https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ರಾಜ್ಯಮಟ್ಟದ ಮೊಗೇರ ಕ್ರಿಕೆಟ್ ಕಪ್  ಡೋಮಿನೇಟರ್ ಇಲೆವೆನ್ ಮಾರ್ಗೋಲ್ಲಿ ಚಾಂಪಿಯನ್…

News, Informatin , Enteetinement and Advertisement
22/05/202522/05/2025nadubadenews@gmail.comLeave a Comment on ರಾಜ್ಯಮಟ್ಟದ ಮೊಗೇರ ಕ್ರಿಕೆಟ್ ಕಪ್  ಡೋಮಿನೇಟರ್ ಇಲೆವೆನ್ ಮಾರ್ಗೋಲ್ಲಿ ಚಾಂಪಿಯನ್…
Spread the love

ಮಡಿಕೇರಿ, ಮೇ 22(Nadubade News): ಮಡಿಕೇರಿಯಲ್ಲಿ ಅಮೃತ ಯುವ ಮೊಗೇರ ಅಮ್ಮತಿ ಹೋಬಳಿ ಸಿದ್ದಾಪುರ (ರಿ) ಇವರ ವತಿಯಿಂದ 3ನೇ ವರ್ಷದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ಡೋಮಿನೇಟರ್ ಇಲೆವೆನ್ ಮಾರ್ಗೋಳ್ಳಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದರೆ ಫ್ರೆಂಡ್ಸ್ ಇಲೆವೆನ್ ಉಡುಪಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು, ನಗರದ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಮೊಗೇರ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 36 ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.  ಮೊದಲ ಸೆಮಿ ಫೈನಲ್ ಪಂದ್ಯವು ಡೋಮಿನೇಟರ್ ಇಲೆವೆನ್ ಮಾರ್ಗೋಲ್ಲಿ ಹಾಗೂ  ಶ್ರೀ ವಿನಾಯಕ ಮಕ್ಕಂದೂರು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಡೋಮಿನೇಟರ್ ಇಲೆವೆನ್ ಮಾರ್ಗೋಲ್ಲಿ ತಂಡ 22 ರನ್ ಗಳ ಭರ್ಜರಿ ಜಯದೊಂದಿಗೆ ಫೈನಲ್ ಗೆ ಲಗ್ಗೆ ಇಟ್ಟಿತು, ದ್ವಿತೀಯ ಸೆಮಿ ಫೈನಲ್ ಪಂದ್ಯವು ಫ್ರೆಂಡ್ಸ್ ಇಲೆವೆನ್ ಉಡುಪಿ ಹಾಗೂ ಟೀಮ್ 18 ಚಿಕ್ಕಮಗಳೂರು ನಡುವೆ ನಡೆದ ಪಂದ್ಯದಲ್ಲಿ ಫ್ರೆಂಡ್ಸ್ ಇಲೆವೆನ್ ಉಡುಪಿ ತಂಡವು 19 ರನ್ ಗಳ ಜಯ ಸಾದಿಸಿ ಫೈನಲ್ ಗೆ ದ್ವಿತೀಯ ತಂಡವಾಗಿಅರ್ಹತೆ ಪಡೆದುಕೊಂಡಿತು.

     ಫೈನಲ್ ಪಂದ್ಯವು  ಡೋಮಿನೇಟರ್ ಇಲೆವೆನ್ ಮಾರ್ಗೋಲ್ಲಿ ಹಾಗೂ , ಫ್ರೆಂಡ್ಸ್ ಇಲೆವೆನ್ ಉಡುಪಿ ತಂಡದ ನಡುವೆ ನಡೆದ ಪಂದ್ಯದಲ್ಲಿ ಫ್ರೆಂಡ್ಸ್ ಇಲೆವೆನ್ ಉಡುಪಿ ವಿರುದ್ಧ ಡೋಮಿನೇಟರ್ ಇಲೆವೆನ್ ಮಾರ್ಗೋಳ್ಳಿ ತಂಡವು7 ವಿಕೆಟ್ ಗಳ ಜಯ ಸಾಧಿಸಿ  ಚಾಂಪಿಯನ್ ಪಟ್ಟ ಅಲಂಕರಿಸಿತು.

    ಕ್ರೀಡಾಕೂಟದಲ್ಲಿ ಉತ್ತಮ ಬ್ಯಾಟ್ಸ್ ಮೆನ್  ಕೆರೇಬಿಯನ್ ಸ್ಟಾರ್ ಸಕಲೇಶಪುರ ತಂಡದ ಲೋಹಿತ್ ಪಡೆದುಕೊಂಡರೆ, ಉತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಶ್ರೀ ವಿನಾಯಕ ಮಕ್ಕಂದೂರು ತಂಡದ ಪ್ರವೀಣ್ ಪಡೆದುಕೊಂಡರು, ಉತ್ತಮ  ಬೌಲರ್ ಪ್ರಶಸ್ತಿಯನ್ನು ಟೀಮ್ 18 ಚಿಕ್ಕಮಗಳೂರು ತಂಡದ ಜಗದೀಶ್ ಪಡೆದರೆ ಕ್ರೀಡಾ ಕೂಟದ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಫ್ರೆಂಡ್ಸ್ ಇಲೆವೆನ್ ಉಡುಪಿ ತಂಡದ ವಿವೇಕ್ ಪಡೆದು ಕೊಂಡರು.

    ಅಮೃತ ಯುವ ಮೊಗೇರ ವತಿಯಿಂದ ಮಹಿಳೆಯರಿಗೆ ಥ್ರೋಬಾಲ್ ಹಾಗೂ ಹಗ್ಗ ಜಗ್ಗಾಟ ಪಂದ್ಯ ಏರ್ಪಡಿಸಲಾಗಿತ್ತು, ಕ್ರೀಡಾಕೂಟದಲ್ಲಿ ಮಹಿಳೆಯರಿಗೆ ನಡೆಸಿದ ಥ್ರೋ ಬಾಲ್ ಪಂದ್ಯಾಟದಲ್ಲಿ  ಸ್ವಾಮಿ ಕೊರಗಜ್ಜ ಮುಪ್ಪೆರಿಯ ಚಾಂಪಿಯನ್, ಆಗಿ ಹೊರ ಹೊಮ್ಮಿದರೆ ಅನುಷಾ ನಾಯಕಿತ್ವದ  ಟೀಮ್ ಕಾರ್ಣಿಕ ಕೊಡಗು ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು, ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಲೈಟಿಂಗ್ ಸ್ಟ್ರೈಕರ್ಸ್ ಚೆಯ್ಯಂಡಾಣೆ ಚಾಂಪಿಯನ್ ಆದರೆ ಅಮೃತ ಮೊಗೇರ ಸಿದ್ದಾಪುರ ರನ್ನರ್ಸ್ ಸ್ಥಾನ ಪಡೆದು ಕೊಂಡಿದು.

    ಪುರುಷರ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಹರಿಕಾ ಫ್ರೆಂಡ್ಸ್ ಚೆಯ್ಯಂಡಾಣೆ ವಿನ್ನರ್ಸ್ ಸ್ಥಾನ ಪಡೆದರೆ ಕಾಟೆರಮ್ಮ ಕ್ರಿಕೆಟರ್ಸ್ ಸೋಮವಾರ ಪೇಟೆ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

    ಅಮೃತ ಯುವ ಮೊಗೇರ ಸೇವಾ ಸಮಾಜ ಅಮ್ಮತಿ ಸಿದ್ದಾಪುರ ಹೋಬಳಿ (ರಿ) ಅಧ್ಯಕ್ಷರಾದ ರಾಮು. ಪಿ.ಎನ್. ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ   ವಿರಾಜಪೇಟೆ  ವಿಧಾನಸಭಾ ಕ್ಷೇತ್ರದ ಶಾಸಕರಾದ   ಎ.ಎಸ್. ಪೊನ್ನಣ್ಣ ಅವರು ಪಾಲ್ಗೊಂಡಿದ್ದರು.

