
ಎರಡು ದಶಕಗಳಿಂದ ಕೊಡವ ಕೌಟುಂಬಿಕ ಹಾಕಿ ಹಬ್ಬ ಹಾಗೂ ಇತರ ಪಂದ್ಯಾವಳಿಗಳಲ್ಲಿ ವೀಕ್ಷಕ ವಿವರಣೆಯನ್ನು ಮಾಡುತ್ತಾ, ತಮ್ಮ ಕಂಚಿನ ಕಂಟಗಳಿಂದ ಹಾಕಿ ಪ್ರೇಮಿಗಳನ್ನು ರಂಜಿಸುತ್ತಾ, ಆಟಗಾರರನ್ನು, ಆಯೋಜಕರನ್ನು ಹುರಿ ದುಂಬಿಸುವ ಚೆಪ್ಪುಡೀರ ಕಾರ್ಯಪ್ಪ ಹಾಗೂ ಮಾಳೇಟಿರ ಶ್ರೀನಿವಾಸ್ ಅವರುಗಳ ಧ್ವನಿಯನ್ನು ಹಾಕಿ ಮೈದಾನದಲ್ಲಿ ಕೇಳದವರೇ ವಿರಳ.
ಇಬ್ಬರು ಹಾಕಿಯ ಗೋಲ್ ಕೀಪರ್ ಗಳು ಹಾಗೂ ನೆಚ್ಚಿನ ಸ್ನೇಹಿತರಾದ ಇವರಿಬ್ಬರೂ, ಕೊಡಗಿನ ಹೆಸರಾಂತ ವೀಕ್ಷಕ ವಿವರಣೆಗಾರರಾದ, ಕೋದಂಡ ಗಣಪತಿ ಹಾಗು ದ್ವಿಭಾಷಾ ಪರಿಣಿತ ಮನೆಯಪಂಡ ಹರೀಶ್ ನಾಚಪ್ಪ ಅವರ ನಿಧನದ ನಂತರ, ಅವರ ಸ್ಥಾನವನ್ನು ಅಷ್ಟೇ ಚಾಕಚಕ್ಯತೆ ಹಾಗೂ ಗಾಂಭೀರ್ಯತೆಯಿಂದ ತುಂಬಿರುವ ಈ ಜೋಡಿಗಳಲ್ಲಿ, ಚೆಪ್ಪುಡೀರ ಕಾರ್ಯಪ್ಪನವರು 2000ನೇ ಇಸವಿಯಲ್ಲಿ ವೀಕ್ಷಕ ವಿವರಣೆ ಪ್ರಾರಂಭಿಸಿದರೆ, ಆ ನಂತರದ ದಿನಗಳಲ್ಲಿ, ಮಾಳೇಟಿರ ಶ್ರೀನಿವಾಸ್ ಅವರು ಜೊತೆಗೂಡಿದರು. ಇವರಿಬ್ಬರು ಮೈಕ್ ಹಿಡಿದು, ತಮ್ಮ ಮಾತಿನ ಶೈಲಿಯ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಆಟಗಾರರ ದೃಶ್ಯ ಮೂಡಿಸುವಂತಹ ಅದ್ಭುತ ಕಲೆಯನ್ನು ಹೊಂದಿದ್ದಾರೆ.
ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಮಟ್ಟದ ಹಾಕಿಯ ನಿಯಮಗಳನ್ನು, ರಸಪ್ರಶ್ನೆಗಳನ್ನು ಕ್ರೀಡಾ ಪ್ರೇಮಿಗಳಿಗೆ ಸವಾಲುಗಳಂತೆ ನೀಡಿ ಅವರನ್ನು ರಂಜಿಸುತ್ತಾ, ಜನಮಾನಸದಲ್ಲಿ ಹಾಕಿಯ ರಸೌತಣವನ್ನೇ ಉಣ ಬಡಿಸುತ್ತಾರೆ. ಕೊಡಗಿನ ಹಾಕಿಯ ವೀಕ್ಷಕ ವಿವರಣೆಗಾರರು
ಎರಡು ದಶಕಗಳ ಕಾಲದಿಂದ ಕೌಟುಂಬಿಕ ಹಾಕಿ ಹಬ್ಬ ಹಾಗೂ ಇತರ ಪಂದ್ಯಾವಳಿಗಳಲ್ಲಿ ವೀಕ್ಷಕ ವಿವರಣೆಯನ್ನು ಮಾಡುತ್ತಾ ಬರುತ್ತಿರುವ ಚೆಪ್ಪುಡೀರ ಕಾರ್ಯಪ್ಪ ಹಾಗು ಮಾಳೇಟಿರ ಶ್ರೀನಿವಾಸ್ ಇಬ್ಬರು ಹಾಕಿಯ ಗೋಲ್ ಕೀಪರ್ ಗಳು ಹಾಗೂ ನೆಚ್ಚಿನ ಸ್ನೇಹಿತರು.
