https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಸರ್ವೇ ಮತ್ತು ನೋಂದಣಿ ಇಲಾಖೆಗಳ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ  ಶಾಸಕ ಡಾ.ಮಂಥರ್‌ ಗೌಡ ಚಾಲನೆ

Uncategorized
07/01/202507/01/2025nadubadenews@gmail.comLeave a Comment on ಸರ್ವೇ ಮತ್ತು ನೋಂದಣಿ ಇಲಾಖೆಗಳ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ  ಶಾಸಕ ಡಾ.ಮಂಥರ್‌ ಗೌಡ ಚಾಲನೆ
Spread the love

ಸೋಮವಾರಪೇಟೆ, ಜ.07: (ತೇಲಪಂಡ ಕವನ್‌ ಕಾರ್ಯಪ್ಪ) ತಾಲ್ಲೂಕು ಆಡಳಿತ ಸೌಧದಲ್ಲಿರುವ ಸರ್ವೇ ಮತ್ತು ನೋಂದಣಿ ಇಲಾಖೆಗಳ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ಶಾಸಕ ಡಾ. ಮಂತರ್ ಗೌಡ ಅವರು ಚಾಲನೆ ನೀಡಿದರು.

  ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಕಾಲ ಶೀತ ಹವಾಮಾನ ಇರುವುದರಿಂದ ಕಾಗದ ರೂಪದಲ್ಲಿರುವ ಭೂ ದಾಖಲೆಗಳು ನಾಶವಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದಕ್ಕೆ ಚಾಲನೆ ನೀಡಿದೆ. ನಮ್ಮ ರಾಜ್ಯದ ಸಾಕಷ್ಟು ಭೂ ದಾಖಲೆಗಳು ಇಂದಿಗೂ ತಮಿಳುನಾಡಿನಲ್ಲಿ ಸೇರಿವೆ. ನಮ್ಮ ತಾಲ್ಲೂಕಿನಲ್ಲಿ 100 ಕೋಟಿಗೂ ಹೆಚ್ಚಿನ ದಾಖಲೆಗಳನ್ನು ಡಿಜಿಲೀಕರಣ ಮಾಡಬೇಕಿದೆ. ಇದರಿಂದ ನಮ್ಮ ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು. ಮತ್ತು ದಾಖಲೆಗಳನ್ನು ತಿದ್ದುವುದು, ಕಳವು ಮಾಡುವುದನ್ನು ತಪ್ಪಿಸಲು ಅವಕಾಶವಾಗುವುದು ಎಂದರು.

 ಕಚೇರಿ ಸಿಬ್ಬಂದಿಗಳು ಜಾಗ್ರತೆಯಿಂದ ದಾಖಲಾತಿಯನ್ನು ಡಿಜಿಲೀಕರಣ ಮಾಡಬೇಕು. ಮೊದಲು ಬಂದಿರುವ ರೈತರ ದಾಖಲೆಗಳನ್ನು ಮೊದಲು ನೋಂದಣಿ ಮಾಡಬೇಕು. ಯಾವುದೇ ಗೊಂದಲಗಳಿಗೆ ಅವಕಾಶವಾಗದ ರೀತಿಯಲ್ಲಿ ಕೆಲಸ ಮಾಡಬೇಕೆಂದು ತಿಳಿಸಿದರು.

 ಸೋಮವಾರಪೇಟೆ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮಾತನಾಡಿ, ಕಂದಾಯ ಇಲಾಖೆಯಲ್ಲಿನ ಎಲ್ಲ ದಾಖಲಾತಿಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಮುಖ ಯೋಜನೆಯನ್ನು ರಾಜ್ಯದಾದ್ಯಂತ  ಹಮ್ಮಿಕೊಂಡಿದೆ. ದಾಖಲೆ ರಕ್ಷಣೆಯೊಂದಿಗೆ ರೈತರಿಗೆ ತಕ್ಷಣ ದಾಖಲಾತಿ ನೀಡಲು ಅವಕಾಶವಾಗುವುದು. ಕಳೆದ ಒಂದು ವಾರದ ಹಿಂದಿನಿAದಲೇ ೭ ಸಾವಿರ ದಾಖಲಾತಿಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಶೀಘ್ರದಲ್ಲಿಯೇ ಎಲ್ಲ ದಾಖಲಾತಿ ಡಿಜಿಟಲೀಕರಣ ಮಾಡಿ, ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು. 

 ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಹಾಗೂ ಭೂ ದಾಖಲೆಗಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

   ಈ ಸಂದರ್ಭ ಕುಶಾಲನಗರ ತಾಲ್ಲೂಕಿನ ತಹಶೀಲ್ದಾರ್ ಕಿರಣ್ ಗೌರಯ್ಯ, ಎಡಿಎಲ್‌ಆರ್ ಪರಮೇಶ್ ಮತ್ತಿತರರು ಇದ್ದರು.

Post navigation

ನಂಗಡ ಆಯಿಮೆ ಕೊಯಿಮೆನ ಮಕ್ಕಕ್‌ ಕಾಟಿಕೊಡ್ಪದ್‌ ಪೆರಿಯೈಂಗಡ ಮೇನತ್:‌ ಡಾII ಉಳುವಂಗಡ ಕಾವೇರಿ ಉದಯ
ಸೋಮವಾರಪೇಟೆ ಪಟ್ಟಣ ಪಂಚಾಯತಿ, ಮಳಿಗೆ ಹರಾಜು ಅನುಷ್ಟಾನಕ್ಕೆ ಹೈಕೋರ್ಟ್ ತಡೆಯಾಜ್ಞೆ

Related Posts

ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…

ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…

02/12/202402/12/2024nadubadenews@gmail.com
ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕಾವೇರಿ ಕಾರ್ನಿವಾಲ್ – 2024. – ಸಾಂಸಕೃತಿಕ, ಕ್ರೀಡಾ ಸ್ಪರ್ಧೆಯೊಂದಿಗೆ,  ಸಾಂಪ್ರದಾಯಿಕ ತಿನಿಸು  ಅಂಗಡಿ, “ಕಲಿಕೆಯೊಂದಿಗೆ ಗಳಿಕೆ” ಹಬ್ಬ…

ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕಾವೇರಿ ಕಾರ್ನಿವಾಲ್ – 2024. – ಸಾಂಸಕೃತಿಕ, ಕ್ರೀಡಾ ಸ್ಪರ್ಧೆಯೊಂದಿಗೆ, ಸಾಂಪ್ರದಾಯಿಕ ತಿನಿಸು ಅಂಗಡಿ, “ಕಲಿಕೆಯೊಂದಿಗೆ ಗಳಿಕೆ” ಹಬ್ಬ…

26/11/202426/11/2024nadubadenews@gmail.com
ಕೃತಕ ಪ್ರವಾಹ, ಅನಧಿಕೃತ ತಡೆ ತೆರವಿಗೆ, ವಿರಾಜಪೇಟೆ ಪುರಸಭೆ ಕಾರ್ಯಾಚರಣೆ

ಕೃತಕ ಪ್ರವಾಹ, ಅನಧಿಕೃತ ತಡೆ ತೆರವಿಗೆ, ವಿರಾಜಪೇಟೆ ಪುರಸಭೆ ಕಾರ್ಯಾಚರಣೆ

21/10/202421/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us