    ಮುಖ್ಯ ಅತಿಥಿಗಳಾಗಿ  ಪಾಲ್ಗೊಂಡು ಮಾತನಾಡಿದ  ವಿರಾಜಪೇಟೆ  ವಿಧಾನಸಭಾ ಕ್ಷೇತ್ರದ ಶಾಸಕರಾದ   ಎ.ಎಸ್. ಪೊನ್ನಣ್ಣ ಅವರು ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಉತ್ತಮ ಬೆಳವಣಿಗೆ, ಸಮುದಾಯಗಳ ಸಾಮರಸ್ಯಕ್ಕೆ ಕಾರಣವಾಗುತ್ತದೆ ಎಂದರು . ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷರಾದ ಜನಾರ್ಧನ್ ಮಾತನಾಡಿ ಕ್ರೀಡೆಯು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಡುವುದರ ಜೊತೆಗೆ ನಮ್ಮಸಮುದಾಯದ ಜನಾಂಗದ ಸಂಬಂಧ ಬೆಸೆಯಲು ಸಹಕಾರಿಯಾಗಿದೆ ಎಂದರು ಹಾಗೆಯೇ ವಿರಾಜಪೇಟೆ  ವಿಧಾನಸಭಾ ಕ್ಷೇತ್ರದ ಶಾಸಕರಾದ   ಎ.ಎಸ್. ಪೊನ್ನಣ್ಣರವರ ಬಳಿ ಮೊಗೇರ ಜನಾಂಗದವರು ಸರಿ ಸುಮಾರು 40 ಸಾವಿರ ಮೇಲೆ ಜನ ಸಂಖ್ಯೆ ಇದ್ದು ನಮ್ಮ ಮೊಗೇರ ಸಮಾಜಕ್ಕೆ ಕೊಡಗಿನಲ್ಲಿ ಒಂದು ಸಮುದಾಯ ಭವನದ ಅವಶ್ಯಕತೆ ಇದೆ ಮೊಗೇರ ಸಮಾಜದ ಕಾರ್ಯಕ್ರಮಕ್ಕೆ  ಸಮುದಾಯ ಭವನವನ್ನು ನಿರ್ಮಿಸಿ ಕೊಡುವಂತೆ  ಮನವಿಯನ್ನು ಮಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ದ ಅಧ್ಯಕ್ಷರಾದ ಪಿ. ಎಂ. ರವಿ ರವರು ಮಾತನಾಡಿ ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ ಮನೋಭಾವ ಬರುತ್ತದೆ. ಪ್ರತಿನಿತ್ಯ ಅತ್ಯಂತ ಕ್ರಿಯಾಶೀಲರಾಗಿ ಕರ್ತವ್ಯನಿರ್ವಹಿಸಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕ್ರೀಡಾ ಕೂಟದಲ್ಲಿ 10 ನೇ ತರಗತಿಯಲ್ಲಿ 60% ಮೇಲೆ ಅಂಕ ಪಡೆದ 10 ವಿದ್ಯಾರ್ಥಿಗಳಾದ, ಅಂಕಿತ  ಸೋಮವಾರಪೇಟೆ, ಚಂಪಾಕ್ ಮರಗೋಡು, ಕೃತಿಕಾ ಎಂ.ಎಸ್. ಅಮ್ಮತಿ, ದಿವ್ಯ, ಅನುಷಾ ಮಡಿಕೇರಿ ಶ್ರೇಯ, ಸುಪ್ರೀತ್,ಚೈತ್ರ,ರವರಿಗೆಮೊಗೇರ ಸೇವಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಕ್ರೀಡಾ ಕೂಟಕ್ಕೆ ತೀರ್ಪುಗಾರರಾಗಿ, ರಮೇಶ್ ಹೆಬ್ಬಟ್ಟಗೇರಿ, ಶ್ಯಾಮ್, ಪ್ರಕಾಶ್, ಮಣಿ, ಕಾರ್ಯನಿರ್ವಹಿಸಿದರೆ,. ಸ್ಕೋರರ್ ಆಗಿ ಧನ್ಯ, ದಿವ್ಯ, ಹಾಗೂ ಚಿಂತನ ನಡೆಸಿದರೆ ವೀಕ್ಷಕ ವಿವರಣೆಯನ್ನು ಗಣೇಶ್ ಪ್ರಿನ್ಸಿ, ಮಂಜು ಬಬ್ಳಿ, ರಮೇಶ್ ಹೆಬ್ಬಟ್ಟಗೇರಿ, ನಡೆಸಿಕೊಟ್ಟರು ಬಹುಮಾನ ವಿತರಣೆ  ಸಂದರ್ಭ ಅಮೃತ ಯುವ ಮೊಗೇರ ಸಮಾಜದ  ಎಲ್ಲಾ ಆಯೋಜಕರು ಉಪಸ್ಥಿತರಿದ್ದರು.

Post navigation

ಕಾಡಾನೆ ಸೆರೆಗೆ ಅನುಮತಿ ನೀಡುವಂತೆ  ಮುಖ್ಯಮಂತ್ರಿಗೆ ಶಾಸಕ ಪೊನ್ನಣ್ಣ ಮನವಿ ಸಂಕೇತ್ ಪೂವಯ್ಯ ಹೇಳಿಕೆ…
“ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದಲ್ಲಿ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಹಕರಿಸಲು ಡಿಡಿಪಿಐ ಮನವಿ…

Related Posts

ಕಾರ್ಮಿಕ ಸೋಗಿನ ನುಸುಳುಕೋರರ ಬಗ್ಗೆ ಎಚ್ಚರ ವಹಿಸಿ, ಎಸ್.ಪಿ ರಾಮರಾಜನ್ ಸೂಚನೆ…

ಕಾರ್ಮಿಕ ಸೋಗಿನ ನುಸುಳುಕೋರರ ಬಗ್ಗೆ ಎಚ್ಚರ ವಹಿಸಿ, ಎಸ್.ಪಿ ರಾಮರಾಜನ್ ಸೂಚನೆ…

03/07/202503/07/2025nadubadenews@gmail.com
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ವಿನೋದ್‌ ಮೂಡಗದ್ದೆ

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ವಿನೋದ್‌ ಮೂಡಗದ್ದೆ

31/07/202531/07/2025nadubadenews@gmail.com
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಅಕಾಡೆಮಿ ಸಾಲಿನ ಗೌರವ ಪ್ರಶಸ್ತಿ ಪ್ರದಾನ

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಅಕಾಡೆಮಿ ಸಾಲಿನ ಗೌರವ ಪ್ರಶಸ್ತಿ ಪ್ರದಾನ

01/03/202501/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version