
ಮಡಿಕೇರಿ, ಮಾ.14: ಕಟ್ಟೆಮಾಡ್ ಬಳಿಯ ಪುರಾತನ ಮಾದೇವರ ದೇವಾಲಯದ ವಾರ್ಷಿಕೋತ್ಸವದಂದು ಕೊಡವ ಕುಪ್ಯಚಾಲೆಗೆ ಕೆಲವರು ಮಾಡಿದ ಅವಮಾನದ ಕಾರಣಕ್ಕೆ ಉಂಟಾದ ವಿವಾದದ ಹಿನ್ನೆಲೆ, ದೇವಾಲಯ ಆವರಣದಿಂದ 200 ಮೀ. ವ್ಯಾಪ್ತಿಯಲ್ಲಿ ನಿಷೆದಾಜ್ಞೆಯನ್ನು, ದಿನಾಂಕ 11-04-2025ರ ವರೆಗೆ ಮುಂದುವರೆಸಿ ಜಿಲ್ಲಾ ಉಪ ವಿಭಾಗಾಧಿಕಾರಿ ಮತ್ತು ಉಪಾಗೀಯ ದಂಡಾಧಿಕಾರಿಗಳು, ಮಡಿಕೇರಿ ಉಪ ವಿಭಾಗ ಅವರು, ಮಾನ್ಯ ಕೊಡಗು ಜಿಲ್ಲಾ ಪೋಲೀಸ್ ಅದೀಕ್ಷಕರ ಕೋರಿಕೆಯಂತೆ ಆದೇಶಿಸಿದ್ದಾರೆ.
ಡಿಸೆಂಬರ್ 25- 2024ರಿಂದ ಈ ದೇವಾಲಯವು ರಾಷ್ಟ್ರಮಟ್ಟದ ವಿವಾಧಿತ ಕೇಂದ್ರವಾಗಿದ್ದು, ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿಯೂ ಇದೆ. ಘಟನೆ ನಡೆದಂದೀನಿಂದಲೂ ಈ ಪ್ರದೇಶದಲ್ಲಿ ನಿಷೇದಾಜ್ಞೆ ಇದ್ದು, ನಿಷೇದಿತ ಪ್ರದೇಶದಲ್ಲಿ, 4ಕ್ಕಿಂತ ಹೆಚ್ಚು ಜನರು ಗುಂಪು ಸೇರದಂತೆ ಆದೇಶವಿದ್ದು, ಭಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.