ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ…

ಮಡಿಕೇರಿ ಮೇ,15(Nadubade News):  ಅಕ್ರಮವಾಗಿ ನಿ಼ಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಅನ್ನು ಮಾರಾಟ /ಸರಬರಾಜು ಮಾಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಮಡಿಕೇರಿ ನಗರ ಪೊಲೀಸರು ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿ ಅಬ್ದುಲ್ ಕಲಾಂ ಬಡಾವಣೆಯ ನಿವಾಸಿ ಮೊಹಮ್ಮದ್ ಶರ್ಜಿಲ್ (41)ಎಂಬಾತ ಬಂಧನಕ್ಕೊಳಗಾಗಿರುವ ಆರೋಪಿಯಾಗಿದ್ದಾನೆ.      ದಿನಾಂಕ 14-05-2025 ರಂದು ಮಡಿಕೇರಿ ಮಹದೇವಪೇಟೆಯ ಎ.ವಿ. ಶಾಲೆಯ ಕಡೆಯಿಂದ ಅಬ್ಬಿಫಾಲ್ಸ್‌ಗೆ  ಹೋಗುವ ಜಂಕ್ಷನ್‌ನಲ್ಲಿ  ಈತ  ಅಕ್ರಮವಾಗಿ ನಿ಼ಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಅನ್ನು ಮಾರಾಟ/ಸರಬರಾಜು ಮಾಡುತ್ತಿರುವ ಬಗ್ಗೆ ದೊರೆತ […]

Continue Reading

ಅರೆಭಾಷಿಕರ ಐನ್‍ಮನೆ ಕಾರ್ಯಕ್ರಮ ಮೇ, 17ರಂದು…

     ಮಡಿಕೇರಿ ಮೇ.15(Nadubade news): ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷಿಕರ ಐನ್‍ಮನೆ ಕಾರ್ಯಕ್ರಮವು ಮಕ್ಕಂದೂರು ಗ್ರಾಮದ ಕುಂಭಗೌಡನ ಐನ್‍ಮನೆಯಲ್ಲಿ ಮೇ, 17 ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿದೆ.     ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಕುಂಭಗೌಡನ ಕುಟುಂಬದ ಪಟ್ಟೆದಾರರಾದ ಕೆ.ಕೆ.ಓಂಕಾರಪ್ಪ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್‍ ಗೌಡ,  ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಮಕ್ಕಂದೂರು ಗ್ರಾ.ಪಂ.ಅಧ್ಯಕ್ಷರಾದ ಬಿ.ಎನ್.ರಮೇಶ್, ಮಕ್ಕಂದೂರು […]

Continue Reading

ಕೊಡವ ಒಕ್ಕಡೊಕ್ಕಡ ಮೊದಲ ವರ್ಷದ ತೋಕ್‌ನಮ್ಮೆ ಜೂನ್ 7 ರಂದು…

ಪೊನ್ನಂಪೇಟೆ,ಮೇ 15.(Nadubade News): ಕೊಡವ ಒಕ್ಕಡೊಕ್ಕಡ ಮೊದಲ ವರ್ಷದ ತೋಕ್‌ನಮ್ಮೆಯನ್ನು ಪೊನ್ನಂಪೇಟೆ ತೂಚಮಕೇರಿಯ ಪೆಮ್ಮಂಡ ಒಕ್ಕ ಆಯೋಜಿಸಿದ್ದು, ಈ ತೋಕ್‌ನಮ್ಮೆಯು ಜೂನ್ 7ರಂದು ಪೊನ್ನಂಪೇಟೆ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9945375157, 7349714649,9686962199 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

Continue Reading

ಕೊಡವಾಮೆರ ಕೊಂಡಾಟ ನಡ್ತ್‌ನ ಆಪಾಡಂಡ ಟಿ. ರಘು ಅಯಿಂಗಡ ನೆಪ್ಪುಲ್  ನಡ್ತ್‌ನ ಪಾಟ್ ಪೈಪೋಟಿರ ಇನಾಂಪಟ್ಟಿ…

