ಭಕ್ತಿಯಿಂದ – ಬೋಸ್ಟನ್‌ ವರೆಗೂ ಹೆಜ್ಜೆ ಗುರುತು ದಾಖಲಿಸಿದ; ಕೂತಿರಬಿದ್ದಪ್ಪ

ಬೆಂಗಳೂರು, ಜು.08;(nadubade news):  ಕೊಡಗು ಜಿಲ್ಲೆ ಸೂರ್ಲಬ್ಬಿ ಬಳಿಯ ಭಕ್ತಿ ಮೂಲದ, ಹವ್ಯಾಸಿ ಮ್ಯಾರಥಾನ್ ಓಟಗಾರ ಕೂತಿರ ಬಿದ್ದಪ್ಪ,  ಅಮೇರಿಕಾದ  ಬೋಸ್ಟನ್‌ನಲ್ಲಿ ಈ ವರ್ಷ ನಡೆದ  ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಮ್ಯಾರಥಾನ್ನಲ್ಲಿ ಪಾಲ್ಗೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.          ಮುಂಜಾನೆಯ ಜಾಗಿಂಗ್‌ನಿಂದ ಪ್ರಾರಂಭವಾದ ಕೂತಿರ ಬಿದ್ದಪ್ಪ ಅವರ ಓಟವು   ಜಾಗತಿಕ ಮಟ್ಟದವರೆಗೂ ಕರೆದೊಯ್ದಿದೆ.  ಫೆಬ್ರವರಿ 2025 ರಲ್ಲಿ ನಡೆದ ಚಂಡೀಗಢ ಮ್ಯಾರಥಾನ್‌ನಲ್ಲಿ 2 ಗಂಟೆ 59 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಪ್ರತಿಷ್ಟಿತ ಬೋಸ್ಟನ್ […]

Continue Reading

ಗರ್ವಾಲೆ ಅಂಗನವಾಡಿ ಮೇಲೆ ಬಿದ್ದ ಮರ, ಕ್ಷಣಗಳಲ್ಲಿ  ತಪ್ಪಿದ ಭಾರೀ ಅನಾಹುತ

ಗರ್ವಾಲೆ; ಜು.08. (nadubadenews): ಗರ್ವಾಲೆ ಅಂಗನವಾಡಿಯ   ಮೇಲೆ  ಮರಬಿದ್ದು ಭಾಗಷಃ ಜಕಂಗೊಂಡಿದ್ದು, ಅಂಗನವಾಡಿ ಸಹಾಯಕಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಡೆಯಲಿದ್ದ  ಭಾರೀ ಅನಾಹುತವೊಂದು ಕೆಲವೇ ಕ್ಷಣದಲ್ಲಿ ತಪ್ಪಿದೆ.           ಗರ್ವಾಲೆ ಗ್ರಾಮ ಪಂಚಾಯಿತಿ ಬಳಿ ಇರುವ ಅಂಗನವಾಡಿಗೆ ಇಂದು ಬೆಳಿಗ್ಗೆ 9.30ರ ಸುಮಾರಿನಲ್ಲಿ ಮರಬಿದ್ದಿದ್ದು, ಆಗತಾನೆ ಒಳನುಗ್ಗಿದ್ದ ಅಂಗನವಾಡಿ ಸಹಾಯಕಿ ಶ್ರೀಮತಿ ರತಿ ಅವರ ತಲೆ, ಬೆನ್ನು ಸೇರಿದಂತೆ ದೇಹದ ಹಲವಾರು ಭಾಗಗಳಲ್ಲಿ ಗಾಯವಾಗಿದ್ದು, ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.  ಅಂಗನವಾಡಿ ಶಿಕ್ಷಕಿ ಆಗತಾನೆ ಆಗಮಿಸುತಿದ್ದರಿಂದ ಇನ್ನೂ […]

