ಮುದ್ದಂಡ ಕಪ್ : ಚಾಲನೆಗೊಂಡ ಮಹಿಳಾ ಹಾಕಿ…

ಮಡಿಕೇರಿ ಏ.21 : ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಬೆಳ್ಳಿಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯ ಪೈಪೋಟಿ ಆರಂಭಗೊಂಡಿದೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಹಿಳೆಯರ 5ಎ ಸೈಡ್ ಹಾಕಿ ಪಂದ್ಯಾವಳಿಗೆ ಅರ್ಜುನ ಪ್ರಶಸ್ತಿ ವಿಜೇತ, ಮಾಜಿ ಒಲಂಪಿಯನ್ ಎಂ.ಎಂ.ಸೋಮಯ್ಯ ಅವರು ಚಾಲನೆ ನೀಡಿದರು.      ಪದ್ಮಶ್ರೀ ಪ್ರಶಸ್ತಿ ವಿಜೇತ ಹಿರಿಯ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ರಾಷ್ಟ್ರೀಯ ಬಾಸ್ಕೆಟ್‌ಬಾಲ್ […]

Continue Reading

ಐದು ಲಕ್ಷ ವಲಸೆ ಕಾರ್ಮಿಕರಲ್ಲಿ  ಕೇವಲ 46000 ಮಾತ್ರ ನೋಂದಣಿ : ತಲೆ ಕೆಡಿಸಿ ಕೊಂಡ ಇಲಾಖೆ…

ಬೆಂಗಳೂರು, ಏ.21:  ರಾಜ್ಯದಲ್ಲಿ ಐದು ಲಕ್ಷಕ್ಕೂ ಅಧಿಕ ವಲಸಿಗ ಕಾರ್ಮಿಕರಿದ್ದಾರೆ. ಆದರೆ, ಇದುವರೆಗೆ ನೋಂದಣಿಯಾಗಿದ್ದು ಕೇವಲ 46 ಸಾವಿರ ಕಾರ್ಮಿಕರು ಮಾತ್ರ. ಈ ನಡುವೆ ರಾಜ್ಯದಲ್ಲಿ ವಲಸಿಗ ಕಾರ್ಮಿಕರಿಂದ ಕ್ರೈಂ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ವಲಸಿಗರ ಪತ್ತೆ ಕಾರ್ಯ ಪೊಲೀಸ್ ಇಲಾಖೆಗೆ ಕಷ್ಟಕರವಾಗಿದೆ. ಅಪರಾಧಿಗಳನ್ನು ಪತ್ತೆ ಹಚ್ಚುವುದು ತಲೆನೋವಾಗಿ ಪರಿಣಮಿಸಿದೆ.           ಕೆಲ ದಿನಗಳ ಹಿಂದೆ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಹತ್ಯೆ  ಮಾಡಿದ್ದ ಆರೋಪಿ ರಿತೇಶ್​ ಕುಮಾರ್​​ ಹುಬ್ಬಳ್ಳಿ ಪೊಲೀಸರ   ಗುಂಡಿಗೆ […]

Continue Reading

23ರಂದು ಕೊಡಗು ವಿಶ್ವವಿದ್ಯಾಲಯ ಸಾಧಕಬಾಧಕಗಳ ಕುರಿತು ಸಂವಾದ…  

ಮಡಿಕೇರಿ ಏ.21:  ಕೊಡಗು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಈ ತಿಂಗಳ 23ರ ಬುಧವಾರದಂದು ಕೊಡಗು ವಿಶ್ವವಿದ್ಯಾಲಯಕ್ಕೆ ಸಂಬಂದಿಸಿದ ಸಾಧಕ ಬಾಧಕಗಳ ಕುರಿತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.        ಮಡಿಕೇರಿ ಪತ್ರಿಕಾ ಭವನದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರುಗಳು ಮಾಜಿ ಶಾಸಕರುಗಳು ರಾಜಕೀಯ ಪಕ್ಷಗಳ ಪ್ರಮುಖರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಿಕ್ಷಣ ತಜ್ಞರು ಸಂವಾದದಲ್ಲಿ ಪಾಲ್ಗೊಳ್ಳುವರು . ಕೊಡಗು ವಿಶ್ವವಿದ್ಯಾಲಯಕ್ಕೆ ಸಂಬಂದಿಸಿದ ಸಮಸ್ಯೆಗಳನ್ನು , ಗೊಂದಲಗಳನ್ನು ನೇರವಾಗಿ ಕೇಳಿ , ಚರ್ಚಿಸಿ […]

