ಕೇಂದ್ರ ಸರ್ಕಾರದಿಂದ 5.8ಕೋಟಿ BPL ಕಾರ್ಡ್‌ ಅನರ್ಹ, ಅದೇ ಮಾನದಂಡ ಬಳಸಿದ್ದೇವೆ ಎಂದ ಕರ್ನಾಟಕ. ಅರ್ಹರ ರದ್ದತಿ ಹಿಂಪಡೆಯಲು CM ಆದೇಶ…

ನವದೆಹಲಿ ನ.21: ಆಹಾರ ಭದ್ರತಾ ಯೋಜನೆಯಡಿಯಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕೇಂದ್ರ ಸರ್ಕಾರವು ದೇಶದಲ್ಲಿ 5.8 ಕೋಟಿ ನಕಲಿ BPL ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದು, ಉಳಿದವು ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಬುಧವಾರ ತಿಳಿಸಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯ ಡಿಜಿಟಲೀಕರಣಕ್ಕೆ ದೇಶದಲ್ಲಿ ಚಾಲನೆ ನೀಡಲಾಗಿದ್ದು, ಒಟ್ಟು 80.6 ಕೋಟಿ ಪಡಿತರ ಚೀಟಿಗಳನ್ನು ಹೊಂದಿದ ಕುಟುಂಬಗಳಿವೆ. ಆಧಾರ್‌ ಸಂಖ್ಯೆ  ಪರಿಶೀಲನೆ ಪ್ರಕ್ರಿಯೆ ಮೂಲಕ ಈ ನಕಲಿ ಚೀಟಿಗಳನ್ನು ಪತ್ತೆ ಹಚ್ಚಲಾಗುತ್ತಿದೆ  ಎಂದು ಸರ್ಕಾರ ಹೇಳಿದೆ. […]

Continue Reading

ಗೂಗಲ್‌ ಮೀಟ್‌ನಲ್ಲಿ ನಡೆದ, ಕರ್ನಾಟಕ  ಲೇಖಕಿಯರ ಸಂಘ ಕೊಡಗು ಶಾಖೆಯ ವಾರ್ಷಿಕ ಸಭೆ

            ಟಿ.ಶೆಟ್ಟಿಗೇರಿ, ನ.20:    ಕರ್ನಾಟಕ  ಲೇಖಕಿಯರ ಸಂಘ ಕೊಡಗು ಶಾಖೆಯ ವಾರ್ಷಿಕ ಸಭೆಯು ಗೂಗಲ್‌ ಮೀಟ್‌ ವೆಬಿನಾರ್‌ನಲ್ಲಿ, ದಿನಾಂಕ  17-11-2024 ರಂದು ಅಧ್ಯಕ್ಷರಾದ  ಶ್ರೀಮತಿ ವಿಜಯ ವಿಷ್ಣು ಭಟ್ ಅವರ ಸಮ್ಮುಖದಲ್ಲಿ ನಡೆದು, ಮುಂದಿನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ವಿಜಯ ವಿಷ್ಣು ಭಟ್ ಅವರು ಪುನರಾಯ್ಕೆಯಾದರೆ,ಉಪಾಧ್ಯಕ್ಷರಾಗಿ ಶ್ರೀಮತಿ ಉಳುವಂಗಡ ಕಾವೇರಿ ಉದಯ, ಕಾರ್ಯದರ್ಶಿಯಾಗಿ ಶ್ರೀಮತಿ  ಶರ್ಮಿಳಾ ರಮೇಶ್ ಮತ್ತು ನಿರ್ದೇಶಕರನ್ನಾಗಿ, ಶ್ರೀಮತಿ ಜಯಲಕ್ಷ್ಮಿ ಎಂ. ಬಿ , ಶ್ರೀಮತಿ ಶೋಭ ರಕ್ಷಿತ್ […]

