಣಾಯಕ ಘಟ್ಟದ ಮೆಟ್ಟಿಲಿಗಾಗಿ ಕಾದಾಡಲಿವೆ.  ಬೆಳಿಗ್ಗೆ 9.30 ಗಂಟೆಗೆ ನೆಲ್ಲಮಕ್ಕಡ ಮತ್ತು ಕೂತಂಡ, 11 ಗಂಟೆಗೆ ಮಂಡೇಪಂಡ ಮತ್ತು ಕರವಂಡ  ಮಧ್ಯಾಹ್ನ 12.30 ಗಂಟೆಗೆ  ಚೆಪ್ಪುಡಿರ ಮತ್ತು ಚೇಂದಂಡ, 2.30 ಗಂಟೆಗೆ ಕುಪ್ಪಂಡ (ಕೈಕೇರಿ) ಮತ್ತು ಪುದಿಯೊಕ್ಕಡ ತಂಡಗಳು ಸೆಮಿ ಫೈನಲ್‌ ಕನಸಿನೊಂದಿಗೆ ಹೋರಾಡಲಿವೆ.

Continue Reading

ಕ್ಷೇತ್ರದ ಅಭಿವೃದ್ದಿ ನನ್ನ ಏಕಮೇವ ಗುರಿ: ನಡುಬಾಡೆ ಸ್ಪಂದನದಲ್ಲಿ ಶಾಸಕ ಪೊನ್ನಣ್ಣ ಮುಕ್ತ ಮಾತು…

ವಿರಾಜಪೇಟೆ, ಏ.24: ವಿರಾಜಪೇಟೆ ವಿಧಾನ ಸಭಾ ಕ್ಷೇತ್ರವನ್ನು ರಾಜ್ಯದ ನಂಬರ್‌ ಒನ್‌ ಕ್ಷೇತ್ರವಾಗಿ ಅಭಿವೃದ್ದಿ ಪಡಿಸುವುದು ನನ್ನ ಏಕಮೇವ ಗುರಿಯಾಗಿದ್ದು, ಇದಕ್ಕಾಗಿ ನನ್ನ ಎಲ್ಲಾ ಹಿತಾಶಕ್ತಿಯನ್ನು ಬದಿಗಿಟ್ಟು ಶ್ರಮಿಸುತಿದ್ದೇನೆ, ಜನತೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಹೇಳಿದರು.           ನಡುಬಾಡೆ ಸಂಸ್ಥೆಯು ಪ್ರಾರಂಬಿಸಿರುವ ನೂತನ ಕಾರ್ಯಕ್ರಮ ನಡುಬಾಡೆ ಸ್ಪಂದನ ಗೂಗಲ್‌ ಮೀಟ್‌ ಲೈವ್‌ನಲ್ಲಿ ಭಾಗವಹಿಸಿ, ಮನವಿ ಆಲಿಸುವ ಮೂಲಕ, ಜನತೆಯೊಂದಿಗೆ ನೇರವಾಗಿ ಮುಕ್ತಮಾತುಗಳನಾಡಿದ […]

Continue Reading

ಕೊಡಗು ಕಾಂಗ್ರೆಸ್‌ ಭೀಷ್ಮ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅಸ್ತಂಗತ…

