ಮೇದುರ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ: ಬಲಿ ಬಯಸಿದೆಯಾ ಸ್ಥಳೀಯ ಆಡಳಿತ..?!

ಸೂರ್ಲಬ್ಬಿ, ಜೂ.30, (nadubadenews): ಗರ್ವಾಲೆ ಗ್ರಾಮಪಂಚಾಯತಿ ವ್ಯಾಪ್ತಿಯ, ಮಾದಾಪುರ-ಸೂರ್ಲಬ್ಬಿ-ಶಾಂತಳ್ಳಿ ಮಾರ್ಗವಾಗಿ ಸೋಮವಾರಪೇಟೆಯನ್ನು ಸಂಪರ್ಕಿಸುವ ಮುಖ್ಯ ರಸ್ಥೆಗೆ ಹೊಂದಿಕೊಂಡಂತೆ, ಸೂರ್ಲಬ್ಬಿ ಬಳಿ ಇರುವ ಮೇದುರಪೊಳೆ ಫಾಲ್ಸ್‌ ಮಳೆಗಾಲದಲ್ಲಿ ನಯನಮನೋಹರವಾಗಿ ಕಂಗೊಳಿಸುತ್ತದೆ. ಇತ್ತೀಚೆಗೆ ಪ್ರವಾಸಿಗರ ದಂಡು ಈ ವಿಹಂಗಮ ನೋಟವನ್ನು ಕಣ್‌ಮನ ಸೆಳೆಯಲು ತಂಡೋಪತಂಡವಾಗಿ ಆಗಮಿಸುತ್ತಾರೆ. ಕೆಲ ಪ್ರವಾಸಿಗರ ಹುಚ್ಚಾಟಗಳು ಎಲ್ಲೆ ಮೀರಿದ್ದು, ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವಂತೆ ಭಾಸವಾಗುತ್ತದೆ. ಆದರೆ ಸ್ಥಳೀಯ ಗ್ರಾಮ ಪಂಚಾತಿಯಾಗಲಿ, ಪೊಲೀಸ್‌ ಇಲಾಖೆಯಾಗಲಿ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ನಿರ್ಲಕ್ಷೆ ತಳೆದಿರುವುದು, ಅಧಿಕಾರಿಗಳೂ ಬಲಿಗಾಗಗಿಯೇ ಕಾದಿದ್ದಾರೆಯೇ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

ನಾಡ್‌ಲ್ ನಾಳ್-28 ಕೈಂಜ ವಾರತಿಂಜ… “ಎಂತಯ್ಯ! ನಾಡ ಅಚ್ಚಕ್ ನಲ್ಲ ಪೆದತ್‌ನ ಬುಟ್ಟಿತ್ “ಕೀರೇ”ಂದ್ ಕಾಕುವಕ್ ಸುರುಮಾಡಿಯೆ?” “ನಾಯಿ ಸೂ… ಮೋನೆ! ಎನ್ನ್ಂಗ್‌ರೇ ಚಿಮ್ಮಂಡ ಬರಿಯತ್ ಮರ ಉಂಡ್…., ನೆಲೆರ ಅಡಿಲ್ ಮೋರ್‌ಕುತ್ತಿ ಪಣ ಉಂಡ್‌ಂದೆಲ್ಲ ಪೊಟ್ಟ್ ಬೊಗ್‌ಳಿಯೆ ನೀನ್? ಮನೆಕಾರಂಡ ಎದಿಕೆ ನಾಡ ಮರ್ಯಾದಿ ಎಡ್‌ತಿಯಲ್ಲಾ…. ನೀಡಮ್ಮೆರ ಬಟ್ಟಿ ಮರಿವಕ್”…ಂದ್ ಕೂತ್ ಕೊಡ್‌ತಂಡ್ ಪೋಡೆನ ಚೌಟುವಕ್ ಓಡುವ ತೈರಂಡನೆಕೆ ಎಡ್‌ತೆ ಬರಿ ಕೈಕಾಲ್‌ನ ನ್‌‌ಗ್‌ರ್‌ಚಿಟ್ಟಂಡ್ ದುಂಡ್‌ನ ಒರ್ ಬರಿಕ್ ತಿರ್‌ಕಿಯಂಡ್, ಬಲ್‌ತೆ ಕೈನ ನೇತಿಯಂಡ್ ಕೀರಿಕ್‌ಣ್ಣನ […]