Continue Reading

ಬೆಂಗಳೂರ್‌ ಸಮಾಜ ಪೈಪೋಟಿ ಕಳಕ್‌ ಮೂಂದನೇ ಕೂಟ್‌

ಬೆಂಗಳೂರ್;‌ ಜು.07: (nadubadenews): ಬೆಂಗಳೂರ್‌ ಕೊಡವ ಸಮಾಜ ಮಿಂಞತ ಮೂಂದ್‌ ಕಾಲತ ಆಡಳಿತ ಮಂಡಳಿಕ್‌ ಚೆನ್ನಂಗೇ ದಿನತ್‌ ಚುನಾವಣೆ ನಡ್ಪದುಂಡ್.‌  ಈ ಪೈಪೋಟಿಕ್‌  ಇಕ್ಕಾಕಲೆ ದಂಡ್‌ ಕೂಟ್‌ಕಾರ ತಂಗಡ ಪೈಪೋಟಿಕಾರಡ ಪೆದತ್‌ನೂ ಸಾರಿತ್‌,  ಬಲ್ಯ ಮಟ್ಟತ್‌ ತಯಾರಿನೂ ಮಾಡ್ಯಂಡುಂಡ್.‌  ಇದಂಡ ಮದ್ಯತ್‌ ಸದ್ದಿಲ್ಲತೆ ಮೂಂದನೇ ಕೂಟ್‌ ಒಂದ್‌ ಪೈಪೋಟಿಕ್‌ ಇಳಿವಕುಳ್ಳ ತಯಾರಿನ ಕರೆಮರೆಲ್ ಮಾಡ್ಯಂಡುಳ್ಳ ಸುದ್ದಿ ನಂಬಿಕೆರ ಮೂಲತಿಂಜ ಬಂದಿತ್.‌            ಸಮಾಜ ಆಡಳಿತ ವ್ಯವಸ್ಥೆನ ಇಂಞಚ್ಚಕೂ ಬಲಕೂಟುವ ಮಾರೀಪತ್‌, ಸಮಾಜಕಾಯಿತ್‌ ನೈಚ ಪೆರಿಯವು, ಮಾಜೀ ಅಧ್ಯಕ್ಷಂಗ, […]

Continue Reading

ಬುಧವಾರ ಮಡಿಕೇರಿಯಲ್ಲಿ ಉದ್ಯೋಗ ಮೇಳ…

   ಮಡಿಕೇರಿ ಜು.07(NadubadeNews): ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜುಲೈ, 09 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ‘ಉದ್ಯೋಗಮೇಳ’  ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ವುಡ್‍ಸ್ಟಾಕ್ ರೆಸಾರ್ಟ್, ಮಡಿಕೇರಿ, ಆರೇಂಜ್ ಕೌಂಟಿ ರೆಸಾರ್ಟ್, ಸಿದ್ದಾಪುರ, ಪೆಂಟಾಟೆಕ್, ಮಡಿಕೇರಿ, ಡಾಬರ್ ಮ್ಯಾನ್, ಮಂಗಳೂರು ಹಾಗೂ ಪಿಆರ್ ಕನ್‍ಸ್ಟ್ರಕ್ಷನ್ಸ್ ಕುಶಾಲನಗರ ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಮೇಳದಲ್ಲಿ ಖಾಸಗಿ ಕಂಪೆನಿಗಳು ಭಾಗವಹಿಸಿ […]