Continue Reading

ಕೊಡಗು ಹೆಗ್ಗಡೆ ಸಮಾಜದ ನೂತನ ಅಧ್ಯಕ್ಷರಾಗಿ ಕೊರಕುಟ್ಟಿರ ಸರಾಚಂಗಪ್ಪ ಅಯ್ಕೆ…

     ವಿರಾಜಪೇಟೆ,ಏ.21: 2025-30ರ ಆವಧಿಗೆ ಕೊಡಗು ಹೆಗ್ಗಡೆ ಸಮಾಜದ ನೂತನ ಅಧ್ಯಕ್ಷರಾಗಿ ಕೊರಕುಟ್ಟಿರ ಸರಾ ಚಂಗಪ್ಪ, ಉಪಾಧ್ಯಕ್ಷರಾಗಿ ಚರ್ಮಂಡ ಅಪ್ಪುಣು ಪೂವಯ್ಯ,  ಗೌರವ ಕಾರ್ಯದರ್ಶಿಯಾಗಿ ಪಡಿಞಾರಂಡ ಪ್ರಭು ಕುಮಾರ್, ಕೋಶಾಧ್ಯಕ್ಷರಾಗಿ  ಕೊರಂಡ ಪ್ರಕಾಶ್ ನಾಣಯ್ಯನವರನ್ನು ಅವಿರೋಧವಾಗಿ ಅಯ್ಕೆ ಮಾಡಿದರು ನಿರ್ದೆಶಕರುಗಳಾಗಿ ಕೊಂಗೇಪಂಡ ರವಿ, ಕೊಪ್ಪಡ ಪಟ್ಟು ಪಳಂಗಪ್ಪ, ಪಾನಿಕುಟ್ಟಿರ ಕುಟ್ಟಪ್ಪ, ತಂಬಂಡ ಮಂಜುನಾಥ್, ಕೊಕ್ಕೇರ ಜಗನಾಥ್, ತೊರೇರ ರಾಜ ಪೂವಯ್ಯ, ಪಂದಿಕಂಡ ಕುಶದಿನೇಶ್, ಚಳಿಯಂಡ ಕಮಲಾ ಉತ್ತಯ್ಯ, ಮೂರೀರ ಶಾಂತಿ, ಪೊಟ್ಟಂಡ ವಸಂತಿ ಗಣೇಶ್ ಆಯ್ಕೆಯಾದರು. ಕೊಡಗು […]

Continue Reading

1971ರ ಬಾಂಗ್ಲಾ ಸಮರ ಹುತಾತ್ಮ ಸಿರಿಕಜೆ ಪಳಂಗಪ್ಪ ಅರಿಗೆ ಬಾಂಗ್ಲಾದೇಶದಿಂದ ಗೌರವ ಪದಕ

ಕೊಪ್ಪ, ಏ.20: (ಚಂದ್ರಮೋಹನ್) 1971ರಲ್ಲಿ ಬಾಂಗ್ಲಾ ದೇಶ ವಿಮೋಚನಾ ಸಮರದಲ್ಲಿ ಪಾಲ್ಗೊಂಡಿದ್ದ ಭಾರತೀಯ ಯೋಧರ ಕುಟುಂಬವನ್ನು ಗುರುತಿಸಿ ಪದಕ ಮತ್ತು ಪ್ರಮಾಣ ಪತ್ರವನ್ನು ಬಾಂಗ್ಲಾದೇಶ ಸರ್ಕಾರ ನೀಡುತಿದ್ದು, ಈ ನಿಟ್ಟಿನಲ್ಲಿ ಕೊಡಗಿನ ಯೋಧ ಸಿರಿಕಜೆ ಪಳಂಗಪ್ಪ ಅವರ ಕುಟುಂಬಸ್ಥರನ್ನು ಹುಡುಕಿಬಂದ ಸೇನಾಧಿಕಾರಿಗಳು ಪಿರಿಯಪಟ್ಟಣ ತಾಲೂಕು ಕೊಪ್ಪ ಬಳಿಯ  ಮರಡಿಯೂರ್‌ನಲ್ಲಿ ನೆಲೆಸಿರು ಯೋಧರ ಕುಟುಂಬವನ್ನು ಭೇಟಿ ಮಾಡಿ  ಗೌರವ ಅರ್ಪಿಸಿದರು.           ಕೊಪ್ಪ ಗ್ರಾಮ ನಿವಾಸಿ ಸೇನೆಯಲ್ಲಿ ಗನ್ನ‌ರ್ ಆಗಿ ಸೇವೆ ಸಲ್ಲಿಸುತ್ತಿದ್ದ  ಪಳಂಗಪ್ಪ ಎಂಬವರು 1971 ರಲ್ಲಿ […]

