
ಸಾಮಾಜಿಕ ಕಾರ್ಯಕರ್ತ ಚೊಟ್ಟೆಯಂಡ ಸಂಜು ಕಾವೇರಪ್ಪ ಹೂಡಿದ್ದ ದಾವೆ ಪರಿಗಣಿಸಿದ ಉಚ್ಚ ನ್ಯಾಯಾಲಯ
ಬೆಂಗಳೂರು, ಫೆ.12: ಕಟ್ಟೆ ಮಾಡ್ ಮಾದೇವ ದೇವಾಲಯಕ್ಕೆ ಕೊಡವ ಸಾಂಪ್ರದಾಯಿಕ ಉಡುಪು ಧರಿಸಿ ತೆರಳಲು ಇದ್ದ ತಡೆಯನ್ನು ರಾಜ್ಯ ಉಚ್ಚ ನ್ಯಾಯಾಲಯವು ಮುಕ್ತಗೊಳಿಸಿ ಮಧ್ಯಂತರ ಆದೇಶ ಮಾಡಿದೆ.
ದೇವಾಲಯ ಬೈಲಾ ದ ನೆಪವೊಡ್ಡಿ ಯಾವುದೇ ಸಮುದಾಯದ ಸಾಂಪ್ರದಾಯಿಕ ವಸ್ತ್ರ ಧರಿಸಿ ದೇವಾಲಯ ಪ್ರವೇಶಿಸುವಂತೆ ಇಲ್ಲ ಎಂಬ ನಿರಂಕುಶ ನಿಯಮವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಚೊಟ್ಟೆಯಂಡ ಸಂಜು ಕಾವೇರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಹೈ ಕೋರ್ಟ್ ನಿಂದ ಮಧ್ಯಂತರ ಆದೇಶ ಮಾಡಿದ್ದು, ಯಾವುದೆ ಸಾಂಪ್ರದಾಯಿಕ ಉಡುಪು ನಿರ್ಬಂಧಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಕಳೆದ ಒಂದೂವರೆ ತಿಂಗಳಿಂದ ಕೊಡಗಿನಲ್ಲಿ ವಿವಾದದ ಸ್ವರೂಪ ಪಡೆದಿದ್ದ ಪ್ರಕರಣದಲ್ಲಿ ಹೈ ಕೋರ್ಟ್ ಮಧ್ಯ ಪ್ರವೇಶಸಿದ್ದು ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿದ್ದು, ಈ ಮೂಲಕ ನ್ಯಾಯಾಲಯವು ಭಕ್ತರ ಧಾರ್ಮಿಕ ಭಾವನೆಯನ್ನ ಎತ್ತಿ ಹಿಡಿದಿದೆ