https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೇರಳದಿಂದ ಬರುತ್ತಿರುವ, 31 ಆಹಾರ ಉತ್ಮನ್ನಗಳು ಅಸುರಕ್ಷಿತ ಎಂದು ದೃಡಪಡಿಸಿದ IADFAC ವರದಿ. ಈ ಎಲ್ಲಾ ಆಹಾರ ಪದಾರ್ಥಗಳನ್ನು ನಿಷೇಧಿಸಿ, ಮಾರಾಟ ತಡೆಯಲು,  ಶಾಸಕ ಎ.ಎಸ್ ಪೊನ್ನಣ್ಣ ಸೂಚನೆ…

ಕೇರಳದಿಂದ ಬರುತ್ತಿರುವ, 31 ಆಹಾರ ಉತ್ಮನ್ನಗಳು ಅಸುರಕ್ಷಿತ ಎಂದು ದೃಡಪಡಿಸಿದ IADFAC ವರದಿ. ಈ ಎಲ್ಲಾ ಆಹಾರ ಪದಾರ್ಥಗಳನ್ನು ನಿಷೇಧಿಸಿ, ಮಾರಾಟ ತಡೆಯಲು,  ಶಾಸಕ ಎ.ಎಸ್ ಪೊನ್ನಣ್ಣ ಸೂಚನೆ…

Uncategorized
05/11/202405/11/2024nadubadenews@gmail.comLeave a Comment on ಕೇರಳದಿಂದ ಬರುತ್ತಿರುವ, 31 ಆಹಾರ ಉತ್ಮನ್ನಗಳು ಅಸುರಕ್ಷಿತ ಎಂದು ದೃಡಪಡಿಸಿದ IADFAC ವರದಿ. ಈ ಎಲ್ಲಾ ಆಹಾರ ಪದಾರ್ಥಗಳನ್ನು ನಿಷೇಧಿಸಿ, ಮಾರಾಟ ತಡೆಯಲು,  ಶಾಸಕ ಎ.ಎಸ್ ಪೊನ್ನಣ್ಣ ಸೂಚನೆ…
Spread the love
ಕೇರಳದಿಂದ ಬರುತ್ತಿರುವ, 31 ಆಹಾರ ಉತ್ಮನ್ನಗಳು ಅಸುರಕ್ಷಿತ ಎಂದು ದೃಡಪಡಿಸಿದ IADFAC ವರದಿ. ಈ ಎಲ್ಲಾ ಆಹಾರ ಪದಾರ್ಥಗಳನ್ನು ನಿಷೇಧಿಸಿ, ಮಾರಾಟ ತಡೆಯಲು,  ಶಾಸಕ ಎ.ಎಸ್ ಪೊನ್ನಣ್ಣ ಸೂಚನೆ…

ವಿರಾಜಪೇಟೆ, ನ.05: ಕೊಡಗಿನೆಲ್ಲೆಡೆ ಮಾರಾಟವಾಗುತ್ತಿರುವ ಅಶುರಕ್ಷಿತ ಆಹಾರ ಉತ್ಪನ್ನಗಳ ಮಾರಾಟವನ್ನು ತಕ್ಷಣದಿಂದ ನಿಷೇದಿಸುವಂತೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ, ವಿರಪೇಟೆ ಶಾಸಕರೂ ಅಗಿರುವ, ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಅಂಕಿತ ಅಧಿಕಾರಿಗಳಿಗೆ ಸೂಚಿಸಿದರು.

  ಸಾರ್ವಜನಿಕರ ದೂರು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳ ಆಧಾರದಂತೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕೊಡಗು ಜಿಲ್ಲೆಯ, ಅಧಿಕಾರಿಗಳೊಂದಿಗೆ ವಿಧಾನ ಸೌಧ ಕಚೇರಿಯಲ್ಲಿ ತುರ್ತುಸಭೆ ನಡೆಸಿದ ಶಾಕರು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದರು.

