ಕೊಡಗು ಮೆಡಿಕಲ್‌ ಕಾಲೇಜಿಗೆ ಅಮೇರಿಕಾ ವೈದ್ಯರ ತಂಡ ಭೇಟಿ

ಮಡಿಕೇರಿ ಮೇ.09(nadubadenews):- ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಗೆ ಕೋವಿಡ್-19 ಸಂಧರ್ಭದಲ್ಲಿ “ಆಕ್ಸಿಜನ್ ಫಾರ್ ಇಂಡಿಯಾ” ಕಾರ್ಯಕ್ರಮದಡಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಅಮೇರಿಕಾದ ಮೀರಾ ವೆಲ್ಸ್, ಡಾ.ಶುಭಾ ವರ್ಮಾ ಮತ್ತು ತಂಡದವರು ಕೊಡುಗೆಯಾಗಿ ನೀಡಲಾಗಿದ್ದು ಈ ಸಂಬಂಧ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಗೆ ಡಾ.ಮೀರಾ ವೆಲ್ಸ್ ಅವರ ಪತಿ, ಕೋರ್ಟ್‍ಲ್ಯಾಂಡ್ (ನಿರ್ದೇಶಕರು ಐಬಿಎಂ ಸಂಸ್ಥೆ)ನಿವೃತ ಐಎಎಸ್ ಅಧಿಕಾರಿಯಾದ ಎ.ಕೆ.ಮೊಣ್ಣಪ್ಪ ಮತ್ತು ಸ್ಥಳೀಯ ವೈದ್ಯರಾದ ಡಾ ಸಣ್ಣುವಂಡ ಕಾವೇರಪ್ಪ ಅವರು ಭೇಟಿ ನೀಡಿದರು. ಈ ಸಮಯದಲ್ಲಿ 2021 ರ […]

Continue Reading

ದಿ. ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘವು  ಬೆಳೆಗಾರಸ್ನೇಹಿ ಕಾರ್ಯ ಮಾಡಲಿದೆ : ಅಧ್ಯಕ್ಷ ಎ.ಎಸ್.‌ ಪೊನ್ನಣ್ಣ ಅಭಯ

   ಮೈಸೂರು, ಮೆ.09: (ನಡುಬಾಡೆ ನ್ಯೂಸ್)‌ :- ದಿ. ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘವು, ರೈತರ ಹಾಗೂ ಬೆಳೆಗಾಗರ ಸ್ನೇಹಿಯಾಗಿ ಮುಂದಿನ ದಿನಗಳಲ್ಲಿ ಯಶಸ್ಸಿನತ್ತ ನಡೆಯಲಿದೆ ಎಂದು ಸಂಘದ ಅಧ್ಯಕ್ಷರು, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಸದಸ್ಯರಿಗೆ ಅಭಯ ನೀಡಿದರು.  ಮೈಸೂರು ಜಿಲ್ಲೆ ಯಾದವಗಿರಿಯ ಕೆಆರ್‌ಎಸ್‌ ರಸ್ತೆಯಲ್ಲಿರುವ ದಿ. ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘ ನಿಯಮಿತದ ಕಚೇರಿ ಆವರಣದಲ್ಲಿ  ನಡೆದ ಇಂದು 2024-25 ರ ಸಾಲಿನ ವಾರ್ಷಿಕ […]

Continue Reading

ಜಿಲ್ಲೆಯ ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಸರಿಪಡಿಸಲು ಸಂಸದ ಯದುವೀರ್ ಒಡೆಯರ್‌ ಸೂಚನೆ…

ಮಡಿಕೇರಿ,ಮೇ.08 (ನಡುಬಾಡೆ ನ್ಯೂಸ್):‌ ಮಡಿಕೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಯದುವೀರ್ ಒಡೆಯರ್, ಮಡಿಕೇರಿ ಕಸ ವಿಲೇವಾರಿ ಘಟಕದ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಜೆಜೆಎಮ್ ಪ್ರಗತಿ ಕುರಿತು ಅಧಿಕಾರಿಯಿಂದ ಮಾಹಿತಿ‌ ಪಡೆದು ಜೆಜೆಎಮ್ ಕುರಿತು ದೂರುಗಳು ಸಾರ್ವಜನಿಕರಿಂದ ಬಂದಿದೆ.ಸಾಕಷ್ಟು ಕಡೆ ಕಳಪೆ ಕಾಮಗಾರಿ ನಡೆದಿರುವುದು ಗಮನಕ್ಕೆ ಬಂದಿದೆ ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಹೇಳಿದರು.ಬಿಎಸ್ಎನ್ಎಲ್ ಸಂಪರ್ಕ ಸಂಪೂರ್ಣ […]

