ಸಿದ್ದಾಪುರ, ಜೂ.20:(nadubadenews): ಕಾಲರ್ ಅಳವಡಿಸಿರುವ ಕಾಡಾನೆಯೊಂದು ಸಿದ್ದಾಪುರದ ಕಾಫಿಕಣದಲ್ಲಿ ಕಂಡು ಬಂದಿದ್ದು, ಇಲ್ಲಿನ ಟೀಕ್ ವುಡ್ ಎಸ್ಟೇಟ್ ಬಳಿ ಕಾಫಿ, ಕರಿಮೆಣಸು ಸೇರಿ ಅಪಾರ ಹಾನಿ ಮಾಡಿದೆ. ಹಲಸು, ಮಾವು ಆಸೆಗೆ ತೋಟಕ್ಕೆ ಬರುತ್ತಿರುವ ಆನೆಯಿಂದ ಕಾಫಿ ತೋಟಕ್ಕೆ ತೆರಳುವ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಎಸ್ಟೇಟಿನ ಕಾಫಿ ಕಣಕ್ಕೆ ಅಳವಡಿಸಿರುವ ಸಿಸಿ ಕ್ಯಾಮೆರದಲ್ಲಿ ಆನೆಯ ಚಲನವಲನ ಸೆರೆಯಾಗಿದೆ.