Continue Reading

ಮುದ್ದಂಡ ಹಾಕಿ ನಮ್ಮೆ, ನಾಳೆಯಿಂದ ಮಹಿಳಾ ಕಾಳಗ…

 ಮಡಿಕೇರಿ, ಏ.20: ಮುದ್ದಂಡ ಕಪ್‌ ಹಾಕಿ ನಮ್ಮೆಯಲ್ಲಿ ನಾಳೆಯಿಂದ ಮೈದಾನ 2 ರಲ್ಲಿ ಮಹಿಳೆಯರ 5 ಎ ಸೈಡ್‌ ಹಾಕಿ ನಡೆಯಲ್ಲಿದ್ದು, ನಾಳೆ ಬೆಳಿಗ್ಗೆ 9:30 ಗಂಟೆಗೆ – ತಾತಂಡ ಮತ್ತು ಪಾಂಡಿರ (ಹೆಬ್ಬೆಟ್ಟಗೇರಿ)  10 ಗಂಟೆಗೆ – ಕಾಂಡಂಡ ಮತ್ತು ಬೋವೇರಿಯಂಡ 10:30 ಚೆಪ್ಪುಡಿರ ಮತ್ತು ಪಳೆಯಂಡ 11 ಗಂಟೆಗೆ ಮಾಳೇಟಿರ (ಕೆದಮುಳ್ಳೂರು) ಮತ್ತು ಅಮ್ಮಾಟಂಡ 11:30 – ಮುಕ್ಕಾಟಿರ (ಹರಿಹರ) ಮತ್ತು ಕೇಚೇಟಿರ ಮಧ್ಯಾಹ್ನ 12 ಗಂಟೆಗೆ – ಬಿದ್ದಾಟಂಡ ಮತ್ತು ಚೋಯಮಾಡಂಡ 12:30 […]

Continue Reading

ಮುದ್ದಂಡ ಕಪ್ ಹಾಕಿ ನಮ್ಮೆ : ಇಂದಿನ ವಿಜಯಯಾತ್ರೆ…

ಮಡಿಕೇರಿ ಏ.20:  ಕೂತಂಡ ಮತ್ತು ಪೆಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೂತಂಡ ತಂಡ ಜಯ ಸಾಧಿಸಿತು. ಕೂತಂಡ ಪರ ಸಂತೋಷ್ ಮೇದಪ್ಪ 1 ಗೋಲು ದಾಖಲಿಸಿದರು. ಪೆಮ್ಮಂಡ  ಸುಹಾನ್ ಮಂದಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.         ಅಮ್ಮಣಿಚಂಡ ಮತ್ತು ಬೊವ್ವೇರಿಯಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಮ್ಮಣಿಚಂಡ ಜಯ ಸಾಧಿಸಿತು. ಅಮ್ಮಣಿಚಂಡ ಪರ ವಿಘ್ನೇಶ್ ಬೋಪಣ್ಣ 1 ಗೋಲು ದಾಖಲಿಸಿದರು. ಬೊವ್ವೇರಿಯಂಡ ಗ್ಯಾನ್ ಉತ್ತಪ್ಪ ಪ್ಲೇಯರ್ ಆಫ್ […]

