ಕ್ಷೇತ್ರದ ಅಭಿವೃದ್ದಿ ನನ್ನ ಏಕಮೇವ ಗುರಿ: ನಡುಬಾಡೆ ಸ್ಪಂದನದಲ್ಲಿ ಶಾಸಕ ಪೊನ್ನಣ್ಣ ಮುಕ್ತ ಮಾತು…

ವಿರಾಜಪೇಟೆ, ಏ.24: ವಿರಾಜಪೇಟೆ ವಿಧಾನ ಸಭಾ ಕ್ಷೇತ್ರವನ್ನು ರಾಜ್ಯದ ನಂಬರ್‌ ಒನ್‌ ಕ್ಷೇತ್ರವಾಗಿ ಅಭಿವೃದ್ದಿ ಪಡಿಸುವುದು ನನ್ನ ಏಕಮೇವ ಗುರಿಯಾಗಿದ್ದು, ಇದಕ್ಕಾಗಿ ನನ್ನ ಎಲ್ಲಾ ಹಿತಾಶಕ್ತಿಯನ್ನು ಬದಿಗಿಟ್ಟು ಶ್ರಮಿಸುತಿದ್ದೇನೆ, ಜನತೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಹೇಳಿದರು.           ನಡುಬಾಡೆ ಸಂಸ್ಥೆಯು ಪ್ರಾರಂಬಿಸಿರುವ ನೂತನ ಕಾರ್ಯಕ್ರಮ ನಡುಬಾಡೆ ಸ್ಪಂದನ ಗೂಗಲ್‌ ಮೀಟ್‌ ಲೈವ್‌ನಲ್ಲಿ ಭಾಗವಹಿಸಿ, ಮನವಿ ಆಲಿಸುವ ಮೂಲಕ, ಜನತೆಯೊಂದಿಗೆ ನೇರವಾಗಿ ಮುಕ್ತಮಾತುಗಳನಾಡಿದ […]

Continue Reading

ಕೊಡಗು ಕಾಂಗ್ರೆಸ್‌ ಭೀಷ್ಮ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅಸ್ತಂಗತ…

ಮಡಿಕೇರಿ, ಏ.24:  ಕೊಡಗು ಕಾಂಗ್ರೆಸ್ನ ಭೀಷ್ಮ ಎಂದೇ ಖ್ಯಾತರಾಗಿದ್ದ ಬೊಟ್ಟೊಳಂಡ ಮಿಟ್ಟು ಚಂಗಪ್ಪ  ಮಿಟ್ಟು ಚಂಗಪ್ಪ (83) ವಿಧಿವಶರಾಗಿದ್ದಾರೆ.   ಅಮ್ಮತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿರುವ ಮಿಟ್ಟು ಚಂಗಪ್ಪ ಅವರು ವಯೋ ಸಹಜ ಖಾಯಿಲೆಯೀಂದ ಬಲಲುತಿದ್ದರು.   5 ದಶಕಗಳ ಕಾಲ ರಾಜಕೀಯದಲ್ಲಿದ್ದ ಕಾಂಗ್ರೆಸ್ನ  ನಿಷ್ಟಾವಂತ ನಾಯಕರಾಗಿದ್ದ ಇವರು, ಕೊಡಗು ಕಾಂಗ್ರೆಸ್‌ ಕಟ್ಟಾಳುಗಳಲ್ಲಿ ಒಬ್ಬರು. ಇತ್ತೀಚಿಗಿನ ವರ್ಷಗಳವರೆಗೂ ಕೊಡಗು ಕಾಂಗ್ರೆಸ್ಸಿಗೆ ಸಂಭಂದಿಸಿದ ನಿರ್ಣಯಗಳು ಮಿಟ್ಟು ಚಂಗಪ್ಪ ಅಣತಿಯಂತೆಯೇ ನಡೆಯುತಿದ್ದವು. ರಾಜಕಾರಣಿಯಾಗಿ, ಪ್ರವಾಸೋದ್ಯಮಿಯಾಗಿ, ಕೖಷಿಕರಾಗಿ, ಕಾಫಿ ಉದ್ಯಮಿಯಾಗಿ ಗಮನ […]

Continue Reading

ಸಕಾಲ ಸೇವೆ ನಾಗರಿಕರ ಹಕ್ಕು, ಸಕಾಲ ಮಿಷನ್ ಆಡಳಿತಾಧಿಕಾರಿ ನಿವೇದಿತಎಸ್ …

        ಮಡಿಕೇರಿ ಏ.24:- ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ಮತ್ತು (ತಿದ್ದುಪಡಿ) ಅಧಿನಿಯಮ 2014ರ ಅನುಸಾರ, ಸಕಾಲ ಅಧಿಸೂಚಿತ ಸೇವೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪಡೆಯುವುದು ನಾಗರಿಕರ ಹಕ್ಕಾಗಿದೆ. ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಯು ವಿಳಂಬವಾದಲ್ಲಿ ಅಥವಾ ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಯು ತಿರಸ್ಕೃತಗೊಂಡಲ್ಲಿ ಅಥವಾ ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಗೆ 15 ಸಂಖ್ಯೆಯ ಸಕಾಲ ಸ್ವೀಕೃತಿ ಸಂಖ್ಯೆ ನೀಡದಿದ್ದಲ್ಲಿ ಈ ಮೂರು ಸಂದರ್ಭಗಳಲ್ಲಿ […]

