
ಪಾಲಂಗಾಲ, ಫೆ.16: (ಕರಿನೆರವಂಡ ಡ್ಯಾನಿ ಕುಶಾಲಪ್ಪ) ವಿರಾಜಪೇಟೆ ತಾಲೂಕು ಕಡಿಯತ ನಾಡ್ನ ಇತಿಹಾಸ ಪ್ರಸಿದ್ಧ ಕರಡ ಮಲೆತಿರಿಕೆ ದೇವಾಲಯಕ್ಕೆ ತೆರಳುವ ರಸ್ತೆಯನ್ನು ಶಾಸಕರ ವಿಶೇಷ ಕಾಳಜಿಯಲ್ಲಿ, 25 ಲಕ್ಷ ಅನುದಾನದ 500 ಮೀಟರ್ ಕಾಂಕ್ರೀಟ್ ರಸ್ತೆ ಪೂರ್ಣಗೋಮಡಿದ್ದು, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ದಿನಾಂಕ 14/02/2025 ರಂದು, ಸದರಿ ರಸ್ತೆಯನ್ನು ಲೋಕಾರ್ಪಣೆ ಮಾಡಿದರು.
ಕಳೆದ ವರ್ಷ ಮಾನ್ಯ ಶಾಸಕರು ಈ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆಯ ಅಭಿವೃದ್ಧಿಗಾಗಿ ಬೇಡಿಕೆಯನಿಟ್ಟಿದ್ದರು. ಮನವಿಗೆ ಸ್ಥಳದಲ್ಲೇ ಸ್ಪಂದಿಸಿದ ಶಾಸಕರು ಮುಂದಿನ ವಾರ್ಷಿಕ ಹಬ್ಬದ ಒಳಗಾಗಿ, ರಸ್ತೆಯ ಅಭಿವೃದ್ಧಿ ಮಾಡಿಸುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಇಂದು ಈ ರಸ್ತೆಯ ಉದ್ಘಾಟನೆಯನ್ನು ಮಾಡಿ, ಶ್ರೀ ದೇವರ ಆಶೀರ್ವಾದವನ್ನು ಪಡೆದ ಮಾನ್ಯ ಶಾಸಕರು, ಅತ್ಯಂತ ಪ್ರಸಿದ್ಧ ಹಾಗೂ ಶಕ್ತಿಶಾಲಿಯಾದ ಮಲೆತಿರಿಕೆ ಮಾದೇವನು ನಾಡಿಗೆ ಒಳಿತು ಮಾಡಲಿ ಎಂದು ಸಂದರ್ಭದಲ್ಲಿ ಆಶಿಸಿದರು.
ಈ ಸಂದರ್ಭದಲ್ಲಿ ಕರಡ ಈಶ್ವರ ಭಗವತಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ಎನ್.ಎಂ ಸೋಮಯ್ಯ, ನಾಪೋಕ್ಲು ಬ್ಲಾಕ್ ಅದ್ಯಕ್ಷರಾದ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿನೋದ್ ನಾಣಯ್ಯ ಕರಡ ಭೂತ್ ಅಧ್ಯಕ್ಷರಾದ ಐತೀಚಂಡ ಪ್ರಕಾಶ್, ಕೆಡಿಪಿ ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಬಾಚಮಂಡ ಲವ ಚಿಣ್ಣಪ್ಪ, ವಲಯ ಕಾಂಗ್ರೆಸ್ ಕೆದಮುಳ್ಳೂರು ಅದ್ಯಕ್ಷರಾದ ಎನ್. ಎಸ್. ಮಹೇಶ್ ಪಾಲಂಗಾಲ ಭೂತ್ ಅಧ್ಯಕ್ಷರಾದ ಜಾಲು ಚಂಗಪ್ಪ, ಡಿಸಿಸಿ ಸದಸ್ಯರಾದ ಮಣಿ ಅಯ್ಯಮ್ಮ , ಗುತ್ತಿಗೆದಾರರಾದ ಕೆೋಡೀರ ವಿನೋದ್, ಬೇಪಡಿಯಂಡ ಬಿದ್ದಪ್ಪ ಮೇದುರ ಗಣು ಕುಶಾಲಪ್ಪ ಹಾಗೂ ಪಾಲಂಗಾಲ ಕರಡ ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Great web site you have got here.. It’s hard to find high quality writing like yours nowadays.
I seriously appreciate people like you! Take care!!