https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಇದು ಅಲ್ಪ ಸಂಖ್ಯಾತರ ಬಡ್ಜೆಟ್‌ : ನೆಲ್ಲಿರ ಚಲನ್‌ ಕುಮಾರ್‌  

ಇದು ಅಲ್ಪ ಸಂಖ್ಯಾತರ ಬಡ್ಜೆಟ್‌ : ನೆಲ್ಲಿರ ಚಲನ್‌ ಕುಮಾರ್‌  

News, Informatin , Enteetinement and Advertisement
07/03/202507/03/2025nadubadenews@gmail.comLeave a Comment on ಇದು ಅಲ್ಪ ಸಂಖ್ಯಾತರ ಬಡ್ಜೆಟ್‌ : ನೆಲ್ಲಿರ ಚಲನ್‌ ಕುಮಾರ್‌  
Spread the love
ಇದು ಅಲ್ಪ ಸಂಖ್ಯಾತರ ಬಡ್ಜೆಟ್‌ : ನೆಲ್ಲಿರ ಚಲನ್‌ ಕುಮಾರ್‌  

ಬಿರುನಾಣಿ, ಮಾ.07:  ಇಂದು ಸಿದ್ದರಾಮಯ್ಯ ಅವರು ಮಂಡಿಸಿರುವುದು, ರಾಜ್ಯ ಸರ್ಕಾರದ ಬಡ್ಜೆಟ್‌ ಅಲ್ಲ ಬದಲಿಗೆ ಅಲ್ಪಸಂಕ್ಯಾತರ ಬಡ್ಜೆಟ್‌ ಎಂದು ಬಾಜಪಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್‌ ಕುಮಾರ್‌ ಅಭಿಪ್ರಾಯಿಸಿದ್ದಾರೆ.

          ಸಿದ್ದರಾಮಯ್ಯ ಮುಖ್ಯ ಮಂತ್ರಿ ಆದಾಗಿನಿಂದಲೇ ಅಲ್ಪ ಸಂಖ್ಯಾತರ ಶುಕ್ರದೆಸೆ ಪ್ರಾರಂಭವಾಗಿದೆ. ಅವರಿಂದ ಈ ಘೋಷಣೆಗಳು ನಿರೀಕ್ಷಿತವೇ ಆಗಿತ್ತು, ಜನರ ಕಲ್ಯಾಣ ಮಾಡಲು, ರಾಜ್ಯದ ಅಭಿವೃದ್ದಿ ಮಾಡಲು ಅನುದಾನದ ಕೊರತೆ ಇರುವ ಸಿದ್ದರಾಮಯ್ಯ ಅವರಿಗೆ ಮುಂದಿನ ಕಾಂಗ್ರೆಸ್‌ ಓಟ್‌ ಬ್ಯಾಂಕ್‌ ಗಟ್ಟಿಗೋಳಿಸಲು  ಒಂದು ವರ್ಗದ ಓಲೈಕೆ ಅನಿವಾರ್ಯವಾಗಿತ್ತು. ಹಾಗಾಗಿ ಈ ಘೋಷಣೆಗಳನ್ನು ಮಾಡಿದ್ದು, ದುರಂತ ಎಂದರೆ ಅವರಿಗೂ ಘೋಷಿಸಿರುವ ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಸರ್ಕಾರದ ಬೊಕ್ಕಸದಲ್ಲಿ ಹಣವೇ ಇಲ್ಲ. ಹೀಗಿರುವಾಗ ಮತ್ತೊಮ್ಮೆ ಅಲ್ಪ ಸಂಖ್ಯಾತರನ್ನು ಮರಳು ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದರೆ ಎಂದು  ಟೀಕಿಸಿದ್ದಾರೆ.

          ಕೊಡಗಿನ ವಿಚಾರಕ್ಕೆ ಬಂದರೆ, ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ಆಗುತ್ತಿಲ್ಲ,  ಹಿಂದಿನ ಬಿಜೆಪಿ ಸರ್ಕಾರದ ಅನುದಾನವನ್ನು ಉದ್ಘಾಟಿಸುವುದು ಬಿಟ್ಟರೆ ಈಗಿನ ಶಾಸಕರ ಅನುದಾನ ಸೊನ್ನೆ ಎಂದಿರುವ ನೆಲ್ಲಿರ ಚಲನ್‌ ಅವರು, ಈ ಮುಂಗಡ ಪತ್ರದಲ್ಲಿಯೂ ಕೊಡಗಿಗೆ  ಹೇಳಿಕೊಳ್ಳಲಾದರೂ ಯಾವುದಾದರೊಂದು ಯೋಜನೆಯನ್ನು ಘೋಷಿಸ ಬಹುದಿತ್ತು ಆದರೆ, ಸಿದ್ದರಾಮಯ್ಯ ತಾನು ಕೊಡಗಿನ ವಿರೋಧಿ ಎನ್ನುವುದನ್ನು, ಕೊಡಗಿಗೆ ಬಡ್ಜೆಟ್ಟ್‌ನಲ್ಲಿ ಶೂನ್ಯ ಘೋಷಣೆಯೊಂದಿಗೆ ಮತ್ತೊಮ್ಮೆ ಸಾಭೀತು ಮಾಡಿದ್ದಾರೆ. ಇದು ನಿರೀಕ್ಷತ  ನೀರಸ ಬಜೆಟ್‌ ಎಂದಿದ್ದಾರೆ.

Post navigation

ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಗೆ ಪೂರಕ ಬಡ್ಜೆಟ್ : ಸಂಕೇತ್ ಪೂವಯ್ಯ
ಬಡ್ಚೆಟ್‌ ಅಲ್ಲ ಓಲೈಕೆ ಪತ್ರ: ಮಹೇಶ್‌ ತಿಮ್ಮಯ್ಯ

Related Posts

‌              ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ…

10/05/202510/05/2025nadubadenews@gmail.com
ಸಾಧಕಿ ನಿಧಿ ಅವರನ್ನು ಸನ್ಮಾನಿಸಿದ ಶಾಸಕ ಡಾ. ಮಂಥರ್‌ ಗೌಡ

ಸಾಧಕಿ ನಿಧಿ ಅವರನ್ನು ಸನ್ಮಾನಿಸಿದ ಶಾಸಕ ಡಾ. ಮಂಥರ್‌ ಗೌಡ

23/06/202523/06/2025nadubadenews@gmail.com
ಕಾಡಾನೆ ಸೆರೆಗೆ ಅನುಮತಿ ನೀಡುವಂತೆ  ಮುಖ್ಯಮಂತ್ರಿಗೆ ಶಾಸಕ ಪೊನ್ನಣ್ಣ ಮನವಿ ಸಂಕೇತ್ ಪೂವಯ್ಯ ಹೇಳಿಕೆ…

ಕಾಡಾನೆ ಸೆರೆಗೆ ಅನುಮತಿ ನೀಡುವಂತೆ  ಮುಖ್ಯಮಂತ್ರಿಗೆ ಶಾಸಕ ಪೊನ್ನಣ್ಣ ಮನವಿ ಸಂಕೇತ್ ಪೂವಯ್ಯ ಹೇಳಿಕೆ…

22/05/202522/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version