
(ಪತ್ರದ ಯತಾ ನಕಲು)
ವಿರಾಜ ಪೇಟೆ, ಫೆ.12: ಇತ್ತೀಚೆಗೆ ಕೊಡವ ಸಂಸ್ಕೃತಿಯನ್ನಾಚರಿಸುವ ಎಲ್ಲಾ ಜನಾಂಗಗಳು ಒಟ್ಟಾಗಿ, ಕುಟ್ಟದಿಂದ ಮಡಿಕೇರಿಗೆ ಬೃಹತ್ ಪಾದಯಾತ್ರೆ ಕೈಗೊಂಡು, 07/2/2025ರಂದು, ಮಡಿಕೇರಿಯಲ್ಲಿ ಸರಿಸುಮಾರು 65000ಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ, ಜಿಲ್ಲಾಧಿಕಾರಿಗಳ ಮೂಲಕ ತಮ್ಮ ಸಾಂಸ್ಕೃತಿಕ ಹಾಗೂ ಸಂವಿಧಾನಿಕ ಭದ್ರತೆಗಾಗಿ ಮನವಿ ಪತ್ರ ಸಲ್ಲಿಸಿದರು. ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಸಲ್ಲಿಸಿದ ಈ ಮನವಿ ಪತ್ರದ ಯತಾನಕಲನ್ನು ಇಲ್ಲಿ ಪ್ರಕಟಿಸಲಾಗಿದೆ.
ಗೆ,
1. ಮಾನ್ಯ ಪ್ರಧಾನ ಮಂತ್ರಿಗಳು
ಭಾರತ ಸರ್ಕಾರ,
ಸೌತ್ ಬ್ಲಾಕ್,
ನವದೆಹಲಿ – 110011
2. ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ವಿಧಾನ ಸೌಧ
ಬೆಂಗಳೂರು -560001
ಮಾನ್ಯ ಜಿಲ್ಲಾಧಿಕಾರಿಗಳು
ಕೊಡಗು ಜಿಲ್ಲೆ
ಮಡಿಕೇರಿ 571201,
ಇವರುಗಳ ಮುಖಾಂತರ
ಮಾನ್ಯರೆ,
ವಿಷಯ: ಕೊಡವ ಜನಾಂಗ ಮತ್ತು ಕೊಡವ ಸಂಸ್ಕೃತಿಯ ಸಮಗ್ರ ಅಸ್ಥಿತ್ವದ ಮೆಲೆ ನಡೆಯುತ್ತಿರುವ ಜನಾಂಗೀಯ ತಾರತಮ್ಯ, ದಬ್ಬಾಳಿಕೆ ಹಾಗು ಸಂವಿದಾನಾತ್ಮಕ ಹಕ್ಕುಗಳನ್ನು ಕಸಿಯುವ ಹಾಗು ತಡೆಯುವ ಯತ್ನದ ಕುರಿತಂತೆ..
“ ಎಲ್ಲಿ ಭೂರಮೆ ದೇವ ಸನ್ನಿದಿ |ü
ಬಯಸಿ ಭಿಮ್ಮನೆ ಬಂದಳೋ |
ಎಲ್ಲಿ ಮೋಹನ ಗಿರಿಯ ಬೆಡಗಿನ |
ರೂಪಿನಿಂದಲಿ ನಿಂದಳೋ |
ಎಲ್ಲಿ ಮುಗಿಲಲಿ ಮಿಂಚಿನೋಲ್ |
ಕಾವೇರಿ ಹೊಳೆ ಹೊಳೆ ಹೊಳೆವಳೋ |
ಎಲ್ಲಿ ನೆಲವನು ತಣಿಸಿ, ಜನಮನ |
ಹೊಲದ ಕಳೆ ಕಳೆ ಕಳೆವಳೋ |
ಅಲ್ಲಿ ಆಕಡೆ ನೋಡಲಾ |
ಅಲ್ಲಿ ಕೊಡಗರ ನಾಡಲಾ |
ಅಲ್ಲಿ ಕೊಡವರ ಬೀಡಲಾ| ”
ಕೊಡಗಿನ ಸೌಂದರ್ಯ ಹಾಗು ಕೊಡವರ ಪಾರಂಪರ್ಯವನ್ನು ಬಣ್ಣಿಸಿ ಕವಿ ‘ಪಂಜೆಮAಗೇಶರಾಯ’ರು ಬರೆದ ಈ ಪದ್ಯದ ಸಾಲುಗಳಲ್ಲೇ ಕೊಡಗಿನ ಬೆಡಗು, ಕೊಡವರ ಪಾರಂಪರ್ಯ, ಕೊಡವರು ಹಾಗು ಈ ಮಣ್ಣಿನ ಅವಿನಾಬಾವ ಸಂಬAದ, ಕೊಡವರ ಸಾಂಸ್ಕೃತಿಕ ಹಿರಿಮೆ, ಗುಣ ಸ್ವಭಾವಗಳು ಹಾಗು ಕೊಡವರ ಸಮಗ್ರ ಅಸ್ಥಿತ್ವ ಅನಾವರಣಗೊಳ್ಳುತ್ತದೆ.
ಅಂತೆಯೇ, ಕೊಡಗು ಜಿಲ್ಲೆಯ ಪ್ರಧಾನ ಆದಿ ಮೂಲನಿವಾಸಿಗಳಾಗಿ, ಕೊಡಗು ಎಂಬ ಪುಟ್ಟ ಬೌಗೋಳಿಕ ಪ್ರದೇಶದಲ್ಲಿ ತಮ್ಮ ಸಾಂಸ್ಕೃತಿಕ ಹಾಗು ಪಾರಂಪರಿಕ ಅಸ್ಥಿತ್ವವನ್ನು ಕಂಡುಕೊAಡಿರುವ ಕೊಡವ ಸಮುದಾಯವು, ಇಂದು ತಮ್ಮ ತಾಯಿ ನೆಲದಲ್ಲಿಯೇ ತಾರತಮ್ಯತೆಯನ್ನು ಎದುರಿಸುವುದರ ಮೂಲಕ ದಬ್ಬಾಳಿಕೆಗೆ ಒಳಗಾಗುತ್ತಿರುವುದು ವಿರ್ಯಾಸವೇ ಸರಿ. ಸದಾ ರಾಷ್ಟಿçÃಯ ಚಿಂತನೆಯೊAದಿಗೆ, ದೇಶದ ಅಸ್ಮಿತೆಗೆ ಪೂರಕವಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುವುದರ ಮೂಲಕ, ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಿಕೊಂಡು, ತಮ್ಮ ಸಾಂಸ್ಕೃತಿಕ ವೈಭವÀ ಮತ್ತು ಪಾರಂಪರಿಕ ವೈಶಿಷ್ಟö್ಯತೆಯ ಮೂಲಕ ಜಾಗತಿಕ ಮನ್ನಣೆಯನ್ನು ಪಡೆದುಕೊಂಡಿದೆ. ತಮ್ಮ ಹಾವ ಭಾವದಲ್ಲಿ ಗಂಭೀರತೆ, ನಡೆ ನುಡಿಯಲ್ಲಿ ಪ್ರಾಮಣಿಕತೆಯನ್ನು ರೂಡಿಸಿಕೊಳ್ಳುವ ಮೂಲಕ ತಮ್ಮದೇ ಆದ ವೈಶಿಷ್ಟö್ಯತೆಯನ್ನು ಕಾಪಾಡಿಕೊಳ್ಳುತ್ತಾ, ಎಲ್ಲಾ ಕಾಲಘಟ್ಟದಲ್ಲೂ ವಿಸ್ತರಣಾವಾದದ ಗುಂಗಿನಿAದ ಹೊರಗುಳಿದುಕೊಂಡು, ಈ ಕೊಡಗು ಎಂಬ ಸೀಮಿತ ಭೂಪ್ರದೇಶದಲ್ಲಿ ತಮ್ಮ ಅಸ್ಥಿತ್ವವನ್ನು ಕಂಡುಕೊAಡು ಸ್ವಯಂ ಪರಿಶ್ರಮದಿಂದಲೇ ಬದುಕು ಕಟ್ಟಿಕೊಂಡಿರುವ ಅಪರೂಪದ ಸಮುದಾಯ ಈ ಕೊಡವ ಸಮುದಾಯವಾಗಿದೆ.
