
ನಿಮಗೆ ಗೊತ್ತಾ ಕೊಡವರೂ ಗೋವಿಂದ ಗೋವಿಂದ ಎನ್ನುತ್ತಿದ್ದರು! ಅಪ್ಪಚ್ಚ ಕವಿಯೂ ಗೋವಿಂದ ಗೋವಿಂದ ಎಂದು ಉಚ್ಚರಿಸುತ್ತಿದವರೇ. ಕಾರಣ ಅಪ್ಪಚ್ಚ ಕವಿಯು ಓಂಕಾರೇಶ್ವರ ದೇವಾಸ್ಥಾನದಲ್ಲಿಯೇ ನೌಕರಿಯಲ್ಲಿ ಇದ್ದಂತವರು. ಅಲ್ಲಿ ಅವರು ಲಿಂಗರಾಜರು ನೇಮಿಸಿದ್ದ ಬ್ರಹ್ಮಣ ಕುಲದ ವೈದಿಕರು (ನಾರಾಯಣ ಆರಾಧಕರು) ಮತ್ತು ವೈದಿಕ ಬಲ್ಲವರಾಗಿದ್ದ ಸ್ಮಾರ್ಥ(ಶಿವನ ಆರಾಧಕರು) ಬ್ರಾಹ್ಮಣರಿಂದ ಸಂಸ್ಕೃತ, ವೇದ, ಉಪನಿಷತ್, ಹಾಡು, ನಾಟಕಗಳನ್ನು ಕಲಿತು ಬರಹ ರೂಪದಲ್ಲಿಯೂ ದಾಖಲಿಸಿ ಬ್ರಾಹ್ಮಣ್ಯವನ್ನು ಕೊಡವಾಮೆಗೆ ಮತ್ತು ಕೊಡವ ಭಾಷೆಗೆ ತಂದು ಸಾಹಿತ್ಯವನ್ನು ಪೋಷಿಸಿದವರು.
ಅವರಂತೆ ವೈಷ್ಣವ ಬ್ರಹ್ಮಣರನ್ನು ಅಪ್ಪಿಕೊಂಡ ಕೆಲ ಗೌಡ ಜನಾಂಗ ಬ್ರಾಹ್ಮಣ್ಯದ ಮಧ್ಯಸ್ಥಿತಿಕೆ ಇಲ್ಲದೆ ಯಾವುದೇ ಕಾರ್ಯ ಮಾಡುವುದಿಲ್ಲ. ಮತ್ತು ಅವರ ಸಂಸ್ಕೃತಿಯಲ್ಲಿ ಬ್ರಹ್ಮಣರು ಇಲ್ಲದೆ ಗಂಡು ಹೆಣ್ಣಿಗೆ ತಾಲಿಯನ್ನೂ ಕಟ್ಟುವುದಿಲ್ಲ(ಗಂಡು ಹೆಣ್ಣಿಗೆ ತಾಲಿ ಕಟ್ಟುವುದು ಹೆಣ್ಣು ಗಂಡಿಗೆ ತಗ್ಗಿಬಗ್ಗಿ ಇರಬೇಕಾದುದರ ಸೂಚಕ. ಈ ಬ್ರಹ್ಮಣರು, ಕ್ರಿಶ್ಚಿಯನ್, ಮುಸ್ಲಿಂರು ಒಂದೇ ರೀತಿಯ ಅಲೌಕಿಕ ನಂಬಿಕೆಯವರು. ಈ ಎಲ್ಲರ ಅಲೌಕಿಕತೆ ಮದ್ಯಪ್ರಾಚ್ಯದಲ್ಲಿ ಉದಯಿಸಿರುವಂತಹದ್ದು) ಕೊಡವರಿಗೆ ತಾಯಿ ಪತ್ತಾಕ್ ಕಟ್ಟುವ ಪದ್ಧತಿ ಅವೈದಿಕ ಆಧ್ಯಾತ್ಮ ಸಂಸ್ಕೃತಿಯಿಂದ ಬಂದಿರುವುದಾಗಿದೆ. ಗೌಡರೊಳಗೂ ಬ್ರಾಹ್ಮಣ್ಯ ಸಿದ್ಧಾಂತಗಳು ಬೇರೂರಿರುವುದು ಅಲೌಕಿಕ ಧಾರ್ಮಿಕತೆ ಪ್ರತಿಪಾದಿಸುವ ಬ್ರಹ್ಮಣರಿಂದಲೇ. ದೇಶದೆಲ್ಲೆಡೆ ಗೌಡರಲ್ಲಿ 118ಕ್ಕೂ ಅಧಿಕ ಪಂಗಡಗಳಿವೆ. ಅರೆಭಾಷಿಕರು ಕೂಡ ಅವರಲ್ಲೊಬ್ಬರು. ಕೊಡಗಿನಲ್ಲಿ ಕೊಡವರು ಮತ್ತು ಇದೇ ಅರೆಭಾಷಿಕರೊಂದಿಗಿನ ಮುಸುಕಿನ ಗುದ್ದಾಟ ರಾಜಕೀಯವಾಗಿಯೂ ಆಗಾಗ ಸುದ್ದಿಯಲ್ಲಿರುತ್ತದೆ.