Continue Reading

ಹಾತೂರ್‌ ವನಭದ್ರಕಾಳಿ ನಮ್ಮೆ ನಾಳೆಯಿಂದ…

ಹಾತೂರ್,ಜು.06(NadubadeNews) :ವಿರಾಜಪೇಟೆ ಮುಖ್ಯ ರಸ್ತೆಯ ಹಾತೂರು, ಕೊಳತ್ತೋಡು ಗ್ರಾಮದ ಶ್ರೀ ವನಭದ್ರಕಾಳಿ ದೇವಿಯ ಉತ್ಸವ ಹಾಗೂ ಊರ ಹಬ್ಬವು ದಿನಾಂಕ 7 ಮತ್ತು 8ರಂದು ನಡೆಯಲಿದೆ. 7ರಂದು ಸಂಜೆ ಮಂದಮಾಡ ಮೊಟ್ಟೆಯಿಂದ ದೇವರ ಮೂರ್ತಿ ತಂದು ಹಾತೂರು ಮಾದೇವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮರುದಿನ ಬೆಳಿಗ್ಗೆ 6.30 ಗಂಟೆಗೆ ಕೊಕ್ಕಂಡ ಐನ್‌ಮನೆಯಿಂದ ಭದ್ರಕಾಳಿ ದೇವಿಯ ಮೊಗತೆರೆ ಆರಂಭವಾಗುತ್ತದೆ. ಅದೇ ಸಮಯಕ್ಕೆ ಕೇಳಪಂಡ ಐನ್‌ಮನೆಯಿಂದ ಪೂತೆರೆ(ಅಯ್ಯಪ್ಪ ತೆರೆ) ಹೊರಡುವುದು. ಅದೇ ದಿನ ಮಧ್ಯಾಹ್ನ 2.30 ಗಂಟೆಗೆ ಕೊಂಗೇಪಂಡ ಐನ್‌ಮನೆಯಿಂದ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡಲ್‌ ನಾಳ್‌

ನಾಡ್‌ಲ್‌ ನಾಳ್ – 27 ಕೈಂಜ ವಾರತಿಂಜ… “ಆ ಚಿಮ್ಮ ಕ್‌ಣ್ಣನೆಲ್ಲ ಅಂತಾ ನಲ್ಲ ಕ್‌ಣ್ಣಂದ್ ಬಾಯಿ ತೊರ್೦ದಯಿಂಗ ತೀರ ಕೊಂಡಾಡುವ ಅಂತವಂಡ ಬಯ್ಯ ಬೂವಂಡಿಕೆ ನಿಂಗಕೆನ್ನೋ ಸಮಯ ಚಾಯಲ್ಲೇಂದ್ ಕಾಂಬ” ವಡಿಯನ ತಿದ್ದುವಕ್ ನಲ್ಲ ತಕ್ಕ್ ಪರ್ಂದಿತ್ ಕಣ್ಣ್ ನೀರ್ ತೀಟಿಯಂಡತ್, ಜುಬ್ಬವ್ವ. ಪೊಣ್ಣ್ ತಾಂಡ ಶತ್ರುವ ಹೊಗಳುವಕ ಚಿಟ್ಟಪ್ಪಂಗ್ ಸಹಿಸುವಕ್ ಕಯ್ಯತಾಚಿ. ಅಂವೊ ನರಿರನೆಕೆ ಪಾರಿತ್ ಚುಬ್ಬವ್ವಂಡ ದುಂಡ್ ಮುರಿಯ ಒಂದ್ ಬುಟ್ಟತ್. ಒರ್ ಗಳಿಗೆ ಮಂಡೆ ಗರ್ರ್ಂದ್ ತಿರಿತ್ ಎಲ್ಲಿ ಉಳ್ಳಂದೇ ಗೊತ್ತಾಯಿಲೆ […]

Continue Reading

ಶಾಸಕರಾದ ಡಾ.ಮಂತರ್ ಗೌಡ ಅವರಿಂದ 178 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ಪತ್ರ ವಿತರಣೆ

ಮಡಿಕೇರಿ ಜು.04: (nadubadenews); ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲ್ಲೂಕಿನ 8 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 178 ಮನೆಗಳ ನಿರ್ಮಾಣಕ್ಕೆ ಶಾಸಕರಾದ ಡಾ.ಮಂತರ್ ಗೌಡ ಅವರು ಶುಕ್ರವಾರ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಿದರು. ಗಾಳಿಬೀಡು ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮನೆ ನಿರ್ಮಾಣ ಕಾರ್ಯಾದೇಶ ಪತ್ರ ವಿತರಿಸಿ ಮಾತನಾಡಿದ ಶಾಸಕರು ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಿಸಲಾಗುತ್ತಿದ್ದು, ಮಳೆಗಾಲ ನಂತರ ಮನೆ ನಿರ್ಮಾಣಕ್ಕೆ ಮುಂದಾಗಬಹುದಾಗಿದೆ ಎಂದು ಸಲಹೆ ಮಾಡಿದರು. ಸರ್ಕಾರದ […]

Continue Reading

ಫಾರೆಸ್ಟ್ ಗಾರ್ಡ್ ಕನ್ನಿಗಂಡ ಶರತ್ ಅನುಮಾನಾಸ್ಪದ ಶವವಾಗಿ ಪತ್ತೆ

ಮಡಿಕೇರಿ; ಜು.04; (nadubadenews): ಕಳೆದೊಂದು ವಾರದಿಂದ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಕೊಡಗು ಜಿಲ್ಲೆ ಕಾಲೂರು ಮೂಲದ, ಫಾರೆಸ್ಟ್ ಗಾರ್ಡ್ ಕನ್ನಿಗಂಡ ಶರತ್ (33)ಶವವಾಗಿ ಪತ್ತೆಯಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಮೀಸಲು ಅರಣ್ಯದ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ ಶರತ್ ಮೃತದೇಹ ಸಖರಾಯಪಟ್ಟಣದ ಸಮೀಪದ ಹಳೇಹಟ್ಟಿ ತಾಂಡ್ಯ ಬಳಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮೃತದೇಹ ಕೊಳೆತ್ತಿರುವ ಹಿನ್ನಲೆಯಲ್ಲಿ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು,ಸಖರಾಯಾಪಟ್ಟಣ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

ಶನಿವಾರ ಸಂತೆ ವ್ಯಾಪ್ತಿಯಲ್ಲಿ ಸ್ವಯಂ ಸೇವಕರಿಗೆ; ಪೊಲೀಸ್ ಕೋರಿಕೆ

ಶನಿವಾರಸಂತೆ; ಜು.04; (nadubadenews): ಶನಿವಾರ ಸಂತೆ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪವಾದರೆ ತಕ್ಷಣ ಪರಿಹಾರಕಾರ್ಯ ಕೈಗೋಳ್ಳಲು ಸನ್ನಧರಾಗಿರುವಂತೆ, ಈ ವ್ಯಾಪ್ತಿಯ ಸ್ವಯಂ ಸೇವಕರನ್ನು ಪೊಲೀಸ್‌ ಇಲಾಖೆ ಕೋರಿದೆ. ದಿನಾಂಕ 04-07-2025 ರಂದು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಿ.ಕೃಷ್ಣ ರಾಜು ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಯುವ ಈಜುಗಾರರು, ಜೇಸಿಬಿ, ಕ್ರೇನ್ ಮಾಲೀಕರು ಮತ್ತು ಆಪರೇಟರ್ ಗಳು, ಆಂಬುಲೆನ್ಸ್ […]

Continue Reading

ಉಡುಪಿ ಕಾಂಗ್ರೆಸ್ ವೀಕ್ಷಕರಾಗಿ ಕೊಡಗಿನ ಹೆಚ್.ಎಸ್ ಚಂದ್ರ ಮೌಳಿ‌ ನೇಮಕ

ಬೆಂಗಳೂರು, ಜು.04;(nadubadenews): ಕರ್ನಾಟಕ ರಾಜ್ಯದ 21 ಜಿಲ್ಲೆಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅವಧಿಗೆ ಡಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಬದಲಾವಣೆ ಮಾಡುವ ಹಿನ್ನಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು, ಆಯಾಯ ಜಿಲ್ಲೆಗಳಿಗೆ ಪಕ್ಷದ ರಾಜ್ಯ ಮುಖಂಡರುಗಳನ್ನು ವೀಕ್ಷಕರುಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಉಡುಪಿ ಜಿಲ್ಲೆಗೆ ವೀಕ್ಷಕರನ್ನಾಗಿ, ಕೊಡಗು ಜಿಲ್ಲೆಯವರಾದ, ಹಿರಿಯ ನ್ಯಾಯವಾದಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್. ಚಂದ್ರಮೌಳಿ ಅವರನ್ನು ನೇಮಿಸಿದೆ. ಇವರೊಂದಿಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ ಮಾಜಿ ಶಾಸಕರಾದ ಜಿ.ಆರ್ […]

Continue Reading