
ಕೊಡವ ಅಭಿವೃದ್ದಿ ನಿಗಮದ ರೂಪುರೇಷೆ ಈಗಾಗಲೇ ತಯಾರಿಸಲಾಗುತಿದ್ದು, ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿದಂತೆ ಸದ್ಯದಲ್ಲೇ ಸರ್ಕಾರಿ ಆದೇಶ ಮಾಡಿ ಅನುಷ್ಟಾನಕ್ಕೆ ತರಲಾಗುವುದು ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಹೇಳಿದರು. ನಡುಬಾಡೆನ್ಯೂಸ್ ಜೊತೆ ಧೂರವಾಣಿಯಲ್ಲಿ ಮಾತನಾಡಿದ ಅವರು, ಕೊಡವ ಅಭೀವೃದ್ದಿ ನಿಗ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯ, ಇದಕ್ಕೆ ಪೂರಕವಾಗಿ ಸರ್ಕಾರ ಕೂಡ ಯೋಜನೆ ಸಿದ್ದಪಡಿಸುತಿದ್ದು ಅತಿ ಶೀಘ್ರದಲ್ಲೇ ಸೂಕ್ತ ಆದೇಶ ಹೊರಬೀಳಲಿದೆ ಎಂದರು. ಇನ್ನು ಈ ಭಾರಿಯ ಮುಂಗಡ ಪತ್ರವು ಸರ್ವ ಸಮಾಜ ಮತ್ತು ಇಲಾಖೆಗಳನ್ನು ಕ್ರೋಡೀಕರಿಸಿದ ಒಟ್ಟು ಸಮನ್ವಯತೆಯ ಬಡ್ಜೆಟ್ ಆಗಿದ್ದು, ಸಮಾಜ ಕಲ್ಯಾಣದ ಚಿಂತನೆಯೊಂದಿಗೆ ರೂಪಿತವಾಗಿದೆ ಎಂದರು. ವಿರಾಜಪೇಟೆಯಲ್ಲಿ ಕ್ರೀಡಾ ವಸತಿ ನಿಲಯ ಘೋಷಣೆ, ಕೊಡಗಿನ ಕ್ರೀಡಾ ಸಾಧನೆಗೆ ಸಂಧ ಗೌರವವಾಗಿದ್ದು, ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿ ಈಗಾಗಗಲೇ ಸಾಕಷ್ಟು ವಿಷೇಶ ಅನುದಾನ ದೊರೆತಿದ್ದು, ಕಾರ್ಯಯೋಜನೆಗಳು ಚಾಲ್ತಿಯಲ್ಲಿದೆ. ಹಂತವಾಗಿ ಅಭಿವೃದ್ದಿ ಕಾರ್ಯಗಳು ಮುಂದುವರೆಯಲಿವೆ ಎಂದು ಸದಾಶಯ ವ್ಯಕ್ತಪಡಿಸಿದರು.




