
ಪೊನ್ನಂಪೇಟೆ, ಫೆ.17: ಯಾವುದೇ ಸನ್ಮಾನ, ಬಿರುದು, ಪ್ರಶಸ್ತಿಗಳು ಕೇವಲು ಶಾಲು, ಹಣ್ಣು, ಪಾರಿತೋಷಕಗಳ ಸಮಾರಂಭಕ್ಕೆ ಸೀಮಿತವಾಗಿರದೆ, ಯುವ ಜನತೆಯನ್ನು ಆಕರ್ಷಿಸಿ ಹುರಿದುಂಬಿಸುವಂತೆ ಇರಬೇಕು ಎಂದು ಕ್ಗ್ಗಟ್ಟ್ ನಾಡ್ ಹಿರಿಯ ನಾಗರೀಕ ವೇದಿಕೆ ಸಂಸ್ಥಾಪಕ, ಅಜೀವ ಅಧಯಕ್ಷರೂ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಬಿರುದು ವಿಜೇತ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರು ಅಭಿಪ್ರಾಯಿಸಿದರು.
ತಮ್ಮ ಸೇವೆ ಮತ್ತು ಸಾಧನೆಯನ್ನುಪರಿಗಣಿಸಿ ಪೊನ್ನಂಪೇಟೆ ಕೊಡವ ಸಮಾಜ ಆಡಳಿತ ಮಂಡಳಿಯು ನೀಡಿದ ಗೌರವ ಪೂರ್ವಕ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಸೇವೆಯನ್ನೂ ಸಮಾಜ ಗುರುತಿಸುತ್ತದೆ ಆದರೆ ನಮ್ಮ ಸೇವೆಯ ಪ್ರಮಾಣ ಮತ್ತು ಶೈಲಿಯಿಂದ ಸಾಮಾಜಕದಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು, ಆ ಮೂಲಕ ಮಾದರಿಯಾಗಬೇಕು. ನಮ್ಮ ಸೇವೆ ಸಾಧನೆಗೆ ದೊರೆಯುವ ಸನ್ಮಾನ ಬಿರುದುಗಳಿಗಿಂತ, ನಮ್ಮ ನಡೆನುಡಿ ಸೇವೆಗಳನ್ನು ನೋಡಿ ಯುವ ಜನರು ಪ್ರೇರೇಪಣೆಗೊಂಡು, ಮತ್ತಷ್ಟು ಸಮಾಜ ಸೇವಕರು ತಯಾರಾದರೆ ಅದಕ್ಕಿಂತ ದೊಡ್ಡ ಸನ್ಮಾನ ಮತ್ತು ಸಂತೋಷ ಮತ್ತೊಂದಿಲ್ಲ, ಹಾಗಾಗಿ ಸನ್ಮಾನ ಎಂದರೆ ಕೇವಲ ಹಾರ ತುರಾಯಿ ಪಾರಿತೋಷಕವಷ್ಟೇ ಎಂದುಕೋಳ್ಳದೆ ಸಮಾಜದ ಪ್ರೇರಣೆಯಾಗಿ ಸ್ವೀಕರಿಸಬೇಕು ಎಂದರು.
ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಕ್ರಮದಲ್ಲಿ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.