Continue Reading

ಹತ್ತು ಸಾವಿರದಲ್ಲಿ ಹತ್ತು ಏಕರೆ ಜಾಗ ಖರೀದಿಸಿ ಕಟ್ಟಿದ, ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ(MCPCS), ಬೆಳೆದು, ಅಳಿದು, ಉಳಿದ ರೋಚಕ, ಐತಿಹಾಸಿಕ ಕಥೆ…

          ಮೈಸೂರು ಮಹಾನಗರದೊಳಗೆ, ಹತ್ತು ಏಕರೆ ಜಾಗ ಹೊಂದುವುದೆಂದರೆ ಅದೊಂದು ಸಾಧನೆಯೇ ಸರಿ. ಆದರೆ ಈ ಹತ್ತು ಏಕರೆಯನ್ನು ಕೇವಲ ಹತ್ತು ಸಾವಿರಕ್ಕೆ ಖರೀದಿಸಿದರೆ ಅದು ರೋಚಕ ಮತ್ತು ರೋಮಾಂಚನಕಾರಿ. ಅಂತಹದ್ದೇ ಒಂದು ರೋಮಾಂಚನಕಾರಿ ಕಥೆಯಾದರೂ ವಾಸ್ತವ ಸತ್ಯ, ದಿ. ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಇತಿಹಾಸ.           ಅದು 1959ನೇ ಇಸವಿ, ಆಗ ಕೊಡಗಿನಲ್ಲಿ ದೈತ್ಯವಾಗಿ ಬೆಳೆದಿದ್ದ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದೊಳಗಿನ ರಾಜಕೀಯ ಮೇಲಾಟಕ್ಕೆ ಶೆಡ್ಡು ಹೊಡೆದ, ಅಂದಿನ ಸಹಕಾರೀ ಧುರೀಣ, […]

Continue Reading

65ರ ಭಾರತ-ಪಾಕ್‌ ಸಮರ ವೀರ ಹುತಾತ್ಮ,  ಕೂಕಂಡ ಎನ್ .ಪೊನ್ನಪ್ಪ ರಸ್ತೆ  ಪೊನ್ನಂಪೇಟೆಯಲ್ಲಿ ಅನಾವರಣ.

  ಪೊನ್ನಂಪೇಟೆ ನ.19:(ಪುತ್ತರಿರ ಕರುಣ್‌ ಕಾಳಯ್ಯ):- 1965ರ ಇಂಡೋ-ಪಾಕಿಸ್ತಾನ ಯುದ್ದದಲ್ಲಿ ವೀರಮರಣನಪ್ಪಿದ ನಾಯಕ್ ಕೂಕಂಡ ಎನ್ . ಪೊನ್ನಪ್ಪನವರ ನೆನಪಿಗಾಗಿ ಪೊನ್ನಂಪೇಟೆಯ ಜೋಡು ಬೀಟಿ- ಕುಂದ ಸಂಪರ್ಕ ರಸ್ತೆಗೆ ದಿವಂಗತ ಕೂಕಂಡ. ಎನ್.ಪೊನ್ನಪ್ಪ ರಸ್ತೆ ಎಂದು ನಾಮಕರಣ ಅನಾವರಣ ಮಾಡಲಾಯಿತು.             ನಾಮ ಫಲಕ ಉದ್ಘಾಟನೆ ಮಾಡಿ ಮಾತನಾಡಿದ, ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷರಾದ ಕೊಟ್ಟುಕತ್ತಿರ ಸೋಮಣ್ಣ ಅವರು,  ಅದೆಷ್ಟೋ ವೀರಯೋಧರು ದೇಶಕ್ಕಾಗಿ ಸೇವೆಸಲ್ಲಿಸಿದರೂ ಅವರ ನೆನಪು ಮಾತ್ರ ಜನಮಾನಸದಲ್ಲಿ ಉಳಿದಿಲ್ಲ, […]