Continue Reading

ಜಲ್ಲಿ ಚಾಕೋಲೆಟ್‌ ಒಳಗೆ ಗಾಂಜಾ ರಸ

ಬೆಂಗಳೂರು, ಜೂ.27(nadubadenews): ಮಕ್ಕಳ ಪ್ರಿಯವಾದ ಚಾಕೋಲೇಟ್‌ಗಳಲ್ಲಿ ಒಂದಾದ ಜೆಲ್ಲಿಯನ್ನು ಕೊಡಿಸುವ ಮುನ್ನ ಯೋಚಿಸುವ ಪರಿಸ್ತಿತಿ ಬಂದಿದೆ. ಇದೇ ರಂಗು ರಂಗಿನ ಜಲ್ಲಿ ಚಾಕೋಲೇಟ್‌ ಒಳಗೆ ಗಾಂಜಾ ರಸಸೇರಿಸಿ ಮಾರಾಟ ಮಾಡುವ ಜಾಲವನ್ನು ಬೆಂಗಳುರಿನಲ್ಲಿ ಪತ್ತೆಹಚ್ಚಚಾಗಿದೆ. ಬೆಂಗಳೂರಿನ ನಗರಕ್ಕೆ ಹೊಸ ಮಾದರಿಯ ಜಲ್ಲಿ ಗಾಂಜ ಎಂಟ್ರಿ ಕೊಟ್ಟಿದ್ದು, ಜಲ್ಲಿ ಚಾಕೊಲೇಟ್‌ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದ್ದ ದಂದೆಯನ್ನು ಪೋಲೀಸರು ಪತ್ತೆಹಚ್ಚಿದ್ದಾರೆ. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುತ್ತಿರುವ ಈ ದಂದೆಯ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ಲಭಿಸಿದ […]

Continue Reading

ಪರೋಪಕಾರದಲ್ಲಿ ಕೊಡಗು, ದೇಶಕ್ಕೆ ಮಾದರಿ ರೆಡ್‍ಕ್ರಾಸ್ ಮಹಾಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆಶಯ

ಮಡಿಕೇರಿ, ಜೂ.27(nadubadenews): ಸಮಸಮಾಜಸೇವೆ, ಪರೋಪಕಾರ ವಿಚಾರದಲ್ಲಿ ಕೊಡಗಿನವರ ಛಲ ದೇಶಕ್ಕೇ ಮಾದರಿಯಾಗಿದೆ. ಯಾವುದೇ ಸವಾಲು ಎದುರಾದರೂ ಸ್ಥೈರ್ಯಗೆಡದೇ ಆ ಸವಾಲನ್ನು ಎದುರಿಸಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಶ್ಲಾಘಿಸಿದ್ದಾರೆ. ಮಡಿಕೇರಿ ನಗರದ ರೆಡ್‍ಕ್ರಾಸ್ ಭವನದಲ್ಲಿ ಆಯೋಜಿತ ಭಾರತೀಯ ರೆಡ್‍ಕ್ರಾಸ್‍ನ ಕೊಡಗು ಶಾಖೆಯ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಐಶ್ವರ್ಯ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮವಾದ ಸೇವೆ ನೀಡುವ ಮೂಲಕ ಆ ವ್ಯಕ್ತಿಯ ಏಳಿಗೆಗೆ ರೆಡ್‍ಕ್ರಾಸ್ ಸಂಸ್ಥೆ ಬದ್ದವಾಗಿದೆ. ಅನೇಕ ಸೇವಾ ಯೋಜನೆಗಳ […]

Continue Reading

ಮಡಿಕೇರಿ ತಾಲೂಕು ಪಂಚಾಯತಿಭವನ ಲೋಕಾರ್ಪಣೆ

ಮಡಿಕೇರಿ, ಜೂ.27(nadubadenews): ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿ ನಿರ್ಮಾಣವಾಗಿರುವ ನೂತನ ತಾಲ್ಲೂಕು ಪಂಚಾಯಿತಿ ಭವನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜು ಬೋಸರಾಜು ಉದ್ಘಾಟಿಸಿದರು. ತಾಲ್ಲೂಕು ಪಂಚಾಯತ್ ಸಿಇಓ ಶೇಖರ್ ಅತಿಥಿ ಗಳಿಗೆ ನೂತನ ಕಟ್ಟಡದಲ್ಲಿರುವ ಕಚೇರಿಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಧಿಕಾರದ ಅಧ್ಯಕ್ಷ […]

Continue Reading

Swarna Prashana at Saamya Ayurveda Clinic @ Ganesh Medicals Building, College Road, Madikeri

Swarna Prashana immunity drops will be administered tomorrow 28th June This Ayurvedic formulation is beneficial for children aged 0 to 16 years.It helps in:✅ Boosting immunity✅ Enhancing memory power✅ Supporting overall growth and development 📞 For more details, contact: 94822 46204 Don’t miss this monthly opportunity to strengthen your child’s health!

Continue Reading

ಶಾಲಾವರಣದಲ್ಲಿ ಕನ್ನಡಕ್ಕ ಆದ್ಯತೆ ಇರಲಿ : ಲೀಲಾಕುಮಾರಿ ತೊಡಿಕಾನ ಅಭಿಮತ

ಕುಶಾಲನಗರ ಜೂನ್:25, (nadubadenews): ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿಗಳು ತಮ್ಮ ಸಾಲಾ ದಿನಗಳಲ್ಲಿ ಕನ್ನಡ ಅಭ್ಯಾಸ ಮಾಡಿದಾಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಿ, ಬೆಳಸಲು ಸಾಧ್ಯ. ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಗಬೇಕು ಎಂದು ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ತಿಳಿಸಿದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರದ ಪಾತಿಮಾ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸೂದನ ರಾಘವಯ್ಯ ದತ್ತಿ ನಿಧಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಕನ್ನಡದ ಬಗ್ಗೆ ಯಾವುದೇ ತಾತ್ಸಾರ ಭಾವನೆ ಮೂಡದ […]

