https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸಾಮಾಜಿಕ ಮಾಧ್ಯಮಗಳಲ್ಲಿ ಕಂಡದನ್ನ ಶೇರ್ ಮಾಡುವ ಮುನ್ನ ಯೋಚಿಸಿ, ಕೊನೆಗೆ ನ್ಯಾಯಾಲಯದಲ್ಲಿ ಆರ್.ಟಿ.ಸಿ. ಹಿಡಿದು ನಿಲ್ಲುವವರು ನಿಮ್ಮ ಸಂಸಾರ ಮಾತ್ರ, ಎಚ್ಚರವಿರಲಿ….

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡದನ್ನ ಶೇರ್ ಮಾಡುವ ಮುನ್ನ ಯೋಚಿಸಿ, ಕೊನೆಗೆ ನ್ಯಾಯಾಲಯದಲ್ಲಿ ಆರ್.ಟಿ.ಸಿ. ಹಿಡಿದು ನಿಲ್ಲುವವರು ನಿಮ್ಮ ಸಂಸಾರ ಮಾತ್ರ, ಎಚ್ಚರವಿರಲಿ….

Uncategorized
11/10/202411/10/2024nadubadenews@gmail.comLeave a Comment on ಸಾಮಾಜಿಕ ಮಾಧ್ಯಮಗಳಲ್ಲಿ ಕಂಡದನ್ನ ಶೇರ್ ಮಾಡುವ ಮುನ್ನ ಯೋಚಿಸಿ, ಕೊನೆಗೆ ನ್ಯಾಯಾಲಯದಲ್ಲಿ ಆರ್.ಟಿ.ಸಿ. ಹಿಡಿದು ನಿಲ್ಲುವವರು ನಿಮ್ಮ ಸಂಸಾರ ಮಾತ್ರ, ಎಚ್ಚರವಿರಲಿ….
Spread the love
ಸಾಮಾಜಿಕ ಮಾಧ್ಯಮಗಳಲ್ಲಿ ಕಂಡದನ್ನ ಶೇರ್ ಮಾಡುವ ಮುನ್ನ ಯೋಚಿಸಿ, ಕೊನೆಗೆ ನ್ಯಾಯಾಲಯದಲ್ಲಿ ಆರ್.ಟಿ.ಸಿ. ಹಿಡಿದು ನಿಲ್ಲುವವರು ನಿಮ್ಮ ಸಂಸಾರ ಮಾತ್ರ, ಎಚ್ಚರವಿರಲಿ….

Nadubadenews, ಅ.11: (ಸಂಪಾದಕೀಯ) ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೀಡಿಯೋ, ಇಮೇಜ್, ಪೋಸ್ಟ್‌ಗಳನ್ನ ನಾವೆಲ್ಲರೂ ಗಮನಿಸ್ತೇವೆ. ಅದರಲ್ಲಿ ಸಾಕಷ್ಟು ಸಂದರ್ಭಗಳಲ್ಲಿ, ಯಾರೋ ಹಾಕಿದ ಕಂಟೆಂಟ್ ಗಳನ್ನ, ಎಡಿಟೆಡ್ ವರ್ಷನ್‌ಗಳನ್ನ ಹಾಗೆ ಶೇರ್ ಅಥವಾ ಫಾರ್ವರ್ಡ್ ಮಾಡೋದು ಇತ್ತೀಚಿಗೆ ಒಂದು ಖಯಾಲಿಯಾಗಿದೆ.

ಯಾವುದೇ ಒಂದು ಪೋಸ್ಟ್ ಇಲ್ಲಾ ವಿಚಾರ ಬಂದಾಗ, ಅದನ್ನು ಕೂಲಂಕುಶವಾಗಿ ಪರಿಶೀಲಿಸದೆ, ಅದರ ಸತ್ಯಾಸತ್ಯತೆಯನ್ನು ತಿಳಿಯದೆ, ಹಾಗೆ ಮುಂದಕ್ಕೆ ಕಳಿಸುವುದರಿಂದ ಸಮಸ್ಯೆಗಳಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಅದರಲ್ಲೂ ರಾಜಕೀಯ ನಾಯಕರ, ಪಕ್ಷಗಳ, ಸರ್ಕಾರಗಳ, ಅಧಿಕಾರಿಗಳ ಹೇಳಿಕೆಗಳನ್ನು, ಭಾವಚಿತ್ರಗಳನ್ನು, ವೀಡಿಯೋಗಳನ್ನು ಎಡಿಟ್ ಮಾಡಿ, ತಮಗೆ ಬೇಕಾದ ಹಾಗೆ ಪ್ರಕಟಿಸುವ, ಖದೀಮರ ಜಾಲ, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿದೆ.

ತಾವು ನೋಡಿದ ವಿಷಯದ ಸತ್ಯತೆಯನ್ನು ತಿಳಿಯದೆ, ಯಥಾವತ್ತಾಗಿ ಶೇರ್ ಮಾಡಿ, ಫಾರ್ವರ್ಡ್ ಮಾಡಿ, ನಾವೇ ಏನೋ ಸಾಧನೆ ಮಾಡಿದ ಹಾಗೆ, ಯಾರದೋ ವಿರುದ್ದ ಶೇಡು ತೀರಿಸಿಕೊಂಡ ಸಮಾಧಾನದಲ್ಲಿ, ನಿರಾಳಾಗಿಬಿಡುತ್ತೇವೆ.