ಪೌರಾಣಿಕ ಹಿನ್ನಲೆ, ಬೌಗೋಳಿಕ ಪುರಾವೆಗಳು, ಇತಿಹಾಸದ ಪುಟಗಳಲ್ಲಿ ಜೆ. ಕಾಗಿಂಗ್ ಬ್ರೌನ್, ಹೆಚ್. ಮ್ಯಾಂಗ್ಲಿನ್, ಬಿಷಪ್ ಕಾಲ್ಡ್ವೆಲ್, ಎಂ.ಶ್ರೀನಿವಾಸನ್, ಡಿ. ಕೃಷ್ಣಯ್ಯ, ಸರ್ಯನಾಥ ಕಾಮತ್, ಪಂಜೆ ಮಂಗೇಶರಾಯರು ಮುಂತಾದ ಲೇಖಕರ ಬರವಣಿಗೆಯಲ್ಲಿನ ಶತಮಾನಗಳ ಹಿಂದಿನ ಉಲ್ಲೇಖಗಳು ಕೊಡವ ಸಮುದಾಯವು ಈ ಮಣ್ಣಿನ ಆದಿಮೂಲನಿವಾಸಿಗಳಾಗಿ ಹತ್ತು ಸಾವಿರ ವರ್ಷಗಳಿಗೂ ಹಿಂದಿನಿAದಲೇ ಈ ಮಣ್ಣಿನಲ್ಲಿ ಅಸ್ಥಿತ್ವವನ್ನು ಕಂಡುಕೊAಡಿದೆ ಎಂಬುವುದನ್ನು ಸಾಕ್ಷೀಕರಿಸುತ್ತದೆ ಎಂಬುವುದನ್ನು ಈ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ.
ಇತಿಹಾಸದ ಪುಟಗಳಲ್ಲಿ, ಪ್ರತ್ಯೇಕ ದೇಶ, ಪ್ರಾಂತ್ಯ, ಪ್ರತ್ಯೇಕ ರಾಜ್ಯವಾಗಿ ಗುರ್ತಿಸಿಕೊಂಡಿದ್ದ ಕೊಡಗು, ಹಲವಾರು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದರೂ ಸಹ 1956ರ ತನಕ ತನ್ನ ಪ್ರತ್ಯೇಕ ಅಸ್ಥಿತ್ವವನ್ನು ಉಳಿಸಿಕೊಂಡಿತ್ತು. ಆದರೆ 1953ರ ರಾಜ್ಯ ಪುನರ್ಘಟನಾ ಆಯೋಗದ ಪರಿಕಲ್ಪನೆಯಂತೆ ಭಾಷಾವಾರು ಪ್ರಾಂತ್ಯ ರಚನೆಯ ಪ್ರಕ್ರೀಯೆಯಲ್ಲಿ 1956ರಲ್ಲಿ ವಿಶಾಲ ಕರ್ನಾಟಕದೊಂದಿಗೆ ವಿಲೀನವಾದ ನಂತರ, ಕೊಡಗು ಒಂದು ಜಿಲ್ಲೆಯಾಗಿ ಉಳಿಯಿತು. ಆ ಮೂಲಕ ಅನೇಕ ಸವಾಲುಗಳನ್ನು ಎದುರಿಸುವಂತಾಯಿತು. ಕೊಡಗು ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ರಾಜ್ಯ ಪುನರ್ಘಟನೆಯ ನೇರ ದುಷ್ಪರಿಣಾಮಗಳು ಕೊಡವ ಸಮುದಾಯಗಳು ಮತ್ತು ಕೊಡವ ಸಂಸ್ಕೃತಿ ಹಾಗು ಪರಂಪರೆಗಳ ಮೇಲೆ ನೇರ ಪ್ರಭಾವ ಬೀರಲಾರಂಬಿಸಿದವು ಎಂಬುವುದು ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ದಾಖಲಾಗಿರುವ ಕಟು ಸತ್ಯಗಳು.
ಪ್ರಭಾವಿ ಭಾಷೆಗಳನ್ನು ಆದಾರವಾಗಿಟ್ಟುಕೊಂಡು ಭಾಷಾವಾರು ಪ್ರಾಂತ್ಯ ರಚನೆ ಮಾಡುವ ಸಂಧರ್ಬದಲ್ಲಿ ರೂಪಿಸಿದ ನಿಯಮಾವಳಿಗಳಲ್ಲಿ ಬಹುಮುಖ್ಯವಾಗಿ, ಹಲವಾರು ಅಲ್ಪ ಸಂಖ್ಯಾತ ಭಾಷೆಗಳನ್ನಾಡುವ ವಿವಿಧ ಪಂಗಡಗಳ ಸಾಮಾಜಿಕ, ಸಾಂಸ್ಕೃತಿಕ, ಪಾರಾಂಪರಿಕ ಹಾಗು ಬೌಗೋಳಿಕ ಹಿತಾಸಕ್ತಿಗಳನ್ನು, ಬಹುಸಂಖ್ಯಾತರನ್ನೊಳಗೊAಡ ಸರ್ಕಾರಗಳು ಕಾಪಾಡಿಕೊಳ್ಳಬೇಕೆಂಬ ಸ್ಪಷ್ಟ ಉಲ್ಲೇಖವಿದ್ದರೂ, ಕೊಡಗಿನ ಹಾಗು ಕೊಡವರ ಮಟ್ಟಿಗೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಕೊಡವ ಹಾಗು ಕೊಡವ ಸಂಸ್ಕೃತಿ, ಆಚಾರ ವಿಚಾರಗಳು,ಪದ್ದತಿ ಪರಂಪರೆಗಳ ವಿಚಾರದಲ್ಲಿ ಮಲತಾಯಿ ದೋರಣೆಯನ್ನು ಅನುಸರಿಸುತ್ತಲೇ ಬಂದಿರುವುದು ವಿಷಾದನೀಯ.
