ವಿರಾಜಪೇಟೆ, ಫೆ.13: ಕೊಡವ ನ್ಯಾಷನಲ್ ಕೌನ್ಸಿಲ್ ಸಂಸತ್ತು ಮತ್ತು ವಿಧಾನ ಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶೇಷ ಮತ್ತು ಶಾಶ್ವತ ಪ್ರಾತಿನಿಧ್ಯಕ್ಕಾಗಿ ನಾಳೆ ಕೊಡಗು ಜಿಲ್ಲಾಧಿಕಾರಿ ಕಛೇರಿ ಎದುರು ಸಾಂಕೇತಿಕ ಸತ್ಯಾಗ್ರಹ ನಡೆಸಲಿದೆ ಎಂದು ಸಂಘಟನೆಯ ನಾಯಕ, ನಂದಿನೆರವಂಡ ನಾಚಪ್ಪಕೊಡವ ಹೇಳಿದ್ದಾರೆ.
ಸಿಕ್ಕಿಂನ “ಸಂಘ” ವರ್ಚುವಲ್-ಅದೃಶ್ಯ (ಅದೃಶ್ಯ) ಕ್ಷೇತ್ರಕ್ಕೆ ಪರ್ಯಾಯವಾಗಿ, ಕೊಡವ ಸಾಂಪ್ರದಾಯಿಕ ಆವಾಸಸ್ತಾನಕ್ಕೆ ವಿಶೇಷ ರಾಜಕೀಯ ಪ್ರತಿನಿಧಿ ಕ್ಷೇತ್ರವನ್ನು ಸೃಜಿಸಲು ಸಿಎನ್ಸಿ ಒತ್ತಾಯಿಸುತ್ತದೆ. ಈ ಹಕ್ಕೊತ್ತಾಯವು ಕೊಡವಲ್ಯಾಂಡ್ನ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವ-ಆಡಳಿತ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳಿಗಾಗಿ ಅವರ ವಿಸ್ತ್ರತ ಹಾಗೂ ಬೃಹತ್ ಹೋರಾಟದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
2026ರ ಡಿಲಿಮಿಟೇಶನ್ ಕಸರತ್ತು ಆದಿಮಸಂಜಾತ ಕೊಡವರನ್ನು ಮೂಲೆಗುಂಪು ಮಾಡಬಹುದೆಂದು ಸಿಎನ್ಸಿ ಕಳವಳ ವ್ಯಕ್ತಪಡಿಸಿದೆ, ಏಕೆಂದರೆ ಕೊಡವ ವಿರೋಧಿ ಅಂಶಗಳು ಮತ್ತು ಕೂಟಗಳು ಸುಳ್ಯ ತಾಲೂಕನ್ನು ಸೇರಿಸಲು ಸಂಚು ಹೂಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ, ಈ ಕ್ರಮವು ರಾಜ್ಯದ ಬಲಾಡ್ಯ ಜನಸಂಖ್ಯೆ ಬಹುವುಳ್ಯದ ಶಾಖೆಗಳಾದ ತುಳುವ ಗೌಡ ಸಮುದಾಯದ ಶಾಶ್ವತ ಪ್ರಾತಿನಿಧ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕವಾಗಿ, ಕೊಡವರು 1946 ರಿಂದ 1950 ರವರೆಗೆ ಭಾರತದ ಸಂವಿಧಾನ/ರಾಜ್ಯಾಂಗ ಘಟನಾ ಸಭೆಯಲ್ಲಿ ಪ್ರಾತಿನಿಧ್ಯವನ್ನು ಹೊಂದಿದ್ದರು ಆದರೆ ನಮ್ಮ ತಾಯ್ನಾಡಿನ ವಿಲೀನದ ನಂತರ ಈ ಹಕ್ಕನ್ನು ಕಳೆದು ಕೊಂಡೆವು, ಅತೀ ಕಡಿಮೆ ಜನಸಂಖ್ಯೆಯ ಹೊರತಾಗಿಯೂ, ಕೊಡವರು ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರ-ನಿರ್ಮಾಣಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಸರ್ಕಾರವು ನಮ್ಮ ಶಾಶನ ಬದ್ದ ಹಕ್ಕನ್ನು ನಮಗೆ ವಿಳಂಬವಿಲ್ಲದೆ ನೀಡಬೇಕೆಂದು ಆಗ್ರಹಿಸುವುದಾಗಿ ಅವರು ಹೇಳೀದ್ದಾರೆ.
