https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸಕಾಲ ಸೇವೆ ನಾಗರಿಕರ ಹಕ್ಕು, ಸಕಾಲ ಮಿಷನ್  ಆಡಳಿತಾಧಿಕಾರಿ ನಿವೇದಿತಎಸ್ …

ಸಕಾಲ ಸೇವೆ ನಾಗರಿಕರ ಹಕ್ಕು, ಸಕಾಲ ಮಿಷನ್ ಆಡಳಿತಾಧಿಕಾರಿ ನಿವೇದಿತಎಸ್ …

News, Informatin , Enteetinement and Advertisement
24/04/202524/04/2025nadubadenews@gmail.comLeave a Comment on ಸಕಾಲ ಸೇವೆ ನಾಗರಿಕರ ಹಕ್ಕು, ಸಕಾಲ ಮಿಷನ್ ಆಡಳಿತಾಧಿಕಾರಿ ನಿವೇದಿತಎಸ್ …
Spread the love
ಸಕಾಲ ಸೇವೆ ನಾಗರಿಕರ ಹಕ್ಕು, ಸಕಾಲ ಮಿಷನ್  ಆಡಳಿತಾಧಿಕಾರಿ ನಿವೇದಿತಎಸ್ …

        ಮಡಿಕೇರಿ ಏ.24:- ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ಮತ್ತು (ತಿದ್ದುಪಡಿ) ಅಧಿನಿಯಮ 2014ರ ಅನುಸಾರ, ಸಕಾಲ ಅಧಿಸೂಚಿತ ಸೇವೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪಡೆಯುವುದು ನಾಗರಿಕರ ಹಕ್ಕಾಗಿದೆ. ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಯು ವಿಳಂಬವಾದಲ್ಲಿ ಅಥವಾ ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಯು ತಿರಸ್ಕೃತಗೊಂಡಲ್ಲಿ ಅಥವಾ ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಗೆ 15 ಸಂಖ್ಯೆಯ ಸಕಾಲ ಸ್ವೀಕೃತಿ ಸಂಖ್ಯೆ ನೀಡದಿದ್ದಲ್ಲಿ ಈ ಮೂರು ಸಂದರ್ಭಗಳಲ್ಲಿ ನಾಗರಿಕರು ಸಕಾಲ ಕಾಯ್ದೆಯಡಿ, ಪ್ರಥಮ ಮೇಲ್ಮನವಿಯನ್ನು ಸಕ್ಷಮ ಅಧಿಕಾರಿಗಳಿಗೆ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ.

      ಮೇಲ್ಮನವಿ ಸಲ್ಲಿಸುವ ಕಾರ್ಯವಿಧಾನ; ಸಹಾಯವಾಣಿ ಕೇಂದ್ರದ 080-44554455 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಸಕಾಲ ಮಿಷನ್ ಜಾಲತಾಣಕ್ಕೆ ಭೇಟಿ ನೀಡಿ, ಮೇಲ್ಮನವಿ ಸಲ್ಲಿಸಬಹುದು. ಅಥವಾ ಸೇವೆಗೆ ನೋಂದಾಯಿಸಿಕೊಳ್ಳುವ ಸಂದರ್ಭದಲ್ಲಿ ನೀವು ನೀಡಿದ ಮೊಬೈಲ್ ಸಂಖ್ಯೆಗೆ, ಸೇವೆ ವಿಳಂಬವಾದರೆ ಅಥವಾ ತಿರಸ್ಕೃತಗೊಂಡರೆ ಸಕಾಲ ಮಿಷನ್ ಕಡೆಯಿಂದ ಟೆಸ್ಟ್ ಲಿಂಕ್ ಕಳುಹಿಸಲಾಗುತ್ತದೆ. ನಾಗರಿಕರು ಲಿಂಕ್ ಅನ್ನು ಪ್ರೆಸ್ ಮಾಡುವ ಮೂಲಕ ಮೇಲ್ಮನವಿ ಸಲ್ಲಿಸಬಹುದು.

   ಅರ್ಜಿಯನ್ನು ಇತ್ಯರ್ಥಗೊಳಿಸುವಲ್ಲಿ ವಿಳಂಬವಾದಲ್ಲಿ, ಒಂದು ಅರ್ಜಿಗೆ ದಿನ ಒಂದಕ್ಕೆ 20 ರೂ.ನಂತೆ, ಗರಿಷ್ಠ 500 ರೂ.ವರೆಗೆ ಪರಿಹಾರ ವೆಚ್ಚ ಪಡೆಯುವುದು ಮೇಲ್ಮನವಿದಾರರ ಹಕ್ಕಾಗಿರುತ್ತದೆ. ಯಾವುದೇ ಸಂದರ್ಭದಲ್ಲಿ ಪ್ರಥಮ ಮೇಲ್ಮನವಿಯ ತೀರ್ಪು ಬಗ್ಗೆ ಅಸಮಾನಧಾನವಿದ್ದಲ್ಲಿ ದ್ವಿತೀಯ ಮೇಲ್ಮನವಿಯನ್ನು ಮೇಲ್ಮನವಿ ಪ್ರಾಧಿಕಾರಕ್ಕೆ ನಾಗರಿಕರು ಸಲ್ಲಿಸಲು ಅವಕಾಶವಿದೆ ಎಂದು  ಸಕಾಲ ಮಿಷನ್ ಆಡಳಿತಾಧಿಕಾರಿ ನಿವೇದಿತ ಎಸ್. ಅವರು ತಿಳಿಸಿದ್ದಾರೆ.

Post navigation

ಮುದ್ದಂಡ ಕಪ್ ಹಾಕಿ ನಮ್ಮೆ,1975 ವಿಶ್ವಕಪ್ ವಿಜೇತ ಪೈಕೇರ ಕಾಳಯ್ಯನವರಿಗೆ ಗೌರವ…
ಕೊಡಗು ಕಾಂಗ್ರೆಸ್‌ ಭೀಷ್ಮ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅಸ್ತಂಗತ…

Related Posts

ಸಂವಿಧಾನಿಕ ಹಕ್ಕೊತ್ತಾಯಕ್ಕಾಗಿ ನಾಳೆ ಸಿ.ಎನ್.ಸಿ ಸತ್ಯಾಗ್ರಹ…

ಸಂವಿಧಾನಿಕ ಹಕ್ಕೊತ್ತಾಯಕ್ಕಾಗಿ ನಾಳೆ ಸಿ.ಎನ್.ಸಿ ಸತ್ಯಾಗ್ರಹ…

13/02/202513/02/2025nadubadenews@gmail.com
ಕೊಡಗು ಕಾಂಗ್ರೆಸ್‌ ಭೀಷ್ಮ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅಸ್ತಂಗತ…

ಕೊಡಗು ಕಾಂಗ್ರೆಸ್‌ ಭೀಷ್ಮ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅಸ್ತಂಗತ…

24/04/202524/04/2025nadubadenews@gmail.com
ಕೊಡವ ಸಾಹಿತ್ಯ ಅಕಾಡೆಮಿ, ಕವಿಘೋಷ್ಟಿಗೆ ಕವನಗಳ ಆಹ್ವಾನ

ಕೊಡವ ಸಾಹಿತ್ಯ ಅಕಾಡೆಮಿ, ಕವಿಘೋಷ್ಟಿಗೆ ಕವನಗಳ ಆಹ್ವಾನ

12/07/202512/07/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version