Continue Reading

ಕೊಡವ ಮಕ್ಕಡ ಕೂಟತ ನೂರಾಂಡ ನೆಪ್ಪುರ ಕೂಟ್‌ಕ್‌,  ನಾಲ್‌  ಪುಸ್ತಕ ಬೊಳಿ ಪಡ್ತುವ ಆಯಿಮೆ ನ.24ಕ್

ಮಡಿಕೇರಿ,ನ.19: (ಪೇರಿಯಂಡ ಯಶೋಧ) :ಕೊಡವ ಮಕ್ಕಡ ಕೂಟತ  ನೂರಾನೆ ಮೊಟ್ಟ್‌ರ ಪುಸ್ತಕ ಕೂಡ್‌ನನಕೆ ನಾಲ್‌ ತರಾವರಿ ಪುಸ್ತಕ ಬೊಳಿಪಡ್ತುವ ಕಾರ್ಬಾರ್‌, ನಾಳಂಕೆ :24-11-2024ನೇ ನಾರಾಚೆ, ಪೊಲಾಕ 10-30 ಗಂಟೆಕ್, ಮಡಿಕೇರಿರ ಪತ್ರಿಕಾ ಭವನ ಬಾಡೆಲ್‌ ನಡ್ಪ. ಪೆರಿಯ ಸಾಹಿತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿರ  ಮಾಜಿ ಅಧ್ಯಕ್ಷ, ಬಾಚರಣೆಯಂಡ ಪಿ. ಅಪ್ಪಣ್ಣ ಅಯಿಂಗ ಮೊಳಿ ಇಟ್ಟಿತ್‌, ಕೊಡವ ಮಕ್ಕಡ ಕೂಟತ ಕೊರುಕಾರ, ಬೊಳ್ಳಜಿರ ಬಿ. ಅಯ್ಯಪ್ಪ ಅಯಿಂಗಡ ಕೊರವುಕಾರಿಕೆಲ್‌,  ಖನಪಟ್ಟ ಬೆಂದುವಾಯಿತ್‌, ಪೆದಪೋನ ಉದ್ಯಮಿ ಪಿಂಞ ಸಮಾಜ […]

Continue Reading

ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅವಾರ್ಡ್‌ 2024ಕ್ಕೆ,  ಹರ್ಡಲ್ಸ್‌ ಪಟು ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆ…  

ಬೆಂಗಳೂರು,ನ.19: ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌, ಅದೀನ ಸಂಸ್ಥೆಯ ಅಧೀನದಲ್ಲಿರುವ  ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಕೊಡಮಾಡುವ ವಾರ್ಷಿಕ ಪ್ರಷಸ್ತಿಗೆ, ಕೊಡಗು ಮೂಲದ ಹರ್ಡಲ್ಸ್‌ ಪಟು, ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ, ವಿಧಾನ ಪರಿಷತ್‌ ಶಾಸಕ ಡಾ. ಕೆ. ಗೋವಿಂದರಾಜ್‌ ಅವರು ಘೋಷಿಸಿದ್ದಾರೆ. ಪ್ರಶಸ್ತಿ ಸಮಾರಂಭವು 2024ರ ಡಿಸೆಂಬರ್ 1ರ ಭಾನುವಾರ, ಸಂಜೆ 05 ಘಂಟೆಗೆ ಬೆಂಗಳೂರಿನ,  ಯುವನಿಕಾ, ಯುವ ಶಕ್ತಿ ಮತ್ತು ಕ್ರೀಡಾ ಇಲಾಖೆ, ನೃಪತುಂಗ ರಸ್ತೆ,ನಲ್ಲಿ ನಡೆಯಲಿದೆ. ಎಂದು ಸಂಸ್ಥೆಯ […]

Continue Reading

ಕೊಡಗು ಬ್ಲಡ್ ಡೊನರ್ಸ್ ಸಂಸ್ಥೆಯ 7ನೇ ವಾರ್ಷಿಕೋತ್ಸವ ಪ್ರಯುಕ್ತ, ರಕ್ತದಾನ ಮತ್ತು ಕಣ್ಣು ಪರೀಕ್ಷಾ ಶಿಭಿರ…

