ಕುಶಾಲನಗರ, ಮಾ.11: ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಕೊಡಗ ಜಿಲ್ಲಾಘಟಕದ ಅದೀನನದಲ್ಲಿ ಬರುವ ಕುಶಾಲನಗರ ತಾಲೂಕು ಘಟಕದ ಪದಾಧಿಕಾರಿಗಳನ್ನು ಜಿಲ್ಲಾದ್ಯಕ್ಷರಾದ ಚಾಮೆರ ದಿನೇಶ್ಬೆಳ್ಯಪ್ಪ ಅವರ ನಿರ್ದೇಶನದ ಮೇರೆ, ಜಿಲ್ಲಾ ಸಮಿತಿಯ ಅನುಮೋದನೆಯೊಂದಿಗೆ, ಈ ಕೆಳಗಿನಂತೆ ಆಯ್ಕೆಮಾಡಲಾಗಿದೆ ಎಂದು ಕುಶಾಲನಗರ ಘಟಕಾಧ್ಯಕ್ಷರಾದ ಚೈತನ್ಯ ಸಿ ಮೋಹನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಂತೆ, ಉಪಾಧ್ಯಕ್ಷರಾಗಿ ಪ್ರಸನ್ನ ಬಿ.ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಕಾವ್ಯ ಗೌಡ, ಸದಸ್ಯರುಗಳಾಗಿ, ಹೇಮಂತ್ ಕುಮಾರ್ ಜೆ ಎಸ್, ರಾಮಚಂದ್ರ, ಧರಣಿ ಸೋಮಯ್ಯ, ಕೃತಿಕ ರಾಣಿ ವಿ. ಎಸ್, ದರ್ಶನ್ ಹೆಚ್. ಜೆ, ಶಿಶಿರ ಟಿ. ಪಿ, ಹಾಗೂ ಜಿಲ್ಲಾ ಸದಸ್ಯರಾಗಿ ವಿನ್ಸೆಂಟ್ ವಿನೋದ್ ಅವರುಗಳು ಆಯ್ಕೆಗೊಂಡಿದ್ದಾರೆಂದು ಅವರು ತಿಳಿಸಿದ್ದಾರೆ.