ಅಗಲಿದ ಪ್ತಥಮ ಗುರುವಿಗೆ ಅಕ್ಷರತರ್ಪಣ….
– ಚಾಮೆರ ದಿನೇಶ್ಬೆಳ್ಯಪ್ಪ ಮನೆಯೆಂಬ ಪಾಠಶಾಲೆಯಿಂದ ಕಲಿಕೆಯೆಡೆಗೆ ಹೆಜ್ಜೆ ಇಟ್ಟಾಗ ದೊರಕುವ ಅಂಗನವಾಡಿ ಎಂಬ ಮೊದಲ ಗುರುಕುಲದಲ್ಲಿನ ಟೀಚರ್ ಬಹುಪಾಲು ವಿದ್ಯಾರ್ಥಿಗಳಿಗೆ ಪ್ರಥಮ ಗುರುವಾಗಿರುತಿದ್ದರು. ನನಗೂ ಅಂತಃದೊಂದು ಗುರವಾಗಿ ಸಿಕ್ಕಿ, ತನ್ನ ವೃತ್ತಿಯುದ್ದಕ್ಕೂ, ಆ ನಂತರವೂ ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ ಆಶೀರ್ವಾದ ಮಾಡುತ್ತಿದ್ದ ಅತ್ಯಂತ ಗೌರವಾನ್ವಿತ ಟೀಚರ್ ನಿನ್ನೆ ತಮ್ಮ ಇಹಲೋಕ ಪ್ರಯಾಣವನ್ನು ಮುಗಿಸಿ, ಭೂಗರ್ಭದ ಒಡಲು ಸೇರಿದರು. ಅವರಿಗಾಗಿ ಅಕ್ಷರ ಪೋಣಿಸದಿದ್ದರೆ ಕಲಿತ ವಿದ್ಯೆಗೇ ಅವಮಾನ ಮಾಡಿದಂತೆಯೇ ಸರಿ. ಅದಕ್ಕೂ ಮುನ್ನ ಆ ಮಹಾತಾಯಿ ಸಾವಿರಾರು ವಿದ್ಯಾರ್ಥಿಗಳಿಗೆ ಸರಿಸುಮಾರು ನಾಲಕ್ಕು ದಶಕಗಳ ಕಾಲ ತನ್ನ ಗರಡಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದ ಆ ಊರಿನ ಬಗ್ಗೆ ಹೇಳಲೇ ಬೇಕು. ನಮ್ಮಲ್ಲಿ ಎಷ್ಟೋ ಜನ ಸ್ವರ್ಗ ಮತ್ತು ಅದರ ಅನುಭವದ ಬಗ್ಗೆ, ಅಲ್ಲಿಯ ಐಷಾರಾಮಿ ಆಡಂಬರದ ಬದುಕಿನ ವ್ಯವಸ್ಥೆಯ ಬಗ್ಗೆ ವರ್ಣಿಸುವುದನ್ನು ಕೇಳಿರುತ್ತೇವೆ. ಆದರೆ ನಾವು ನಿಜ ಸ್ವರ್ಗದಲ್ಲೇ ನಮ್ಮ ಬಾಲ್ಯದ ಕೆಲವು ವರುಷಗಳನ್ನು ಕಳೆದವರು. 70,80ರ ದಶಕದಲ್ಲಿ ಆ ಊರಿನ ಹೆಸರು ಕೇಳಿದರೆ ಹೊರ ಪ್ರಪಂಚಕ್ಕೇನೋ ಹೀಯಾಳಿಕೆ, ತಾತ್ಸಾರ, ಕಡೆಗಣನೆ. ಕಾರಣ ಅಭೀವೃದ್ದಿ, ನಾಗರೀಕ ಸೌಲಭ್ಯ ಎಂಬ ಆಧುನಿಕಾಸುರನಿಂದ ನೂರಾರು ಮಾರು ದೂರ ಇದ್ದ ಊರದು. ಎಷ್ಟರ ಮಟ್ಟಿಗೆ ಎಂದರೆ ಸತ್ತರೂ ಹೊರಬೇಕು, ಹೆತ್ತರೂ ಹೊರಬೇಕು. ಇನ್ನು ಇತರ ಸೌಲಭ್ಯಗಳ ಕಲ್ಪನೆಯೇ ದೂರ ಬಿಡಿ. ಆದರೂ ಆ ಊರಿನಲ್ಲೋಂದು ಅಂಗನವಾಡಿ ಮತ್ತು ಶಾಲೆ ಇತ್ತು. ಇಂದೊಮ್ಮೆ ಕುಳಿತು ಯೋಚಿಸಿದರೆ ಅಂದಿನ ಕಾಲದಲ್ಲಿ ಅದು ನಿಜವಾದ ಸ್ವರ್ಗ, ದೇವಲೋಕ. ಯಾವುದೇ ಘಾಸಿಯಾಗದ ಪ್ರಕೃತಿ ಸೌಂದರ್ಯ, ಮಳೆ ಬರಲಿ, ಬಿಸಿಲಿರಲಿ, ಚಳಿಯಿರಲಿ ಯಾವುದಕ್ಕೂ ಅಂಜದ, ಅಲುಗಾಡದ…