ಇವರು ಮೂಲತಃ ತಿರುಪತಿ ತಿಮ್ಮಪ್ಪನ ನಾಡಿನವರು. ಅಂದಿನ ಕಾಲದ ಅಲ್ಲಿನ ಕನ್ನಡಿಗರು. ವೆಂಕಟರಮಣ ಅವರ ಕುಲದೇವರು. ಗೋವಿಂದ ಅವರು ಬಳಸುವ ಮೂಲ ಘೋಷ ವಾಕ್ಯ.
ಆದರೆ ಗೋವಿಂದನಿಗೂ ತಿಮ್ಮಪ್ಪನಿಗೂ ಅಥವಾ ವೆಂಕಟರಮಣನಿಗೂ ಯಾವುದೇ ಸಮ್ಮಂಧ ಇರುವುದಿಲ್ಲ. ವಿಷ್ಣುವಿನ ಅವತಾರಗಳಿಗೆ ಸೇರಿಸಲ್ಪಟ್ಟ ಗೋಪಾಲ ಅಂದರೆ ಗೋವುಗಳನ್ನು ಕಾಯುತ್ತಿದ್ದ ಗೋವಿಂದ, ಉತ್ತರ ಭಾರತದ ದೇವಮಾನವ. ಕೃಷ್ಣನು ವಿಷ್ಣುವಿನ ಅಂಶವೆಂದು, ಅದರಂತೆ ಎಲ್ಲ ಹೆಸರು ಮಾಡಿದ ಭರತ ಭೂಮಿಯ ದೇವರು ವಿಷ್ಣುವಿನ ಅವತಾರ ಎನ್ನುತ್ತಲೇ, ರೆಡ್ಡಿ ಮತ್ತು ಗೌಂಡರ್ ಅಥವಾ ಗೌಡರ್ ಈ ಜನಾಂಗದವರ ಕಾರಣ ಪುರುಷ(ಮೂಲ ಪುರುಷ) ತಿಮ್ಮಪ್ಪನ ಸನ್ನಿಧಿಯಲ್ಲಿ ಅವರನ್ನು ಪೂಜಾರಿಗಳನ್ನಾಗಿ ಕರೆಸಿಕೊಂಡಾಗ ಅವರು ಉತ್ತರ ಭಾರತದಿಂದ ತಮ್ಮ ಅಲೌಕಿಕತೆ ಪ್ರತಿಪಾದಿಸುತ್ತ ದಕ್ಷಿಣಕ್ಕೆ ಬಂದು ತಿರುಪತಿಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ . ಆ ಬ್ರಹ್ಮಣರು ಭರತನ ನಂತರದ ಕಾಲಮಾನದಲ್ಲಿ (ಅಂದಾಜು ಸರಸ್ವತಿ ನದಿಯು ಬತ್ತಿ(ಸಿ)ದ ನಂತರ ಗಂಗಾ ನಾಗರಿಕತೆಯಲ್ಲಿ ಅವರಿಗೆ ಆಶ್ರಯ ನೀಡಿದ ಅರಸರನ್ನು ದೇವರಾಗಿಸುತ್ತ ಬಂದು ತಮ್ಮ ಮೂಲ ದೇವರಾದ ವಿಷ್ಣು, ಹರಿ ಅಥವಾ ನಾರಾಯಣರ ಸ್ಥಾನವನ್ನು ಮತ್ತು ತಮ್ಮ ಸ್ಥಾನಮಾನವನ್ನು ಶ್ರೇಷ್ಠ ಸ್ಥಾನದಲ್ಲಿ ಇರಿಸಿಕೊಂಡು, ಅಲೌಕಿಕ ಧಾರ್ಮಿಕತೆ ಪ್ರಚುರ ಪಡಿಸುತ್ತ ಬಂದವರು) ಇಲ್ಲಿಯ ದೇವ ಮಾನವರ ಹೆಸರನ್ನೂ ಸೇರಿಸಿ ಹರಿ ಗೋವಿಂದ, ಹರೇ ಗೋವಿಂದ ಎಂಬಂತಹ ಘೋಷಣೆ ಪ್ರಚುರ ಪಡಿಸಿದ್ದಾರೆ. ಅದರಂತೆ ಕೃಷ್ಣನ ಅನುಯಾಯಿಗಳಿದ್ದ ಕೊಡಗಿನಲ್ಲಿಯೂ ಗೋವಿಂದ ನಾಮ ಪ್ರಚಾರ ಪಡೆದಿದೆ. (ಗೋವಿಂದ ಎಂಬ ಪದವು ಎಲ್ಲವು ಮುಗಿಯಿತು ಎಂಬ ಅರ್ಥವನ್ನೂ ಹೊಂದಿದೆ) ರೆಡ್ಡಿ ಮತ್ತು ಗೌಂಡರ್ ಜನಾಂಗದವರ ಜನಸಂಖ್ಯೆ ಅಧಿಕವಾಗಿ ಇದ್ದುದರಿಂದ ಅವರು ತಮ್ಮ ಪೂರ್ವಜರಿಗೆ ತಿರುಪತಿಯಲ್ಲಿ ಹರಕೆಯ ರೂಪದಲ್ಲಿ ಸಾಕಷ್ಟು ಹಣವನ್ನು ಸುರಿಯುತ್ತ ಬಂದಿದ್ದರು. ಆ ಜನರಿಗೆ ಹಿಂದಿನಿಂದಲೂ ಹರಕೆ ಕಟ್ಟುವ ಅಭ್ಯಾಸ ತುಸು ಹೆಚ್ಚೇ ಇದ್ದುದರಿಂದ ತಿಮ್ಮಪ್ಪ-ವೆಂಕಟರಮಣ ವಿಶ್ವದ ಶ್ರೀಮಂತ ದೇವರೆಂದು ಪರಿಗಣಿಸಲ್ಪಟ್ಟಿತು. ಅದರಂತೆ ತಲಕಾವೇರಿ ಭಾಗದಲ್ಲಿ ಬೇರೆ ಬೇರೆ ಕಾಲಘಟ್ಟದ ಯುದ್ಧಗಳಿಂದ ಅಳಿದು ಹೋದ ಕೊಡವ ನೆಲೆಗಳಲ್ಲಿ ಅವರ ಮನೆ ಹೆಸರಿನಲ್ಲಿಯೇ ನೆಲೆನಿಂತ ಅರೆಭಾಷಿಕರು ಅದೇ ಕಾರಣದಿಂದ ತಲಕಾವೇರಿಯಲ್ಲಿಯೂ ಭಂಡಾರ ತಕ್ಕಾಮೆ ವಹಿಸಿಕೊಂಡರು. ನಂತರ ಅವರಿಂದ ತಿರುಪತಿ ಸಂಸ್ಕೃತಿಯನ್ನು ಪಾಲಿಸುವ ಬ್ರಹ್ಮಣರೂ ಭಾಗಮಂಡಲ, ತಲಕಾವೇರಿಯಲ್ಲಿಯೂ ಸ್ಥಾನ ಪಡೆದ ನಂತರ ಎಲ್ಲರಿಗೂ ಎಲ್ಲ ದೇವರೊಂದೇ ಎಂಬ ಬೋಧನೆಯಡಿ ಗೋವಿಂದ ಗೋವಿಂದ ಘೋಷಣೆ ಸಾರ್ವಜನಿಕ ಮಾಡಲಾಗಿದೆ. ಅನೇಕರಿಗೆ ತಮ್ಮ ಅಸ್ತಿತ್ವವನ್ನೇ ಮರೆತು ಹೋಗುವಂತೆ ಮಾಡಿರುವುದು ಇಂತಹ ಧಾರ್ಮಿಕತೆಯ ಸಾಮಾಜಿಕ ಪಾಲನೆಯೇ ಆಗಿದೆ. ಹೊರನಾಡಿಗರು ಕೊಡವರನ್ನೂ ಗೌಡರೆಂದೇ ಕರೆಯುತ್ತಿದ್ದರು. ಇದು ಯಜಮಾನ ಸೂಚಕ. ಆದರೆ ಒಕ್ಕಲಿಗ ಎಂಬುದು ಕೃಷಿಕ ವೃತ್ತಿ ಆಧಾರಿತ ಜನಾಂಗ ಸೂಚಕ. ಇವರು ಬೇರೆ ಬೇರೆ ಕುಲದೇವರ ಹೆಸರಿನಲ್ಲಿಯೂ ದೇಶಾದ್ಯಂತ ಕಂಡು ಬರುತ್ತಾರೆ. ಒಕ್ಕಲುತನ ಮಾಡುವ ಈ ಕೃಷಿಕರೆಲ್ಲರು ಸಾಮಾನ್ಯವಾಗಿ ಗೌಡರೆಂದೇ ಗುರುತಿಸಿಕೊಂಡು ಬಂದಿದ್ದಾರೆ. ಗೌಂಡರ್, ಗೌಡರ್ ಇದು ಜೈನರಲ್ಲೂ, ಲಿಂಗಾಯತರಲ್ಲೂ ಕೂಡ ಕಂಡು ಬರುವ ಕುಲ ನಾಮ ಸೂಚಕ.
ನಾವು ಕ್ರಿಶ್ಚಿಯನ್ ಮತ್ತು ಮುಸ್ಲಿಂಮರು ಮತಾಂತರ ಮಾಡುತ್ತಾರೆಂದು ಬೊಬ್ಬೆ ಹೊಡೆಯುತ್ತೇವೆ. ಆದರೆ ನಮ್ಮ ಮೂಲವನ್ನು ನಮಗೇ ಅರಿವಿಲ್ಲದಂತೆ ಬದಲಾಯಿಸಿ ಅವರ ಧಾರ್ಮಿಕತೆ ನಂಬಿಕೆಗಳನ್ನು ನಿಧಾನವಾಗಿ ನಮ್ಮವರೊಳಗೆ ತುರುಕಿ ನಮ್ಮತನವನ್ನೇ ಬದಲಿಸುತ್ತ ಬಂದಿರುವ ಬ್ರಾಹ್ಮಣ್ಯ ಹೇರಿಕೆ ಯಾರ ಅರಿವಿಗೂ ಬಂದಿಲ್ಲ, ಬಂದರೂ ಅದನ್ನು ಬಿಟ್ಟು ಕೊಡಲಾಗದಷ್ಟು ನಯವಾಗಿ ಜನರನ್ನು ಮಾನಸಿಕವಾಗಿ ಮತಾಂತರ ಮಾಡಲಾಗಿದೆ. ಹಾಗಾಗಿ ನಮ್ಮೊಳಗೇ ಕಿತ್ತಾಟಗಳು ಅಳಿಸಿಲ್ಲ. ತಮ್ಮ ಹೊಟ್ಟೆ ಹೊರೆಯುವುದಕ್ಕಾಗಿ ಅವರ ನಂಬಿಕೆಗಳನ್ನು ಇತರರೊಳಗೆ ತುರುಕಲಾಗಿದೆ. ಕೊಡವರದ್ದೂ ಮೂಲ ಪದ್ಧತಿ, ಪೂರ್ವಜರ ಮತ್ತು ಪ್ರಕೃತಿ ಆರಾಧನೆ ಕ್ರಮಗಳನ್ನು ಅಳಿಸಿಹೋಗುವಂತೆ ಮಾಡುತ್ತ ಬಂದಿರುವುದು ಇದೇ ಬ್ರಹ್ಮಣರ ಅಲೌಕಿಕ ಧಾರ್ಮಿಕತೆ. ಒಂದು ಜನಾಂಗದ ಆದಿಮಾನವ ಕಾಲದಿಂದಲೇ ಬಂದಿರುವ ಆಹಾರ ಕ್ರಮ, ಮಾಂಸಾಹಾರ, ಅದರಲ್ಲೂ ಹಂದಿಮಾಂಸ ಮತ್ತು ಮಧ್ಯದ ಬಗ್ಗೆ ತುಚ್ಚವಾಗಿ ನುಡಿಯುತ್ತಾರೆ ಈ ಧಾರ್ಮಿಕತೆಯವರು. ಇವರು ಬಟ್ಟೆಯೇ ತೊಡದ ಕಾಲದಲ್ಲಿ ಕೊಡಗಿನಂತಹ ಪ್ರದೇಶದಲ್ಲಿ ಮೈಬೆಚ್ಚಗಿರಿಸಿ ವಂಶ ಬೆಳಸಿ ಉಳಿದುಕೊಂಡಿರುವುದಲ್ಲದೆ, ಸಾಮಾನ್ಯ ಜ್ಞಾನವನ್ನೂ ಉಳಿಸಿಕೊಂಡು ಬಂದಿರುವ ಶ್ರಮ ಜೀವಿಗಳನ್ನು ಮುಂದಿಟ್ಟುಕೊಂಡೆ ತಮ್ಮ ಆದಿ ಮಾನವ ಪೂರ್ವಜರು ಹಾಗೆಯೇ ಇದ್ದರೆಂಬುದನ್ನು ಮರೆತು ತಮ್ಮ ಅಲೌಕಿಕ ತತ್ವಜ್ಞಾನವನ್ನು ಬೋಧಿಸುತ್ತ ಅದನ್ನು ಸುಸಂಸ್ಕೃತಿ ಎಂದು ಬಿಂಬಿಸುತ್ತಾರೆ. ಅಹಿಂಸಾವಾದ ಬೋಧಿಸಿದ ಮಹಾವೀರರಿಂದ ಬೆಳೆದ ಸಸ್ಯಾಹಾರ ಪದ್ಧತಿಯನ್ನು ತಮ್ಮದಾಗಿಸಿಕೊಂಡು ಸಸ್ಯಾಹಾರಿಗಳಾದ ಈ ಬ್ರಹ್ಮಣ ಪಂಡಿತರು.
ಇವರು ಸಿಂಧು ನಗರದಾಚಿನ ಅಲೌಕಿಕತೆಯ ಪರಂಪರೆ ಮತ್ತು ವೈದಿಕತೆ ಬಳಸಿ ಅದನ್ನು ಪ್ರಚುರ ಪಡಿಸುತ್ತ ಯುಗಗಳಿಂದ ದಾನ ದಕ್ಷಿಣಗಳಿಂದಲೇ ಜೀವನ ಕಟ್ಟಿಕೊಂಡು ಬಂದಿರುವ ಬ್ರಹ್ಮನ ಅನುಯಾಯಿಗಳು. (ಇವರು ನಾಲ್ಕು ಸಾವಿರ ವರ್ಷಗಳ ಹಿಂದೆ ಈಜಿಪ್ಟ್ ನಲ್ಲಿ ಇದ್ದಂತೆ ಮಗಳನ್ನೇ ಮದುವೆಯಾಗುತ್ತಿದ್ದವರು, ಯಜ್ಞ, ಯಾಗಗಳಿಗೆ ಬಲಿ ನೀಡುತ್ತಿದ್ದವರು).