   ಕೊಡಗು ಮತ್ತು ಕೇರಳ ಗಡಿಬಾಗವಾದ ಕುಟ್ಟ, ಮಾಕುಟ್ಟ ಮತ್ತು ಪೆರುಂಬಾಡಿ ವ್ಯಾಪ್ತಿಯಲ್ಲಿ ಕೇರಳದ ಆಹಾರ ಪದಾರ್ಥಗಳು ಸರಬರಾಜುವಾಗುತ್ತಿದ್ದು. ಆಹಾರ ಪದಾರ್ಥಗಳಲ್ಲಿ ತಯಾರಿಕಾ ದಿನಾಂಕ ಹಾಗೂ ತಯಾರಿಸುವವರ ವಿವರ, ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಕೃತಕ ಬಣ್ಣಗಳನ್ನು ಸೇರಿಸಿರುವುದರ ಬಗ್ಗೆ, 90 ಆಹಾರ ಪದಾರ್ಥಗಳನ್ನು ವಿಶ್ಲೇಷಣೆಗಾಗಿ (IADFAC) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿಗಳಲ್ಲಿ 31 ಆಹಾರ ಮಾದರಿಗಳು ಅಸುರಕ್ಷಿತವೆಂದು, 4 ಆಹಾರ ಮಾದರಿಯಲ್ಲಿ ಕಡಿಮೆ ಗುಣಮಟ್ಟವಿದೆ ಎಂದು ದೃಢವಾಗಿರುತ್ತದೆ ಎಂದು ಅಂಕಿತ ಅಧಿಕಾರಿಗಳು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಶ್ರೀ ಎ. ಎಸ್ ಪೊನ್ನಣ್ಣ ರವರಿಗೆ ವಿವರಿಸಿದರು.

 ಇದು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾನ್ಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಕೂಡಲೇ ಅಸುರಕ್ಷಿತವಾದ ಆಹಾರ ಪದಾರ್ಥಗಳನ್ನು ನಿಷೇಧಿಸಿ, ಹಾಗೂ ಅಂತಹ ಆಹಾರ ಪದಾರ್ಥಗಳನ್ನು ಮಾರಟ ಮಾಡದಂತೆ ತಡೆಯಲು ಅಧಿಕಾರಿಗಳಿಗೆ ಸೂಚಿಸಿದರು.

  ಈ ಸಂದರ್ಭದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕೊಡಗು ಜಿಲ್ಲೆ ಮಡಿಕೇರಿ. ಅಂಕಿತಾಧಿಕಾರಿಗಳಾದ ಡಾ|| ಅನಿಲ್ ದಾವನ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Post navigation

ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌
ನಡುಬಾಡೆಕ್‌ ನಲ್ಲಾಮೆ ಬಯಂದ, ಚೆಕ್ಕೇರ ಚಂದ್ರಪ್ರಕಾಶ್‌…

Related Posts

ದೇಶ ದ್ರೋಹಿ ವಿದ್ಯಾಧರನ ವಿರುದ್ದ ಕಠಿಣ ಕ್ರಮವಾಗದಿದ್ದರೆ, ಉಪವಾಸ ಸತ್ಯಾಗ್ರಹ:  ಮಡಿಕೇರಿಯಲ್ಲಿ ಮಾಜೀ ಸೈನಿಕರ ಎಚ್ಚರಿಕೆ

ದೇಶ ದ್ರೋಹಿ ವಿದ್ಯಾಧರನ ವಿರುದ್ದ ಕಠಿಣ ಕ್ರಮವಾಗದಿದ್ದರೆ, ಉಪವಾಸ ಸತ್ಯಾಗ್ರಹ:  ಮಡಿಕೇರಿಯಲ್ಲಿ ಮಾಜೀ ಸೈನಿಕರ ಎಚ್ಚರಿಕೆ

06/12/202406/12/2024nadubadenews@gmail.com
ಹುತಾತ್ಮ ಯೋಧ  ದಿವೀನ್‌ ಪಾರ್ಥಿವ ಶರೀರ ಬರಮಾಡಿಕೊಂಡ ಸಂಸದ, ಯಧುವೀರ್‌ ಒಡೆಯರ್

ಹುತಾತ್ಮ ಯೋಧ ದಿವೀನ್‌ ಪಾರ್ಥಿವ ಶರೀರ ಬರಮಾಡಿಕೊಂಡ ಸಂಸದ, ಯಧುವೀರ್‌ ಒಡೆಯರ್

31/12/202431/12/2024nadubadenews@gmail.com
ಸೋಮವಾರಪೇಟೆ ಸಮಾಜತ್‌, 25ಕ್‌  ಅಯಿಂಬದಾಂಡ ಪೊನ್ನ್‌ ನಮ್ಮೆ

ಸೋಮವಾರಪೇಟೆ ಸಮಾಜತ್‌, 25ಕ್‌  ಅಯಿಂಬದಾಂಡ ಪೊನ್ನ್‌ ನಮ್ಮೆ

22/12/202422/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us