Continue Reading

ಕೆ. ಬಾಡಗ ಪಂಚಾಯಿತಿ ಕಟ್ಟಡ ಖರೀದಿಗೆ ಗ್ರಾಮೀಣ ಅಭಿವೃದ್ಧಿ ಸಚಿವರಿಗೆ ಎ.ಎಸ್ ಪೊನ್ನಣ್ಣ ಮನವಿ            

ಬೆಂಗಳೂರು, ಜೂ.26(nadubadenews): ವಿರಾಜಪೇಟೆ ವಿಧಾನಸಭಾ ವ್ಯಾಪ್ತಿಯ ಕೆ.ಬಾಡಗ ಗ್ರಾಮ ಪಂಚಾಯತಿ ಕಛೇರಿಗೆ ಕಟ್ಟಡ ಖರೀದಿಸಲು ಅನುಮತಿಗಾಗಿ ಇಂದು ಗ್ರಾಮಿಣಾಭಿವೃದ್ದಿ  ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಮನವಿ ಮಾಡಿದರು.           ಇಂದು ಗ್ರಾಮ ಪಂಚಾಯಿತಿ ಸದಸ್ಯರೊಂದಿ, ಮಾನ್ಯ ಸಚಿವರನ್ನು   ಭೇಟಿ ಮಾಡಿದ  ಶಾಸಕರು, ಕೆ.ಬಾಡಗ ಗ್ರಾಮ ಪಂಚಾಯತಿ ಕಚೇರಿಗೆ, ಮಹಿಳಾ ಸಾಂಸ್ಕೃತಿಕ ಸಂಘದ ಕಟ್ಟಡವಿದ್ದು, ಪಂಚಾಯತಿಯಲ್ಲಿ ಲಭ್ಯವಿರುವ ಅನುದಾನದಲ್ಲಿ, ಸದರಿ ಕಟ್ಟಡವನ್ನೇ ಪಂಚಾಯತಿ ಕಛೇರಿಗಾಗಿ ಖರೀದಿಸಲು ಅನುಮತಿ ನೀಡುವಂತೆ ಸಚಿವರಿಗೆ […]

Continue Reading

ಕೊಡಗು ಮಳೆಹಾನಿಗೆ ತಕ್ಷಣ ಪರಿಹಾರಕ್ಕೆ ಕ್ರಮ : ಉಸ್ತವಾರಿ ಸಚಿವ ಎನ್.‌ ಎಸ್.‌ ಬೋಸರಾಜು ಭರವಸೆ

ಮಡಿಕೇರಿ, ಜೂ.26,(nadubadenews); ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು, ಈ ವರದಿ ಆಧಾರ ಮೇಲೆ ಜುಲೈ 2ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿಯೂ ಆಗಿರುವ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಹಾರಂಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು […]

Continue Reading

ರಜೆ ಘೋಷಣೆಗೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ, ನಡುಬಾಡೆನ್ಯೂಸ್‌ಗೆ ಉಸ್ತುವಾರಿ ಸಚಿವರ ಭರವಸೆ

ವಿರಾಜಪೇಟೆ, ಜೂ.25(nadubadenews):  ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಶಾಲಾಮಕ್ಕಳಿಗೆ ರಜೆ ನೀಡುವ ವಿಚಾರದಲ್ಲಿ ತೀವ್ರ ಗೊಂದಲವಾಗುತ್ತಿದೆ. ಆತಂಕ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೇ ನೇರ ನಿರ್ಧಾರ ತೆಗೆದುಕೊಳ್ಳಲು ಸೂಚಿಸುವುದಾಗಿ ಕೊಡಗು ಜಿಲ್ಲಾ ಉಸ್ತವಾರಿ ಸಚಿವ ಎನ್.‌ ಎಸ್.‌ ಬೋಸರಾಜು  ನಡುಬಾಡೆ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರೆ.     ಇಂದು ಶಿಕ್ಷಣ ಇಲಾಖಾಧಿಕಾರಿಗಳು ಬೆಳಿಗ್ಗೆ 8.30ಕ್ಕೆ ಗೊಂದಲಕಾರಿಯಾಗಿ ರಜೆ ಘೋಷಿಸಿದ್ದು, ಇದರಿಂದಾಗಿ ಮಕ್ಕಳು, ಪೋಷಕರು, ಶಿಕ್ಷಕರ ಗೊಂದಲ ಮತ್ತು ಆತಂಕವನ್ನು, ನಡುಬಾಡೆ ನ್ಯೂಸ್‌ ಧೂರವಾಣಿ ಮೂಲಕ ಸಚಿವರ ಗಮನಕ್ಕೆ ತಂದಾಗ, ಮಾತನಾಡಿದ ಸಚಿವರು, […]

Continue Reading