ಸ್ಮಾರ್ಥ ಬ್ರಾಹ್ಮಣರು(ಬಸವಣ್ಣ ಸ್ಮಾರ್ಥ ಬ್ರಾಹ್ಮಣ ರಾಗಿದ್ದರು) (ಭರತ ಚಕ್ರವರ್ತಿಯ ತಂದೆ ವೃಷಭ ದೇವ ಅಥವಾ ಮಹಾದೇವನನ್ನು ಅರ್ಚಿಸುವ ವೇದಾಗಮ ಅಧ್ಯಯನ ಮಾಡಿಕೊಂಡಿರುವ ಅರ್ಚಕರು.., ಮಾದೇವ ಅಥವಾ ಮಹಾದೇವ ಯಾವುದೇ ಅಲೌಕಿಕ ದೇವರು ಅಲ್ಲ. ಭರತನ ಸಾಮ್ರಾಜ್ಯದಲ್ಲಿ ಶಿಲಾಯುಗವನ್ನು ಕೊನೆಗಾಣಿಸಿದ ಕರ್ಮ ಭೂಮಿ ಸ್ಥಾಪಕರು. ಅವರು ಪಶುಪಾಲನೆ, ಗುಡಿ ಕೈಗಾರಿಕೆ, ಬಾಳೆ ತೋಟ, ದನಗಳನ್ನು ಬಳಸಿ ಕೃಷಿ ಕೆಲಸ ಮಾಡುವಂತಹ ಸುಮಾರು 75 ರೀತಿಯ ವಿದ್ಯೆಗಳನ್ನು ಭರತನ ರಾಷ್ಟ್ರದ ಉದ್ದಗಲ 3000 ಜನಾಂಗದವರಿಗೆ, ಹತ್ತು ಹನ್ನೆರಡು ಸಾವಿರ ವರ್ಷಗಳ ಹಿಂದೆ ತೋರಿಸಿ, ಕಲಿಸಿ ಕೊಟ್ಟ ದೇವಮಾನವ. ಇಕ್ಷ್ವಾಕು ವಂಶ ಕೇಳಿದ್ದೀರಾ? ಶ್ರೀರಾಮಚಂದ್ರರ ಕುಲ. ಆತನ ಸುಮಾರು 30 ತಲೆ ಮಾರಿಗಿಂತ ಹಿಂದಿನ ಪೂರ್ವಜರಿಗೆ ಕಬ್ಬಿನ ಹಾಲು ತೆಗೆಯುವುದನ್ನು ಕಲಿಸಿದವನೂ ಇದೇ ಮಾದೇವ. ಆತನೇ ಮೊದಲ ಬಾರಿ ಪಶುಗಳನ್ನು ಕೊಂದು ತಿನ್ನದೆ ಕೃಷಿ, ಮನೆ ಕೆಲಸಗಳಿಗೆ ಬಳಸಲು ಕಲಿಸಿಕೊಟ್ಟವನು. ಪಶುಗಳನ್ನು ಯಜ್ಞ ಯಾಗಗಳಿಗೆ ಬಲಿ ಕೊಡದಂತೆ ಮಾಡಿದ ಆ ಮಹಾದೇವನನ್ನು ವಿನಾಶ ಕರ್ತನೆಂದು ಮೂರು ಮೂರ್ತಿಯರಲ್ಲಿ ನಾಶ ಮಾಡುವವನ ಜಾಗದಲ್ಲಿ ಇರಿಸಿದವರು ಇದೇ ಅಲೌಕಿಕ ಸಂಪ್ರದಾಯದ ವೈದಿಕ ಬ್ರಹ್ಮಣರು)
ಅಮ್ಮ ಕೊಡವರು, ಕಣಿಯರು ಇವರೆಲ್ಲರು ಅವೈದಿಕ ಲಿಪಿಕರ್ತೆ ಜ್ಞಾನದಾತೆಯಾಗಿದ್ದ ವೃಷಭದೇವನ ಮಗಳಾದ ಬ್ರಾಹ್ಮಿಯ ಅನುಯಾಯಿ ಬ್ರಾಹ್ಮಣರು. (ಇವರು ಪ್ರಪಥಮವಾಗಿ ವೃಷಭದೇವನ ಮಗ ಭರತ ಚಕ್ರವರ್ತಿ ಪರಿಚಯಿಸಿದ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಎಂಬ ವೃತ್ತಿ ಆಧಾರಿತ ವ್ಯವಸ್ಥೆಯಡಿ ಬಂದಂತಹವರು, ಬ್ರಾಹ್ಮಿ ಭರತನ ತಂಗಿ) ಆದುದರಿಂದಲೇ ನಾವೆಲ್ಲರು ತಾಯಿಗೆ/ಭಗವತಿಗೆ ಗೌರವ ನೀಡುವಂತಹ ಸಂಸ್ಕಾರವನ್ನು ಪಾಲಿಸುತ್ತೇವೆ. ನಮ್ಮಲ್ಲಿ ಅವೈದಿಕರ ಕ್ಷಾತ್ರ ಪರಂಪರೆಯಿದೆ. ಮಾದೇವನನ್ನು ಆರಾಧಿಸುತ್ತೇವೆ. ಅದರಂತೆಯೇ ಮನುಷ್ಯರ ಹಾಗೆ ದುಡಿಯುವ ಹಸು, ಕರು, ದನಗಳನ್ನು ಕೊಲ್ಲುವುದೂ ಇಲ್ಲ, ತಿನ್ನುವುದೂ ಇಲ್ಲ.
