
ಸೋಮವಾರಪೇಟೆ, ಜ.11: ಲೋಕೋಪಯೋಗಿ ಇಲಾಕೆಯಿಂದ ಕೊಡಗು ಜಿಲ್ಲೆಗೆ ಬಂಪರ್ ಕೊಡುಗೆ ಲಭ್ಯವಾಗಿದ್ದು, ನಿನ್ನೆಯಷ್ಟೇ 32ಕೋಟಿಗಳ ಕಾಮಗಾರಿಗೆ ಚಾಲನೆ ನೀಡಿದ್ದ, ಲೋಕೋಪಯೋಗಿ ಸಚಿವ, ಸತೀಶ್ ಜಾರಕೀ ಹೋಳಿ ಅವರು, ಇಂದು ಮಡಿಕೇರಿ ಕ್ಷೇತ್ರದ ಸೋಮವಾರಪೇಟೆ ವ್ಯಾಪ್ತಿಯಲ್ಲಿ 36 ಕೋಟಿ ರೂಗಳ ಕಾಮಗಾರಿಗೆ ಶಂಕುಸ್ಥಾಪನೆ ಕೈಗೊಳ್ಳಲಿದ್ದಾರೆ.
ಮಡಿಕೇರಿ ಶಾಸಕ ಡಾ. ಮಂಥರ್ ಗೌಡರ ಪ್ರಯತ್ನದಿಂದ ಮಂಜೂರಾಗಿರುವ, ಸೋಮವಾರಪೇಟೆ ಮಡಿಕೇರಿ ರಸ್ತೆಯ ಐಗೂರು ಹೊಳೆಗೆ ಸೇತುವೆ ನಿರ್ಮಾಣಕ್ಕೆ 10ಕೋಟಿ, ಸೋಮವಾರಪೇಟೆ ತೋಳೂರುಶೆಟ್ಟಳ್ಳಿ ರಸ್ತೆಗೆ 20ಕೋಟಿ, ಶನಿವಾರಸಂತೆ ಚಂಗಡ ಹಳ್ಳಿ ರಸ್ತೆಗೆ 06 ಕೋಟಿ ರೂಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.
ಸರ್ಕಾರ ಕೊಡಗು ಜಿಲ್ಲೆಗೆ ಈಗಾಗಲೇ ಬಂಪರ್ ಕೊಡುಗೆ ನೀಡಿದೆ, ಮುಂದೆ ಮತ್ತಷ್ಟು ಯೋಜನೆಗಳಿಗೆ ವಿವಿಧ ಇಲಾಖೆಗಳಿಂದ ಅನುದಾನ ಬರುವುದಿದ್ದು, ಸಮರೋಪಾದಿಯಲ್ಲಿ ಅಭಿವೃದ್ದಿ ಕಾರ್ಯ ನಡೆಯಲಿದೆ ಎಂದು, ಶಾಸಕ ಡಾ.ಮಂಥರ್ ಗೌಡ ನಡುಬಾಡೆಯೊಂದಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.