Read moreಚಿತ್ರಕುರಿಲೋರ್ ಕೊಡವಾಮೆರ ಬೈಸ್ಯಕಾರ(ಥೆರಪಿಸ್ಟ್); ಮೂವೆರ ರಾಯ್ ಪೊನ್ನಣ್ಣ.
ಓರ್ ಚಿತ್ರಪಟ ಆಯಿರ ತಕ್ಕ್ಕ್ ಸಮಾಂದ್ ಅರ್ಂಜೈಂಗಡ ತಕ್ಕುಂಡ್. ಅದತೂ ಕುತ್ತ್ಂಜಿತ್ರ (ಕಾರ್ಟೂನ್) ಕುರಿಲ್ ಇಡೀ ವ್ಯವಸ್ಥೆನೇ ಬದಲಾಕ್ನ ಎಚ್ಚಕೋ ಉದಾಹರಣೆ ನಂಗಡ ಕಣ್ಣೆದಿಕೆ ಕಾಂಬ. ಈ ಕುತ್ತ್ಂಜಿತ್ರತಿಂಜ ಎಚ್ಚಕೋ ಸರ್ಕಾರ ಅಳ್ಳಾಡ್ನ ಕಥೆ ಉಂಡ್, ಎಲ್ಲಿಯೂ ಆಕತ ಕಾರ್ಯ ಇಂತದೋರ್ ಚಿತ್ರಕುರಿಂಜ ಆನದುಂಡ್. ಇದತಿಂಜ ಕೋರ್ಟ್, ಯಾಜ್ಯ, ಮಾನನಷ್ಟ ಕೇಸ್ ಆನದೂ ಉಂಡ್. ಅನ್ನತೋರ್ ಬೀರ್ಯಪಟ್ಟ ತಾಕತ್ತ್ ಚಿತ್ರಕುರಿಕ್ ಉಂಡ್. ಇನ್ನತ ಚಿತ್ರ ಕುರಿಪವು, ತಾಂಡ ಸುತ್ತೋಡ್ ಸುತ್ತ್ ಆಪ ಪೋಪಾನ ಅರಂಜಿತ್ ಅದಂಗೊತ್ತ ಬದಲಾವಣೆಕ್, ಅರಿವುಕ್, ಬಟ್ಟೆಬೊಳಿಕ್ ತಾಂಡ ಮನತೊಳಿಯ ಉದ್ಚಾನ ರಂಗ್ಕ್ ಇಳ್ಪಿತ್ ಕಾಟುವದೂ ಓರ್ ತಗರ್ದಿ. ಅಂತದೇ ಓರ್ ಚಿತ್ರಕುರಿಕಾರ ಕೊಡವಡೊಳ್ಲ್ ಇಂಜಂಡ್, ಕಾಲನ್ಯಾರಕ್, ವಿಚಾರಕೊತ್ತ ತಾಂಡ ಚಿತ್ರ ಕುರಿಂಜ, ಜನಕ್ ಕೊಡವಾಮೆರ ಅಭಿಮಾನ ಪೊಂದ್ಚಿಡೋಂಡ ಕೂಟ್ಕ್, ನಂಗಡ ಉಡ್ಪುರ ವಿಚಾರತ್ ಕುರ್ಚ ಓರ್ ಚಿತ್ರಕ್ಕಾಯಿತ್ ಕೋರ್ಟ್ ಮೊಟ್ಟ್ ಪತ್ತಿತೂ ಬಂದಿತ್. ಅವುವೇ ಮೂವೆರ ರಾಯ್ಪೊನ್ನಣ್ಣ. ಮೂವೆರ ರಾಯ್ ಪೊನ್ನಣ್ಣ ಕುರ್ಚ ಚಿತ್ರತ್ನ ನೋಟತವು ದುಂಬಾ ಕಮ್ಮಿಂದೇ ಎಣ್ಣೋಲು. ಇವು ಕೊಡವಾಮೆರ ವಿಚಾರತ್ ಎಂತದೇ ಎಣ್ಣುವದುಂಡೇಂಗೂ ಅದ್ ತಾಂಡ ಚಿತ್ರಕುರಿನುಂಡೇ, ಆ ಚಿತ್ರವೇ ನೋಟ್ನಯಿಂಗಕ್ ಕೊಡವಾಮೆರ ಪಾಟ. ಬಟ್ಟೆಬೊಳಿರ ಕೂಟ್ಕ್ ಚೂಕ್ಟ್ಟ್ ಕಾಟುವ ಕಾರ್ಯತ್ನೂ ಮಾಡ್ಯಂಡುಂಡ್.