
ಮೂರ್ನಾಡ್, ಮಾ.21:- ಕನ್ನಡ ಮತ್ತು ಕೊಡ ಭಾಷೆಯ ಹೆಸರಾಂತ ಚಿತ್ರ ನಿರ್ಧೇಶಕ,ನಟ , ನಿರ್ಮಾಪಕ ಆಪಾಡಂಟ ಟಿ. ರಘು ಅವರ ನಿಧನಕ್ಕೆ ಕೊಡವ ಭಾಷಿಕ ಸಮಾಜ ಸಂತಾಪ ಸೂಚಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕೊವಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಶ್ ನಾಣಯ್ಯ ಅವರು, ಎ.ಟಿ. ರಘು ಎಂದೇ ಖ್ಯಾತರಾಗಿದ್ದ, ಆಪಾಡಂಡ ರಘು ಅವರು, ಕನ್ನಡ ಮತ್ತು ಕೊಡವ ಸಾರಸ್ವತ ಲೀಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು, ಅವರ ದುಡಿಮೆ, ವೃತ್ತಿಯಲ್ಲಿನ ಬದ್ದತೆ, ಕಾಳಜಿ ಮತ್ತು ಸ್ನೇಹಪರ ನಡತೆಗಳನ್ನು ಎಂದಿಗೂ ಮರೆಯಲು ಸಾದ್ಯವಿಲ್ಲ ಎಂದಿದ್ದಾರೆ. ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ತಾನು, ಅವರು ಕೊಡಗಿನಲ್ಲಿ ಕೊಡವ ದಾರವಾಹಿಗಳ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಹಲವು ಭಾರಿ ಭೇಟಿಯಾಗಿ ಮಾತನಾಡುತ್ತಿದ್ದೆ, ಅವರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿಯೂ, ಇತ್ತೀಚಿಗಿನ ವರೆಗೂ ದೂರವಾಣಿ ಸಂಪರ್ಕದಲ್ಲಿದ್ದು ಮಾತನಾಡುತಿದ್ದೆ, ಅವರ ಜೀವನ ಪ್ರತಿಯೊಬ್ಬ ಕಲಾಭಿಮಾನಿಗಳಿಗೂ ಪ್ರೇರಣೆಯಾಗಬೇಕು, ಅಗಲಿದ ದಿವ್ಯಾತ್ಮಕ್ಕೆ ಮೋಕ್ಷ ದೊರಕಲಿ ಎಂದು, ಸಮಸ್ಥ ಕೊವ ಭಾಷಿಕ ಸಮುದಾಯಗಳ ಪರ ಸಂತಾಪ ಸೂಚಿಸಿದ್ದಾರೆ.