ಕೊಡಗಿನ ಹೆಸರುವಾಸಿಯಾದ ವೀಕ್ಷಕ ವಿವರಣೆಗಾರರಾದ ಕೋದಂಡ ಗಣಪತಿ ಹಾಗು ದ್ವಿಭಾಷಾ ಪರಿಣಿತ ಮನೆಯಪಂಡ ಹರೀಶ್ ನಾಚಪ್ಪ ಅವರ ನಿಧನದ ನಂತರ ಚೆಪ್ಪುಡೀರ ಕಾರ್ಯಪ್ಪನವರು 2000 ಇಸವಿಯಲ್ಲಿ ವೀಕ್ಷಕ ವಿವರಣೆ ಪ್ರಾರಂಭಿಸಿದರು. ತದನಂತರ ಮಾಳೇಟಿರ ಶ್ರೀನಿವಾಸ್ ಅವರು ಜೊತೆಗೂಡಿದರು. ಇವರಿಬ್ಬರು ಧ್ವನಿವರ್ಧಕದಲ್ಲಿ ತಮ್ಮ ಮಾತಿನ ಶೈಲಿಯ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಆಟಗಾರರ ದೃಶ್ಯ ಮೂಡಿಸುವಂತಹ ಅದ್ಭುತ ಕಲೆಯನ್ನು ಹೊಂದಿದ್ದರು.
ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಮಟ್ಟದ ಹಾಕಿಯ ನಿಯಮಗಳನ್ನು, ರಸಪ್ರಶ್ನೆಗಳನ್ನು ಕ್ರೀಡಾ ಪ್ರೇಮಿಗಳಿಗೆ ಸವಾಲುಗಳಂತೆ ನೀಡಿ ಅವರನ್ನು ರಂಜಿಸುತ್ತಿದ್ದರು.
ಎರಡು ದಶಕಗಳಿಂದ ಏನನ್ನು ಬಯಸದೆ ಅದೆಷ್ಟೋ ಆಟಗಾರರ ಭವಿಷ್ಯವನ್ನು ರೂಪಿಸಿದರು. ಕಾರ್ಯಪ್ಪನವರು ಲೇಖನಗಳ ಮೂಲಕ ಅದೆಷ್ಟೋ ತೆರೆಯ ಮರೆಯ ಆಟಗಾರರನ್ನು ಪರಿಚಯಿಸಿದರು. ತಮ್ಮ ಶಬ್ದಕೋಶ ಹಾಗೂ ಹಾಕಿಯ ಜ್ಞಾನ ಮುಂದಿನ ಪೀಳಿಗೆಯ ತಿಳಿಯುವಂತಾಗಲಿ ಎಂಬುದೊಂದೆ ಇವರ ಉದ್ದೇಶ.
ಹಾಕಿ ಕ್ರೀಡೆಗೆ ಕಪ್ಪು ಚುಕ್ಕೆ ಬಾರದಂತೆ, ತಮ್ಮ ಹಿರಿಯರ ಮಾರ್ಗದರ್ಶನದಲ್ಲಿ ಒಂದು ಚೌಕಟ್ಟಿನೊಳಗೆ ಹಾಕಿಯ ಕಲೆಯನ್ನು ಭಾಷೆ, ಅಂಕಿ ಅಂಶಗಳು, ಸಾರಾಂಶ ಎಲ್ಲವನ್ನು ಒಮ್ಮನಸ್ಸಿನಿಂದ ಕ್ರೀಡಾಭಿಮಾನಿಗಳ ಮನ ಮುಟ್ಟಿಸುವ ವೀಕ್ಷಕ ವಿವರಣೆಗಾರರು, ಮದುವೆಯಲ್ಲಿ ಮಂಗಳವಾದ್ಯವಿದ್ದಂತೆ. ಆದರೆ ಕೆಲವೊಮ್ಮೆ ಊಟ ಮುಗಿಯುವವರೆಗೂ ಅಷ್ಟೇ ಬಾಳೆ ಎಲೆಯ ಉಪಯೋಗ ಎಂಬಂತೆ, ನುರಿತವರನ್ನು ಬದಿಗಿರಿಸುವುದು, ಹಾಕಿಯ ಭವಿಷ್ಯಕ್ಕೆ ತೊಡಕಾಗಬಹುದು, ಇಂತಹ ಜ್ಞಾನ ಭಂಡಾರಗಳು ಕೊಡಗಿನ ಹೆಮ್ಮೆ ಮತ್ತು ಪ್ರತಿಷ್ಟೆ. ಹೊಸ ನೀರು ಬರುವಾಗ ಹಳೆಯ ನೀರು ಕೊಚ್ಚಿ ಹೋಗಲೇಬೇಕು. ಯುವ ವೀಕ್ಷಕ ವಿವರಣೆಗಾರರು ಬರಲಿ, ಕೊಡಗಿನ ಹಾಕಿಯ ಗತವೈಭವವನ್ನು ಎತ್ತಿ ಹಿಡಿಯಲಿ ಎಂಬುದು ಇವರಿಬ್ಬರ ಮನದಾಳದ ಮಾತುಗಳು.