ಆದರೆ, ಶತಮಾನಗಳಿಂದ ರಾಜಕೀಯ ಹಾಗು ಸಾಮಾಜಿಕ ಸ್ಥಿತ್ಯಂತರಗಳ ಕಪಿಮುಷ್ಠಿಯಲ್ಲಿ ನಲುಗಿದವರು ಕೊಡವರು. ಅದಾಗಲೇ ಹಲವಾರು ನರಮೇದಗಳಿಗೆ ಕೊಡವರು ಕೊರಳೊಡ್ಡಿಯಾಗಿತ್ತು. 1785ರಲ್ಲಿ ಟಿಪ್ಪು ಮೋಸದಿಂದ ಕೊಡವರ ಮೇಲೆ ನಡೆಸಿದ ‘ದೇವಾಟ್ಪರಂಬ್’ ನರಮೇದದಿಂದ ಬಹುತೇಕ ಕೊಡವರ ತಲೆಮಾರುಗಳೇ ನಾಶವಾಗಿ ಕೊಡಗು ಬಿಕೋ ಎನ್ನುತ್ತಿದ್ದ ಕೊಡಗಿನಲ್ಲಿ, ಆನಂತರದಲ್ಲಿ ನಡೆದ ಸಾಮಾಜಿಕ ಸ್ಥಿತ್ಯಂತರದಲ್ಲಿ, ಅದಾಗಲೇ ಕ್ಷೀಣಿಸಿದ್ದ ಕೊಡವ ಸಮುದಾಯದ ಜನ ಸಂಖ್ಯೆಯ ಜಾಗವನ್ನು ತುಂಬಲು ರಾಜಾಡಳಿತ ಹಾಗು ಬ್ರಿಟಿಷ್ ಆಡಳಿತಗಳು ಹೊರಗಿನಿಂದ ಹಲವು ಕುಟುಂಬಗಳನ್ನು ತಂದು ಕೊಡವ ಹಾಗು ಅಮ್ಮಕೊಡವರ ಜಾಗಗಳಲ್ಲಿ ತಂದು ಕೂರಿಸಿದ ಮೇರೆಗೆ ಕೊಡವರು ತಮ್ಮದೇ ನೆಲದಲ್ಲಿ ಸೂಕ್ಷಾö್ಮತಿಸೂಕ್ಷö್ಮ ಅಲ್ಪಸಂಖ್ಯಾತರಾಗಿಹೋಗಿದ್ದು ಇತಿಹಾಸ. ಆನಂತರದಲ್ಲಿ ಕೊಡವರ ಮೇಲೆ ನಡೆದುಕೊಂಡು ಬಂದ ದಬ್ಬಾಳಿಕೆಗಳು ಒಂದು ಭಾಗವಾದರೆ, 1956 ರ ನಂತರ ಕೊಡಗು ಕನಾಟಕದೊಂದಿಗೆ ವಿಲೀನವಾದ ನಂತರ ಕೊಡವರ ಮೇಲೆ ನಡೆಯುತ್ತಿರುವ ನಿರಂತರ ಸಾಮಾಜಿಕ, ಸಾಂಸ್ಕೃತಿಕ ಹಾಗು ರಾಜಕೀಯ ಶೋಷಣೆಗಳೇ ಒಂದು ಭಾಗ.
ಈ ನಿಟ್ಟಿನಲ್ಲಿ, ಇತ್ತೀಚೆಗೆÀ ಒಂದೆರಡು ದಶಕಗಳಿಂದ ಕೊಡವರ ಸಂಸ್ಕೃತಿ, ಪರಂಪರೆ, ಹಾಗು ಅಸ್ಥಿತ್ವದ ಮೇಲೆ ಕೆಲವು ಬಹುಸಂಖ್ಯಾತರೆನಿಸಿಕೊAಡ ಕಿಡಿಗೇಡಿಗಳಿಂದ ನಡೆಯುತ್ತಿರುವ ನೇರ ರಾಜಕೀಯ ಪ್ರೇರಿತ ದಬ್ಬಾಳಿಕೆಗಳು, ಜಾತಿ ನಿಂದನೆಗಳು, ಜನಾಂಗೀಯ ತಾರತಮ್ಯಗಳು, ಸಾಮಾಜಿಕ ಬಹಿಷ್ಕಾರದಂತಹ ಪ್ರಯತ್ನಗಳು ಕೊಡಗಿನಂತಹ ಜಿಲ್ಲೆಗೆ ಅವಮಾನಕರ ಬೆಳವಣಿಗೆಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ಒಂದು ವರ್ಗಕ್ಕೆ ಸೇರಿದ ಕೆಲವು ಕಿಡಿಗೇಡಿಗಳು, ನಿರಂತರವಾಗಿ ಕೊಡವರ ವಿರುದ್ಧ ಷಡ್ಯಂತರಗಳನ್ನು ರೂಪಿಸುತ್ತಾ, ಕೊಡವರ ಸಾಮಾಜಿಕ ಅಸ್ಥಿತ್ವದ ಬಗ್ಗೆ, ಸಾಂಸ್ಕೃತಿಕ ಹಿನ್ನಲೆಯ ವಿಷಯದಲ್ಲಿ, ಕೊಡವ ಮಹಿಳೆಯರು ಮಕ್ಕಳ ವಿಚಾರದಲ್ಲಿ, ಕೊಡವರ ಕೋವಿಯ ಹಕ್ಕಿನ ವಿಚಾರದಲ್ಲಿ, ಸಾಂವಿದಾನಿಕ ಹಕ್ಕುಗಳ ಬೇಡಿಕೆಯ ವಿಚಾರದಲ್ಲಿ, ಮಹಾನ್ ಸೇನಾನಿಗಳ ವಿಚಾರದಲ್ಲಿ ಅತ್ಯಂತ ಕೀಳುಮಟ್ಟದಲ್ಲಿ ಅಪಪ್ರಚಾರವನ್ನು ನಡೆಸುವುದರೊಂದಿಗೆ, ತಮ್ಮ ರಾಜಕೀಯ ಪ್ರಭಾವಗಳನ್ನು ಬಳಸಿ ಕೊಡವರ ವಿರುದ್ಧ ಷಡ್ಯಂತರಗಳನ್ನು ರೂಪಿಸುವುದರ ಮೂಲಕ, ಈ ನೆಲದಲ್ಲಿ ಕೊಡವರ ಅಸ್ಥಿತ್ವವನ್ನು ಅಳಿಸಿಹಾಕುವ ನಿರಂತರ ಪ್ರಯತ್ನವನ್ನು ನಡೆಸುತ್ತಾ ಬಂದಿರುವುದು ಎಲ್ಲರ ಗಮನದಲ್ಲಿರುವ ವಿಚಾರವಾಗಿದೆ.
ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಕಟ್ಟೆಮಾಡು ಮಹಾದೇವರ ದೇವಸ್ಥಾನದಲ್ಲಿ, ದುಷ್ಟಕೂಟವೊಂದು ಕೊಡವರ ಸಾಂಸ್ಕೃತಿಕ ಉಡುಗೆಯನ್ನು ಬಹಿಸ್ಕರಿಸುವ ಪ್ರಯತ್ನವನ್ನು ನಡೆಸಿದ್ದಲ್ಲದೆ, ಕೊಡವ ಸಾಂಸ್ಕೃತಿಕ ಉಡುಗೆಯಲ್ಲಿದ್ದ ಕೊಡವ ಪುರುಷರು ಹಾಗು ಮಹಿಳೆಯರ ಮೇಲೆ ಹಲ್ಲೆಯನ್ನು ನಡೆಸುವುದರ ಮೂಲಕ ಕೊಡವರ ಮೇಲಿನ ತಮ್ಮ ದ್ವೇಶವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದಿರುವುದು ಆತಂಕಕ್ಕೆ ಕಾರಣವಾಗಿದೆ. ವಿರ್ಯಾಸವೆಂದರೆ, ಬಹಿರಂಗವಾಗಿ, ಸಾರ್ವಜನಿಕ ಪ್ರದೇಶದಲ್ಲಿ ನೇರವಾಗಿ ಕೊಡವರ ಕುಪ್ಯ ಚೇಲೆಯನ್ನು ಬಹಿಷ್ಕರಿಸಿ ಅವಮಾನಿಸಿ, ಹಲ್ಲೆ ನಡೆಸಿ, ನೇರಾ ನೇರ ಬೆದರಿಕೆಯೊಡ್ಡುವ ದುಷ್ಟತನ ತೋರಿದ್ದರೂ, ಜಿಲ್ಲಾಡಳಿತದಿಂದಾಗಲಿ, ಜಿಲ್ಲಾ ಪೋಲೀಸ್ ವ್ಯವಸ್ಥೆಯಿಂದಾಗಲಿ, ಯಾವುದೇ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳದಿರುವುದು, ಸಂಶಯಕ್ಕೆ ಕಾರಣವಾಗಿದೆ.
ಇಷ್ಟು ಮಾತ್ರವಲ್ಲದೆ, ಈ ಕಿಡಿಗೇಡಿಗಳು ಹೊರ ಜಿಲ್ಲೆಗಳಿಂದ, ಹೊರರಾಜ್ಯಗಳಿಂದ ತಮ್ಮ ಜನಾಂಗದವರೆAದು ಬಿಂಬಿಸಿಕೊAಡ ಸಾವಿರಾರು ಆಗಂತುಕರನ್ನು ಕರೆಸಿಕೊಂಡು ಬಹಿರಂಗವಾಗಿ ಬಲಪ್ರದರ್ಶನ ನಡೆಸಲು ಜಿಲ್ಲಾಡಳಿತವು ಅನುವು ಮಾಡಿಕೊಡುವ ಮೂಲಕ ಕೊಡವರಿಗೆ ತಮ್ಮ ತಾಯಿ ನೆಲದಲ್ಲಿಯೇ ಬೆದರಿಕೆಯೊಡ್ಡಲು ಇವರಿಗೆ ಅವಕಾಶ ಕಲ್ಪಿಸಿರುವುದು, ಈ ಮಣ್ಣಿನ ಸುಸಂಸ್ಕೃತ ಮೂಲನಿವಾಸಿ ಬುಡಕಟ್ಟು ಕೊಡವ ಜನಾಂಗಕ್ಕೆ ಮಾಡಿದ ಅವಮಾನವೆಂದೇ ಭಾವಿಸಬೇಕಾಗುತ್ತದೆ.
ಈ ನಿಟ್ಟಿನಲ್ಲಿ, ಕೆಲವು ಪಟ್ಟಭದ್ರಹಿತಾಸಕ್ತಿಗಳು ಸೇರಿ, ಕೊಡವರ ಅಸ್ತಿತ್ವದ ಮೇಲೆ ನಿರಂತರವಾಗಿ ನಡೆಸುತ್ತಾ ಬಂದಿರುವ ದಬ್ಬಾಳಿಕೆ, ದೌರ್ಜನ್ಯ ಮತ್ತು ಶೋಷಣೆಗಳ ಪಟ್ಟಿಯನ್ನು ಈ ಸಂದರ್ಭದಲ್ಲಿ ತಮ್ಮ ಅವಗಾಹನೆಗೆ ತರಲಿಚ್ಚಿಸುತ್ತಿದ್ದೇವೆ.
1. ಕೋವಿಯ ಹಕ್ಕು ಕಸಿಯಲು ನಿರಂತರ ಷಡ್ಯಂತರ : ಮೊದಲನೆಯದಾಗಿ, ಸಂವಿದಾನದ 3ನೇ ವಿಧಿಯಲ್ಲಿ, ಕೊಡವ ಜನಾಂಗಕ್ಕೆ ಹಾಗು ಜಮ್ಮಾ ಹಿಡುವಳಿದಾರರಾದ ಕೊಡವ ಭಾಷೆಯನ್ನು ಮಾತನಾಡುವ ಇತರ ಸಮುದಾಯಗಳಿಗೆ ಪರವಾನಗಿಯಿಲ್ಲದೆ ಕೋವಿಯನ್ನು ಹೊಂದುವ ವಿಷೇಶ ಅವಕಾಶವನ್ನು ಕಲ್ಪಿಸಲಾಗಿದೆ. ಕೊಡವರು ಕೋವಿಯನ್ನು ಬಳಸುವುದು ತಲೆತಲಾಂತರಗಳಿAದ ನಡೆಸಿಕೊಂಡು ಬಂದಿರುವ ಪಾರಂಪರಿಕ ಪ್ರಕ್ರೀಯೆಗಳಾಗಿದ್ದು, ಕೊಡವರ ಆಚಾರ ವಿಚಾರಗಳ ಭಾಗವಾಗಿ ಇಂದಿಗೂ ಕೋವಿಯ ಬಳಕೆಗೆ ವಿಷೇಶ ಸ್ಥಾನವನ್ನು ನೀಡಲಾಗಿದೆ. ಕೊಡವ ಸಂಸ್ಕೃತಿಯ ಹಿನ್ನಲೆಯಲ್ಲಿ ನಡೆಸುವ ಹುಟ್ಟು ಮತ್ತು ಸಾವಿನ ಸಂಧರ್ಭದಲ್ಲಿನ ಧಾರ್ಮಿಕ ಆಚರಣೆಗಳಲ್ಲಿ ಕೋವಿಯು ಅವಿಬಾಜ್ಯ ಅಂಗವಾಗಿ ಇಂದಿಗೂ ಬಳಕೆಯಲ್ಲಿದೆ. ಇದು ಈ ದೇಶದ ಸಂವಿದಾನವು ಕೊಡವ ಸಂಸ್ಕೃತಿಗೆ ನೀಡಿರುವ ಸಂವಿದಾನದತ್ತವಾದ ಹಕ್ಕಾಗಿದ್ದು, ಈ ಹಕ್ಕನ್ನು ತಡೆಯುವ ನಿಟ್ಟಿನಲ್ಲಿ ಅರೆಭಾಷೆ ಸಮುದಾಯಕ್ಕೆ ಸೇರಿದ ಒಂದು ವರ್ಗ ನಿರಂತರ ಪ್ರಯತ್ನ ನಡೆಸುತ್ತಲೇ ಬಂದಿದೆ.
