
ಸೋಮವಾರಪೇಟೆ, ಜ.08: ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಘೋಷಿಸಿರುವ, ಮಲ್ಲಳ್ಳಿ ಫಾಲ್ಸ್ ಬಹುಕೋಟಿ ರೋಪ್ ವೇ ಯೋಜನೆಯನ್ನು ರೈತರು ವಿರೋಧಿಸಬೇಕೆಂದು, ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್ ಕರೆ ನೀಡಿದ್ದಾರೆ.
ಪುಷ್ಪಗಿರಿ ವ್ಯಾಪ್ತಿಯಲ್ಲಿ ಬರುವ ಮಲ್ಲಳ್ಳಿ ಜಲಪಾತತ ಸುತ್ತಲ ಗ್ರಾಮಸ್ಥರು, ಸಿ & ಡಿ ಹಕ್ಕುಪತ್ರಕ್ಕಾಗಿ ದಶಕಗಳಿಂದ ಹೋರಾಡುತ್ತಿದ್ದಾರೆ. ರೈತರಿಗೆ ಹಕ್ಕುಪತ್ರ ನೀಡದೆ ಅರಣ್ಯ ಇಲಾಖೆಯಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ. ಆದರೆ ಇದೇ ಸಿ & ಡಿ ವ್ಯಾಪ್ತಿಗೆ ಬರುವ ಮಲ್ಲಳ್ಳಿಯಲ್ಲಿ ರೋಪ್ವೇ ಮೂಲಕ ಪ್ರವಾಸೋದ್ಯಮದಿಂದ ಹಣಗಳಿಸಲು, ಸರ್ಕಾರ ನೂರಾರು ಕೋಟಿ ಘೋಷಣೆ ಮಾಡಿದೆ. ರೈತರು ಕೃಷಿ ಮಾಡಲು ಅಡ್ಡಿಪಡಿಸುವ ಅರಣ್ಯ ಇಲಾಖೆ ಪ್ರವಾಸೋದ್ಯಮಕ್ಕೆ ಸದರಿ ಜಾಗ ಬಳಕೆಗೆ ಹೇಗೆ ಅವಕಾಶ ನೀಡಲಿದೆ ಎಂದು ಪ್ರಶ್ನಿಸಿರುವ ಅನಿಲ್ ಅವರು, ಮೊದಲು ರೈತರಿಗೆ ಹಕ್ಕು ಪತ್ರ ನೀಡಿ ಆಮೆಲೆ ಯೋಜನೆಗೆ ಕೈ ಹಾಕಿ ಎಂದು ಆಗ್ರಹಿಸಿದ್ದಾರೆ.