ಸೋಮವಾರಪೇಟೆ, ಏ.29: ಸಿ & ಡಿ ಮತ್ತು ಸೆಕ್ಷನ್ 4 ವಿಷಯವಾಗಿ ಕೆಲವು ಗ್ರಾಮಗಳಿಗೆ ಅರಣ್ಯ ಅಧಿಕಾರಿಗಳು ತೆರಳಿ ಸರ್ವೇ ಕಾರ್ಯವನ್ನು ಮಾಡುತ್ತಿದ್ದು, ಈ ವಿಷಯವು ಈಗಾಗಲೇ ರೈತ ಹೋರಾಟ ಸಮಿತಿ ಗಮನಕ್ಕೆ ಬಂದಿದ್ದು, ಈ ಕುರಿತು ಸೋಮವಾರಪೇಟೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಎಲ್ಲಾ ಗ್ರಾಮದ ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ಚರ್ಚಿಸಲಾಗಿ, ಇಲ್ಲಿಯವರೆಗೂ ಸಮಿತಿ ಮಾಡಿದ ಹೋರಾಟಗಳಿಗೆ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸದ ಕಾರಣ ಮುಂದಿನ ಸೋಮವಾರ ಅಹೋರಾತ್ರಿ ಧರಣಿಯನ್ನು ಸೋಮವಾಪೇಟೆಯಲ್ಲಿ ಮಾಡುವಂತೆ ತೀರ್ಮಾನಿಸಲಾಗಿದೆ, ಎಂದು ಸೋಮವಾರಪೇಟೆ ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಅವರು ತಿಳಿಸಿದ್ದಾರೆ.