https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ

ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ

News, Informatin , Enteetinement and Advertisement
09/04/202509/04/2025nadubadenews@gmail.comLeave a Comment on ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ
Spread the love
ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ

ಮಡಿಕೇರಿ, ಏ.09: ರಾಜ್ಯ ಸರ್ಕಾರದ ನೀತಿಗಳ ವಿರುದ್ದ ಮಡಿಕೇರಿಯಲ್ಲಿ ಇಂದು ಬಿಜೆಪಿ ವತಿಯಿಂದ ಬೃಹತ್‌ ಜನಾಕ್ರೋಷ ಯಾತ್ರೆ ನಡೆಯಿತು.

 ಯಾತ್ರೆಯ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾತನಾಡಿ, ಸಕಾ೯ರದ ಧೋರಣೆ ವಿರುದ್ದ ವಿಜಯೇಂದ್ರ ಆಕ್ರೋಷ   ವ್ಯಕ್ತಪಡಿಸಿದರು. ಮಡಿಕೇರಿಯ ಖಾಸಗಿ ಬಸ್ ಸ್ಟಾಂಡ್ ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು,  ಹಿಂದೂಗಳನ್ನು ಶೋಷಿಸುವ ಹುನ್ನಾರ ಸಕಾ೯ರದ ಅನೇಕ ತೀಮಾ೯ನಗಳ ಹಿಂದಿದೆ, ಮುಸಲ್ಮಾನರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ ಎಂದರು. ಬಿಜೆಪಿ ಮುಸಲ್ಮಾನರ ವಿರೋಧಿಯಲ್ಲ ಕಾಶ್ಮೀರದಲ್ಲಿ ಮುಸಲ್ಮಾನರಿಗೆ ನ್ಯಾಯ ದೊರಕಿಸುವ ಕಾಯ೯ಕ್ಕೆ ಕೇಂದ್ರ ಸಕಾ೯ರ ಮುಂದಾಗಿತ್ತು ದೇಶದ್ರೋಹಿಗಳನ್ನು ವಿರೋಧಿಸುವ ಪಕ್ಷ ಬಿಜೆಪಿಯಾಗಿದೆ, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಸಿದ್ದರಾಮಯ್ಯ ರಕ್ಷಣೆ ನೀಡುತ್ತಾರೆ ಎಂದು ದೂರಿದರು.  ಪರಿಶಿಷ್ಟ ಜಾತಿ – ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಸಕಾ೯ರ ವಿನಿಯೋಗ ಮಾಡದೇ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ, ರಾಷ್ಟ್ರೀಯ ಕಾಂಗ್ರೆಸ್ ಪಾಲಿಗೆ ಕನಾ೯ಟಕದ ಕಾಂಗ್ರೆಸ್ ಸಕಾ೯ರ ಎಟಿಎಂನಂತಾಗಿದೆ ಎಂದು ವಿಜಯೇಂದ್ರ ಆರೋಪ ಮಾಡಿದರು. ವಿನಯ್ ಸೋಮಯ್ಯ ಸಾವಿಗೆ ಸ್ಥಳೀಯ ಶಾಸಕರೇ ಕಾರಣ ಎಂದು ನೇರ ಆರೋಪ ಮಾಡಿದ ಅವರು, ಶೌಚಾಲಯ ಸರಿಪಡಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳಿದಕ್ಕೆ  ಪೊಲೀಸರ ಮೂಲಕ ಸ್ಥಳೀಯ ಶಾಸಕರು ವಿನಯ್ ಸೋಮಯ್ಯಗೆ ನಿರಂತರ ಕಿರುಕುಳ ನೀಡಿ  ಬಿಜೆಪಿಯ ಅಮಾಯಕ ಕಾಯ೯ಕತ೯ನ ಸಾವಿಗೆ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂಣ೯ ಹದಗೆಟ್ಟಿದೆ. ಭ್ರಷ್ಟ ರಾಜ್ಯ ಸಕಾ೯ರಕ್ಕೆ ತಕ್ಕ ಪಾಠ ಕಲಿಸಲು ಬಿಜೆಪಿ ಜನಾಕ್ರೋಷ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಯೋಗ್ಯ, ಜನವಿರೋಧಿ ಕಾಂಗ್ರೆಸ್ ಸಕಾ೯ರಕ್ಕೆ ತಕ್ಕ ಪಾಠ ಕಲಿಸಲು ಜನಾಕ್ರೋಷ ಯಾತ್ರೆ ಆಯೋಜಿಸಲಾಗಿದೆ ಎಂದು ಹೇಳಿದ, ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಕಾಂಗ್ರೆಸ್ ಪುಡಾರಿಗಳ ಬಗ್ಗೆ ಬಿಜೆಪಿ ಕಾಯ೯ಕತ೯ರು ಹೆದರಿಕೊಳ್ಳುವ ಅಗತ್ಯವಿಲ್ಲ, ಕಾಂಗ್ರೆಸ್ಸಿಗರ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸೋಣ  ಎಂದು ಕಾರ್ಯ ಕರ್ತರಲ್ಲಿ ದೈರ್ಯ ತುಂಬಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಿ.ಟಿ. ರವಿ,, ನಳಿನ್ ಕುಮಾರ್ ಕಟೀಲು, ಶ್ರೀರಾಮುಲು ,  ಸುಜಾ ಕುಶಾಲಪ್ಪ, ಕೆ.ಜಿ.ಬೋಪಯ್ಯ, ನಾಪಂಡ ರವಿಕಾಳಪ್ಪ ಸೇರಿದಂತೆ ನೋರಾರು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

Post navigation

ಮಕ್ಕಳ ಸಾಹಿತ್ಯ ಪರಿಷತ್‌  ವಿರಾಜಪೇಟೆ ತಾಲೂಕು ಘಟಕಕ್ಕೆ ನೇಮಕ
ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.

Related Posts

ಕಡಂಗದಲ್ಲಿ ಟ್ರಾಫಿಕ್‌ ಕಿರಿ ಕಿರಿ, ಬೋರ್ಡಿಗಿಲ್ಲ ಕಿಮ್ಮತ್ತು..

31/05/202531/05/2025nadubadenews@gmail.com
‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ

‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ

08/04/202508/04/2025nadubadenews@gmail.com
ಕೊಡಗು ಜಿಲ್ಲಾ  ಅಹಿಂದ ಸಂಘಟನೆಗೆ ನೂತನ  ಪದಾಧಿಕಾರಿಗಳು…

ಕೊಡಗು ಜಿಲ್ಲಾ  ಅಹಿಂದ ಸಂಘಟನೆಗೆ ನೂತನ  ಪದಾಧಿಕಾರಿಗಳು…

01/05/202501/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version