2. ಕೊಡವರ ಸಾಂವಿದಾನಿಕ ಹಕ್ಕುಗಳ ಬೇಡಿಕೆಗಳಿಗೆ ವಿರೋಧ : ಕೊಡವರ ಸಾಂವಿದಾನಿಕವಾದ ಹಲವು ಹಕ್ಕುಗಳ ಬೇಡಿಕೆಗಳಾದ, ಕೊಡವರನ್ನು ಬುಡಕಟ್ಟುಕುಲಕ್ಕೆ ಸೇರಿಸುವ ಹೋರಾಟ, ಕೊಡವರ ನೆಲ,ಜಲ, ಹಾಗು ಸಾಮಾಜಿಕ ಭದ್ರತೆಯ ನಿಟ್ಟಿನಲ್ಲಿ ಕೊಡವರ ಪ್ರಮುಖ ಬೇಡಿಕೆಗಳಿಗೆ ವಿನಾಕಾರಣ ವಿರೋಧಿಸಿ ತಡೆಯುವ ಪ್ರಯತ್ನವನ್ನು ಮುಂದುವರೆಸುವ ಮೂಲಕ ಕೊಡವರ ಸಂವಿದಾನ ದತ್ತವಾದ ಅಧಿಕಾರಗಳನ್ನೇ ಕಸಿದುಕೊಳ್ಳುವ ಕೃತ್ಯದಲ್ಲಿ ಈ ಕಿಡಿಗೇಡಿಗಳು ತೊಡಗಿಕೊಂಡಿದ್ದಾರೆ.
3. ಕೊಡವರ ಧಾರ್ಮಿಕ ಸ್ವಾತಂತ್ರö್ಯವನ್ನು ಕಸಿದುಕೊಳ್ಳುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ :
ಅ) ಕೊಡವರು ಅನಾದಿ ಕಾಲದಿಂದಲೂ ಕಾವೇರಿಯನ್ನು ಕುಲಮಾತೆಯೆಂದು ನಂಬಿ ಪೂಜಿಸುತ್ತಾ ಬಂದಿರುವವರು. ಆದರೆ ಕೊಡವರು ಕಾವೇರಿಯನ್ನು ಕುಲಮಾತೆ ಎಂದುಕೊAಡಿರುವುದನ್ನೇ ಈ ಒಂದು ಕೂಟ ಪೂರ್ವಾಗ್ರಹಪೀಡಿತರಾಗಿ ವಿರೋಧಿಸುತ್ತಾ ಬಂದಿರುತ್ತಾರೆ.
ಆ) ತಲಕಾವೇರಿ ತೀರ್ಥೋದ್ಭವದ ಸಂಧರ್ಬದಲ್ಲಿ ಕೊಡವರು ತಮ್ಮ ಸಾಂಪ್ರದಾಯಿಕ ಉಡುಗೆತೊಟ್ಟು, ಪುರುಷ ಮಹಿಳೆಯರಾದಿಯಾಗಿ ‘ದುಡಿಕೊಟ್ಟ್ ಪಾಟ್’ನೊಂದಿಗೆ ಕೈಯಲ್ಲಿ ‘ತಳಿಯತಕ್ಕಿ ಬೊಳ್ಚ’ ಹಿಡಿದು ಕಾವೇರಿ ಕುಂಡಿಕೆಯ ಸುತ್ತ ನಿಲ್ಲುವುದು ಸಂಪ್ರದಾಯ. ಆದರೆ ತಮ್ಮ ರಾಜಕೀಯ ಪ್ರಭಾವ ಬಳಸಿ ಕೊಡವರು ಸಾಂಪ್ರದಾಯಿಕ ಉಡುಗೆ ತೊಟ್ಟು ತಲಕಾವೇರಿಗೆ ಪ್ರವೇಶಿಸುವುದನ್ನೇ ನಿರ್ಭಂದಿಸಲು ಪ್ರಯತ್ನಿಸಲಾದಿತ್ತು, ಮಾತ್ರವಲ್ಲದೆ, ‘ದುಡಿಕೊಟ್ಟ್ ಪಾಟ್’ ಮತ್ತು ‘ತಳಿಯತಕ್ಕಿ ಬೊಳ್ಚ’ವನ್ನೂ Pತಲಕಾವೇರಿ ಕುಂಡಿಕೆಯಿAದ ನಿರ್ಭಂದಿಸುವ ಪ್ರಯತ್ನ ನಡೆಯುತ್ತಲೇ ಇದರುವುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇವೆ.
ಇ) ತಲಕಾವೇರಿ ಜಾತ್ರೆಯ ಸಂಧರ್ಭದಲ್ಲಿ ನಡೆಯುವ ‘ಪತ್ತಾಯಕ್ಕೆ ಅಕ್ಕಿ ಹಾಕುವ’ ಸಂಪ್ರದಾಯದಿAದಲೂ ಕೊಡವರನ್ನು ನಿರ್ಬಂದಿಸಿ ಹೊರಗಿಡುವ ನಿರಂತರ ಪ್ರಯತ್ನ ನಡೆಸುತ್ತಲೇ ಬರುತ್ತಿದ್ದಾರೆ.
ಈ) ತಲಕಾವೇರಿ ಜಾತ್ರೆಯ ಸಂಧರ್ಬದಲ್ಲಿ ಕೊಡವರು ನಡೆಸುವ ಅನ್ನದಾನವನ್ನು ತಡೆಯುವುದರ ಮೂಲಕ ಕೊಡವರನ್ನು ತಮ್ಮ ಕುಲಮಾತೆ ಕಾವೇರಿ ಕ್ಷೇತ್ರದಿಂದಲೇ ಹೊರಗಿಡುವ ಹುನ್ನಾರವನ್ನು ನಡೆಸಲಾಗುತ್ತಿದೆ.
