ಪಾಲಂಗಾಲ, ಜ:04: (ಕರಿನೆರವಂಡ ಡ್ಯಾನಿ ಕುಶಾಲಪ್ಪ) ಕೆದಮುಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಸತತ ಎರಡನೇ ಭಾರಿಗೆ ಅಧ್ಯಕ್ಷರಾಗಿ ಕರಿನೆರವಂಡ ಮಿಟ್ಟು ಅಯ್ಯಪ್ಪ ಅವರು ಆಯ್ಕೆ ಆಗಿದ್ದಾರೆ.
ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅದ್ಯಕ್ಷರಾಗಿ ಕರಿನೆರವಂಡ ಎನ್. ಅಯ್ಯಪ್ಪ (ಮಿಟ್ಟು) ಉಪಾಧ್ಯಕ್ಷರಾಗಿ ಪಟ್ರಪಂಡ ಪ್ರಿನ್ಸ್ ಮೊಣ್ಣಪ್ಪ, ನಿರ್ದೇಶಕರಾಗಿ, ಮಾಳೇಟಿರ ಎನ್ ಉತ್ತಪ್ಪ, ಮಾಳೇಟಿರ ಎಸ್ ಸುಬ್ಬಯ್ಯ, ಕೋಡಿರ ಎಂ ಚಂಗಪ್ಪ, ಮಾಳೇಟಿರ ಜಿ ಮುದ್ದಯ್ಯ, ಮೀತಲ್ ತಂಡ ವೈ ಆಲಿ, ಚಂಗಚಂಡ ಸಿ. ಅಕ್ಕಣಿ, ಕರಿನೆರವಂಡ ಎ. ರತಿ, ಮಾತಂಡ ಎಸ್ ಚಂಗಪ್ಪ, ಹೆಚ್ ಆರ್ ಉಮೇಶ್ ಹಾಗೂ ಎಂ.ಎಂ. ಪರಮೇಶ್ವರ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.