ಮಡಿಕೇರಿ, ನ.18: ಕೊಡಗು ಬ್ಲಡ್ ಡೊನರ್ಸ್ ಸಂಸ್ಥೆ ಮಡಿಕೇರಿಯ 7 ನೇ ವಾರ್ಷಿಕೊತ್ಸವದ ಅಂಗವಾಗಿ, ರಕ್ತದಾನ ಶಿಬಿರ ಆಯೋಜಿಸಿದ್ದು, ಹೆಚ್ಚಿನ ರಕ್ತದಾನಿಗಳು ಆಗಮಿಸಿ ಶಿಬಿರದಲ್ಲಿ ರಕ್ತದಾನ ಮಾಡುವಂತೆ ಸಂಘಟಕರು ಕೋರಿದ್ದಾರೆ. ರಕ್ತಕ್ಕೆ ಜಾತಿ ಇಲ್ಲ ಧರ್ಮ ಇಲ್ಲ ಮಾನವೀಯತೆ ಮುಖ್ಯ ಎಂಬ ಧ್ಯೇಯದೊಂದಿಗೆ ಕಳೆದ ಏಳು ವರ್ಷಗಳಿಂದ ರಕ್ತದ ಅಗತ್ಯ ಇರುವವರಿಗೆ, ತುರ್ತು ಸಹಾಯ ಮಾಡುವ ಮೂಲಕ ಜನಸೇವೆಯಲ್ಲಿ ತೊಡಗಿರುವ, ಕೊಡಗು ಬ್ಲಡ್‌ ಡೋನರ್ಸ್‌ ಸಂಸ್ಥೆಯ ಏಳನೇ ವಾರ್ಷಿಕೋತ್ಸವದ ಪ್ರಯುಕ್ತ, ದಿನಾಂಕ 21/11/2024ರ ಗುರುವಾರ, ರೋಟರಿ ಮಡಿಕೇರಿ ಹಾಗೂ ಹೆಚ್.ಡಿ.ಎಫ್.ಸಿ […]

Continue Reading

ವಿರಾಜಪೇಟೆಯಲ್ಲಿ,  ನಿಷೇಧಿತ MDMA ಮಾದಕ ವಸ್ತು ಹಾಗೂ  ಗಾಂಜಾ ಮಾರಾಟ : ಐವರು ಆರೋಪಿಗಳ ಹೆಡೆಮುರಿ ಕಟ್ಟಿದ, ಪೊಲೀಸರು.

            ವಿರಾಜಪೇಟೆ, ನ.18: (ಇಟ್ಟಿರ ಸುಬ್ಬಯ್ಯ):  ನಿಷೇಧಿತ MDMA ಮಾದಕ ವಸ್ತು ಹಾಗೂ ಗಾಂಜಾ ಮಾರಾಟ / ಸರಬರಾಜು ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯು,  ಕೇರಳ ರಾಜ್ಯದ ಮೂವರೊಂದಿಗೆ, ಕೊಡಗು ಜಿಲ್ಲೆಯ ಇಬ್ಬರು ಆರೋಪಿಗಳನ್ನು ಬಂಧಿಸಿ ಮಾಲು ಹಾಗೂ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕರಾದ ಪಿ. ಅನೂಪ್ ಮಾದಪ್ಪ, ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರಮೋದ್ ಮತ್ತು ಸಿಬ್ಬಂದಿಗಳನ್ನು ಒಳಗೊಂಡ […]

Continue Reading

ಪೆರಿಯವು ನೇಡಿ ತಂದ ಬಟ್ಟೆ, ನಂಗಕ್‌ ಬೊಳಿಯಾಂಡೂ.., ತೂಚಮಕೇರಿ ಪೆಮ್ಮಂಡ ಒಕ್ಕೋರ್ಮೆಲ್‌  ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಕೆಮಿ ತಕ್ಕ್‌…

