
ಪೊನ್ನಂಪೇಟೆ, ಜೂ.22,(nadubade news): ಲೋಕಸಭಾ ವಿರೋಧ ಪಕ್ಷದನಾಯಕರಾದ ಶ್ರೀ ರಾಹುಲ್ ಗಾಂಧಿಯವರ ಜನ್ಮ ದಿನದ ಅಂಗವಾಗಿ ದಿನಾಂಕ 19/06/2025 ರಂದು ಅರುವತೋಕ್ಲು ಪಿ.ಹೆಚ್.ಎಸ್. ಕಾಲೋನಿ ಹಾಗೂ ಗರಿಕೇರಿ ಅಂಗನವಾಡಿ ಮಕ್ಕಳಿಗೆ ಕಲಿಕೆ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಣಿಯಂಡ ಮುತ್ತಣ್ಣ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅದ್ಯಕ್ಷರಾದ ಪಟ್ಟಡ ರಕ್ಷಿತ್ ಚಂಗಪ್ಪ, ವಿರಾಜಪೇಟೆ ಬ್ಲಾಕ್ ಅದ್ಯಕ್ಷ ಶಬೀರ್, ಹಾಗೂ ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅದ್ಯಕ್ಷರಾದ ಮಲ್ಲಂಡ ದ್ಯಾನ್ ದೇವಯ್ಯ ಅರುವತೋಕ್ಲು ವಲಯ ಕಾಂಗ್ರೆಸ್ ಮಾಜೀ ಅದ್ಯಕ್ಷ ನಾಯಮಾಡ ಕಂದಾದೇವಯ್ಯ, ಹಾಗೂ ಅರುವತೋಕ್ಲು ವಲಯ ಯುವ ಕಾಂಗ್ರೇಸ್ ನೂತನ ಅದ್ಯಕ್ಷರಾದ ಕೆ. ಎ. ದರ್ಶನ್ ಭಾಗಿಗಳಾಗಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಸಿಹಿ ಹಂಚಲಾಯಿತು.