ಮುಂದಿನ ದಿನಮಾನಗಳಲ್ಲಿಯೂ ಹಾಕಿಯ ಬೆಳವಣಿಗೆಯ ಬೆಳಕುಗಳಾಗಿ, ಪರಿಣತರೊಂದಿಗೆ, ಹುಮ್ಮಸಿನ ಯುವಕರನ್ನೂ ಸೇರಿಸಿದರೆ ಹಾಕಿಯ ಬೆಳವಣಿಗೆಗ ಪೂರಕವಾಗಬಹುದು. ಒಂದು ಆಟ ಅಥವಾ ಸ್ಪರ್ಧೆಯನ್ನು ಹಬ್ಬವಾಗಿ, ಮನರಂಜನೆಯಾಗಿ ರೂಪಿಸುವಲ್ಲಿ ವೀಕ್ಷಕ ವಿವರಣೆಗಾರ, ನಿಪುಣತೆ, ಸ್ಪಷ್ಟತೆ, ನಿರರ್ಗಳತೆ, ವಿಚಾರದ ಅರಿವು, ವರ್ಣಿಸುವ ನೈಪುಣ್ಯತೆಯಿದ್ದರೆ ಅದೊಂದು ಪರಿಪೂರ್ಣತೆಯ ಹಬ್ಬವಾಗಿ ಮಾರ್ಪಡಲಿದೆ.
ಈ ಎಲ್ಲಾ ಅಂಶಗಳನ್ನು ಹೊಂದಿರುವ, ಕ್ರೀಡಾ ಪ್ರೇಮಿಗಳಿಗೆ ಹಾಕಿಯ ಮೂಲೆ ಮಜಲುಗಳನ್ನು ಎಳೆ ಎಳೆಯಾಗಿ ತೆರೆದಿಡುವ ನಿಪುಣರಾದ ಚೆಪ್ಪುಡಿರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್ ಅವರು, ವಾಲಗದ ನಡುವೆ ಉಲ್ಲಾಸಿತಗೊಳಿಸುವ ಜೋಡ್ ಕೊಂಬುಗಳಿದ್ದಂತೆ. ಇವರ ಕಂಚಿನ ಧ್ವಿನಿ ಮತ್ತಷ್ಟು ಕಾಲ ಕೊಡಗಿನ ಕ್ರೀಡಾ ಹಬಬ್ಗಳಲ್ಲಿ ರಾರಾಜಿಸಲಿ ಎಂಬುದು ಹಾಕಿ ಪ್ರೇಮಿಗಳ ಮನದಾಸೆ…
ಚೆಪ್ಪುಡಿರ ಕಾರ್ಯಪ್ಪ ಮಾತನಾಡುವ ಶೈಲಿ ಯಾರಿಗೂ ಬರುವುದಿಲ್ಲ ಹಾಕಿಯ ಬಗ್ಗೆ ಅರಿವೀಕೆ ಅವರಿಗಿರುವ ಜ್ಞಾನ ಅಪಾರ….. ಪ್ರತಿಯೊಂದು ಅವರ ವಿಶ್ಲೇಷಣ ಸಮಯದಲ್ಲಿ ಉದಹರಣೆಯೊಂದಿಗೆ ಅದನ್ನು ಅವರು ಜನರಿಗೆ ತಲುಪಿಸುತ್ತಾರೆ….. ಹಾಕಿ ಪಂದ್ಯವಳಿ ನಡೆಯುವಾಗ ಅವರು ಜನರಿಗೆ ಅನೇಕ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ಹೇಳಿದವರಿಗೆ ತಮ್ಮ ಸ್ವಂತ ದುಡ್ಡಿನಿಂದ ಪ್ರಶಸ್ತಿಯಾಗಿ ಕೊಟ್ಟಿದನ್ನು ಕಂಡಿದ್ದೇನೆ.