ರಾಯ್ ಪೊನ್ನಣ್ಣ ಕುರ್ಚ ಚಿತ್ರ ಬಲ್ಲತ್ ನಾಡ್, ಬಲ್ಲಮಾವಟಿರ ಮೂವರೆ ಪ್ರಕಾಶ್ ಪಿಂಞ ರೇಖಾ (ತಾಮನೆ : ಮಾಲೆಯಂಡ) ದಂಪತಿಯಡ ಮೋಂವೊನಾಯಿತ್ ಪುಟ್ಟ್ನ ರಾಯ್ ಪೊನ್ನಣ್ಣ, ತಾಂಡ ಆದ್ಯತ್ ವಿದ್ಯಾಬುದ್ದಿನ ಶ್ರೀರಾಮ ಟ್ರಸ್ಟ್ ನಾಪೋಕ್ಲ್ ಪಡ್ಂದಿತ್, ಬಯ್ಯಂಜಿ ಕೊಡಗು ವಿದ್ಯಾಲಯ, ಪುತ್ತೂರ್ ಸೆಂಟ್ ಫಿಲೋಮಿನಾಸ್, ಮಿರಂಡ ಇನ್ಸ್ಟಿಟ್ಯೂಟ್ ಬೆಂಗಳೂರ್ಲ್ ಪಡ್ಚಿತ್, ಇಕ್ಕ ಬೆಂಗಳೂರ್ಲ್…
Read more ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…
ವಿರಾಜಪೇಟೆ, ಸೆ.15(nadubade news): ಕರ್ನಾಟಕ ರಾಜ್ಯ ಪೊಲೀಸ್ (KSP) ಉಡುಪಿಯಲ್ಲಿ ಬೋಟ್ ಕ್ಯಾಪ್ಟನ್ ಮತ್ತು ಎಂಜಿನ್ ಡ್ರೈವರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 54 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಸೆಪ್ಟೆಂಬರ್ 30. 10ನೇತರಗತಿ ಪಾಸಾಗಿರುವ ಅಭ್ಯರ್ಥಿಗಳು ಈ ಹುದ್ದೆ ಪಡೆಯಲು ಅರ್ಹರಾಗಿರುತ್ತಾರೆ. ಗರಿಷ್ಠ ವಯಸ್ಸು 58 ವರ್ಷಗಳು. ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ. ಕರ್ನಾಟಕ ರಾಜ್ಯ ಪೊಲೀಸ್(KSP) ಅಧಿಕೃತ ಅಧಿಸೂಚನೆಯ ಮೂಲಕ ಬೋಟ್ ಕ್ಯಾಪ್ಟನ್, ಎಂಜಿನ್ ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ವಿಶೇಷವಾಗಿ ಉಡುಪಿಯಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು. ಹುದ್ದೆಗಳ ಸಂಖ್ಯೆ: 54 ಅರ್ಹತಾ ವಿವರಗಳು: ಶೈಕ್ಷಣಿಕ ಅರ್ಹತೆ: ಕೆಎಸ್ಪಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು . ವಯೋಮಿತಿ: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 58 ವರ್ಷಗಳು. ಆಯ್ಕೆ ಪ್ರಕ್ರಿಯೆ: ಸಂದರ್ಶನದ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಪೊಲೀಸ್ ಅಧೀಕ್ಷಕರು, ಕರಾವಳಿ ಭದ್ರತಾ ಪೊಲೀಸ್, ಉಡುಪಿ ಮತ್ತು ಕರ್ನಾಟಕದ ವಿಶೇಷ ನೇಮಕಾತಿ ಸಮಿತಿಯ ಸದಸ್ಯ ಕಾರ್ಯದರ್ಶಿಗೆ ಸೆಪ್ಟೆಂಬರ್ 30ರ ಮೊದಲು ಕಳುಹಿಸಬೇಕು. ಅರ್ಜಿ ಸಲ್ಲಿಸುವ ಹಂತಗಳು: ಮೊದಲನೆಯದಾಗಿ KSP ನೇಮಕಾತಿ ಅಧಿಸೂಚನೆಯನ್ನು…