ಮಡಿಕೇರಿ, ಏ.24:  ಕೊಡಗು ಕಾಂಗ್ರೆಸ್ನ ಭೀಷ್ಮ ಎಂದೇ ಖ್ಯಾತರಾಗಿದ್ದ ಬೊಟ್ಟೊಳಂಡ ಮಿಟ್ಟು ಚಂಗಪ್ಪ  ಮಿಟ್ಟು ಚಂಗಪ್ಪ (83) ವಿಧಿವಶರಾಗಿದ್ದಾರೆ.   ಅಮ್ಮತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿರುವ ಮಿಟ್ಟು ಚಂಗಪ್ಪ ಅವರು ವಯೋ ಸಹಜ ಖಾಯಿಲೆಯೀಂದ ಬಲಲುತಿದ್ದರು.   5 ದಶಕಗಳ ಕಾಲ ರಾಜಕೀಯದಲ್ಲಿದ್ದ ಕಾಂಗ್ರೆಸ್ನ  ನಿಷ್ಟಾವಂತ ನಾಯಕರಾಗಿದ್ದ ಇವರು, ಕೊಡಗು ಕಾಂಗ್ರೆಸ್‌ ಕಟ್ಟಾಳುಗಳಲ್ಲಿ ಒಬ್ಬರು. ಇತ್ತೀಚಿಗಿನ ವರ್ಷಗಳವರೆಗೂ ಕೊಡಗು ಕಾಂಗ್ರೆಸ್ಸಿಗೆ ಸಂಭಂದಿಸಿದ ನಿರ್ಣಯಗಳು ಮಿಟ್ಟು ಚಂಗಪ್ಪ ಅಣತಿಯಂತೆಯೇ ನಡೆಯುತಿದ್ದವು. ರಾಜಕಾರಣಿಯಾಗಿ, ಪ್ರವಾಸೋದ್ಯಮಿಯಾಗಿ, ಕೖಷಿಕರಾಗಿ, ಕಾಫಿ ಉದ್ಯಮಿಯಾಗಿ ಗಮನ […]

Continue Reading

ಸಕಾಲ ಸೇವೆ ನಾಗರಿಕರ ಹಕ್ಕು, ಸಕಾಲ ಮಿಷನ್ ಆಡಳಿತಾಧಿಕಾರಿ ನಿವೇದಿತಎಸ್ …

        ಮಡಿಕೇರಿ ಏ.24:- ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ಮತ್ತು (ತಿದ್ದುಪಡಿ) ಅಧಿನಿಯಮ 2014ರ ಅನುಸಾರ, ಸಕಾಲ ಅಧಿಸೂಚಿತ ಸೇವೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪಡೆಯುವುದು ನಾಗರಿಕರ ಹಕ್ಕಾಗಿದೆ. ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಯು ವಿಳಂಬವಾದಲ್ಲಿ ಅಥವಾ ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಯು ತಿರಸ್ಕೃತಗೊಂಡಲ್ಲಿ ಅಥವಾ ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಗೆ 15 ಸಂಖ್ಯೆಯ ಸಕಾಲ ಸ್ವೀಕೃತಿ ಸಂಖ್ಯೆ ನೀಡದಿದ್ದಲ್ಲಿ ಈ ಮೂರು ಸಂದರ್ಭಗಳಲ್ಲಿ […]

Continue Reading

ಮುದ್ದಂಡ ಕಪ್ ಹಾಕಿ ನಮ್ಮೆ,1975 ವಿಶ್ವಕಪ್ ವಿಜೇತ ಪೈಕೇರ ಕಾಳಯ್ಯನವರಿಗೆ ಗೌರವ…

       ✍-ಚೆಪ್ಪುಡೀರ ಕಾರ್ಯಪ್ಪ        ಹಾಕಿ ರಾಷ್ಟ್ರೀಯ ಕ್ರೀಡೆ ಅಂದರೆ ಒಲಂಪಿಕ್ಸ್ ನಲ್ಲಿ 8 ಚಿನ್ನ, 1 ಬೆಳ್ಳಿ, 3 ಕಂಚು ಪಡೆದ ಭಾರತದ ಹಾಕಿ ರಾಷ್ಟ್ರೀಯ ಕ್ರೀಡೆಯೇ ಸರಿ.1975ನೇ ಹಾಕಿ ವಿಶ್ವಕಪ್ ಗೆದ್ದ ಕೊಡಗಿನ ಕಣ್ಮಣಿ ಕಾಳಯ್ಯ. ಅವರು 49 ವರ್ಷದ ಹಿಂದೆ ಪ್ರಥಮ ಬಾರಿಗೆ ವಿಶ್ವಕಪ್ ಗೆದ್ದು ದಾಖಲೆ ನಿರ್ಮಿಸಿದ ಗಂಡುಗಲಿ. 1951ನೇ ಇಸವಿ ಮಡಿಕೇರಿಯಲ್ಲಿ ಪೈಕೇರ ಈರಪ್ಪ ಹಾಗೂ ಅಕ್ಕವ್ವ ದಂಪತಿಯರ ಪುತ್ರನಾಗಿ ಜನಿಸುತ್ತಾರೆ.         ಬಾಲ್ಯದಿಂದಲೇ ಕ್ರೀಡೆಯಲ್ಲಿ ಉತ್ಸಾಹ, 12ನೇ ವಯಸ್ಸಿನಲ್ಲಿ […]