Continue Reading

ಕಳಿರ ಕೂಡೆ ಬಾಳ್‌ರ ಬಟ್ಟೆಕೂ ಒತ್ತ್‌ ಕೊಡಿ : ಮೈಸೂರ್‌ ಮಕ್ಕಡ ಹಾಕಿನಮ್ಮೆಲ್‌  ಬಾಳೆಯಡ ಕರುಣ್‌ ಕಾಳಪ್ಪ

ಮೈಸೂರ್‌, ಮೆ.07: (ನಡುಬಾಡೆ ನ್ಯೂಸ್‌):- ಕೊಡವ ಮಕ್ಕ ಕಳಿ ತೆಳಿರ ಕೂಟ್‌ಕ್‌ ಬಾಳ್‌ರ ಬವುಸ್‌ಕೂ ಏತುವಾಪನ್ನಕೆ ತಯಾರಿ ಮಾಡ್ಯವಂಡೂ, ಹಾಕಿ ಕೂಡ್‌ನನಕೆ ಎಲ್ಲಾ ಕಳಿಲೂ ಬದ್‌ಕ್‌ ಪಿಂಞ ಬವುಸ್‌ ಉಂಡೇಂಗೂ ಎಲ್ಲಾರ್‌ಕೂ ಇಲ್ಲಿ ಚಾಕ್ರಿ ಕ್‌ಟ್ಟೋದ್‌ ಕಷ್ಟ. ಕಳಿಕಳಿತೆಳಿರ ಕೂಟ್‌ಲೇ ಚಾಕ್ರಿಕ್‌ ಒಪ್ಪನ್ನತ ತಯಾರಿನೂ ಮಕ್ಕ ಕಾಲೇಜ್‌ ಬದ್‌ಕ್‌ಲ್‌ ಇಪ್ಪಕಲೇ ಒತ್ತ ತಯಾರಿ ಮಾಡ್ಯವಂಡೂಂದ್‌, ಕೇಳಿಪೋನ ಸಮಾಜ ಸೇವಕ, ಬ್ಲೂಡಾಟ್‌ ಕಂಪೆನಿರ ನಿವೃತ್ತ ಪೆರಿಯ ಉಪಾಧ್ಯಕ್ಷ ಪಿಂಞ ಬೆಂಗಳೂರ್‌ರ ಉದ್ಯಮಿ ಬಾಳೆಯಡ ಕರುಣ್‌ಕಾಳಪ್ಪ ಅವು ಕೆಮಿ ತಕ್ಕ್‌ಪರ್ಂದತ್. […]

Continue Reading

ನಾಳೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ…

    ಮಡಿಕೇರಿ ಮೇ.07(ನಡುಬಾಡೆ ನ್ಯೂಸ್): ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯು  ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಅಧ್ಯಕ್ಷತೆಯಲ್ಲಿ ಮೇ, 08 ಗುರುವಾರದಂದು ಬೆಳಗ್ಗೆ 10.30 ಗಂಟೆಗೆ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ತಿಳಿಸಿದ್ದಾರೆ.

Continue Reading

ಆಪರೇಷನ್​ ಸಿಂಧೂರ್​ ಸಂಭ್ರಮ, ಮುಜರಾಯಿ ದೇಗುಲಗಳಲ್ಲಿ ಪೂಜೆ ಸಲ್ಲಿಸಲು ಸೂಚನೆ…

    ಬೆಂಗಳೂರು, ಮೇ.07 (ನಡುಬಾಡೆ ನ್ಯೂಸ್): ಪಹಲ್ಗಾಮ್‌ನ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಗೆ ರಾಷ್ಟ್ರಾದ್ಯಂತ ಸಂಭ್ರಮ ಮತ್ತು ಶ್ಲಾಘನೆ ವ್ಯಕ್ತವಾಗಿದ್ದು, ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗಿದೆ. ಸಚಿವ ರಾಮಲಿಂಗಾರೆಡ್ಡಿ ಅವರು ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲು ಸೂಚನೆ ನೀಡಿದ್ದಾರೆ. ಭಾರತೀಯ ಸೇನೆಯ ಧೈರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.     ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ […]

Continue Reading

ನಾಳೆ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ…

    ಮಡಿಕೇರಿ ಮೇ.07(ನಡುಬಾಡೆ ನ್ಯೂಸ್):  2025 ರ ಏಪ್ರಿಲ್, 22 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿಗೆ ಪ್ರತ್ಯುತ್ತರವಾಗಿ ಮೇ, 7 ರಂದು ಮುಂಜಾನೆ  ಭಾರತವು ಪಾಕ್  ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ‘ಸಿಂಧೂರ್’ ಹೆಸರಿನಲ್ಲಿ ಸೇನಾ ಕಾರ್ಯಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.     ಆದ್ದರಿಂದ ಕರ್ನಾಟಕ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರ ನಿರ್ದೇಶದಂತೆ ರಾಜ್ಯದ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗಲಿ […]

