https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಎಂಸಿಸಿ ಫುಟ್ಬಾಲ್ ತರಬೇತಿ ಶಿಬಿರ ಸಮಾರೋಪ…

News, Informatin , Enteetinement and Advertisement
21/05/202521/05/2025nadubadenews@gmail.comLeave a Comment on ಎಂಸಿಸಿ ಫುಟ್ಬಾಲ್ ತರಬೇತಿ ಶಿಬಿರ ಸಮಾರೋಪ…
Spread the love

ಮಡಿಕೇರಿ ಮೇ.21(Nadubade News): ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಕ್ಲಬ್ (ಎಂಸಿಸಿ) ವತಿಯಿಂದ ಜಿಲ್ಲಾ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಫುಟ್ಬಾಲ್ ತರಬೇತಿ ಶಿಬಿರ  ಸಮಾರೋಪಗೊಂಡಿತು.

  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಎಂಸಿಸಿ ಹಿರಿಯ ಆಟಗಾರರು, ಪೋಷಕರೂ ಆಗಿರುವ ಚಿನ್ನಪ್ಪ ಅವರು ಮಾತನಾಡಿ ಮಕ್ಕಳು ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಮೈದಾನಕ್ಕಿಳಿದು ಆಟವಾಡಬೇಕು. ಕ್ರೀಡೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು. ತರಬೇತಿ ಶಿಬಿರದಲ್ಲಿ ಕಲಿತದ್ದನ್ನು ನಿರಂತರ ಅಭ್ಯಾಸ ಮಾಡಬೇಕೆಂದು ಕರೆ ನೀಡಿದರು.

  ಮತ್ತೋರ್ವ ಅತಿಥಿ, ಹಿರಿಯ ಫುಟ್ಬಾಲ್ ಆಟಗಾರ ರವಿ ಅವರು ಮಾತನಾಡಿ ಎಂಸಿಸಿ ಕ್ಲಬ್ ಮೂಲಕ ಆಡಿದ ಆಟಗಾರರು ರಾಜ್ಯ, ರಾಷ್ಟ್ರಮಟ್ಟದ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ಈಗಿನ ಮಕ್ಕಳಿಗೆ ಸಾಕಷ್ಟು ಅವಕಾಶಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ರಾಜ್ಯ, ರಾಷ್ಟ್ರ,   ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವಂತಾಗಬೇಕು. ಅಭ್ಯಾಸ ನಿರಂತರವಾಗಿರಬೇಕೆಂದು  ಕಿವಿಮಾತು ಹೇಳಿದರು.

  ಪ್ರಾಸ್ತಾವಿಕವಾಗಿ ಮಾತನಾಡಿದ  ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ, ಎಂಸಿಸಿ ಅಧ್ಯಕ್ಷ ಹಾಗೂ ತರಬೆತುದಾರರೂ ಆಗಿರುವ ಕ್ರಿಸ್ಟೋಫರ್; ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಸದಾ ನಿರಂತರಾಗಿರಬೇಕು. ಆಟ ಮುಂದುವರಿಸುತ್ತಾ ಕ್ರೀಡಾ ಕೂಟಗಳಲ್ಲಿ ಭಾಗವಹಿಸುವದರೊಂದಿಗೆ ಅವಕಾಶ ಸಿಕ್ಕಲ್ಲಿ ಆಯ್ಕೆ ಶಿಬಿಗಳಲ್ಲಿ ಪಾಲ್ಗೊಳ್ಳಬೇಕು. ಅವಶ್ಯದಲ್ಲಿ ತಾವು ಸಹಕಾರ ನೀಡುವದಾಗಿ ಹೇಳಿದರು. ಈ ತರಬೇತಿ ಮುಗಿದ ಬಳಿಕವೂ ಮಕ್ಕಳು ಮೈದಾನಕ್ಕಾಗಮಿಸಿ ಅಭ್ಯಾಸ ಮಾಡಬೇಕೆಂದು ಹೇಳಿದರು.

  ಇದೇ ಸಂದರ್ಭ ಪೋಷಕರ ಪರವಾಗಿ ತರಬೇತುದಾರ ಕ್ರಿಸ್ಟೋಫರ್ ಅವರನ್ನು ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು. ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಈ ಸಂದರ್ಭ ಎಂಸಿಸಿ ಕಾರ್ಯದರ್ಶಿ ಉಮೇಶ್‌ಕುಮಾರ್, ಎಂಸಿಸಿ ಆಟಗಾರ ಸುರ್ಜಿತ್, ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು. ಎಂಸಿಸಿ ಉಪಾಧ್ಯಕ್ಷ ಕುಡೆಕಲ್ ಸಂತೋಷ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಶಿಬಿರಾರ್ಥಿಗಳಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Post navigation

ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟಿನ್…
ಕಾಡಾನೆ ಸೆರೆಗೆ ಅನುಮತಿ ನೀಡುವಂತೆ  ಮುಖ್ಯಮಂತ್ರಿಗೆ ಶಾಸಕ ಪೊನ್ನಣ್ಣ ಮನವಿ ಸಂಕೇತ್ ಪೂವಯ್ಯ ಹೇಳಿಕೆ…

Related Posts

ಪೊನ್ನಂಪೇಟೆಯಲ್ಲಿ ಲೋಕಾಯುಕ್ತ ದೂರು ಅರ್ಜಿ ಸ್ವೀಕಾರ

ಪೊನ್ನಂಪೇಟೆಯಲ್ಲಿ ಲೋಕಾಯುಕ್ತ ದೂರು ಅರ್ಜಿ ಸ್ವೀಕಾರ

06/03/202506/03/2025nadubadenews@gmail.com
ಹಾಕಿ ಅಂಪೈರ್‌ ಆಗಿ ಬೊಳ್ಳಚಂಡ ಎಂ. ನಾಣಯ್ಯ

ಹಾಕಿ ಅಂಪೈರ್‌ ಆಗಿ ಬೊಳ್ಳಚಂಡ ಎಂ. ನಾಣಯ್ಯ

19/06/202519/06/2025nadubadenews@gmail.com
ತಲೆಕಾವೇರಿ, ಸೂರ್ಲಬ್ಬಿ ನಡುವೆ ಮಳೆ ಸ್ಪರ್ಧೇ; ಕಾವೇರಿ ದ್ವಿಶತಕ, ಸೂರ್ಲಬ್ಬಿಯೂ ಸಮೀಪದಲ್ಲಿ

ತಲೆಕಾವೇರಿ, ಸೂರ್ಲಬ್ಬಿ ನಡುವೆ ಮಳೆ ಸ್ಪರ್ಧೇ; ಕಾವೇರಿ ದ್ವಿಶತಕ, ಸೂರ್ಲಬ್ಬಿಯೂ ಸಮೀಪದಲ್ಲಿ

17/07/202517/07/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version