
ಮಡಿಕೇರಿ, ಜೂ.19,(nadubadenews): ದಿನಾಂಕ 21/6/25 ಶನಿವಾರ ಕೊಡಗು ಜಿಲ್ಲೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಮಂಜುನಾಥ್ ಗೌಡ ರವರು ನಂತರ ಯುವ ಶಕ್ತಿಯನ್ನು ಬಲಪಡಿಸಲು ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದು ಮೊದಲ ಭಾರಿಗೆ ಕೊಡಗು ಜಿಲ್ಲೆ ಆಗಮಿಸಲಿದ್ದಾರೆ ಮಡಿಕೇರಿಯ ಡಾ. ಬಿ ಆರ್ ಅಂಬೇಡ್ಕರ ಭವನದಲ್ಲಿ ಬೆಳ್ಳಗೆ 10:30 ಘಂಟೆಗೆ ಯುವಶಕ್ತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯುವ ನಾಯಕರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
ಈ ಕಾರ್ಯಕ್ರಮ್ಮಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಯುವ ನಾಯಕ ನಿಗಮ್ ಬಂಡಾರಿ ಕೊಡಗಿನ ನೆಚ್ಚಿನ ಹಾಗು ಜನಪ್ರಿಯ ಶಾಸಕರುಗಳಾದ ಶ್ರೀ ಎ ಎಸ್ ಪೊನ್ನಣ್ಣ ರವರು ಮತ್ತು ಶ್ರೀ ಮಂಥರ್ ಗೌಡರವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ರವರು ಕೆಪಿಸಿಸಿ ನಾಯಕರು ಜಿಲ್ಲಾ ಕಾಂಗ್ರೆಸ್ ನಾಯಕರುಗಳು ಆಗಮಿಸಲಿದ್ದಾರೆ. ಕೊಡಗಿನ ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜಿಲ್ಲೆಯ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರು ಪದಾಧಿಕಾರಿಗಳು, ಸರಕಾರದ ಎಲ್ಲಾ ಇಲಾಖೆಗೆ ನೇಮಕಕೊಂಡ ನಾಮನಿರ್ದೇಶಿತ ಸದಸ್ಯರುಗಳು ಹಾಗೂ ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕೊಡಗು ಯುವ ಕಾಂಗ್ರೆಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.