ವಿರಾಜಪೇಟೆ, ಮೇ,15(Nadubade News): ಕೇಳಿಪಟ್ಟ ಸಿನೇಮಾಕಾರ ಆಪಾಡಂಡ ಟಿ. ರಘು ಅಯಿಂಗಡ ನೆಪ್ಪುಲ್ ‌ ಕೊಡವಾಮೆರ ಕೊಂಡಾಟ (ರಿ) ಸಂಘಟನೆ  ನಡ್ತ್‌ನ ಆನ್‌ಲೈನ್  ಪಾಟ್ ಪೈಪೋಟಿಲ್ ಚೆಟ್ಟಿರ ಗ್ರಂಥ ಕಾರ್ಯಪ್ಪ ಆದ್ಯ, ಬೊಳ್ಳಚೆಟ್ಟಿರ ಶರೀನ್ ಚಂಗಪ್ಪ ದಂಡನೇ,   ಪಳಂಗಂಡ ಶಾನ್ ಸುಬ್ಬಯ್ಯ ಮೂಂದನೇ ಇನಾಂ ಪಡಂದಂಡಿತ್.‌     ಸಿನೇಮಾಕೋವುಲ್ ಕೊಡವಾಮೆನ ಕೊಂಡಾಡಿತ್ ಒಯಿಂಜ  ಪೆರಿಯ ಜೀಂವಕ್  ಸ್ವರತೊಮ್ಮಾನ ಒಪ್ಪುಚಿಡೋಕ್ ಕೊಡವಾಮೆರ ಕೊಂಡಾಟ ಸಂಘಟನೆ ಈ ಕಾರ್ಬಾರ್‌ ನಡ್ತ್‌ನ ಈ ಪೈಪೋಟಿಲ್‌, ಅಣ್ಣಳಮಾಡ ನೀಮಾ ಜೋಯಪ್ಪ, ಬೊಳ್ಳಚೆಟ್ಟಿರ ದಿಲೀಪ್ […]

Continue Reading

ಸಕಾಲ ಅರ್ಜಿಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು  ಜಿಲ್ಲಾಧಿಕಾರಿ ಸೂಚನೆ…

   ಮಡಿಕೇರಿ ಮೇ.14(Nadubade News): ವಿವಿಧ ಇಲಾಖೆಗೆ ಸಕಾಲ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಕಾಲಮಿತಿಯಲ್ಲಿ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.         ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಸಂಬಂಧ ಅಧಿಕಾರಿಗಳ ಜೊತೆ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.       ಸಕಾಲ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಕಾಲದಲ್ಲಿ ಮಾಹಿತಿ ಒದಗಿಸಬೇಕು. ತಮ್ಮ ಹಂತದಲ್ಲಿ ಕೆಲಸ […]

Continue Reading

ಪ್ರಾದೇಶಿಕ ಸೇನೆ ಸೇರಲು ಅರ್ಜಿ ಸಲ್ಲಿಕೆ ಆರಂಭ…

ಮಡಿಕೇರಿ, ಮೇ 14 (Nadubade News): ಆಪರೇಷನ್ ಸಿಂಧೂರ  ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪ್ರಾದೇಶಿಕ ಸೇನೆ (ಟೆರಿಟೊರಿಯಲ್ ಆರ್ಮಿ) ಗೆ ಸೇರ್ಪಡೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. 18-42 ವಯಸ್ಸಿನ (ಜೂನ್ 10ಕ್ಕೆ 18 ವರ್ಷ ತುಂಬಿದ, 42 ವರ್ಷ ದಾಟದ) ಮಾನ್ಯತೆ ಪಡೆದ ವಿವಿಯಿಂದ ಪದವಿ ಪಡೆದಿರುವವರು ಈ ಸೇನೆಗೆ ಸೇರಲು ಅರ್ಹರು.  ಆಸಕ್ತರು ಮೇ 12ರಿಂದ ಜೂ.10ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಜು.20ಕ್ಕೆ ಆನ್‌ಲೈನ್ ಮೂಲಕ ಪ್ರವೇಶ ಪರೀಕ್ಷೆ ನಡೆಯುವ ಸಂಭವವಿದೆ. ಹೆಚ್ಚಿನ ಮಾಹಿತಿಗಾಗಿ https://www.indianarmy.nic.in  ಅಥವಾ […]