ಈ ಅಲೌಕಿಕ ನಂಬಿಕೆಯವರ ಧಾರ್ಮಿಕತೆ ಗೂ ಮತ್ತು ಲೌಕಿಕವಾದಿಗಳ ಆಧ್ಯಾತ್ಮ ಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಧಾರ್ಮಿಕತೆ ಎಂಬುದು ಯಾವುದೇ ವೈಜ್ಞಾನಿಕತೆಯ ಅರಿವಿಗೆ ಬಾರದಂತಹ ನಂಬಿಕೆಯ ಒಳಗೆ ಜನರನ್ನು ಕಟ್ಟಿಹಾಕುತ್ತದೆ.
ಆಧ್ಯಾತ್ಮ (ಆದಿ+ಆತ್ಮ)ವು ತನ್ನನ್ನು ತಾನು ಅರಿತುಕೊಳ್ಳುವುದು, ತನ್ನ ಸುತ್ತಮುತ್ತ ಇರುವವರನ್ನು, ಇರುವಂತಹದನ್ನು ಮತ್ತು ಜೀವಂತ ಇರುವ ಪ್ರಕೃತಿ (law of attraction, alive Universal energy & law) ಇತ್ಯಾದಿಗಳ ಬಗ್ಗೆ ಅರಿತುಕೊಂಡು ಕೃತಜ್ಞತೆ ಸಲ್ಲಿಸುವಂತಹ ಕಾರ್ಯ ಮಾಡಿಸುತ್ತದೆ.
ಅಲೌಕಿಕ ದೇವರ ಅಸ್ತಿತ್ವ ನಂಬದಿದ್ದ ತೀರ್ಥಂಕರರು, ಮಹಾವೀರ, ಬುದ್ಧ, ಚಾರ್ವಕಂಗಳಂತಹವರು ಪಾಲನೆ ಮಾಡಿರುವುದು ಇದೇ ಆಧ್ಯಾತ್ಮ.
ಅದನ್ನೂ ಚೆನ್ನಾಗಿ ಅರಿತುಕೊಂಡು ತನ್ನದು ಮಾಡಿಕೊಂಡು, ನಿಮ್ಮನ್ನು ನಿಮ್ಮದಲ್ಲದ ನಂಬಿಕೆಯೊಳಗೆ ಜ್ಞಾನ, ತಾಂತ್ರಿಕ ವಿದ್ಯೆ, ದೇವರ ಬೋಧನೆ ಎಂದೆಲ್ಲ ಇನ್ನೂ ಗಟ್ಟಿಯಾಗಿ ದೃಢವಾದ ಮಾತುಗಳಿಂದಲೇ ಜನರನ್ನು ಬಂಧಿಸಿ ಮತ ಧರ್ಮ ಸಂಪ್ರದಾಯ ಪಾಲನೆ ಮಾಡಿಕೊಂಡು ಬಂದಂತಹವರು ಇವರನ್ನು ಅನುಸರಿಸಿದ ಧಾರ್ಮಿಕತೆಯವರು. ಕಣ್ಮುಚ್ಚಿ ಇಂತಹ ಧಾರ್ಮಿಕತೆಯ ಅನುಯಾಯಿಗಳಾದ ಯಾರಿಗೇ ಆದರೂ ಸುಲಭವಾಗಿ ವಾಸ್ತವಗಳನ್ನು ಅರಿಗಿಸಿಕೊಳ್ಳಲಾಗುವುದಿಲ್ಲ.