ವಿರಾಜಪೇಟೆ, ಡಿ.31: ಕಳೆದ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ, ಕಂದಕಕ್ಕೆ ಉರುಳಿದ ಸೇನಾ ವಾಹನದ ಅಪಘಾತದಲ್ಲಿ ನಿಧನರಾದ, ಕೊಡಗಿನ ಹುತಾತ್ಮ ಯೋಧ ದಿವಿನ್ ಅವರ ಪಾರ್ಥಿವ ಶರೀರ, ಇಂದು ಸಂಜೆ ಬೆಂಗಳೂರು ವಿಮಾನ ನಿಲ್ದಾಣದ ತಲುಪಿದಾಗ, ಗೌರವ ಪೂರ್ವಕವಾಗಿ ಬರಮಾಡಿಕೊಂಡ ಕೊಡಗು- ಮೈಸೂರು – ಸಂಸದರಾದ ಶ್ರೀ ಯದುವೀರ್ ಒಡೆಯರ್ ಅವರು ಸೇನಾ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿ, ಮೃತ ಯೋಧರ ತಾಯಿಗೆ ಸಾಂತ್ವಾನ ಹೇಳಿದರು.