Continue Reading

ಮೇ 16 ರಂದು ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ…

      ಮಡಿಕೇರಿ ಮೇ.14(Nadubade News):  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘ, ಪುತ್ತೂರು ವಿಭಾಗ ವತಿಯಿಂದ ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ, ವಿಶ್ವರತ್ನ, ವಿಶ್ವಜ್ಞಾನಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಸಮಾರಂಭವು ಮೇ, 16 ರ ಶುಕ್ರವಾರದಂದು ಬೆಳಗ್ಗೆ 10.30 ಗಂಟೆಗೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ.         ಮೇ, 16 ರಂದು ಬೆಳಗ್ಗೆ 8.30 ಗಂಟೆಗೆ ಕೆಎಸ್‍ಆರ್‍ಟಿಸಿ ಬಸ್ ಘಟಕದಿಂದ ಭೀಮರಥ ಮೆರವಣಿಗೆ […]

Continue Reading

ಅರೆಭಾಷೆ ರಂಗ ತರಬೇತಿ ಶಿಬಿರಕ್ಕೆ ಸ್ಥಳೀಯ ಕಲಾವಿದರಿಂದ ಅರ್ಜಿ ಆಹ್ವಾನ…

ಮಡಿಕೇರಿ ಮೇ.14(Nadubade News): ಕರ್ನಾಟಕ  ಅರೆಭಾಷೆ ಸಂಸ್ಕೃತಿ  ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ  20 ದಿನಗಳ ರಂಗ ತರಬೇತಿ ಶಿಬಿರ ನಡೆಯಲಿದೆ. ರಂಗ ಶಿಬಿರದಲ್ಲಿ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಿಂದ ಮುಖ್ಯವಾಗಿ ಅಭಿನಯ, ಮಾತುಗಾರಿಕೆ, ರಂಗ ವ್ಯಾಯಾಮ, ಸ್ವರಸಂಸ್ಕಾರ, ರಂಗ ಸಜ್ಜಿಕೆ, ವಸ್ತ್ರ ವಿನ್ಯಾಸ, ಸಂಗೀತ, ಬೆಳಕಿನ ಸಂಯೋಜನೆ, ಮೇಕಪ್, ಮಾತ್ರವಲ್ಲದೆ ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಕಲಿಕೆಯ ಜೊತೆಗೆ ಪ್ರಸಿದ್ಧ ಅರೆಭಾಷೆ ನಾಟಕದ ಅಭ್ಯಾಸವೂ ಒಳಗೊಂಡಿದೆ.      ಶಿಬಿರದಲ್ಲಿ ಸಿದ್ಧಗೊಂಡ ನಾಟಕದ ಪ್ರದರ್ಶನವನ್ನು ರಾಜ್ಯದ ಮುಖ್ಯ ನಗರಗಳಲ್ಲಿ ಅಕಾಡೆಮಿಯು […]

Continue Reading

ಪ್ರಧಾನಮಂತ್ರಿ ಆವಾಸ್ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸೂಚನೆ…

ಮಡಿಕೇರಿ ಮೇ.14(Nadubade News):  ಆರ್‍ಜಿಎಚ್‍ಸಿಎಲ್ ಬೆಂಗಳೂರು ಇವರ ಸೂಚನೆಯಂತೆ ಜಿಲ್ಲೆಯ ಮಡಿಕೇರಿ ನಗರಸಭೆ, ಕುಶಾಲನಗರ ಮತ್ತು ವಿರಾಜಪೇಟೆ ಪುರಸಭೆ ಹಾಗೂ ಸೋಮಾರಪೇಟೆ ಪಟ್ಟಣ ಪಂಚಾಯತಿಗಳಲ್ಲಿ 2021-22 ನೇ ಸಾಲಿನ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ನಗರ  ಯೋಜನೆಯಡಿ (ಬಿಎಲ್‍ಸಿ) ಆಯ್ಕೆಯಾಗಿ ಇದುವರೆಗೂ ಮನೆ ನಿರ್ಮಾಣ ಕಾಮಗಾರಿ ಆರಂಭಿಸದೇ ಇರುವ ಫಲಾನುಭವಿಗಳು ಕಾಮಗಾರಿಯನ್ನು ಆರಂಭಿಸಿ ಜಿಯೋಟ್ಯಾಗ್ ಮಾಡಿಸಿಕೊಳ್ಳಲು ಮೇ 31 ರವರೆಗೆ ಅಂತಿಮ ಅವಕಾಶ ನೀಡಲಾಗಿದೆ. ಈ ಪಿಎಂಎವೈ(ಯು) ಯೋಜನೆಯಡಿ 2015-16 ರಿಂದ 2021-22 ನೇ ಸಾಲಿನವರೆಗೆ ಆಯ್ಕೆಯಾಗಿ […]

Continue Reading