4. ಇತಿಹಾಸವನ್ನು ತಿರುಚುವ ನಿರಂತರ ಪ್ರಯತ್ನ : ತಮ್ಮ ನೈಜ ಇತಿಹಾಸವನ್ನು ಮರೆಮಾಚಿ, ಕೊಡವರ ನೈಜ ಇತಿಹಾಸವನ್ನು ಈ ಮಣ್ಣಿನಿಂದ ಅಳಿಸಿಹಾಕುವ ಕೀಳುಮಟ್ಟದ ಕೆಲಸಕ್ಕೆ ಮುಂದಾಗಿದ್ದಾರೆ. ಇಷ್ಟೇ ಅಲ್ಲದೆ ಕೊಡಗು ಜಿಲ್ಲೆಗೆ ಸಂಬAದಿಸಿದAತೆ ಸುಳ್ಳು ಇತಿಹಾಸವನ್ನು ಸೃಷ್ಠಿಸುವ ಕಾಯಕದಲ್ಲಿ ತೊಡಗಿದ್ದು ಇದು ಸಮಾಜದ ಸ್ವಾಸ್ಥö್ಯವನ್ನು ಕದಡುವ ಕೃತ್ಯವಾಗಿದೆಯಲ್ಲದೆ, ನಿರಂತರ ಎರಡು ಜನಾಂಗಗಳ ನಡುವಿನ ಸಾಮರಸ್ಯವನ್ನು ಹಾಳುಮಾಡುವ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಕೊಡಗಿನ ಈ ನೆಲದ ಸ್ವಾತಂತ್ರö್ಯ ಹೋರಾಟದ ಇತಿಹಾಸವನ್ನು ಮರೆಮಾಚಿ, ಸಂಬAದವೇ ಇಲ್ಲದ ಅನಾಮದೇಯ ವ್ಯೆಕ್ತಿಗಳನ್ನು ವೈಭವೀಕರಿಸಿ ಸುಳ್ಳು ಇತಿಹಾಸವನ್ನು ಸೃಷ್ಟಿಸುವಂತಹ ಕೃತ್ಯಗಳು ನಿರಂತರ ನಡೆಯುತ್ತಲೇ ಇದ್ದು, ಇದು ಕೊಡವರ ಅಸ್ಥಿತ್ವವನ್ನು ನಿರ್ನಾಮಮಾಡುವ ಷಡ್ಯಂತರದ ಭಾಗವಾಗಿದೆ ಎಂಬುವುದನ್ನೂ ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ.
5. ಮಹಾನ್ ಸೇನಾನಿಗಳಿಗೆ ನಿರಂತರ ಅವಮಾನಿಸುವ ಕೃತ್ಯ : ಈ ದೇಶಕಂಡ ಅಪ್ರತಿಮ ಸೇನಾನಿಗಳಾದ ಫೀ.ಮಾ. ಕೊಡಂದೇರ ಎಂ. ಕಾರ್ಯಪ್ಪ ಹಾಗು ಕೊಡಂದೇರ ತಿಮ್ಮಯ್ಯನವರ ಪ್ರತಿಮೆಗಳಿಗೆ, (ಅವರುಗಳು ಕೊಡವರೂ ಅನ್ನುವ ಕಾರಣಕ್ಕೆ) ಚಪ್ಪಲಿ ಹಾರ ಹಾಕಿ ಅವಮಾನಿಸಿದ್ದರ ಹಿಂದೆಯೂ ಇದೇ ದುಷ್ಟ ಕೂಟದ ಕೈವಾಡವಿತ್ತು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಮಹಾನ್ ಸೇನಾನಿಗಳನ್ನು ಕೊಡವರು ಎಂಬ ಏಕೈಕ ಕಾರಣಕ್ಕೆ ಅವಹೇಳನ ಮಾಡಿದ ಪ್ರಸಂಗದಲ್ಲಿ ಈ ದುಷ್ಟಕೂಟದ ನಕ್ಸಲ್ ನಂಟು ಹೊಂದಿರುವ ಸದಸ್ಯನೊಬ್ಬನನ್ನು ಬಂದಿಸಿ ಕ್ರಮ ಕೈಗೋಂಡಾಗ ಇವರ ಕರಾಳ ಮುಖ ಅನಾವರಣವಾಗಿದೆ. ಇದೆಲ್ಲದರ ಹಿಂದಿರುವುದು ಕೊಡವರನ್ನು ದ್ವೇಶಿಸುವÀ ಉದ್ದೇಶವೇ ಆಗಿದೆ.
6. ಕೊಡವ ಮಹಿಳೆಯರು ಮಕ್ಕಳ ವಿರುದ್ಧ ಅವಹೇಳನ : ಇದೇ ದುಷ್ಟ ಕೂಟವು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ನಿರಂತರವಾಗಿ ಕೊಡವ ಮಹಿಳೆಯರು, ಮಕ್ಕಳ ಮೇಲೆ ಅಶ್ಲೀಲವಾಗಿ ಅವಹೇಳನ ಮಾಡುವ ಕೃತ್ಯವನ್ನು ನಡೆಸುವುದರ ಮೂಲಕ ತಮ್ಮ ವಿಕೃತ ಕೃತ್ಯಗಳನ್ನು ನಡೆಸುತ್ತಲೇ ಬರುತ್ತಿದ್ದು ಇನ್ನು ಇಂತಹವುಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂಬುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ.
7) ಕೊಡವರ ಸಂಸ್ಕೃತಿ, ಉಡುಗೆ ತೊಡುಗೆ, ಆಭರಣಗಳು ಹಾಗು ಆಚರಣೆಗಳ ವಿಡಂಬನೆ ಹಾಗು ಅವಮಾನ : ಕೊಡವರ ಸಾಂಪ್ರದಾಯಿಕ ಉಡುಪು ಕುಪ್ಯ ಚೇಲೆಯನ್ನು ‘ಕುಪ್ಪಸ’ ಎಂದೂ, ಆಭರಣಗಳಾದ ಪತ್ತಾಕ್ ಅನ್ನು ‘ಹತ್ತಾಕು’ ಎಂದೂ, ಕೊಕ್ಕೆತಾತಿಯನ್ನು ‘ಕೊಕ್ಕೆ ತಾಯತ’ ಎಂದೂ, ಉದ್ದೇಶಪೂರ್ವಕವಾಗಿ ವಿಡಂಬನಾತ್ಮಕವಾಗಿ ದುರ್ಬಳಕೆ ಮಾಡಲಾಗುತ್ತಿದೆ. ಮಾತ್ರವಲ್ಲದೆ ಕೊಡವರ ಕೆಲವು ಆಚರಣೆಗಳನ್ನೂ ಸಹ ವಿಡಂಬನಾತ್ಮಕವಾಗಿ ಬಳಸಿಕೊಂಡು ಉದ್ದೇಶಪೂರ್ವಕವಾಗಿ ಕೊಡವರಿಗೆ ಮತ್ತು ಕೊಡವ ಸಂಸ್ಕೃತಿಗೆ ಅವಮಾನ ಮಾಡಲಾಗುತ್ತಿದೆ. ಇಂತಹ ಕುಕೃತ್ಯಗಳೇ ಕೊಡಗಿನಲ್ಲಿ ವರ್ಗ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂಬುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ.