ಆದರೆ ಇದರ ವಾಸ್ತವ ಸತ್ಯವನ್ನ ಪರಿಶೀಲಿಸಿ, ಅದು ನಕಲಿ ವಿಚಾರವಾದಾಗ, ಸಂಬಂಧಪಟ್ಟ ಸೈಬರ್ ಕ್ರೈಂ ಡಿಪಾರ್ಟ್ಮೆಂಟ್, ನಕಲಿ ಪೋಸ್ಟ್ ತಯಾರಕರು, ಅದನ್ನ ಶೇರ್ ಮಾಡಿದವರನ್ನೂ ಸೇರಿಸಿ ರುಬ್ಬಿ, ಬಟ್ಟೆಬಿಚ್ಚಿ, ಕಂಬಿ ಹಿಂದೆ ಕುಕ್ಕರಿಸಿದಾಗ, ಕಂಟೆಂಟ್ ಕ್ರಿಯೇಟರ್ ಆಗಲಿ, ನಾವು ಬೆಂಬಲಿಸುವ ಪಕ್ಷ ಅಥವಾ ನಾಯಕರಾಗಲಿ ಯಾರೂ ಬರುವುದಿಲ್ಲ.

ಆಗ ನಮ್ಮ ಹಿಂದೆ ನಿಲ್ಲುವವರು, ಆರ್‌.ಟಿ.ಸಿ ಹಿಡಿದು ವಕೀಲರೊಂದಿಗೆ ಬಂದು, ನಮ್ಮನ್ನು ಬಿಡಿಸುವವರು ನಮ್ಮ ಸಂಸಾರದವರೇ ಹೊರತು ನಮ್ಮ ಪಕ್ಷಗಳಲ್ಲ. ಹಾಗಾಗಿ ಯಾವುದೇ ವಿಚಾರವನ್ನು, ಸುಖಾಸುಮ್ಮನೆ ಕಣ್ಣು ಮುಚ್ಚಿ, ಫಾರ್ವರ್ಡ್ ಮಾಡುವ ಮುನ್ನ, ನಿಮ್ಮ ಮನೆಯಲ್ಲಿರುವ ವಯಸ್ಸಾದ ತಂದೆ, ತಾಯಿಯರನ್ನ, ಪತ್ನಿ ಮಕ್ಕಳನ್ನು ಅಥವಾ ನಿಮ್ಮ ಅವಲಂಬಿತರನ್ನು ಒಮ್ಮೆ ನೆನೆಸಿಕೊಳ್ಳಿ. ಮುಂದಿನ ಪರಿಣಾಮಗಳ ಪರಾಮರ್ಶೆ ಮಾಡಿ ಮುಂದುವರೆದರೆ, ಸ್ವಾಸ್ಥ್ಯ ಸಮಾಜಕ್ಕೆ ನಮ್ಮದು ಅಳಿಲು ಸೇವೆ ಸಿಗಬಹುದು…. ಯೋಚಿಸಿ… ಯೋಜಿಸಿ…. ಹಾಗೇ ಈ ವಿಚಾರವನ್ನ ಶೇರ್‌ ಮಾಡೋದನ್ನ ಮರೀಬೇಡಿ….

Post navigation

ಕೊಡಗಿನ ಪ್ರಪ್ರಥಮ  ಕೆ.ಎ.12 ನೋಂದಾಯಿತ,  ಕೆ ಎಸ್‍ ಆರ್ ಟಿ ಸಿ  ಬಸ್‍ಗಳಿಗೆ, ಶಾಸಕ ಡಾ. ಮಂಥರ್‌ಗೌಡ ಚಾಲನೆ
ತಡಿ ಬುಟ್ಟ ಸಾಕಾರಿ ಮೂಪ, ಮಾತಂಡ ರಮೇಶ್‌… ಆಖಿರಿ ಕಾರ್ಯ ನಾಳೆ

Related Posts

ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

25/10/202425/10/2024nadubadenews@gmail.com
ಸ್ವಚ್ಚ, ಸುರಕ್ಷ, ಸಮೃದ್ದ ಕೊಡಗಿಗೆ ಎಲ್ಲರೂ ಪಣತೊಡಬೇಕಿದೆ. ಎಫ್.ಎಮ್.ಸಿ. ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ, ಗಣ್ಯರ ಒಕ್ಕೊರಲ ಅಭಿಮತ…

ಸ್ವಚ್ಚ, ಸುರಕ್ಷ, ಸಮೃದ್ದ ಕೊಡಗಿಗೆ ಎಲ್ಲರೂ ಪಣತೊಡಬೇಕಿದೆ. ಎಫ್.ಎಮ್.ಸಿ. ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ, ಗಣ್ಯರ ಒಕ್ಕೊರಲ ಅಭಿಮತ…

13/11/202413/11/2024nadubadenews@gmail.com
ಪುಸ್ತಕ ಬಿಡುಗಡೆ:-

ಪುಸ್ತಕ ಬಿಡುಗಡೆ:-

21/01/202521/01/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version