https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಐಇಸಿ ಚಟುವಟಿಕೆಗಳಿಗಾಗಿ ಸ್ವಸಹಾಯ ಗುಂಪು ಸದಸ್ಯರಿಂದ ಅರ್ಜಿ ಆಹ್ವಾನ

News, Informatin , Enteetinement and Advertisement
22/05/202522/05/2025nadubadenews@gmail.comLeave a Comment on ಐಇಸಿ ಚಟುವಟಿಕೆಗಳಿಗಾಗಿ ಸ್ವಸಹಾಯ ಗುಂಪು ಸದಸ್ಯರಿಂದ ಅರ್ಜಿ ಆಹ್ವಾನ
Spread the love

ಸೋಮವಾರಪೇಟೆ ಮೇ.22(Nadubade News): ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಸ್ವಚ್ಚ ಭಾರತ್ ಮಿಷನ್ 2.0ರ ಅಡಿಯಲ್ಲಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಗುಂಪು (ಎಸ್‍ಎಚ್‍ಜಿ) ಸದಸ್ಯರ ನೇಮಕಾತಿಗಾಗಿ, ಆಸಕ್ತಿಯುಳ್ಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.

      ಈ ಮೂಲಕ 3 ವರ್ಷಗಳವರೆಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಜೊತೆಗೆ ಪೂರ್ಣಾವಧಿಗೆ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ನಲ್ಮ್-ಡೇ ಅಡಿಯಲ್ಲಿ ನೋಂದಾಯಿಸಿ ಎಸ್‍ಎಚ್‍ಜಿ  ಸದಸ್ಯರಿಂದ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯು “ಆಸಕ್ತಿಯ ಅಭಿವ್ಯಕ್ತಿ”ಯನ್ನು ಆಹ್ವಾನಿಸುತ್ತದೆ. ಷರತ್ತುಗಳಿಗೊಳಪಟ್ಟ ಆಯ್ಕೆ ಪ್ರಕ್ರಿಯೆ ಮತ್ತು ವೇತನಕ್ಕೆ ಸಂಬಂಧಿಸಿದ ವಿವರಗಳನ್ನು www.somwarpettown.mrc.gov.in/    ವೆಬ್‍ಸೈಟ್‍ನಲ್ಲಿ ಲಭ್ಯವಿದೆ.

       ನಲ್ಮ್-ಡೇ ಯೊಂದಿಗೆ ನೋಂದಾಯಿಸಿಕೊಂಡ ಆಸಕ್ತ ಸ್ವಸಹಾಯ ಗುಂಪು ಸದಸ್ಯರು ತಮ್ಮ ಆಸಕ್ತಿಯ ಅಭಿವ್ಯಕ್ತಿಯನ್ನು ನಲ್ಮ್-ಡೇ ಯ ಹಿಂಬರಹದೊಂದಿಗೆ ಮೇಲೆ ತಿಳಿಸಲಾದ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ನಿಗದಿತ ನಮೂನೆಯಲ್ಲಿ ಮೇ, 29 ರ ಸಂಜೆ 5 ಗಂಟೆಯ ಒಳಗಾಗಿ itstaff_ulb_somwarpet@yahoo.com./ ka.somwarpet.tp@gmail.com  ಗೆ ಅಥವಾ  ಕಚೇರಿಯ ವೇಳೆಯಲ್ಲಿ ಖುದ್ದಾಗಿ ತಲುಪಿಸಬಹುದಾಗಿದೆ, ಕಾಲ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತಿಯುಳ್ಳ ಎಸ್‍ಎಚ್‍ಜಿ ಸದಸ್ಯರು ಗುರುತಿನ ಪುರಾವೆ, ವಿಳಾಸದ ಪುರಾವೆ, ಅರ್ಹತಾ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವುದಕ್ಕೆ(ಎಂಪಾನೆಲ್) ದಾಖಲೆಗೂ, ಶೈಕ್ಷಣಿಕ ಅರ್ಹತೆ, ನಲ್ಮ್-ಡೇ ಯಿಂದ ಹಿಂಬರಹ ನಮೂನೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಈ ವಿಷಯದ ಕುರಿತು ಅವರ ತಿಳುವಳಿಕೆಯನ್ನು ನಿರ್ಣಯಿಸಲು ಮೇ, 31 ರಂದು ಅಥವಾ ಸೂಚಿಸಿದ ದಿನಾಂಕದಂದು ಸಂದರ್ಶನಕ್ಕೆ ಕರೆಯಲಾಗುವುದು ಎಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರು ತಿಳಿಸಿದ್ದಾರೆ.

Post navigation

“ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದಲ್ಲಿ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಹಕರಿಸಲು ಡಿಡಿಪಿಐ ಮನವಿ…
ನಾಳೆ ಮಡಿಕೇರಿಯಲ್ಲಿ ಆಪರೇಷನ್ ಸಿಂಧೂರ ವಿಜಯೋತ್ಸವ…

Related Posts

ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

10/04/202510/04/2025nadubadenews@gmail.com
ಬೇಡು ಹಬ್ಬ ಹಿನ್ನೆಲೆ: ಗೋಣಿಕೊಪ್ಪ ಪೋಲಿಸ್ ಠಾಣೆ  ಪ್ರಕಟಣೆ…

ಬೇಡು ಹಬ್ಬ ಹಿನ್ನೆಲೆ: ಗೋಣಿಕೊಪ್ಪ ಪೋಲಿಸ್ ಠಾಣೆ  ಪ್ರಕಟಣೆ…

19/05/202519/05/2025nadubadenews@gmail.com
ದಿ. ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘವು  ಬೆಳೆಗಾರಸ್ನೇಹಿ ಕಾರ್ಯ ಮಾಡಲಿದೆ : ಅಧ್ಯಕ್ಷ ಎ.ಎಸ್.‌ ಪೊನ್ನಣ್ಣ ಅಭಯ

ದಿ. ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘವು  ಬೆಳೆಗಾರಸ್ನೇಹಿ ಕಾರ್ಯ ಮಾಡಲಿದೆ : ಅಧ್ಯಕ್ಷ ಎ.ಎಸ್.‌ ಪೊನ್ನಣ್ಣ ಅಭಯ

09/05/202509/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version