ಕುಂಬೂರು, ಫೆ.16: ಕಳೆದ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ ಕಾರ್ಯಾರಾಂಭ ಮಾಡಿರುವ ಕೊಡಗು ವಿಶ್ವ ವಿಧ್ಯಾಲಯವನ್ನು ಮುಚ್ಚುವ ನಿರ್ಧಾರಕ್ಕೆ ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಮಾಡಿರುವ ತೀರ್ಮಾನವನ್ನು ಸರ್ಕಾರ ತಕ್ಷಣ ಕೈ ಬಿಡಬೇಕು. ಒಂದು ವೇಳೆ ಕೊಡಗು ವಿವಿ ಯನ್ನು ಮುಚ್ಚಿದರೆ ಕೊಡಗು ಬಂದ್ಗೆ ಕರೆ ಕೊಡುವುದಾಗಿ ಮಾಜಿ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್ ಗುಡುಗಿದ್ದಾರೆ.
ತಾನು ಶಾಸಕನಾಗಿದ್ದ ಸಂದರ್ಭದಲ್ಲಿ, ಸರ್ಕಾರದೊಂದಿಗಿನ ವಿಷೇಶ ಪ್ರುಯತ್ನದಿಂದ ಮಂಜೂರಾಗಿದ್ದ ಕೊಡಗು ವಿವಿ, ಚಿಕ್ಕ ಅಳುವಾರದಲ್ಲಿ ಅಗತ್ಯ ಜಾಗ ಪಡೆಯುವ ಮೂಲಕ ಕಾರ್ಯಾರಂಭಮಾಡಿ, ಕೊಡಗಿನ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಬುನಾದಿ ಹಾಕುವತ್ತ ಕೆಲಸ ಮಾಡುತಿತ್ತು. ಆದರೆ ಈಗಿನ ಸಿದ್ದರಾಮಯ್ಯ ಸರ್ಕಾರ ಈ ವಿವಿಯನ್ನು ಅನುದಾನ ಕೊರತೆ ಕಾರಣವನ್ನು ಮುಂದಿಟ್ಟು ಮುಚ್ಚುವ ನಿರ್ಧಾರಕ್ಕೆ ಬಂದಿರುವುದು ಖಂಡನೀಯ ಎಂದಿರುವ ಅಪ್ಪಚ್ಚು ರಂಜನ್ ಅವರು, ಜಿಲ್ಲೆಯ ಹಾಲಿ ಶಾಸಕರು ಈ ವಿಚಾರದಲ್ಲಿ ಸರ್ಕಾರದೊಂದಿಗೆ ವ್ಯವಹರಿಸಿ ವಿವಿಯನ್ನು ಉಳಿಸಿಕೊಳ್ಳಬೇಕು. ಮುಂದುವರೆದು ಮತ್ತೆ ಮುಚ್ಚುವ ತೀರ್ಮಾಕ್ಕೆ ಬಂದರೆ, ಕೊಡಗು ಬಂದ್ಗೆ ಕರೆ ಕೊಡುವ ಮೂಲಕ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.