Continue Reading

   ಸಿದ್ದಾಪುರ ಸುತ್ತಮುತ್ತ ವಿದ್ಯುತ್‌ ವ್ಯತ್ಯಯ…

  ಸಿದ್ದಾಪುರ, ಮೇ.07(ನಡುಬಾಡೆ ನ್ಯೂಸ್):‌ ಸಿದ್ದಾಪುರ 33/11 ಕೆ.ವಿ ವಿದ್ಯುತ್ ಉಪ ಕೇಂದ್ರದಲ್ಲಿ ಹೆಚ್ಚುವರಿ ಶಕ್ತಿ ಪರಿವರ್ತಕವನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಮಾರ್ಗದಲ್ಲಿ ಮೇ, 09 ರ ಶುಕ್ರವಾರದಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಸಿದ್ದಾಪುರ ಶಾಖಾ ವ್ಯಾಪ್ತಿಯ, ಸಿದ್ದಾಪುರ, ಕರಡಿಗೋಡು, ಕೂಡುಗದ್ದೆ, ಗುಹ್ಯ, ಮೇಕೂರು, ಮಾಲ್ದಾರೆ, ಇಂಜಿಲಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ […]

Continue Reading

ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ-  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂತಾಪ…  

ಮಡಿಕೇರಿ, ಮೇ 07 (ನಡುಬಾಡೆ ನ್ಯೂಸ್):‌ ಕನ್ನಡ ನಾಡಿನ ಹಿರಿಯ ಸಾಹಿತಿ.ವಿಮರ್ಶಕರು. ಕವಿ ಚಿಂತಕರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿದ್ದ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಅವರು ನಿಧನರಾಗಿರುವುದು ದುಖಃವನ್ನುಂಟು ಮಾಡಿದೆ.                                                                  ಸಾಂಸ್ಕೃತಿಕ ಜಗತ್ತಿಗೆ ಕವಿ ಜಿ ಎಸ್ ಸಿದ್ದಲಿಂಗಯ್ಯ ಅವರ ಕೊಡುಗೆ ಗಮನಾರ್ಹವಾದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ 17ನೇ ಅಧ್ಯಕ್ಷರಾಗಿ ಅವರು ಕೈಗೊಂಡ ಕೆಲಸಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢವಾಗಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಸಾಹಿತ್ಯ ಪರಿಷತ್ತಿಗೆ ಒಂದು ನಿರ್ದಿಷ್ಟ ಧ್ವಜವನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದು.ಆಡಳಿತಾತ್ಮಕವಾಗಿ, […]

Continue Reading

ಮೂರ್ನಾಡ್  ಕೊಡವ ಸಮಾಜತ್  ಆಟ್ ಪಾಟ್  ಪಡಿಪು…

‌  ಮೂರ್ನಾಡ್‌, ಮೇ,07(ನಡುಬಾಡೆ ನ್ಯೂಸ್): ಮೂರ್ನಾಡ್ ಕೊಡವ ಸಮಾಜತ್, ಇದೇ ತಿಂಗ 12, 13, ಪಿಂಞ 14ಲ್ ಆಟ್- ಪಾಟ್ ಪಡಿಪು ಕಾರ್ಬಾರ್‌ಕ್ ಮೊಳಿ ಇಟ್ಟಂಡುಂಡ್ (ಬೊಳ್ಕಾಟ್, ಕೋಲಾಟ್, ಉಮ್ಮತಾಟ್, ಸಂಬಂಧ ಅಡ್ಕೊ, ಮಂಡೆತುಣಿ ಕಟ್ಟೊ) ಇನ್ನತಾನೆಲ್ಲ ಬಣ್ಣೆಯಾಯಿತ್ ಪಡಿಪುಚಿಟ್ಟಂಡುಂಡ್ ದಯಬೆಚ್ಚಿತ್‌ ಪಡಿಪಕ್‌ ಇರಾದೆ ಉಳ್ಳ  ಎಲ್ಲಾ ಕೊಡವಳೂ ಏರ ಕಣಕ್‌ಲ್ ಬಂತ್ ಕೂಡಿಯಾಡಿತ್ ಈ ಕಾರ್ಬಾರ್‌ನ ಚಾಯೋಡೆ ನಡ್ತಿತರಂಡೂಂದ್ ಮೂರ್ನಾಡ್ ಕೊಡವ ಸಮಾಜ ಅಧ್ಯಕ್ಷ, ಆಡಳಿತ ಮಂಡಳಿ ಸದಸ್ಯಂಗ, ಕೇಟಂಡಿತ್.

Continue Reading