            ತೂಚಮಕೇರಿ, ನ.18: (ಅಣ್ಣಿರ ಹರೀಶ್‌ ಮಾದಪ್ಪ) ಕೊಡವ ಲಗಾಯತ್ಂಜೇ, ನೈಪು, ನಲ್ಲರಿಕೆಕ್‌ ಪೆದ ಪೋನೈಂಗ, ನಂಗಡ ಪೆರಿಯವು ನೇಡಿತಂದ ನಲ್ಲರಿಕೆಯೇ ಇಂದ್‌ ನಂಗಕ್‌ ಬಟ್ಟೆಬೊಳಿ ಆಯಿತುಂಡ್.‌ ಇದ್‌ ಮಿಂಞಕ್‌ ನಂಗಡ ಮಕ್ಕ ಮರಿಮಕ್ಕಡ ಕಾಲಕೂ, ಇನ್ನನೇ ಬೊಳ್ಂದ್‌ ನೇಡಿಂಯಂಡ್‌ ಪೋಂಡೂಂದ್‌, ಮುಖ್ಯಮಂತ್ರಿರ ಕಾನೂನ್‌ ಅರಿವುಕಾರ, ವಿರಜಪೇಟೆ ಶಾಸಕನೂ ಆನ, ಅಜ್ಜಿಕುಟ್ಟಿರ ಪೊನ್ನಣ್ಣ ಅವು ಕೆಮಿ ತಕ್ಕ್‌ ಪರ್ಂದತ್.‌  ನಿನ್ನಾಂದ್‌, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪಿಂಞ ಪೆಮ್ಮಂಡ ಒಕ್ಕಡ ಕೂಡ್‌ ಕೂಟತ್‌,  ಪೊನ್ನಂಪೇಟೆ ಪಕ್ಕತ ತೂಚಮಕೇರಿಲ್‌ […]

Continue Reading

ಮಿನಿ ಒಲಂಪಿಕ್‌, ಹ್ಯಾಟ್ರಿಕ್‌ ಗೆಲುವಿನೊಂದಿಗೆ, ಸೆಮಿ ಫೈನಲ್‌ ತಲುಪಿದ ಹಾಕಿ ಕೂರ್ಗ್‌ ಬಾಲಕರು,  ಬಾಲಕೀಯರಿಗೆ ವೀರೋಚಿತ ಸೋಲು.

  ಬೆಂಗಳೂರು, ನ.16: ( ವರದಿ: ವಿನೋದ್ ಜೆಸಿಬಿ): ಕರ್ನಾಟಕ ಮಿನಿ ಒಲಂಪಿಕ್‌ನ, ಹಾಕಿ ಸ್ಪರ್ಧೆಯಲ್ಲಿ ಹಾಕಿ ಕೂರ್ಗ್‌ ಬಾಲಕರ ತಂಡವು, ಸತತ ಮೂರು  ಗೆಲವುಗಳೋಂದಿಗೆ, ಒಂದು ಲೀಗ್‌ ಪಂದ್ಯ ಉಳಿದಿರುವಂತೆಯೇ ಸೆಮಿ ಫೈನಲ್‌ ಪ್ರವೇಶಿಸಿದರೆ, ಬಾಲಕಿಯರ ತಂಡವು ಮೊದಲ ಪೈಪೋಟಿಯಲ್ಲೆ ವೀರಾಚಿತ ಸೋಲೊಪ್ಪಿಕೊಂಡಿದೆ. ಬೆಂಗಳೂರಿನ, ಶಾಂತಿನಗರದಲ್ಲಿರುವ ಫಿ.ಮಾ. ಕಾರ್ಯಪ್ಪ ಹಾಕಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ, ಕರ್ನಾಟಕ ಮಿನಿ ಒಲಂಪಿಕ್‌  ಹಾಕಿ ಸ್ಪರ್ದೆಯಲ್ಲಿ, ಹಾಕಿ ಕೂರ್ಗ್ ಬಾಲಕರ ತಂಡ ಇಂದು ನಡೆದ ಹಾವೇರಿ ವಿರುದ್ದದ ಪಂದ್ಯದಲ್ಲಿ, 3-1 ಗೋಲುಗಳ […]

Continue Reading