https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಹಿರಿಯ ಬಹುಭಾಷಾ ಸಾಹಿತಿ ನಾಗೇಶ್‌ ಕಾಲೂರ್ ಅವರಿಗೆ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ, ಪ್ರಥಮ ಪ್ರಶಸ್ತಿ.

ಹಿರಿಯ ಬಹುಭಾಷಾ ಸಾಹಿತಿ ನಾಗೇಶ್‌ ಕಾಲೂರ್ ಅವರಿಗೆ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ, ಪ್ರಥಮ ಪ್ರಶಸ್ತಿ.

News, Informatin , Enteetinement and Advertisement
03/03/202503/03/2025nadubadenews@gmail.comLeave a Comment on ಹಿರಿಯ ಬಹುಭಾಷಾ ಸಾಹಿತಿ ನಾಗೇಶ್‌ ಕಾಲೂರ್ ಅವರಿಗೆ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ, ಪ್ರಥಮ ಪ್ರಶಸ್ತಿ.
Spread the love
ಹಿರಿಯ ಬಹುಭಾಷಾ ಸಾಹಿತಿ ನಾಗೇಶ್‌ ಕಾಲೂರ್ ಅವರಿಗೆ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ, ಪ್ರಥಮ ಪ್ರಶಸ್ತಿ.

ಮಡಿಕೇರಿ, ಮಾ.03: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿ ಇಟ್ಟಿರುವ ಪ್ರಪ್ರಥಮ ಹಾಗೂ ಪ್ರತಿಷ್ಠಿತ ದತ್ತಿ “ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿ” ಯು ಜಿಲ್ಲೆಯ ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರು ರವರು ರಚಿಸಿದ “ಶ್ರೀ ಕಾವೇರಿ ದರ್ಶನಂ –  ಸಮಗ್ರ ಕಾವೇರಿ ಚರಿತೆ”  ಕೃತಿಯು ಪುರಸ್ಕೃತ ಗೊಂಡಿದೆ.   

ಜಿಲ್ಲೆಯ ದೈನಿಕ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಬಿ.ಎಸ್ ಗೋಪಾಲಕೃಷ್ಣ ಅವರ ಹೆಸರಿನಲ್ಲಿ, ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ  ಮೊದಲ   ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಬರಹಗಾರರ ಕೃತಿಗಳನ್ನು ಆಹ್ವಾನಿಸಿದಾಗ ಹತ್ತು ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರಸ್ತುತಪಡಿಸಿದ್ದರು.

ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಈ ಪುಸ್ತಕಗಳನ್ನು ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿ ಹತ್ತು ಜನ ಲೇಖಕರಲ್ಲಿ ಅತಿ ಹೆಚ್ಚು ಅಂಕ ಪಡೆದ “ಶ್ರೀ ಕಾವೇರಿ ದರ್ಶನಂ -ಸಮಗ್ರ ಕಾವೇರಿ ಚರಿತೆ” ಕೃತಿಯ ಲೇಖಕರಾದ, ನಾಗೇಶ್ ಕಾಲೂರು ಅವರು ಪಡೆದುಕೊಂಡಿದ್ದಾರೆ. ಮುಂದೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್.ಐ ಮುನೀರ್ ಅಹ್ಮದ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post navigation

ಕೊಡಗು ವಿವಿ ಉಳಿಯುವವರೆಗೂ ನಿರಂತರ ಹೋರಾಟ: ಕರವೆ ಘೋಷಣೆ
ಕೊಡವ ಎಜುಕೇಷನ್‌, ಕಲ್ಚರಲ್‌ ಪಿಂಞ ಸ್ಪೋರ್ಟ್ಸ್‌ ಟ್ರಸ್ಟ್‌ ಬೊಳಿಕ್:‌ ಮಿನಿ ಒಲಂಪಿಕ್‌ ಕಳಿನಮ್ಮೆಕ್‌ ಮೊಳಿ…

Related Posts

ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ

ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ

09/04/202509/04/2025nadubadenews@gmail.com
ಬೈತೂರ್‌ ತಿರಿಕೆ ಅಭಿವೃದ್ದಿ ಕಾರ್ಯಕ್‌ ಪೂಪ್ರಶ್ನೆ

ಬೈತೂರ್‌ ತಿರಿಕೆ ಅಭಿವೃದ್ದಿ ಕಾರ್ಯಕ್‌ ಪೂಪ್ರಶ್ನೆ

11/07/202511/07/2025nadubadenews@gmail.com
ಜನಿವಾರ ವಿವಾದ, ಕುಶಾಲನಗರದಲ್ಲಿ ಪ್ರತಿಭಟನೆ…

ಜನಿವಾರ ವಿವಾದ, ಕುಶಾಲನಗರದಲ್ಲಿ ಪ್ರತಿಭಟನೆ…

19/04/202519/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version