Read moreದಸರಾ ಯಶಸ್ವಿಯಾಗಿ ನಡೆಸಲು ಉಸ್ತುವಾರಿ ಸಚಿವ ಶ್ರೀ ಎನ್. ಎಸ್ ಬೋಸರಾಜು ಸೂಚನೆ…
ಮಡಿಕೇರಿ,ಸೆ.15(nadubade news): ಪ್ರತಿ ಬಾರಿಯಂತೆ ಈ ಬಾರಿಯೂ ಕೊಡಗಿನಲ್ಲಿ ದಸರಾ ಯಶಸ್ವಿಯಾಗಿ ನಡೆಸಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಬೋಸರಾಜರವರು ದಸರಾ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಭವನದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಉತ್ತಮ ರೀತಿಯಲ್ಲಿ ಕೊಡಗಿನ ಹೆಸರನ್ನು ಉನ್ನತ ಮಟ್ಟದಲ್ಲಿ ತಲುಪಿಸಬೇಕು ಎಂದು ನುಡಿದರು. ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಸಮಿತಿಯೊಂದಿಗೆ ನಾವಿದ್ದೇವೆ ಪ್ರತಿಯೊಂದು ಹಂತದಲ್ಲಿಯೂ ನಾವಿರುತ್ತೇವೆ ತಮ್ಮ ಸಹಕಾರ ಅತ್ಯಗತ್ಯ ಎಂದು ದಸರಾ ಸಮಿತಿಯ ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿ,ನಾಡ ಹಬ್ಬ ದಸರಾವನ್ನು ಯಾವುದೇ ಅಡೆಚಡೆಯಿಲ್ಲದೆ ಗೊಂದಲಗಳಿಲ್ಲದೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ರವರು ಮಾತನಾಡಿ ವಿಶೇಷವಾಗಿ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕರಗಸಾಗುವುದು ರಾತ್ರಿ ವೇಳೆಯಲ್ಲಿ ಆಗಿರುವುದರಿಂದ ಸೆಸ್ಕಾಂ ಅವರು ಯಾವುದೇ ಅಡಚಣೆ ಇಲ್ಲದೆ ವಿದ್ಯುತ್ ಸಂಪರ್ಕವನ್ನು ನೀಡಬೇಕಾಗಿದೆ ಎಂದು ಸೂಚಿಸಿದರು. ದಶಮಂಟಪಗಳ ಸುತ್ತ ನಿಷೇಧಾಜ್ಞೆಯನ್ನು ಹೇರಬೇಕು ಹಾಗೆಯೇ ಮಂಟಪಗಳ ಬಳಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕೆಂದು ತಿಳಿಸಿದರು. ಜಿ.ಎಸ್.