Site icon nadubadenews.com

ಜನಿವಾರ ವಿವಾದ, ಕುಶಾಲನಗರದಲ್ಲಿ ಪ್ರತಿಭಟನೆ…

ಜನಿವಾರ ವಿವಾದ, ಕುಶಾಲನಗರದಲ್ಲಿ ಪ್ರತಿಭಟನೆ…
Spread the love
ಜನಿವಾರ ವಿವಾದ, ಕುಶಾಲನಗರದಲ್ಲಿ ಪ್ರತಿಭಟನೆ…

ಕುಶಾಲನಗರ, ಏ.19:  ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿ.ಇ.ಟಿ ವಿದ್ಯಾರ್ಥಿ  ಜನಿವಾರ ತೆಗೆದು ಪರೀಕ್ಷಾ ಕೊಠಡಿಗೆ ಬರ ಹೇಳಿ ಮಾನಸಿಕ ಹಿಂಸೆ ನೀಡಿದ ಘಟನೆಗೆಯನ್ನು ಖಂಡಿಸಿ ಕುಶಾಲನಗರದಲ್ಲಿ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಬೀದರ್ ಹಾಗೂ ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಅಮಾನವೀಯ ಎಂದು ಖಂಡಿಸಿದ ಸಮಾಜ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿದರು. 

ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ  ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಕುಶಾಲನಗರ ವ್ಯಾಪ್ತಿಯ ಬ್ರಾಹ್ಮಣ ಸಮಾಜದ ಬಂಧುಗಳು ಸೇರಿ ಮೆರವಣಿಗೆಯಲ್ಲಿ ತಹಶೀಲ್ದಾರ್ ಕಛೇರಿವರೆಗೆ ತೆರಳಿ ಮನವಿಯನ್ನು ಅರ್ಪಿಸಿದರು. ಕುಶಾಲನಗರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ರಾಜಶೇಖರ್ ಮುಖಂಡರಾದ ನಾಗೇಂದ್ರ ಬಾಬು  ಪದಾಧಿಕಾರಿಗಳು, ಸಮಾಜ ಬಾಂಧವರು  ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಮೆರವಣಿಗೆಯಲ್ಲಿ ಸಾಗಿದರು.

Exit mobile version