Continue Reading

ಮುದ್ದಂಡ ಕಪ್ ಹಾಕಿ ನಮ್ಮೆ,1975 ವಿಶ್ವಕಪ್ ವಿಜೇತ ಪೈಕೇರ ಕಾಳಯ್ಯನವರಿಗೆ ಗೌರವ…

       ✍-ಚೆಪ್ಪುಡೀರ ಕಾರ್ಯಪ್ಪ        ಹಾಕಿ ರಾಷ್ಟ್ರೀಯ ಕ್ರೀಡೆ ಅಂದರೆ ಒಲಂಪಿಕ್ಸ್ ನಲ್ಲಿ 8 ಚಿನ್ನ, 1 ಬೆಳ್ಳಿ, 3 ಕಂಚು ಪಡೆದ ಭಾರತದ ಹಾಕಿ ರಾಷ್ಟ್ರೀಯ ಕ್ರೀಡೆಯೇ ಸರಿ.1975ನೇ ಹಾಕಿ ವಿಶ್ವಕಪ್ ಗೆದ್ದ ಕೊಡಗಿನ ಕಣ್ಮಣಿ ಕಾಳಯ್ಯ. ಅವರು 49 ವರ್ಷದ ಹಿಂದೆ ಪ್ರಥಮ ಬಾರಿಗೆ ವಿಶ್ವಕಪ್ ಗೆದ್ದು ದಾಖಲೆ ನಿರ್ಮಿಸಿದ ಗಂಡುಗಲಿ. 1951ನೇ ಇಸವಿ ಮಡಿಕೇರಿಯಲ್ಲಿ ಪೈಕೇರ ಈರಪ್ಪ ಹಾಗೂ ಅಕ್ಕವ್ವ ದಂಪತಿಯರ ಪುತ್ರನಾಗಿ ಜನಿಸುತ್ತಾರೆ.         ಬಾಲ್ಯದಿಂದಲೇ ಕ್ರೀಡೆಯಲ್ಲಿ ಉತ್ಸಾಹ, 12ನೇ ವಯಸ್ಸಿನಲ್ಲಿ […]

Continue Reading

ಮುದ್ದಂಡ ಹಾಕಿ ನಮ್ಮೆ ನಾಳೆ ಮಹಿಳಾ ಕ್ವಾಟರ್ ಫೈನಲ್-ಸೆಮಿ ಫೈನಲ್

ಮಡಿಕೇರಿ, ಏ.23: ಪ್ರತಿಷ್ಟಿತ ಮುದ್ದಂಡ ಕಪ್‌ ಹಾಕಿ ಉತ್ಸವ ಮಹಿಳೆಯರ ಪೈಪೋಟಿಯಲ್ಲಿ, ನಾಳೆ, ಕ್ವಾಟರ್ ಫೈನಲ್‌ ಮತ್ತು ಸೆಮಿ ಫೈನಲ್ ಹೋರಾಟ ನಡೆಯಲಿದೆ. ಕ್ವಾಟರ್ ಫೈನಲ್, ಬೆಳಿಗ್ಗೆ 10 ಗಂಟೆಗೆ ಕಾಂಡಂಡ ಮತ್ತು ಕೇಚೆಟ್ಟಿರ 11 ಗಂಟೆಗೆ ಕುಟ್ಟಂಡ ಮತ್ತು ಕುಪ್ಪಂಡ (ಕೈಕೇರಿ) ಮಧ್ಯಾಹ್ನ 12 ಗಂಟೆಗೆ ಕಂಬೀರಂಡ ಮತ್ತು ಚೆಯ್ಯಂಡ1 ಗಂಟೆಗೆ ಕಲಿಯಂಡ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು), ಸೆಮಿ ಫೈನಲ್ 2 ಗಂಟೆಗೆ ಕಾಂಡಂಡ/ಕೇಚೆಟ್ಟೀರ ಮತ್ತು ಕುಟ್ಟಂಡ/ಕುಪ್ಪಂಡ (ಕೈಕೇರಿ)3 ಗಂಟೆಗೆ ಕಂಬೀರಂಡ/ ಚೆಯ್ಯಂಡ ಮತ್ತು ಕಲಿಯಂಡ/ಮುಕ್ಕಾಟಿರ […]