ಸಂಸತ್ತು ಮತ್ತು ಅಸೆಂಬ್ಲಿಯಲ್ಲಿ, ಸಿಕ್ಕಿಂನ “ಸಂಘ” ಅಮೂರ್ತ (ವಾಸ್ತವ-ಅದೃಶ್ಯ) ಕ್ಷೇತ್ರವನ್ನು ಹೋಲುವ ಕೊಡವರ ಸಾಂಪ್ರದಾಯಿಕ ಆವಾಸಸ್ಥಾನದ ಪರಿಧಿಯಲ್ಲಿ ಕೊಡವರಿಗೆ ಪ್ರತ್ಯೇಕ ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಯಲ್ಲಿ ಪ್ರಾತಿನಿಧ್ಯ ಬೇಕು.
ಕೊಡವಲ್ಯಾಂಡ್ಗೆ ಸಂವಿಧಾನದ 244 ಮತ್ತು 371ನೇ ವಿಧಿಯ ಅಡಿಯಲ್ಲಿ ಸ್ವಾಯತ್ತತೆ ಬೇಕು.
ವಿಶ್ವ ರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕೊಡವರನ್ನು ಪರಿಗಣಿಸಬೇಕು.
ಸಂವಿಧಾನದ 340-342 ವಿಧಿಗಳ ಅಡಿಯಲ್ಲಿ ಆದಿಮಸಂಜಾತ ಕೊಡವರಿಗೆ ಪ್ರಾಚೀನ ಬುಡಕಟ್ಟು ವರ್ಗೀರಣ ಬೇಕು.
ಈ ಎಲ್ಲಾ ಉದ್ದೇಶಗಳ ಈಡೇರಿಕೆಗಾಗಿ ಸಿಎನ್ಸಿಯು ಹಲವು ವರ್ಷಗಳಿಂದ ಹೋರಾಡುತ್ತಾ ಬರುತಿದ್ದು, ನಮ್ಮ ಶಾಶನ ಬದ್ದಹಕ್ಕಿಗಾಗಿ ಮತ್ತಷ್ಟು ಒತ್ತಡ ತರಲು, ಮುಂದಿನ ದಿನಗಳಲ್ಲಿ ವರ್ಷವಿಡೀ ಜನಜಾಗೃತಿ, ಮಾನವ ಸರಪಳಿ ಕಾರ್ಯಾಗಾರಗಳನ್ನು ನಡೆಸಲಾಗುವುದು ಇಂದಿರುವ ನಾಚಪ್ಪ ಅವರು, ಇದಕ್ಕೆ ಪೂರಕವಾಗಿ ನಾಳೆ, ಜಿಲ್ಲಾಧಿಕಾರಿಳ ಮೂಲಕ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಗೃಹ ಸಚಿವರು, ರಾಜ್ಯಪಾಲರು, ಮುಕ್ಯಮಂತ್ರಿ, ಹೆಸರಾಂತ ಕಾನೂನು ಮತ್ತು ಆರ್ಥಿಕ ತಜ್ಞ ಡಾ. ಸುಬ್ರಮಣಿಯನ್ ಸ್ವಾಮಿ, ಅವರಿಗೂ ಮನವಿ ಪತ್ರ ರವಾನಿಸಲಾಗುವುದು ಎಂದು ನಂದಿನೆರವಂಡೆ ನಾಚಪ್ಪ ಹೇಳಿದ್ದಾರೆ.