Continue Reading

ಮುದ್ದಂಡ ಕಪ್‌ ಹಾಕಿ, ಕೊಡವ ಚೋದ್ಯ, ಕುಪ್ಪಂಡ ಪ್ರಥಮ…

     ಮಡಿಕೇರಿ, ಏ.20:  ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರಸ ಪ್ರಶ್ನೆ ಸ್ಪರ್ಧೆ “ಕೊಡವ ಚೋದ್ಯ” ಸ್ಪರ್ಧೆಯ ಅಂತಿಮ ಸುತ್ತು ಇಂದು ನಡೆಯಿತು.      ಸ್ಪರ್ಧೆಯ ಮೊದಲಿಗೆ 35 ತಂಡಗಳು ಸ್ಪರ್ಧಿಸಿದ್ದು, ಒಂದು ತಂಡದಲ್ಲಿ 3 ಮಂದಿ ಪಾಲ್ಗೊಳ್ಳುವ ಅವಕಾಶ ಇತ್ತು. ಅಂತಿಮ ಸುತ್ತಿಗೆ ಶಾಂತೆಯಂಡ, ಚೀಯಕಪೂವಂಡ, ಅಮ್ಮಣಿಚಂಡ, ಓಡಿಯಂಡ (ಸೂರ್ಲಬ್ಬಿ), ಕುಪ್ಪಂಡ (ಕೈಕೇರಿ), ಪೆಮ್ಮಡಿಯಂಡ ಸೇರಿದಂತೆ ಆರು ತಂಡಗಳು ಆಯ್ಕೆಯಾಗಿದ್ದು, ಅಂತಿಮ ಆರು ಸುತ್ತಿನ ಸ್ಪರ್ಧೆಯಲ್ಲಿ ಕುಪ್ಪಂಡ (ಕೈಕೇರಿ) […]

Continue Reading

ಕೊಡಗಿನ ಹಾಕಿಯ ಲೆಜೆಂಡ್ಸ್…

       ✍-ಚೆಪ್ಪುಡೀರ ಕಾರ್ಯಪ್ಪ           ಕೊಡಗಿನ ಹಾಕಿಯ ಇತಿಹಾಸದಲ್ಲಿ 1973ರ ಪ್ರತಿಷ್ಠಿತ ರಂಗಸ್ವಾಮಿ ಕಪ್ ಬಾಂಬೆಯಲ್ಲಿ ನಡೆಯಿತು. ಅಂದು ಬಹಳಷ್ಟು ಕೊಡಗಿನ ಹಾಕಿ ಆಟಗಾರರು ಈ ಪಂದ್ಯಾವಳಿಯಲ್ಲಿ ಆಡಿದರು. ಕೂರ್ಗ್ ಅಸೋಸಿಯೇಷನ್ ಬಾಂಬೆ ಎಲ್ಲಾ ಆಟಗಾರರನ್ನು ಕರೆಸಿ, ಅಂದು ಭೋಜನಕೂಟ ಏರ್ಪಡಿಸಿತ್ತು. ಅಂದು ತೆಗೆದ ಅದ್ಭುತ ಭಾವಚಿತ್ರ ಈ ಮೇಲಿನದ್ದು.            ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೊಡಂದೇರ ನಂಜಪ್ಪ (ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ತಮ್ಮ), ಮನೆಯಪಂಡ ಮುತ್ತಣ್ಣ (ಎಂ.ಎಂ.ಸೋಮಯ್ಯ ಅವರ ತಂದೆ), ಮನೆಯಪಂಡ ಜಾಕಿ […]

Continue Reading

ಜನಿವಾರ ವಿವಾದ, ಕುಶಾಲನಗರದಲ್ಲಿ ಪ್ರತಿಭಟನೆ…

ಕುಶಾಲನಗರ, ಏ.19:  ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿ.ಇ.ಟಿ ವಿದ್ಯಾರ್ಥಿ  ಜನಿವಾರ ತೆಗೆದು ಪರೀಕ್ಷಾ ಕೊಠಡಿಗೆ ಬರ ಹೇಳಿ ಮಾನಸಿಕ ಹಿಂಸೆ ನೀಡಿದ ಘಟನೆಗೆಯನ್ನು ಖಂಡಿಸಿ ಕುಶಾಲನಗರದಲ್ಲಿ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಬೀದರ್ ಹಾಗೂ ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಅಮಾನವೀಯ ಎಂದು ಖಂಡಿಸಿದ ಸಮಾಜ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿದರು.  ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ  ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಕುಶಾಲನಗರ ವ್ಯಾಪ್ತಿಯ ಬ್ರಾಹ್ಮಣ ಸಮಾಜದ ಬಂಧುಗಳು ಸೇರಿ ಮೆರವಣಿಗೆಯಲ್ಲಿ ತಹಶೀಲ್ದಾರ್ […]

Continue Reading