Continue Reading

ಮುದ್ದಂಡ ಕಪ್ ಹಾಕಿ ಉತ್ಸವ : ಏ.23 ರಂದು ನಡೆದ ಪುರುಷರ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಾವಳಿಯ ವಿಜೇತರ ವಿವರ

ಮಡಿಕೇರಿ, ಏ.23: ನೆಲ್ಲಮಕ್ಕಡ ಮತ್ತು ಕೋಳೇರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ಗೆಲುವು ದಾಖಲಿಸಿತು. ನೆಲ್ಲಮಕ್ಕಡ ಪರ ಸಚಿನ್, ರಾಕೇಶ್ ಸುಬ್ರಮಣಿ, ರೋಶನ್ ಬೋಪಣ್ಣ ಹಾಗೂ ಅಯ್ಯಪ್ಪ ತಲಾ 1 ಗೋಲು ದಾಖಲಿಸಿದರು. ಕೋಳೇರ ನಿಶಿಕ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೂತಂಡ ಮತ್ತು ಅಮ್ಮಣಿಚಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಕೂತಂಡ ಜಯ ಸಾಧಿಸಿತು. ಕೂತಂಡ ಪರ ಬೋಪಣ್ಣ 4 ಗೋಲು ದಾಖಲಿಸಿ ಗಮನ ಸೆಳೆದರೆ, ಸುರೇಶ್ […]

Continue Reading

ದ್ವಿತೀಯ ಪಿಯುಸಿ ಪರೀಕ್ಷೆ-2 ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ…

ಮಡಿಕೇರಿ ಏ.23:   ದ್ವಿತೀಯ ಪಿಯುಸಿ ಪರೀಕ್ಷೆ-2 ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.  ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2 ನ್ನು ವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.  ಪರೀಕ್ಷೆ-1 ನಡೆಸಿದಂತೆ ಪರೀಕ್ಷೆ-2 ನ್ನು ಅಚ್ಚುಕಟ್ಟಾಗಿ ನಡೆಸಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.         ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ ಅವರು […]

Continue Reading

ಐಎಎಸ್ ಗೆ  ಕೊಡಗಿನ ನಿಖಿಲ್ ಆಯ್ಕೆ…

ಮಡಿಕೇರಿ, ಏ.23: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2024ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ನಿಖಿಲ್ ಎಂ.ಆರ್. (724) ಐಎಎಸ್  ಗೆ ಆಯ್ಕೆ ಆಗಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2024ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ಒಟ್ಟು 1009 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ಸಂದರ್ಶನ ಮತ್ತು ಮುಖ್ಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಫಲಿತಾಂಶ ನಿರ್ಧರಿಸಲಾಗಿದೆ.      ನಿಖಿಲ್ ಎಂ.ಆರ್. ಅವರು ಮಡಿಕೇರಿ ನಗರಸಭೆಯಲ್ಲಿ ಸಮುದಾಯ ಸಂಘಟನಾಧಿಕಾರಿಯಾಗಿ ನಿವೃತ್ತ ರಾಗಿರುವ ರಮೇಶ್ […]

Continue Reading

ನಾಳೆ  ಪೊನ್ನಂಪೇಟೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ…

        ಪೊನ್ನಂಪೇಟೆ.23:-  ಪೊನ್ನಂಪೇಟೆ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್ 13 ದೇವನೂರು ಫೀಡರ್‍ನಲ್ಲಿ ಏಪ್ರಿಲ್, 24 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಾಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.       ಆದ್ದರಿಂದ ದೇವನೂರು, ಮಲ್ಲೂರು, ಕಿಸ್ತೂರು, ರಾಜಪುರ, ಬೆಟ್ಟತ್ತೂರು, ನಲ್ಲೂರು, ಬೆಸಗೂರು, ಪೊನ್ನಪ್ಪಸಂತೆ, ಬೀಳೂರು, ಸುಳುಗೋಡು, ಬಾಳೆಲೆ, ಜಾಗಲೆ, ನಿಟ್ಟೂರು, ಕಾರ್ಮಾಡು, ಕೊಟ್ಟಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ […]

Continue Reading

ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ…

         ಮಡಿಕೇರಿ ಏ.23:- ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯು 2025 ರ ಮೇ, 02 ರಿಂದ 2026 ರ ಫೆಬ್ರವರಿ, 28 ರವರೆಗೆ   ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆಯಲಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.          ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಏಪ್ರಿಲ್, 28 ರ ಸಂಜೆ 5.30 ಗಂಟೆ ಕೊನೆಯ ದಿನವಾಗಿದೆ. ಅರ್ಜಿಯನ್ನು ಕಚೇರಿಯಿಂದ ಪಡೆಯಬಹುದಾಗಿದೆ. […]

Continue Reading