ಬೆಂಗಳೂರು, ಫೆ.19: ಪ್ರಸ್ತುತ ಸಾಲಿನ ಹತ್ತನೇ ಮತ್ತು ದ್ವೀತೀಯ ಪರೀಕ್ಷೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ತಮ್ಮ ಶಾಲೆಗಳನ್ನು ಬಿಟ್ಟು ಪರಿಕ್ಷಾ ಕೇಂದ್ರಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಕರ್ನಾಟಕ ಸಾರಿಗೆ ಸಂಸ್ಥೆಯು ತನ್ನ ಬಸ್ಸುಗಳಲ್ಲಿ ಪರಿಕ್ಷಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿ ಆದೇಶಿಸಿದೆ.
ಈ ವರ್ಷದ ಪಿಯುಸಿ ಪರೀಕ್ಷೆಗಳು, ಮಾರ್ಚ್ 01ರಿಂದ ಪ್ರಾರಂಭವಾಗಿ 20/03/25ರ ವರೆಗೆ ನಡೆಯಲಿವೆ. ಹತ್ತನೇ ತರಗತಿ ಪರೀಕ್ಷೆಗಳು 21/03/25ರಿಂದ 04/04/25ರವರೆಗೆ ರಾಜ್ಯಾಧ್ಯಂತ ನಡೆಯಲಿವೆ. ಈ ಸಮಯದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಪರಿಕ್ಷಾ ಪ್ರವೇಶ ಚೀಟಿ(ಹಾಲ್ ಟಿಕೇಟ್) ತೋರಿಸಿದರೆ, ಉಚಿತವಾಗಿ ಪ್ರಯಾಣಿಸಬಹುದು, ಹಾಗೂ ಪರೀಕ್ಷಾ ಕೇಂದ್ರದ ಬಳಿ ಬಸ್ಗಳು ಕೋರಿಕೆಯ ನಿಲುಗಡೆ ಮಾಡಬೇಕೆಂದು ಕೆ.ಎಸ್.ಆರ್.ಟಿ.ಸಿಯ ಸಂಚಾರ ವ್ಯವಸ್ಥಾಪಕರು ಸೂಚಿಸಿದ್ದಾರೆ. ಈ ಆದೇಶವು ಸಂಸ್ಥೆಯ ಸಾಮಾನ್ಯ, ವೇಗಧೂತ ಬಸ್ಗಳಿಗೆ ಅನ್ವಯ ಆಗಲಿದೆ ಎಂದು ಇಲಾಖೆ ತಿಳಿಸಿದೆ.