ಟಿ ಬಿಲ್ ಗಳನ್ನು ಆದಷ್ಟು ಬೇಗ ನೀಡಬೇಕು ಎಂದು ತಿಳಿಸಿದರು. ಗ್ರಾಮದ ನಾಡ ಹಬ್ಬವನ್ನು ಒಟ್ಟಾಗಿ ಸೇರಿ ಅಚ್ಚುಕಟ್ಟಾಗಿ ನಡೆಸೋಣ ಎಂದು ದಸರಾ ಸಮಿತಿಯ ಅಧ್ಯಕ್ಷರುಗಳಿಗೆ ತಿಳಿಸಿದರು. ಮಡಿಕೇರಿ ದಸರಾ ಸಮಿತಿಯ ಅಧ್ಯಕ್ಷರಾದ ಅರುಣ್ ಮಾತನಾಡಿ 161 ವರ್ಷದ ಇತಿಹಾಸವಿರುವ ಮಡಿಕೇರಿ ದಸರಾವನ್ನು ವಿಜೃಂಭಣೆಯಿಂದ ಮಾಡುವುದಾಗಿ ತಿಳಿಸಿದರು. ಪ್ರತಿಯೊಂದು ಹಂತದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧಿಕಾರಿಗಳಿಗೆ ತಿಳಿಸಿದರು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಅನುದಾನವನ್ನು ನೀಡಿರುವುದು ಸಂತಸ ತಂದಿದೆ ಅನುದಾನವನ್ನು ಸರಿಯಾದ ಕ್ರಮದಲ್ಲಿ…
Read moreಅಕ್ಟೋಬರ್ 17ರ ಮಧ್ಯಾಹ್ನ ಆವಿರ್ಭವಿಸಲಿರುವ ಕುಲಮಾತೆ ಕಾವೇರಿ …
ವಿರಾಜಪೇಟೆ, ಸೆ.15(nadubade news): ಕುಲಮಾತೆ ಕಾವೇರಿ ಅಕ್ಟೋಬರ್ 17ರ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಲಿರುವ ಕಾವೇರಿ. ಕಾವೇರಿ ಚಂಗ್ರಾದಿಯ ಪ್ರಯುಕ್ತ ದೇವಾಲಯದಲ್ಲಿ ಇದೇ ತಿಂಗಳು 26ರ ಶುಕ್ರವಾರ ಬೆಳಗ್ಗೆ 9:31ಕ್ಕೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅಕ್ಟೋಬರ್ 4ರ ಶನಿವಾರ ಬೆಳಗ್ಗೆ 8:33ರ ತುಲಾ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ. 14ರ ಮಂಗಳವಾರ ಬೆಳಗ್ಗೆ 11:45ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು,ಸಂಜೆ 4:45ಕ್ಕೆ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿ ಇರಿಸುವುದು .ಅ. 17ರ ಶುಕ್ರವಾರ ಮಧ್ಯಾಹ್ನ 1:44 ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವದ ಮೂಲಕ ಅವ್ವ ಕಾವೇರಿ ಭಕ್ತಾದಿಗಳಿಗೆ ದರ್ಶನ ನೀಡಲಿದ್ದಾಳೆ, ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.
Read more