Continue Reading

ಮುದ್ದಂಡ ಹಾಕಿ ನಮ್ಮೆ ನಾಳೆ ಮಹಿಳಾ ಕ್ವಾಟರ್ ಫೈನಲ್-ಸೆಮಿ ಫೈನಲ್

ಮಡಿಕೇರಿ, ಏ.23: ಪ್ರತಿಷ್ಟಿತ ಮುದ್ದಂಡ ಕಪ್‌ ಹಾಕಿ ಉತ್ಸವ ಮಹಿಳೆಯರ ಪೈಪೋಟಿಯಲ್ಲಿ, ನಾಳೆ, ಕ್ವಾಟರ್ ಫೈನಲ್‌ ಮತ್ತು ಸೆಮಿ ಫೈನಲ್ ಹೋರಾಟ ನಡೆಯಲಿದೆ. ಕ್ವಾಟರ್ ಫೈನಲ್, ಬೆಳಿಗ್ಗೆ 10 ಗಂಟೆಗೆ ಕಾಂಡಂಡ ಮತ್ತು ಕೇಚೆಟ್ಟಿರ 11 ಗಂಟೆಗೆ ಕುಟ್ಟಂಡ ಮತ್ತು ಕುಪ್ಪಂಡ (ಕೈಕೇರಿ) ಮಧ್ಯಾಹ್ನ 12 ಗಂಟೆಗೆ ಕಂಬೀರಂಡ ಮತ್ತು ಚೆಯ್ಯಂಡ1 ಗಂಟೆಗೆ ಕಲಿಯಂಡ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು), ಸೆಮಿ ಫೈನಲ್ 2 ಗಂಟೆಗೆ ಕಾಂಡಂಡ/ಕೇಚೆಟ್ಟೀರ ಮತ್ತು ಕುಟ್ಟಂಡ/ಕುಪ್ಪಂಡ (ಕೈಕೇರಿ)3 ಗಂಟೆಗೆ ಕಂಬೀರಂಡ/ ಚೆಯ್ಯಂಡ ಮತ್ತು ಕಲಿಯಂಡ/ಮುಕ್ಕಾಟಿರ […]

Continue Reading

ಮುದ್ದಂಡ ಕಪ್ ಹಾಕಿ ಉತ್ಸವ : ಏ.23 ರಂದು ನಡೆದ ಪುರುಷರ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಾವಳಿಯ ವಿಜೇತರ ವಿವರ

ಮಡಿಕೇರಿ, ಏ.23: ನೆಲ್ಲಮಕ್ಕಡ ಮತ್ತು ಕೋಳೇರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ಗೆಲುವು ದಾಖಲಿಸಿತು. ನೆಲ್ಲಮಕ್ಕಡ ಪರ ಸಚಿನ್, ರಾಕೇಶ್ ಸುಬ್ರಮಣಿ, ರೋಶನ್ ಬೋಪಣ್ಣ ಹಾಗೂ ಅಯ್ಯಪ್ಪ ತಲಾ 1 ಗೋಲು ದಾಖಲಿಸಿದರು. ಕೋಳೇರ ನಿಶಿಕ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೂತಂಡ ಮತ್ತು ಅಮ್ಮಣಿಚಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಕೂತಂಡ ಜಯ ಸಾಧಿಸಿತು. ಕೂತಂಡ ಪರ ಬೋಪಣ್ಣ 4 ಗೋಲು ದಾಖಲಿಸಿ ಗಮನ ಸೆಳೆದರೆ, ಸುರೇಶ್ […]

Continue Reading