
ಚೆಯ್ಯಂಡಾಣೆ,: ಜೂ.06: (nadubadenews) (ಅಶ್ರಫ್) ಸಮೀಪದ ಕರಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ಎ. ದಮಯಂತಿ ಯವರನ್ನು ಶಾಲಾ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಟ್ಟರು.ಈ ಸಂದರ್ಭ ಎಸ್ ಡಿಎಂಸಿ ಅಧ್ಯಕ್ಷ ಎಚ್.ಎಂ.ಲೋಕೇಶ್, ಸಲಹಾ ಸಮಿತಿಯ ಸದಸ್ಯರಾದ ಬೇಪಡಿಯಂಡ ಬಿದ್ದಪ್ಪ, ಐತಿಚಂಡ ಭೀಮಯ್ಯ, ಸುಬ್ರಮಣಿ, ನೆರಪಂಡ ಸುಷಾ ಮೊಣ್ಣಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಲೀನ್ ಹಾಗೂ ನೇತ್ರಾವತಿ, ಸ್ಥಳ ದಾನಿಗಳಾದ ಬಿದ್ದೇರಿಯಂಡ ಈಶ ದೇವಯ್ಯ, ಮುಖ್ಯ ಶಿಕ್ಷಕಿ ಲೀಲಾವತಿ, ಸಿಆರ್ಪಿ ಪವಿತ್ರ, ಗ್ರಾಮಸ್ಥರಾದ ಐತಿಚಂಡ ಸೀತಮ್ಮ, ಅಂಗನವಾಡಿ ಕಾರ್ಯಕರ್ತೆ ಈಶ್ವರಿ ಗ್ರಂಥಪಾಲಕಿ ರೆನಿ, ಇಲಾಖೆಯ ಬಿಆರ್ ಸಿ ಪ್ರಸಾದ್,ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು.