ಪಾಲಂಗಾಲ, ಡಿ.27:(ಕರಿನೆರವಂಡ ಡ್ಯಾನಿ ಕುಶಾಲಪ್ಪ) ಕೆದಮುಳ್ಳೂರು ವಲಯ ಕಾಂಗ್ರೆಸ್ ವತಿಯಿಂದ ನಿನ್ನೆ ರಾತ್ರಿ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕೆಧಮುಳ್ಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆ ನಡೆಸಿ, ಅಗಲಿದ ಚೇತನಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಡಿಕೇರಿಯೆಂಡ ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಫ್ರಿಉತ್ತಪ್ಪ, ವಿರಾಜಪೇಟೆ ಕೆಡಿಪಿ ಸದಸ್ಯರಾದ ಮಾಳೆಟ್ಟಿರ ಪ್ರಶಾಂತ್ಉತ್ತಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಎಂ ಇಸ್ಮಾಯಿಲ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಂಬಾoಡ ಇಮ್ಮಿ ಪೊನ್ನಪ್ಪ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಎಂ.ವೈ ಆಲಿ, ವಿ.ಎಸ್. ಎಸ್.ಎನ್ ಅಧ್ಯಕ್ಷರಾದ ಕರಿನೆರವಂಡ ಮಿಟ್ಟುಅಯ್ಯಪ್ಪ. ವಿ.ಎಸ್.ಎಸ್.ಎನ್. ಬ್ಯಾಂಕ್ ನಿರ್ದೇಶಕರಾದ ಶುಭ ಸುಬ್ಬಯ್ಯ, ನಿವೃತ್ತ ಬಿಎಸ್ಎಫ್ ವಿಜಯ್ ಮಂದಣ್ಣ ಗ್ರಾಮದ ಹಿರಿಯರಾದ ಮಾಳೆಟಿರ ಸುಬ್ರಾಯ, ಮಾಜಿ ಧವಸ ಭಂಡಾರ ಅಧ್ಯಕ್ಷರಾದ ಪೊನ್ನುಪೊನ್ನಪ್ಪ. ಯುವ ಮುಖಂಡರುಗಳಾದ ತೋಮರ ವಾರ್ಡ್ ಅಧ್ಯಕ್ಷ ವಿಜಯ್ ಕುಮಾರ್, ಕರಿನೆರವಂಡ ಜಿತನ್, ಡ್ಯಾನಿ, ರಾಜೇಶ್, ಪೊನ್ನಪ್ಪ, ಸರಿತ, ರಜಾಕ್ ಹಾಗೂ ಇತರರು ಹಾಜರಿದ್ದರು