8) ಕೊಡಗಿನ ದೇವಸ್ಥಾನಗಳಲ್ಲಿ ಬೈಲಾ ಅಸ್ತçವನ್ನು ಪ್ರಯೋಗಿಸಿ ಕೊಡವ ಸಂಸ್ಕೃತಿ, ಪರಂಪರೆಯನ್ನು ಸಂಪೂರ್ಣ ನಾಶಮಾಡಲು ಈ ದುಷ್ಟಕೂಟವು ಹುನ್ನಾರ ನಡೆಸಿದ್ದು, ಆ ಮೂಲಕ ಕೊಡವರ ಅಸ್ಥಿತ್ವವನ್ನು ಈ ಮಣ್ಣಿನಲ್ಲಿ ಶಾಶ್ವತವಾಗಿ ನಿರ್ನಾಮಮಾಡಲು ಈ ಕೂಟ ಪ್ರಯತ್ನಿಸುತ್ತಿದೆ. ಇದು ಸಂವಿದಾನ ವಿರೋಧೀ ಕೃತ್ಯಮಾತ್ರವಲ್ಲದೆ, ಮಾನವ ಹಕ್ಕಿನ ಉಲ್ಲಂಘನೆಯಾಗಿದೆ.
9) ಕೊಡಗು ಜಿಲ್ಲೆ ಎಂಬ ಹೆಸರನ್ನೇ ಬದಲು ಮಾಡಲೂ ಸಹ ಈ ದುಷ್ಟಕೂಟ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದು, ಇಂತಹ ಬೇಳವಣಿಗೆಗಳು ಸಮಾಜದ ಹಿತದೃಷ್ಠಿಯಲ್ಲಿ ಆತಂಕಕಾರಿ ಬೆಳವಣಿಗೆಗಳಾಗಿವೆ.
ಈ ಹಿನ್ನಲೆಯಲ್ಲಿ ಕೊಡವ ಜನಾಂಗ, ಕೊಡವ ಸಂಸ್ಕೃತಿ ಹಾಗು ಪರಂಪರೆಗಳ ಮೇಲಾಗುತ್ತಿರುವ ನಿರಂತರ ದಬ್ಬಾಳಿಕೆ, ದೌರ್ಜನ್ಯ, ಹಾಗು ಶೋಷಣೆಗಳ ವಿರುದ್ದ ಕೊಡವ ಸಮುದಾಯವು ‘ಕೊಡವಾಮೆ ಬಾಳೋ’ ಎಂಬ 6 ದಿನಗಳ ಬೃಹತ್ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿರುವ ಈ ಸಂಧರ್ಬದಲ್ಲಿ, ಕೇಳಗಿನ ಪ್ರಮುಖ ಬೇಡಿಕೆಗಳು ಹಾಗು ಅಹವಾಲುಗಳನ್ನು ತಮ್ಮ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದಿಡಲು ಬಯಸುತ್ತೇವೆ.
1. ಸೂಕ್ಷಾö್ಮತಿ ಸೂಕ್ಷö್ಮ ಅಲ್ಪಸಂಖ್ಯಾತರಾದ ಕೊಡವ ಜನಾಂಗದ ಸಂವಿಧಾನಬದ್ದವಾದ ಬೇಡಿಕೆಗಳಿಗೆ ಸರ್ಕಾರವು ಕೂಡಲೇ ಸ್ಪಂದಿಸಿ, ಕೊಡವರ ನೆಲ,ಜಲ,ಸಂಸ್ಕೃತಿ, ಪರಂಪರೆ, ಧಾರ್ಮಿಕ ಆಚರಣೆಗಳು, ಹಾಗು ಸಾಮಾಜಿಕ ಭದ್ರತೆಗೆ, ಪೂರಕವಾಗಿ ಸೂಕ್ತ ಸಂವಿದಾನಾತ್ಮಕ ಕ್ರಮ ಕೈಗೊಳ್ಳಬೇಕು.
2. ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗಿರುವ ಕೋವಿಯ ವಿನಾಯಿತಿಯ ವಿಶೇಷ ಹಕ್ಕನ್ನು ಅಭಾದಿತವಾಗಿ ಮುಂದುವರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
3. ಅಲ್ಪಸಂಖ್ಯಾತ ಕೊಡವ ಸಮುದಾಯದ ಮೇಲೆ ಪ್ರಬಲ ಜನಾಂಗಗಳು ರಾಜಕೀಯ ಪ್ರಭಾವವನ್ನು ಬಳಸಿ ನಡೆಸುತ್ತಿರುವ ದಬ್ಬಾಳಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
4. ಕೊಡವ ಸಂಸ್ಕೃತಿ – ಸಂಪ್ರದಾಯದ ಉಡುಗೆತೊಡುಗೆ, ಆಭರಣಗಳು, ಆಚರಣೆಗಳ ವಿಡಂಬನಾತ್ಮಕ ಬಳಕೆ, ಹಾಗು ಇವುಗಳನ್ನು ಬಳಸಿ ಕೊಡವರ ಭಾವನೆಗಳ ವಿರುದ್ಧ ನಿರಂತರ ಪ್ರಚೋದಿಸುವ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
5. ಕೊಡವರು ಎಂಬ ಕಾರಣಕ್ಕೆ ಈ ದೇಶದ ಅಪ್ರತಿಮ ಸೇನಾನಿಗಳಾದ ಫೀ.ಮಾ.ಕೊಡಂದೇರ ಕಾರ್ಯಪ್ಪ ಹಾಗು ಜ. ಕೊಡಂದೇರ ಎಸ್. ತಿಮ್ಮಯ್ಯನವರನ್ನು ಅವಮಾನಿಸಿದ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ, ಈ ವಿಷಯಯದಲ್ಲಿ ಸೂಕ್ತ ತನಿಕೆಯನ್ನು ನಡೆಸಿ, ಕೃತ್ಯ ನಡೆಸಿದ ಕಿಡಿಗೇಡಿಯ ವಿರುದ್ಧ ಕಠಿಣ ಕೃಮ ಕೈಗೊಂಡು, ಆತನನ್ನು ಗಡಿಪಾರು ಮಾಡಬೇಕು.
