
ಸೋಮವಾರಪೇಟೆ, ಮಾ.03: (ಸುಮತಿ ಬಿ.ಪಿ) ಹಲವಾರು ವರ್ಷಗಳ ಹೋರಾಟದ ಪ್ರತಿಫಲವಾಗಿ ಕೊಡಗಿಗೆ ದಕ್ಕಿರುವ ವಿಶ್ವ ವಿದ್ಯಾನಿಲಯವನ್ನು. ರಾಜ್ಯ ಸರಕಾರ ಮುಚ್ಚುವುದಿಲ್ಲ ಎಂದು ಅಧಿಕೃತಗೊಳಿಸುವವರೆಗೆ ಕರವೇ ಹೋರಾಟ ಮುಂದುವರೆಯುತ್ತದೆ ಎಂದು ಕರ್ನಾಟಕ ರಕ್ಷಣಾವೇದಿಕೆ ಕೊಡಗು ಜಿಲ್ಲಾಧ್ಯಕ್ಷ ದೀಪಕ್ ಕನ್ನಡಿಗ ಹೇಳಿದರು.
ಸರ್ಕಾರದ ಉಪಸಮಿತಿಯು ಅನುದಾನದ ಕೊರತೆ ಎಂದುವಿಶ್ವ ವಿದ್ಯಾಲಯವನ್ನು ಮುಚ್ಚಲು ಮುಂದಾಗಿರುವ ಸರ್ಕಾರದ ನಿರ್ಧಾರ ಖಂಡಿಸಿಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲೆ ವತಿಯಿಂದ, ಸೋಮವಾರಪೇಟೆ ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್ ಅವರ ಮೂಲಕ, ಜಿಲ್ಲಾಧಿಕಾರಿ ಮತ್ತು ರಾಜ್ಯಪಾಲರಿಗೆ ವಿಶ್ವವಿದ್ಯಾಲಯ ಉಳಿಸುವಂತೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೆ ಆರ್, ಜಿಲ್ಲಾ ಉಪಾಧ್ಯಕ್ಷ ಚಂದ್ರು, ಜಿಲ್ಲಾ ಯುವ ಘಟಕದ ಸಂಚಾಲಕರಾದ ನಿತನ್ ಮಿಟ್ಟು, ನಗರ ಘಟಕದ ಅಧ್ಯಕ್ಷರಾದ ಮಂಜುನಾಥ್, ನಗರ ಕಾರ್ಯದರ್ಶಿ ಕೆ ಪಿ ರವೀಶ್, ಸಹಕಾರ್ಯದರ್ಶಿ ದೇವೇಂದ್ರ, ಪ್ರಮುಖರಾದ ಮೊಹಮ್ಮದ್ ಶಫಿ, ರಾಘು ಕರ್ಕಳ್ಳಿ, ಬಿ. ಎಂ ದಾಮೋದರ, ಜಗನ್ನಾಥ್, ಲೋಕೇಶ್ ಕಂಬಳ್ಳಿ, ಇಬ್ರಾಹಿಂ ಕಲ್ಕಂದೂರು, ಸುಮತಿ, ಸಿಮ್ರಾನ್, ಸಾಜನ್, ಮತ್ತಿತರು ಇದ್ದರು.