Site icon nadubadenews.com

ಕರಾಮಸಾಪ ತಾಲೂಕು ಅಧ್ಯಕ್ಷರುಗಳ ನೇಮಕ

ಕರಾಮಸಾಪ ತಾಲೂಕು ಅಧ್ಯಕ್ಷರುಗಳ ನೇಮಕ
Spread the love
ಕರಾಮಸಾಪ ತಾಲೂಕು ಅಧ್ಯಕ್ಷರುಗಳ ನೇಮಕ

ವಿರಾಜಪೇಟೆ, ಫೆ.24: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ಕೊಡಗು ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರನ್ನು ನೇಮಕಮಾಡಿ, ಜಿಲ್ಲಾ ಅಧ್ಯಕ್ಷ ಚಾಮೆರ ದಿನೇಶ್‌ ಬೆಳ್ಯಪ್ಪ ಅವರು ಆದೇಶಿಸಿದ್ದಾರೆ.

          ಕೊಡಗು ಜಿಲ್ಲೆಯ ಎಲ್ಲಾ ಐದೂ ತಾಲೂಕುಗಳ ಪೈಕಿ, ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಪಾಲೇರ ಮಂದಣ್ಣ, ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಅಪ್ಪುಡ ಸುದೀಶ್‌ಕುಶಾಲಪ್ಪ, ವಿರಾಜಪೇಟೆ ತಾಲೂಕು ಅಧ್ಯಕ್ಷರಾಗಿ ವಿಜಯ್‌ ಪೂಜಾರಿ, ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ಬೊಟ್ಟಂಗಡ ಸುಮನ್‌ ಸೀತಮ್ಮ, ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಕು. ಸಿಂಚನ ಸಿ.ಮೋಹನ್‌ ಅವರುಗಳನ್ನು ಆಯ್ಕೆ ಮಾಡಲಾಗಿದ್ದು, ತಕ್ಷಣದಿಂದ ತಾಲೂಕು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡಂತೆ ಸದಸ್ಯರನ್ನು ನೇಮಿಸಿ, ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್‌ ಬೆಳವಣಿಗೆಗೆ ಪೂರಕ ಕಾರ್ಯಯೋಜನೆ ಸಿದ್ದಪಡಿಸುವಂತೆ ತಿಳಿಸಲಾಗಿದೆ ಎಂದು ಚಾಮೆರ ದಿನೇಶ್‌ ಬೆಳ್ಯಪ್ಪ ಹೇಳಿದ್ದಾರೆ.  

Exit mobile version