https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ವಿರಾಜಪೇಟೆ ರಸ್ತೆ ಅಭಿವೃದ್ದಿಗೆ 150ಕೋಟಿಯ ಯೋಜನೆ ಸಿದ್ದ, ಮಳೆ ನಿಂತ ತಕ್ಷಣ ಕಾಮಗಾರಿ; ಶಾಸಕ ಪೊನ್ನಣ್ಣ ಭರವಸೆ

ವಿರಾಜಪೇಟೆ ರಸ್ತೆ ಅಭಿವೃದ್ದಿಗೆ 150ಕೋಟಿಯ ಯೋಜನೆ ಸಿದ್ದ, ಮಳೆ ನಿಂತ ತಕ್ಷಣ ಕಾಮಗಾರಿ; ಶಾಸಕ ಪೊನ್ನಣ್ಣ ಭರವಸೆ

News, Informatin , Enteetinement and Advertisement
09/08/202509/08/2025nadubadenews@gmail.comLeave a Comment on ವಿರಾಜಪೇಟೆ ರಸ್ತೆ ಅಭಿವೃದ್ದಿಗೆ 150ಕೋಟಿಯ ಯೋಜನೆ ಸಿದ್ದ, ಮಳೆ ನಿಂತ ತಕ್ಷಣ ಕಾಮಗಾರಿ; ಶಾಸಕ ಪೊನ್ನಣ್ಣ ಭರವಸೆ
Spread the love
ವಿರಾಜಪೇಟೆ ರಸ್ತೆ ಅಭಿವೃದ್ದಿಗೆ 150ಕೋಟಿಯ ಯೋಜನೆ ಸಿದ್ದ, ಮಳೆ ನಿಂತ ತಕ್ಷಣ ಕಾಮಗಾರಿ; ಶಾಸಕ ಪೊನ್ನಣ್ಣ ಭರವಸೆ

ವಿರಾಜಪೇಟೆ; ಜು.09(nadubadenews):  ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿಗೆ ಈಗಾಗಲೇ 100ಕೋಟಿಯ ಕ್ರಿಯಾಯೋಜನೆ ಸಿದ್ದವಾಗಿದೆ, ಮಾನ್ಯ ಮುಖ್ಯಮಂತ್ರಿಗಳು ಹೆಚ್ಚುವರಿಯಾಗಿ 50ಕೋಟಿ ಅನುದಾನ ಮಂಜೂರು ಮಾಡಿದ್ದು, ಮಳೆ ನಿಂತ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಭರವಸೆ ನೀಡಿದರು.

          ಇತ್ತೀಚೆಗೆ ಕ್ಷೇತ್ರಪ್ರವಾಸ ಮತ್ತು ಗೃಹಕಛೇರಿಯಲ್ಲಿ ಸಾರ್ವಜನಿಕರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಬಹುಪಾಲು ಮನವಿಗಳು ರಸ್ತೆಯ ಬಗ್ಗೆಯೇ ಬರುತಿದ್ದು, ಬಂದ ಎಲ್ಲಾ ಮನವಿಗಳ ಆದ್ಯತಾ ಪಟ್ಟಿ ತಯಾರಿಸಿ, ನೂರು ಕೋಟಿ ವೆಚ್ಚದ ರಸ್ತೆಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಉಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಷೇಶ ಕಾಳಜಿಯಿಂದ 50ಕೋಟಿ ಹೆಚ್ಚುವರಿ ಅನುದಾನ ಮಂಜೂರು ಮಾಡಿದ್ದು, ಅದರ ಕ್ರಿಯಾ ಯೋಜನೆ ನಡೆಯುತ್ತಿದೆ. ಮಳೆ ನಿಂತ ತಕ್ಷಣ ನೂರೈವತ್ತು ಕೋಟಿಯ ಕಾಮಗಾರಿ ಗೈಗೆತ್ತಿಕೊಂಡು, ಉಳಿದ ರಸ್ತೆಗಳನ್ನು ಹಂತ ಹಂತವಾಗಿ ಅಭೀವೃದ್ದಿ ಪಡಿಸಲಾಗುವುದು ಎಂದರು.

          ಸಾರ್ವಜನಿಕರಿಗೆ ಉತ್ತಮ ರಸ್ತೆ ಸೇರಿದ ಮೂಲಭೂತ ಸೌಲಭ್ಯ ಒದಗಿಸುವು ಸರ್ಕಾರದ ಕರ್ತವ್ಯವಾಗಿದ್ದು, ನಮ್ಮ ಆದ್ಯತೆಯೂ ಆಗಿದೆ. ಈ ವರ್ಷ ಅನಿಯಮಿತ ಮತ್ತು ಅಕಾಲಿಕ ಮಳೆಯಿಂದಾಗಿ ಯೋಜಿತ ರಸ್ತೆಗಳನ್ನು ನಿಗಧೀತ ಅವಧಿಯಲ್ಲಿ ಪೂರೈಸಲು ಸಾದ್ಯವಾಗಿಲ್ಲ. ಮಳೆ ನಿಂತ ತಕ್ಷಣ ಕಾಮಗಾರಿ ಪ್ರಾರಂಬಿಸಲಾಗುವುದು. ಈಗಾಗಲೇ ರಸ್ತೆಗಾಗಿ ಅರ್ಜಿ ಕೊಟ್ಟಿರುವವರು ಮರು ಮನವಿ ಸಲ್ಲಿಸುವ ಅವಶ್ಯಕತೆ ಇಲ್ಲ. ಎಲ್ಲಾ ಅರ್ಜಿಗಳನ್ನು ಪಟ್ಟಿಮಾಡಲಾಗಿದೆ. ಮನವಿ ಪತ್ರ ಕೊಡದವರು ಕಛೇರಿಗೆ ಮನವಿ ಸಲ್ಲಿಸಿದರೆ ಆದ್ಯತೆಯನುಸಾರ ಕಾಮಗಾರಿ ಪೂರೈಸುವುದಾಗಿ ಭರವಸೆ ನೀಡಿದರು.

Post navigation

ನಾಳೆ ವಿಶ್ವ ಬುಡಕಟ್ಟು ದಿನಾಚರಣೆ…
ನಡುಬಾಡೆ ಇ-ನ್ಯೂಸ್, ಅ.09

Related Posts

ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ…

ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ…

12/03/202512/03/2025nadubadenews@gmail.com
ಬುಧವಾರ ಮಡಿಕೇರಿಯಲ್ಲಿ ಉದ್ಯೋಗ ಮೇಳ…

ಬುಧವಾರ ಮಡಿಕೇರಿಯಲ್ಲಿ ಉದ್ಯೋಗ ಮೇಳ…

07/07/202507/07/2025nadubadenews@gmail.com
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರ ಸಂಸ್ಕಾರ ಕಲಿಸುತ್ತಿದೆ.; ಯೋಜನಾಧಿಕಾರಿಯವರಾದ ಪುರುಷೋತ್ತಮ ಅಭಿಮತ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರ ಸಂಸ್ಕಾರ ಕಲಿಸುತ್ತಿದೆ.; ಯೋಜನಾಧಿಕಾರಿಯವರಾದ ಪುರುಷೋತ್ತಮ ಅಭಿಮತ

15/07/202515/07/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version