https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕನ್ನಡ ಸಾಹಿತ್ಯ ಭವನ ಪೋಷಕರಾಗಲು ಎಲ್.ಎ.ಸಿ. ಹಾಗೂ  ಶಾಸಕ ಪೊನ್ನಣ್ಣರಿಗೆ ಮನವಿ

ಕನ್ನಡ ಸಾಹಿತ್ಯ ಭವನ ಪೋಷಕರಾಗಲು ಎಲ್.ಎ.ಸಿ. ಹಾಗೂ  ಶಾಸಕ ಪೊನ್ನಣ್ಣರಿಗೆ ಮನವಿ

News, Informatin , Enteetinement and Advertisement
07/08/202507/08/2025nadubadenews@gmail.comLeave a Comment on ಕನ್ನಡ ಸಾಹಿತ್ಯ ಭವನ ಪೋಷಕರಾಗಲು ಎಲ್.ಎ.ಸಿ. ಹಾಗೂ  ಶಾಸಕ ಪೊನ್ನಣ್ಣರಿಗೆ ಮನವಿ
Spread the love
ಕನ್ನಡ ಸಾಹಿತ್ಯ ಭವನ ಪೋಷಕರಾಗಲು ಎಲ್.ಎ.ಸಿ. ಹಾಗೂ  ಶಾಸಕ ಪೊನ್ನಣ್ಣರಿಗೆ ಮನವಿ

ಮಡಿಕೇರಿ, ಜು.07(nadubadenews): ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುದರ್ಶನ ಬಳಿ ಇರುವ  ನಿವೇಶನದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣದ ಸಲುವಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಎ.ಎಸ್ ಪೊನ್ನಣ್ಣ ರವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ಅವರ ನೇತೃತ್ವದಲ್ಲಿ ಭೇಟಿಯಾಗಿ ಭವನ ನಿರ್ಮಾಣ ಸಮಿತಿಯ ಮಹಾಪೋಷಕರಾಗಿ ಕಾರ್ಯನಿರ್ವಹಿಸುವಂತೆ ಮತ್ತು ಭವನ ನಿರ್ಮಾಣದ ಕಾರ್ಯದಲ್ಲಿ ಸಹಕರಿಸುವಂತೆ ಕೋರಿಕೊಂಡರು.    

     ಪ್ರತಿಕ್ರಿಯಿಸಿದ ಶಾಸಕರುಗಳು  ಕನ್ನಡ ಸಾಹಿತ್ಯ ಪರಿಷತ್ತಿನ ಭವನಕ್ಕೆ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ಸರಕಾರದ ಮಟ್ಟದಲ್ಲಿ  ಮುಖ್ಯಮಂತ್ರಿಗಳಿಂದ ಅನುದಾನ ಕೊಡಿಸುವುದಲ್ಲದೆ ಜಿಲ್ಲಾಮಟ್ಟದಲ್ಲಿಯೂ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದರು. ಆ ಸಂದರ್ಭದಲ್ಲಿ ಕೊಡಗು ಜಿಲ್ಲಾ ಗ್ಯಾರಂಟಿ  ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಉಪಸ್ಥಿತರಿದ್ದರು. ಅವರನ್ನು ಭೇಟಿಯಾದ ನಿಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್, ಗೌರವ ಕಾರ್ಯದರ್ಶಿ ಎಸ್.ಐ ಮುನಿರ್ ಅಹಮದ್, ಶ್ರೀಮತಿ ರೇವತಿ ರಮೇಶ್, ಕೋಶಾಧಿಕಾರಿ, ಎಸ್.ಎಸ್ ಸಂಪತ್ ಕುಮಾರ್, ವಿರಾಜಪೇಟೆ ತಾಲೂಕು ಅಧ್ಯಕ್ಷರಾದ ಡಿ ರಾಜೇಶ್ ಪದ್ಮನಾಭ, ಕುಶಾಲನಗರ ತಾಲೂಕು ಅಧ್ಯಕ್ಷರಾದ ಕೆ.ಎಸ್.ನಾಗೇಶ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಮಾಜಿ ಅಧ್ಯಕ್ಷರಾದ ಬಿ.ಎನ್ ಪ್ರಕಾಶ್ ಉಪಸ್ಥಿತರಿದ್ದರು.

Post navigation

ಚೆಟ್ಟಳ್ಳಿಯಲ್ಲಿ ಗ್ರಾಮೀಣ ಸೊಗಡಿನ ಕಕ್ಕಡ-18 ಆಚರಣೆ
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

Related Posts

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

25/07/202525/07/2025nadubadenews@gmail.com
ಶಾಸಕ ಪೊನ್ನಣ್ಣ ಅಯಿಂಗಳ ಕಂಡಿತ್‌ ತಕ್ಕ್‌ಬಾಕ್‌ ಮಾಡ್‌ನ ಅಖಿಲ ಕೊಡವ ಸಮಾಜ ಕೂಟ್‌ಕಾರ…

ಶಾಸಕ ಪೊನ್ನಣ್ಣ ಅಯಿಂಗಳ ಕಂಡಿತ್‌ ತಕ್ಕ್‌ಬಾಕ್‌ ಮಾಡ್‌ನ ಅಖಿಲ ಕೊಡವ ಸಮಾಜ ಕೂಟ್‌ಕಾರ…

14/02/202514/02/2025nadubadenews@gmail.com
ಕಟ್ಟೆಮಾಡ್‌ ಮಾದೇವ ದೇವಾಲಯ ಬಳಿ ನಿಷೇದಾಜ್ಞೆ ಮುಂದುವರೆಸಿ ಉಪ  ವಿಭಾಗಾಧಿಕಾರಿ ಆದೇಶ

ಕಟ್ಟೆಮಾಡ್‌ ಮಾದೇವ ದೇವಾಲಯ ಬಳಿ ನಿಷೇದಾಜ್ಞೆ ಮುಂದುವರೆಸಿ ಉಪ ವಿಭಾಗಾಧಿಕಾರಿ ಆದೇಶ

14/03/202514/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version