6. ತಲಕಾವೇರಿಯಲ್ಲಿ ಕೊಡವರ ಭಾಗವಹಿಸುವಿಕೆಗೆಯ ಸ್ವಾತಂತ್ರö್ಯಕ್ಕೆ ನಿರಂತರ ತೊಂದರೆ ಮಾಡುವ ಪ್ರಕ್ರೀಯೆಗಳಿಗೆ ಕಡಿವಾಣ ಹಾಕಿ ಗೊಂದಲ ಸೃಷ್ಟಿಸುವ ಪಟ್ಟಬದ್ರಹಿತಾಸಕ್ತಿಗಳ ವಿರುದ್ದ ಕಠಿಣ ಕ್ರಮ ಕ್ಯಗೊಳ್ಳಬೇಕು ಹಾಗು ಕೊಡವರಿಗೆ, ಕೊಡವ ಸಂಸ್ಕçತಿಗೆ ಕೊಡಗಿನ ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲಿ, ಯಾವುದೇ ರೀತಿಯ ಅವಮಾನವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಈ ನಿಟ್ಟಿನಲ್ಲಿ, ಜಿಲ್ಲಾಡಳಿತ, ಹಾಗು ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡು, ಕೊಡವರಿಗೆ ಹಾಗು ಕೊಡವ ಸಂಸ್ಕೃತಿ ಹಾಗು ಪಾರಂಪರಿಕ ಆಚರಣೆಗಳಿಗೆ ಈ ನೆಲದಲ್ಲಿ ಮುಕ್ತ ವಾತವರಣ ಕಲ್ಪಿಸಬೇಕೆಂದು ಕೇಳಿಕೊಳ್ಳುತ್ತೇವೆ.
ಹಾಗೆಯೇ ಕೊನೇಯದಾಗಿ ಮತ್ತು ಪ್ರಮುಖವಾಗಿ,
7. ಕೊಡವರು ಹಾಗು ಕೊಡವ ಸಂಸ್ಕçತಿಯನ್ನು ಅನುಸರಿಸುವ ಹಾಗು ಕೊಡವ ಭಾಷೆ ಮಾತನಾಡುವ ಇತರೆ ಮೂಲನಿವಾಸಿ ಸಮುದಾಯಗಳನ್ನು ನಿರ್ಬಂದಿಸುವ ಉದ್ದೇಶದಿಂದಲೇ, ಕಟ್ಟೆಮಾಡುವಿನ ಮಹಾದೇವರ ದೇವಸ್ಥಾನವನ್ನು ಮೃತ್ಯುಂಜಯ ದೇವಸ್ಥಾನವೆಂದು ಸುಳ್ಳುನಾಮಕರಣ ಮಾಡುವುದರ ಮೂಲಕ ದೇವಸ್ಥಾನದ ಪಾವಿತ್ರö್ಯತೆಯನ್ನು ನಾಶಮಾಡಿ, ಉದ್ದೇಶಪೂರ್ವಕವಾಗಿ ಜನಾಂಗಗಳ ನಡುವೆ ವಿಷಬೀಜವನ್ನು ಬಿತ್ತಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮೂಲ ಕಾರಣಕರ್ತರಾದ ದೇವಸ್ಥಾನದ ಅರ್ಚಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
8. ಕಟ್ಟೆಮಾಡು ವಾರ್ಷಿಕ ಉತ್ಸವದ ಸಂದರ್ಭದಲ್ಲಿ, ಕೊಡವರ ಸಾಂಸ್ಕೃತಿಕ ಉಡುಗೆಯನ್ನು ನಿರ್ಬಂದಿಸಲು ಪ್ರಯತ್ನಿಸಿ, ಕೊಡವರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಬಂದಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳದೇ ವಿಳಂಬ ದೋರಣೆ ನಡೆಸುತ್ತಿರುವ ಜಿಲ್ಲಾಡಳಿತದ ಕ್ರಮದ ವಿರುದ್ದ ನಮ್ಮ ಅಸಮದಾನವನ್ನು ವ್ಯಕ್ತಪಡಿಸುತ್ತಾ, ಕೂಡಲೇ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಜರುಗಿಸಿ ಅವರನ್ನು ಬಂದಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.
9. ಹಾಗೆಯೇ ಕಿಡಿಗೇಡಿಗಳನ್ನು ಬಂದಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳದ ಹೊರತು, ಕೊಡವರಿಗಾದ ಅವಮಾನವನ್ನು ಗಂಬೀರವಾಗಿ ಪರಿಗಣಿಸಿ ಕೊಡವ ಸಮುದಾಯವು ಯಾವುದೇ ಸಂಧಾನ ಸಭೆ, ಅಥವ ಯಾವುದೇ ಶಾಂತಿ ಪ್ರಕ್ರೀಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುವುದನ್ನ ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.
ಈ ಮೇಲೆ ಪ್ರಸ್ತಾಪಿಸಿರುವ ಬೇಡಿಕೆ ಹಾಗು ಅಹವಾಲುಗಳಿಗೆ ಪೂರಕವಾಗಿ ಸ್ಪಂದಿಸುವ ದೃಡ ವಿಶ್ವಾಸದೊಂದಿಗೆ ಸಮಸ್ತ ಕೊಡವ ಸಮುದಾಯ ಹಾಗು ಕೊಡವ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಸರ್ವ ಕೊಡವ ಭಾಷಿಕ ಜನಾಂಗಗಳ, ಮತ್ತು ಅಭಿಮಾನಿಗಳ ಪರವಾಗಿ, ಈ ಮನವಿಯನ್ನು ಗೌರವಪೂರ್ವಕವಾಗಿ ಸಮರ್ಪಿಸುತ್ತಿದ್ದೇವೆ.
ಗೌರವಾದರಗಳೊಂದಿಗೆ,
ಇಂತಿ ತಮ್ಮ ವಿಶ್ವಾಸಿ,
ಅಧ್ಯಕ್ಷರು,
ಪರದಂಡ ಸುಬ್ರಮಣಿ ಕಾವೇರಪ್ಪ
ಸ್ಥಳ: ಮಡಿಕೇರಿ
ದಿನಾಂಕ : 07/02/2025
ಪ್ರತಿಗಳು ಇವರುಗಳ ಘನ ಅವಗಾಹನೆಗಾಗಿ :
1. ಗೃಹ ಮಂತ್ರಿಗಳು, ಭಾರತ ಸರ್ಕಾರ, ನವದೆಹಲಿ.
2. ಗೃಹ ಮಂತ್ರಿಗಳು ಕರ್ನಾಟಕ ಸರ್ಕಾರ, ಬೆಂಗಳೂರು
3. ಶಾಸಕರು, ವಿರಾಜಪೇಟೆ ವಿ.ಸಭಾ ಕ್ಷೇತ್ರ, ವಿರಾಜಪೇಟೆ, ಕೊಡಗು ಜಿಲ್ಲೆ..
4. ಶಾಸಕರು, ಮಡಿಕೇರಿ ವಿ.ಸಭಾ ಕ್ಷೇತ್ರ, ಮಡಿಕೇರಿ, ಕೊಡಗು ಜಿಲ್ಲೆ.